ವಿರುಪಾದಲ್ಲಿ ಸಂಸ್ಕೃತಿ ಅನಾವರಣ : ಹಳ್ಳಿ ಹುಡುಗನ ಪ್ಯಾಟೆ ಲೈಫ್

ಈ ವಾರ ತೆರೆಗೆ

Team Udayavani, Apr 12, 2019, 6:30 AM IST

Suchi-Virupa

ಮಾತು ಬರದ, ಕಿವಿ ಕೇಳದ, ಕಣ್ಣೇ ಕಾಣದ ಇಬ್ಬರು ಹುಡುಗರನ್ನಿಟ್ಟುಕೊಂಡು ‘ವಿರುಪಾ’ ಎಂಬ ಚಿತ್ರ ಮೂಡಿಬರುತ್ತಿದೆ ಎಂಬ ಸುದ್ದಿ ಗೊತ್ತೇ ಇದೆ. ಆ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಆ ಇಬ್ಬರು ಪ್ರತಿಭಾವಂತ ಹುಡುಗರನ್ನು ಗುರುತಿಸಿ, ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿರುವ ನಿರ್ದೇಶಕ ಪುನೀಕ್‌ ಶೆಟ್ಟಿ, “ವಿರುಪಾ’ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ರಿಯಲ್‌ ಬದುಕಲ್ಲಿ ಮಾತು ಬಾರದ, ಕಣ್ಣು ಕಾಣದ ಇಬ್ಬರು ಹುಡುಗರು ರೀಲ್‌ ನಲ್ಲೂ ಹಾಗೇ ಕಾಣಿಸಿಕೊಂಡು ನಟಿಸಿದ್ದಾರೆ ಎಂಬುದೇ ವಿಶೇಷ. ಈ ಚಿತ್ರ ಬಹುತೇಕ ಹಂಪಿಯಲ್ಲೇ ಚಿತ್ರೀಕರಣಗೊಂಡಿದೆ. ನಿರ್ದೇಶಕರು ಹಂಪಿ ಸುತ್ತಮುತ್ತಲಿನ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಾರೆ.

“ವಿರುಪಾ’ದಲ್ಲಿ ಮೂವರು ಮಕ್ಕಳ ಕಥೆ ಇದೆ. ಹಾಗಾಗಿ ಇದು ಮಕ್ಕಳ ಚಿತ್ರ. ಚಿತ್ರಕ್ಕೆ ಡ್ಯಾಫ್ನಿ ನೀತು ಡಿಸೋಜ ನಿರ್ಮಾಪಕರು. ಅವರ ಸಹೋದರ ಡಿಕ್ಸನ್‌ ಜಾಕಿ ಡಿಸೋಜ ಕಾರ್ಯಕಾರಿ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ.

‘ವಿರುಪಾ’ ಎಂಬುದು ಮೂವರು ಮಕ್ಕಳ ಕಥೆ. ಒಬ್ಬನ ಹೆಸರು ವಿನ್ಸೆಂಟ್‌, ಇನ್ನೊಬ್ಬನ ಹೆಸರು ರುಸ್ತುಂ ಮತ್ತೂಬ್ಬ ಪಾಕ್ಷ. ಈ ಮೂವರ ಮೊದಲ ಅಕ್ಷರ ತೆಗೆದುಕೊಂಡು “ವಿರುಪಾ’ ಎಂಬ ಹೆಸರಿಡಲಾಗಿದೆ. ಸಿಟಿ ಮತ್ತು ಹಳ್ಳಿ ಬದುಕಿನ ನಡುವಿನ ವ್ಯತ್ಯಾಸ ಇಲ್ಲಿ ಹೇಳಲಾಗಿದೆ. ಮಕ್ಕಳ ಮನಸ್ಥಿತಿ ಕುರಿತ ವಿಷಯ ಇಲ್ಲಿದೆ. ಹಳ್ಳಿಯಲ್ಲಿರುವ ಹುಡುಗನೊಬ್ಬ ಸಿಟಿಗೆ ಹೋಗಿ, ಅಲ್ಲಿ ಇರಲಾರದೆ ಪುನಃ ಹಳ್ಳಿಗೆ ಬರುವ ಕಥೆ ಇಲ್ಲಿದೆ. ಹಳ್ಳಿ ಮತ್ತು ನಗರ ಸಂಸ್ಕೃತಿ ಅನಾವರಣಗೊಳ್ಳಲಿದೆ. ಮನಮಿಡಿಯುವ ಕಥೆಯೂ ಜೊತೆಗಿದೆಯಂತೆ.

ನಿರ್ಮಾಪಕಿ ಡ್ಯಾಫ್ನಿ ನೀತು ಡಿಸೋಜ ಅವರಿಗೆ ಒಂದೊಳ್ಳೆಯ ಸಿನಿಮಾ ಮಾಡುವ ಆಸೆ ಈ ಚಿತ್ರದ ಮೂಲಕ ಈಡೇರಿದೆಯಂತೆ. ಕಥೆ ಚೆನ್ನಾಗಿದ್ದ ಕಾರಣ, ಪ್ರತಿಭಾವಂತ ಮಕ್ಕಳು ಸಿಕ್ಕ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ನೀತು ಡಿಸೋಜ. ಇನ್ನು, ಕನ್ನಡದಲ್ಲಿ ಹೊಸಬಗೆಯ ಚಿತ್ರ ಮಾಡಿರುವ ಸಂತಸ ಅವರದು.

ಮೂಲತಃ ಭಟ್ಕಳದವರಾದ ಶಯಾಲ್‌ ಗೋಮ್ಸ್‌ ಒಬ್ಬ ಅಂಧ. ಚಿತ್ರದಲ್ಲೂ ಅಂಧನಾಗಿಯೇ ನಟಿಸಿದ್ದು, ನಟನೆ ಬಗ್ಗೆ ಎಲ್ಲವನ್ನೂ ಹೇಳಿಕೊಟ್ಟು ಕೆಲಸ ತೆಗೆಸಿರುವ ನಿರ್ದೇಶಕರು ಮತ್ತು ಚಿತ್ರತಂಡಕ್ಕೆ ಧನ್ಯವಾದ ಹೇಳಿದರು ಶಯಾಲ್‌. ಉಳಿದಂತೆ ಹೊಸಪೇಟೆಯ ವಿಷ್ಣು, ಇಲ್ಲಿ ಶಯಾಲ್‌ ಗೆಳೆಯನಾಗಿ ನಟಿಸಿದ್ದಾರೆ. ಚರಣ್‌ ನಾಯಕ್‌ ಅವರಿಗೂ ಇಲ್ಲಿ ಗಮನ ಸೆಳೆಯುವ ಪಾತ್ರವಿದೆ. ಚಿತ್ರದಲ್ಲಿ ಮಂಜುನಾಥ್‌ ಉಪನ್ಯಾಸಕ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್‌ ಮಳ್ಳೂರು ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಅನಂತ್‌ರಾಜ್‌ ಅರಸ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಬೇಬಿ ಪ್ರಾಪ್ತಿ, ಡ್ಯಾನಿಯಲ್‌ ಲೆಸ್ಸಾಸರ್ಡ್, ಫೆಲ್ಸಿ ರಿತೀಶ್‌ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ.

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.