ಜೆಕೆಗೆ ವಾರಂಟ್‌


Team Udayavani, Oct 5, 2018, 6:00 AM IST

s-19.jpg

ಒಂದು ಚಿತ್ರ ಮೂವರು ಸಂಗೀತ ನಿರ್ದೇಶಕರು, ಮೂವರು ಛಾಯಾಗ್ರಾಹಕರು..!
– ಇದು “ವಾರಂಟ್‌’ ಕಥೆಯೊಳಗಿನ ಗುಟ್ಟು. ನಾಗೇಂದ್ರ ಅರಸ್‌ ಸದ್ದಿಲ್ಲದೆಯೇ ಮುಗಿಸಿದ ಚಿತ್ರವಿದು. ಚಿತ್ರದ ಬಗ್ಗೆ ಹೇಳಲೆಂದೇ ತಂಡ ಕಟ್ಟಿಕೊಂಡು ಮಾಧ್ಯಮ ಮುಂದೆ ಬಂದಿದ್ದರು ನಾಗೇಂದ್ರ ಅರಸ್‌. ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ನಾಗೇಂದ್ರ ಅರಸ್‌, “ಇದು ಆ್ಯಕ್ಷನ್‌ ಚಿತ್ರ. ಒಂದು ರೀತಿಯ ರಿವೇಂಜ್‌ ಕಥೆ. ಹಾಗಂತ, ಇಲ್ಲಿ ಅಂಡರ್‌ವರ್ಲ್ಡ್ ಕಥೆ ಇಲ್ಲ. ನಡೆದ ಒಂದು ಘಟನೆಯನ್ನು ಹೇಗೆ ಪತ್ತೆ ಹಚ್ಚುತ್ತಾರೆ ಎಂಬುದೇ ಕಥೆ. ಇಲ್ಲಿ ಮನರಂಜನೆಗೂ ಜಾಗವಿದೆ. ಸೆಂಟಿಮೆಂಟ್‌ ಅಂಶಗಳೂ ಇವೆ. ಬ್ಯಾಂಕಾಕ್‌ನಲ್ಲಿ 13 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ 20 ದಿನ ಚಿತ್ರೀಕರಿಸಿದ್ದು, ಈಗ ಚಿತ್ರ ಡಬ್ಬಿಂಗ್‌ ಹೋಗಲು ಸಜ್ಜಾಗಿದೆ. ಚಿತ್ರದಲ್ಲಿ ಮನೋಹರ್‌, ಮ್ಯಾಥು ಮನು ಸಂಗೀತವಿದೆ. ಶ್ರೀಧರ್‌ ಹಿನ್ನೆಲೆ ಸಂಗೀತವಿದೆ. ಇನ್ನು, ಡಿಸೋಜ, ಎಂ.ಬಿ.ಹಳ್ಳಿಕಟ್ಟಿ ಮತ್ತು ಸಂದೀಪ್‌ ಮಲ್ಲಿಕಾರ್ಜುನ್‌ ಅವರ ಛಾಯಾಗ್ರಹಣವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ ಅಥವಾ ಜನವರಿ ಒಳಗೆ “ವಾರಂಟ್‌’ ಬರಲಿದೆ’ ಎಂದು ಹೇಳಿಕೊಂಡರು ನಾಗೇಂದ್ರ ಅರಸ್‌.

ಚಿತ್ರಕ್ಕೆ ಜೆಕೆ ನಾಯಕ. ಅವರಿಗೆ ಇದೊಂದು ಬೇರೆ ರೀತಿಯ ಚಿತ್ರವಂತೆ.”ಕಳೆದ ಒಂದುವರೆ ವರ್ಷದ ಹಿಂದೆ ಶುರುವಾದ ಚಿತ್ರವಿದು. ಕಥೆ ಬರೆದಿದ್ದ ನಿರ್ಮಾಪಕಿ ಮನೀಷಾ ಅವರು ಒಮ್ಮೆ ಕಥೆ ಮತ್ತು ಪಾತ್ರ ವಿವರಿಸಿದರು. ಚೆನ್ನಾಗಿತ್ತು. ಸಾಕಷ್ಟು ಅಂಶಗಳಿದ್ದವು. ಜೊತೆಗೆ ನಾಗೇಂದ್ರ ಅರಸ್‌ ನಿರ್ದೇಶನ ಅಂತ ಗೊತ್ತಾಯ್ತು. ಅವರ ಜೊತೆಗೆ “ಜಸ್ಟ್‌ ಲವ್‌’ .”ಮೇ 1′ ಚಿತ್ರ ಮಾಡಿದ್ದೆ. ಇದು ಮೂರನೇ ಸಿನಿಮಾ. ಇಲ್ಲಿ ಕಮರ್ಷಿಯಲ್‌ ಅಂಶಗಳಿವೆ. ಚಿತ್ರದ ಬಗ್ಗೆ ಹೇಳುವುದಾದರೆ, ವ್ಯಕ್ತಿಯ ಬದುಕಿನಲ್ಲೊಂದು ತಪ್ಪು ನಡೆದಾಗ, ಆ ವ್ಯಕ್ತಿ ಹೇಗಾಗುತ್ತಾನೆ. ಅದೇ ವ್ಯಕ್ತಿ ತನ್ನ ತಪ್ಪು ತಿದ್ದಿಕೊಂಡು ಮುನ್ನೆಡೆದಾಗ ಹೇಗೆಲ್ಲಾ ಬದಲಾಗುತ್ತಾನೆ ಎಂಬುದು ಕಥೆ. ನನಗಿಲ್ಲಿ ಎರಡು ಶೇಡ್‌ ಪಾತ್ರವಿದೆ. ಮೊದಲು ಕೆಟ್ಟ ಕೆಲಸ ಮಾಡಿಕೊಂಡು ಆ ಬಳಿಕ ಅದರಿಂದ ಎಚ್ಚೆತ್ತುಕೊಂಡು ಒಳ್ಳೆಯ ಕೆಲಸ ಮಾಡಲು ಹೊರಡುವ ಪಾತ್ರ’ ಎಂದು ಹೇಳಿದರು ಜೆಕೆ. 

ನಿರ್ಮಾಪಕಿ ಮನೀಷಾ ಚಿತ್ರಕ್ಕೆ ಕಥೆ ಬರೆದಿದ್ದಲ್ಲದೆ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ಜೆಕೆ ಜೊತೆಗೆ ಹಾಡೊಂದಕ್ಕೆ ಕುಣಿದಿದ್ದಾರೆ. ಮೂಲತಃ ಕಾರವಾರ­ದವರಾದ ಅವರು ಮುಂಬೈನಲ್ಲಿ ವಾಸ ವಾಗಿದ್ದಾರೆ. ಒಂದು ವರ್ಷದ ಹಿಂದೆ ಕಥೆ ಬರೆದಿದ್ದರಂತೆ. ಅದನ್ನು ಚಿತ್ರ ಮಾಡಬೇಕು ಅಂತ ನಿರ್ಧರಿಸಿ, ಜೆಕೆ ಮತ್ತು ನಾಗೇಂದ್ರ ಅರಸ್‌ ಬಳಿಕ ಚರ್ಚಿಸಿ, ಚಿತ್ರ ಮಾಡಿದ್ದಾರೆ. ಸಮಾಜದಲ್ಲಿ ನಡೆವ ಸಣ್ಣ ಪುಟ್ಟ ಘಟನೆಗಳು ಚಿತ್ರಕ್ಕೆ ಸ್ಫೂರ್ತಿ ಎನ್ನುವ ಮನೀಷಾ, ಇಲ್ಲೊಂದು ಸಂದೇಶ ಹೇಳಿ­ದ್ದಾರಂತೆ. ಆದೇ ನೆಂಬ ಕುತೂಹಲ ವಿದ್ದರೆ ಸಿನಿಮಾ ನೋಡಬೇಕು ಎಂಬುದು ಅವರ ಮಾತು.ಚಿತ್ರಕ್ಕೆ ಒಂದು ಹಾಡುಕೊಟ್ಟ ವಿ.ಮನೋಹರ್‌ ಮಾತನಾಡಿ, ತಂಡಕ್ಕೆ ಶುಭ ಕೋರಿದರು.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.