ಇಂದಿನಿಂದ ವೀಕೆಂಡ್ ಮಸ್ತಿ
ಎರಡು ಜನರೇಶನ್ ಕಥೆ
Team Udayavani, May 24, 2019, 6:00 AM IST
“ವೀಕೆಂಡ್’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ ತೆರೆಕಾಣುತ್ತಿದೆ. ಎರಡು ಜನರೇಶನ್ನ ಜೀವನ ಮತ್ತು ಮನಸ್ಥಿತಿಯ ಕುರಿತಾದ ಕಥಾನಕ ಹೊಂದಿರುವ ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅನಂತ್ನಾಗ್ ಪ್ರಮುಖ ಪಾತ್ರ ಮಾಡಿದ್ದು, ಸಿನಿಮಾದ ಹೈಲೈಟ್ಗಳಲ್ಲೊಂದು ಎಂಬುದು ಚಿತ್ರತಂಡದ ಮಾತು.
ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿರುವ ಮೂಲಕ ಚಿತ್ರತಂಡ ಖುಷಿಯಾಗಿದೆ. “ನೋಡಿ ಸ್ವಾಮಿ ನಾವಿರೋ ಈ ಲೋಕಾನಾ, ತಿರುಗುತ್ತಿದ್ರೂ ಗೊತ್ತಾಗಲ್ಲ, ಬನ್ನಿ ಸ್ವಾಮಿ ನಾವು ಜೊತೇಲಿ ಸಾಗೋಣ, ಹೊತ್ಕಂಡು ಹೋಗೋಕೇನು ಇಲ್ಲ…’ ಎಂದು ಶುರುವಾಗುವ ಚಿತ್ರದ ಹಾಡಿಗೆ ಯುವ ಗಾಯಕ ಸಂಚಿತ್ ಹೆಗ್ಡೆ, ರಾಜೇಶ್ ಕೃಷ್ಣನ್ ಮತ್ತು ಲಕ್ಷ್ಮೀ ವಿಜಯ್ ಧ್ವನಿಯಾಗಿದ್ದಾರೆ. ಈ ಹಾಡು ಸದ್ಯಕ್ಕೆ ಯುಟ್ಯೂಬ್ನಲ್ಲಿ ಸಾಕಷ್ಟು ಮೆಚ್ಚುಗೆಯ ಕಾಮೆಂಟ್ಸ್ ಪಡೆದಿದೆ. ಅಂದಹಾಗೆ, ಈ ಚಿತ್ರಕ್ಕೆ ಯುವ ಪ್ರತಿಭೆ ಮನೋಜ್ ಎಸ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ವಿಶೇಷ ಅಂದರೆ, ಕಥೆ ಮತ್ತು ಹಾಡು. ಅದೆಲ್ಲಕ್ಕಿಂತಲೂ ಹಿರಿಯ ಕಲಾವಿದರಾದ ಅನಂತ್ನಾಗ್. ಅವರಿಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅನಂತ್ನಾಗ್ ಅವರು ಹೊಸಬರ ಜೊತೆ ನಟಿಸುವ ಮುನ್ನ, ಕಥೆ, ಪಾತ್ರ ನೋಡುತ್ತಾರೆ. ಅದು ಇಷ್ಟವಾದರೆ ಮಾತ್ರ ಅವರು ಕ್ಯಾಮೆರಾ ಮುಂದೆ ನಿಲ್ಲಲು ರೆಡಿಯಾಗುತ್ತಾರೆ. ಅಂಥದ್ದೊಂದು ಕಥೆ, ಪಾತ್ರ ಇಲ್ಲಿರುವುದರಿಂದಲೇ ಅನಂತ್ನಾಗ್ ಅವರು ಚಿತ್ರದಲ್ಲಿ ನಟಿಸಿದ್ದಾರೆ ಎಂಬುದು ನಿರ್ದೇಶಕ ಶೃಂಗೇರಿ ಸುರೇಶ್ ಅವರ ಮಾತು. ಇದೊಂದು ಫ್ಯಾಮಿಲಿ ಡ್ರಾಮಾ. ಇಲ್ಲಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳೂ ಇವೆ. ಮಂಜುನಾಥ್ ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಿಲಿಂದ್, ಸಂಜನಾ ಬುರ್ಲಿ ಅವರು ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕ ಮಂಜುನಾಥ್ ಅವರಿಗೆ ನಿರ್ದೇಶಕರು ಹೇಳಿದ ಮೂರು ಕಥೆಗಳಲ್ಲಿ “ವೀಕೆಂಡ್’ ಇಷ್ಟವಾಗಿ, ಅದನ್ನು ಸಿನಿಮಾ ಮಾಡಿದರಂತೆ. ಈ ಚಿತ್ರದ ಮೂಲಕ ಮಿಲಿಂದ್ ಚಿತ್ರರಂಗದಲ್ಲಿ ನೆಲೆ ನಿಲ್ಲುವ ವಿಶ್ವಾಸ ಅವರದು.
ಮಂಜುನಾಥ್. ಡಿ ನಿರ್ಮಿಸಿರುವ ಈ ಚಿತ್ರಕ್ಕೆ ಶಶಿಧರ್ ಛಾಯಾಗ್ರಹಣ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನವಿದೆ. ಚಿತ್ರವನ್ನು ಧೀರಜ್ ಫಿಲಂಸ್ ಬಿಡುಗಡೆ ಮಾಡುತ್ತಿದ್ದು, ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು