ಒಂದು ಕೊಲೆಯ ಸುತ್ತ… : ಸ್ನೇಹಿತರ ಕಾಮಿಡಿ ಕಮಾಲ್
Team Udayavani, Nov 20, 2020, 5:53 PM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಕಾಮಿಡಿ ಚಿತ್ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೆಟ್ಟೇರಿದೆ. ನವ ಪ್ರತಿಭೆಗಳಾದ ಶ್ರೀನಿವಾಸ ನಾಯ್ಕ್ ನವೀನ್ಕುಮಾರ್, ಚೇತನ್ ಜೋಡಿಧಾರ್, ಭಾರತಿ, ಇಂದಿರಾ, ಸೌಮ್ಯ, ಶಾಂತಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಟೈಟಲ್ ಇನ್ನಷ್ಟೇ ನಿರ್ಧಾರವಾಗಬೇಕಿದೆ.
“ಶ್ರೀಚೇತನ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆಮಾತನಾಡುವ ನಟ ಚೇತನ್ ಜೋಡಿಧಾರ್, “ಬಾಲ್ಯದಿಂದಲೂ ಸಿನಿಮಾದ ಕಡೆಗೆಆಸಕ್ತಿಯಿತ್ತು. ಈ ಸಿನಿಮಾದ ಮೂಲಕ ಬಾಲ್ಯದ ಕನಸು ನನಸಾಗುತ್ತಿದೆ. ಇದೊಂದು ಸಂಪೂರ್ಣ ಕಾಮಿಡಿ ಕಥಾ ಹಂದರವಿರುವ ಸಿನಿಮಾ. ಮೂವರು ಸ್ನೇಹಿತರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ’ ಎಂದರು.
ಇದನ್ನೂ ಓದಿ :ಅಗೋಳಿ ಮಂಜಣ್ಣ ಸಿದ್ಧತೆ ಜೋರು
ಗೋಪಿನಾಥ್ ಆರ್. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. “ಮೂರು ಜನ ಸ್ನೇಹಿತರು ತಾವು ಮಾಡಿದ ಚಿಕ್ಕ ತಪ್ಪಿಗೆ ಕೊಲೆಯ ಆರೋಪ ಹೊತ್ತುಕೊಂಡಿದ್ದರಿಂದ 14 ದಿನಗಳ ಕಾಲ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡುತ್ತದೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಮೂವರು ಕೊಲೆ ಮಾಡಿರುವ ನಿಜವಾದ ಆರೋಪಿಗಳನ್ನು ಪತ್ತೆಮಾಡಿ ಪೊಲೀಸರಿಗೆ ಒಪ್ಪಿಸಿ ಆರೋಪ ಮುಕ್ತರಾಗುತ್ತಾರೆ’ ಎಂದು ಕಥೆಯ ಎಳೆ ಬಿಟ್ಟುಕೊಟ್ಟರು.
ಇನ್ನು ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಉದಯಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಶ್ರೀನಿವಾಸಕೆ. ರೇವಣಕರ್ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ. ಎಂ. ಹೆಚ್ಕೃಷ್ಣಮೂರ್ತಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲು ಚಿತ್ರತಂಡ ಪ್ಲಾನ್ ಹಾಕಿ ಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ