ದಿಬ್ಬಣ ಹೊರಡ್ಸೌರೆ ಉಮೇಶ್‌!


Team Udayavani, Mar 31, 2017, 11:24 AM IST

31-SUCHITRA-9.jpg

“ಲೆಕ್ಕ ಇಟ್ಟಿಲ್ಲ. ಇದು ನನ್ನ 24ನೇ ಸಿನಿಮಾನೋ, 25ನೇ ಸಿನಿಮಾನೋ ಗೊತ್ತಿಲ್ಲ. “ಅವಳೇ ನನ್ನ ಹೆಂಡ್ತಿ’ಯಿಂದ ಶುರುವಾಗಿ,
ಇಲ್ಲಿಯವರೆಗೂ ಬಂದಿದ್ದೀನಿ …’ ತಮ್ಮನ್ನು ತಾವು ಪರಿಚಯಿಸಿಕೊಂಡೇ ಮಾತಿಗೆ ಕುಳಿತರು ಹಿರಿಯ ನಿರ್ದೇಶಕ ಎಸ್‌. ಉಮೇಶ್‌. ಅವರು ಈಗ ಇನ್ನೊಂದು ಹೊಸ ಸಿನಿಮಾ ಶುರು ಮಾಡಿಬಿಟ್ಟಿದ್ದಾರೆ. “ತುಂಬಿದ ಮನೆ’ ಲೆವೆಲ್‌ನ ಸಿನಿಮಾ ಇದು ಎಂಬುದು ಅವರ ನಂಬಿಕೆ.

ತಾರಾಗಣದಲ್ಲದಿದ್ದರೂ, ಕಥೆಯ ವಿಷಯದಲ್ಲಿ ಇದು “ತುಂಬಿದ ಮನೆ’ ರೇಂಜ್‌ಗೆ ಬರುತ್ತದಂತೆ. ಈ ಚಿತ್ರಕ್ಕೆ ಅವರು ಇಟ್ಟಿರುವ
ಹೆಸರು “ಮದುವೆ ದಿಬ್ಬಣ’. ಕಳೆದ ವಾರ ಕನಕಪುರ ರಸ್ತೆಯಲ್ಲಿರುವ ರವಿಕಿರಣ್‌ ಎಸ್ಟೇಟ್‌ನಲ್ಲಿ ಅವರು ಈ ಚಿತ್ರ ಪ್ರಾರಂಭಿಸಿದ್ದಾರೆ.

ರವಿಕಿರಣ್‌ ಅವರ ಎಸ್ಟೇಟ್‌ನಲ್ಲಿ ಚಿತ್ರ ಪ್ರಾರಂಭಿಸುವುದಷ್ಟೇ ಅಲ್ಲ, ರವಿಕಿರಣ್‌ ಅವರಿಗೂ ಒಂದು ಪ್ರಮುಖ ಪಾತ್ರವನ್ನು
ಅವರು ಕೊಟ್ಟಿದ್ದಾರೆ. ಅವರಿಗೆ ಜೊತೆಯಾಗಿ ಚಂದ್ರಕಲಾ ಮೋಹನ್‌ ಇದ್ದಾರೆ. ಇನ್ನು ಈ ಚಿತ್ರದ ಮೂಲಕ ಅಭಿಷೇಕ್‌ ಬಣ್ಣ ಹಚ್ಚಿದರೆ, ಸೋನಾಲ್‌ ಮಂಟೇರಾ ನಾಯಕಿಯಾಗಿದ್ದಾರೆ.

ಚಿತ್ರವನ್ನು ಬಾ.ನಾ. ರವಿ ಎನ್ನುವವರು ನಿರ್ಮಿಸುತ್ತಿದ್ದಾರೆ. ರವಿಕಿರಣ ಮತ್ತು ಚಂದ್ರಕಲಾ ಅಭಿನಯದ ಮೊದಲ ದೃಶ್ಯದ ಚಿತ್ರೀಕರಣ ಮಾಡಿ, ಎಲ್ಲರನ್ನೂ ಪರಿಚಯಿಸಿಕೊಡುತ್ತಾ ಮಾತಿಗೆ ಕುಳಿತರು ಉಮೇಶ್‌. “ಹೆಸರೇ ಹೇಳುವಂತೆ ಇದು ಮದುವೆಗೆ ಸಂಬಂಧಿಸಿದ
ಸಿನಿಮಾ. ಅದರಲ್ಲೂ ಹಳ್ಳಿ ಮದುವೆಯ ಕುರಿತಾದ ಸಿನಿಮಾ ಇದು. ಹಂಸರಾಜ್‌ ಅವರು ಚಿತ್ರಕಥೆ ಬರೆದಿದ್ದಾರೆ. 31ರಿಂದ 
ಸತತವಾಗಿ ಒಂದು ತಿಂಗಳ ಕಾಲ ಚಿತ್ರೀಕರಣ ಮಾಡಲಿದ್ದೇವೆ. ಇಲ್ಲಿ ಚಂದ್ರಕಲಾ ಮೋಹನ್‌ ತಾಯಿ ಮತ್ತು ಮಗಳಾಗಿ ದ್ವಿಪಾತ್ರ ಮಾಡುತ್ತಿದ್ದಾರೆ. 

ಇನ್ನು ರವಿಕಿರಣ್‌ ಅವರು ಚಂದ್ರಕಲಾ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಅಭಿಷೇಕ್‌ ಮತ್ತು ಸೋನಾಲ್‌ ಚಿತ್ರದ ನಾಯಕ-ನಾಯಕಿ. ಕೆ.ಆರ್‌.ಪೇಟೆ ಶಿವರಾಜ್‌ ಇಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ಕೂತು
ಕಥೆ ಮಾಡಿದ್ದೇವೆ’ ಎಂದರು ಉಮೇಶ್‌. ಈ ಪಾತ್ರದಲ್ಲಿ ಅಭಿನಯಕ್ಕೆ ಸ್ಕೋಪ್‌ ಇರುವ ಕಾರಣಕ್ಕೆ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡರು ರವಿಕಿರಣ್‌. “ನಾಲ್ಕೈದು ದೃಶ್ಯಗಳಿದ್ದರೂ ಪರವಾಗಿಲ್ಲ. ಅಭಿನಯಕ್ಕೆ ಅವಕಾಶವಿದ್ದರೆ ಮತ್ತು ಜನ ಮೆಚ್ಚಿದರೆ ಅಷ್ಟೇ ಸಾಕು’ ಎಂದರು ರವಿಕಿರಣ್‌. ಮೊದಲ ಬಾರಿಗೆ ದ್ವಿಪಾತ್ರ ಮಾಡುತ್ತಿರುವ ಬಗ್ಗೆ ಚಂದ್ರಕಲಾ ಬಹಳ ಖುಷಿಯಾದರು. ಇನ್ನು ರವಿಕಿರಣ್‌, ಚಂದ್ರಕಲಾ, ಉಮೇಶ್‌ರಂಥವರ ಜೊತೆಗೆ ಕೆಲಸ ಮಾಡುತ್ತಿರುವುದು ಅಭಿಷೇಕ್‌ ಮತ್ತು ಸೋನಾಲ್‌ ಬಹಳ ಹೆಮ್ಮೆ ವ್ಯಕ್ತಪಡಿಸಿದರು. 

ಈ ಚಿತ್ರವನ್ನು ಬಾ.ನಾ. ರವಿ ಎನ್ನುವವರು ನಿರ್ಮಿಸುತ್ತಿದ್ದಾರೆ. ಸಣ್ಣ ಸ್ಟುಡಿಯೋ ಇಟ್ಟುಕೊಂಡಿರುವ ಅವರಿಗೆ ಇದು ಮೊದಲನೆಯ ಚಿತ್ರ. ಚಿತ್ರಕ್ಕೆ ಎ.ಟಿ. ರವೀಶ್‌ ಅವರ ಸಂಗೀತವಿದೆ.  

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.