ಐ ಲವ್ ಯು ಹೇಳಲು ಉಪ್ಪಿ ರೆಡಿ
Team Udayavani, Mar 15, 2019, 12:30 AM IST
ಆರ್.ಚಂದ್ರು ನಿರ್ಮಾಣ, ನಿರ್ದೇಶನದ, ಉಪೇಂದ್ರ ನಾಯಕರಾಗಿರುವ “ಐ ಲವ್ ಯು’ ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಫೆ.14 ಪ್ರೇಮಿಗಳ ದಿನದಂದು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಿಲ್ಲ. ಈಗ ಸಿನಿಮಾ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಏಪ್ರಿಲ್ನಲ್ಲಿ ತೆರೆಗೆ ಬರಲಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಆರ್.ಚಂದ್ರು, “ನಾವು ಪ್ರೇಮಿಗಳ ದಿನಕ್ಕೆ ಬರಬೇಕೆಂದುಕೊಂಡಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಒಂದಷ್ಟು ಕೆಲಸಗಳು ಬಾಕಿ ಇದ್ದವು. ಹಾಗಾಗಿ, ಸಾಧ್ಯವಾಗಲಿಲ್ಲ. ಈಗ ಎಲ್ಲವೂ ಮುಗಿದಿದ್ದು, ಏಪ್ರಿಲ್ನಲ್ಲಿ ತೆರೆಗೆ ಬರುತ್ತಿದ್ದೇವೆ. ಈಗಾಗಲೇ ಸಿನಿಮಾ ಟ್ರೇಲರ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದೇ ರೀತಿ ಸಿನಿಮಾ ಕೂಡಾ ಮೂಡಿಬಂದಿದೆ. ಇಂದಿನ ಜನರೇಶನ್ ಏನು ಬಯಸುತ್ತೋ, ಆ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಈಗಾಗಲೇ ತೆಲುಗಿನಲ್ಲೂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಲ್ಲಿನ ಅಭಿಮಾನಿಗಳು ಕೂಡಾ ಖುಷಿಯಾಗಿದ್ದಾರೆ’ ಎನ್ನುವುದು ಆರ್.ಚಂದ್ರು ಮಾತು.
ನಾಯಕ ನಟ ಉಪೇಂದ್ರ ಅವರು ಈ ಸಿನಿಮಾ ಬಗ್ಗೆ ಯಾವುದೇ ಟೆನ್ಸ್ನ್ ಇಲ್ಲದೇ ಆರಾಮವಾಗಿದ್ದಾರಂತೆ. ಅದಕ್ಕೆ ಕಾರಣ ಆರ್.ಚಂದ್ರು. “ಚಂದ್ರು ಸಿನಿಮಾ ಎಂದ ಮೇಲೆ ನಾವು ಟೆನ್ಸ್ನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಹಾಗಾಗಿ, ನಾನು ನನ್ನ ಕೆಲಸದಲ್ಲಿ ಬಿಝಿಯಾಗಿದ್ದೇನೆ. ಚಂದ್ರು ಅವರಿಗೆ ಸಿನಿಮಾವನ್ನು ಹೇಗೆ ಪ್ರಮೋಶನ್ ಮಾಡಬೇಕು, ಜನರಿಗೆ ಹೇಗೆ ತಲುಪಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಸಿನಿಮಾಕ್ಕಾಗಿ ಅವರು ತುಂಬಾ ಕಷ್ಟಪಡುತ್ತಾರೆ’ ಎಂದರು. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಸೋನು ಗೌಡ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. “ಈ ಚಿತ್ರದ ಪೋಸ್ಟರ್ನಲ್ಲಿ ನನ್ನ ಫೋಟೋ ಇಲ್ಲ. ಟ್ರೇಲರ್, ಹಾಡಿನಲ್ಲೂ ನನ್ನನ್ನು ತೋರಿಸಿಲ್ಲ. ಹೀಗಿರುವಾಗ ನನ್ನನ್ನು ಪ್ರಮೋಶನ್ಗೆ ಯಾಕೆ ಕರೀತಾರೆ, ನಾನ್ಯಾಕೆ ಹೋಗಬೇಕೆಂದು ಮೊದಲು ಅನಿಸಿತ್ತು. ಆ ನಂತರ ನಾನೇ ಅರ್ಥ ಮಾಡಿಕೊಂಡೆ. ಕೋಟಿಗಟ್ಟಲೇ ಖರ್ಚು ಮಾಡುವ ಚಿತ್ರತಂಡ ಪೋಸ್ಟರ್ನಲ್ಲಿ ನನ್ನನ್ನು ಬಳಸದಿರಲು ಏನಾದರೊಂದು ಕಾರಣವಿರಬಹುದು, ನನ್ನ ಪಾತ್ರದ ಗುಟ್ಟುಬಿಟ್ಟು ಕೊಡಬಾರದೆಂಬ ಲೆಕ್ಕಾಚಾರವಿರಬಹುದೆಂದು. ಹಾಗಾಗಿ, ನಾನು ಪ್ರಮೋಶನ್ನಲ್ಲಿ ಭಾಗವಹಿಸುತ್ತಿದ್ದೇನೆ. ಕೇವಲ ಪೋಟೋ ಹಾಕಿಲ್ಲ ಎಂದ ಗಲಾಟೆ ಮಾಡುವುದರಲ್ಲಿ ಅರ್ಥವಿಲ್ಲ. “ಐ ಲವ್ ಯು’ ಸಿನಿಮಾದಲ್ಲಿನ ನನ್ನ ಪಾತ್ರದ ತೀವ್ರತೆಯ ಅರಿವು ನನಗಿದೆ. ಆ ಪಾತ್ರ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವೂ ಇದೆ. ಉಪೇಂದ್ರ ಅಭಿಮಾನಿಗಳಿಗೂ ನನ್ನ ಪಾತ್ರ ಇಷ್ಟವಾಗುತ್ತದೆ’ ಎಂದರು. ಇನ್ನು, ಚಂದ್ರು ಗುರುಗಳಾದ ರಾಜೇಂದ್ರ, ಕಥೆ ಕೇಳಿ ಫಿದಾ ಆದ ಡಾ.ಮಂಜುನಾಥ್ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ