ಹಸಿರು ಹಿಮ ಮತ್ತು ಭಟ್ಟರ ಗಾಳಿಪಟ
ಕುದುರೆಮುಖದಲ್ಲಿ ಹುಡುಗರ ತರಲೆ ತಮಾಷೆ
Team Udayavani, Jan 17, 2020, 6:21 AM IST
“ಗಾಳಿಪಟ ಅಂದ ಕೂಡಲೇ ಮೊದಲು ನೆನಪಿಗೆ ಬರೋದು ಆ ಹಸಿರು, ಮಂಜು, ಪ್ರೀತಿ, ಒಂದಷ್ಟು ಹುಡುಕಾಟ, ಒಂದಷ್ಟು ತಮಾಷೆ, ಹೀಗೆ… ಇಲ್ಲೂ ಅದೆಲ್ಲವನ್ನೂ ನೋಡಬಹುದು. ಈ ಬಾರಿ “ಗಾಳಿಪಟ-2’ನ್ನು ಕುದುರೆಮುಖದ ಸುಂದರ ಹಸಿರನ್ನು ಹಿನ್ನೆಲೆ ಯಾಗಿಟ್ಟುಕೊಂಡು ಹಾರಿಸುತ್ತಿದ್ದೇವೆ. ಬಹುಶಃ 70-80ರ ದಶಕದಲ್ಲಿ ಡಾ. ರಾಜಕುಮಾರ್ ಅವರ ಬಹುತೇಕ ಚಿತ್ರಗಳು ಕುದುರೆಮುಖದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಅದಾದ ನಂತರ ಕನ್ನಡ ಸಿನಿಮಾಗಳಲ್ಲಿ ಕುದುರೆಮುಖದ ಸೌಂದರ್ಯ ಕಾಣೋದು ಅಪರೂಪ ಆಯ್ತು. ಈಗ ಅದನ್ನ ಗೋಸ್ಟ್ ಸಿಟಿ ಅಂತಾನೇ ಕರೆಯುತ್ತಾರೆ. ಈ ಬಾರಿ ಕುದುರೆಮುಖದ ಅಂಥ ಅಪರೂಪವನ್ನ ಮತ್ತೆ ಪ್ರೇಕ್ಷಕರ ಮುಂದೆ ತರೋದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಯೋಗರಾಜ್ ಭಟ್.
“ಮೊದಲು ಮಾಡಿದ ಗಾಳಿಪಟ ಇಂದಿಗೂ ಅದೆಷ್ಟೋ ಜನರಿಗೆ ಫೇವರೆಟ್ ಸಿನಿಮಾ. ಇದು ಕೂಡ ಅಂಥದ್ದೇ ಸಿನಿಮಾ ಆಗಲಿದೆ ಅನ್ನೋದು ನಮ್ಮ ವಿಶ್ವಾಸ. ನಾವೆಲ್ಲರೂ ಅದೇ ನಿರೀಕ್ಷೆ ಇಟ್ಟುಕೊಂಡು ಕೆಲ್ಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ನಾವೇನು ಅಂದುಕೊಂಡಿದ್ದೇವೋ, ಹಾಗೆ ಸಿನಿಮಾ ಬರ್ತಿದೆ…’
– ಹೀಗೆ ಹೇಳುತ್ತ ಮಾತಿಗಿಳಿದವರು ನಿರ್ದೇಶಕ ಯೋಗರಾಜ್ ಭಟ್. ಸದ್ಯ ಭಟ್ಟರು ತಮ್ಮ ಬಹುನಿರೀಕ್ಷಿತ “ಗಾಳಿಪಟ-2′ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. ಸಂಕ್ರಾಂತಿಯ ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮಾತಿಗೆ ಸಿಕ್ಕ ಭಟ್ಟರು, “ಗಾಳಿಪಟ-2′ ಚಿತ್ರದ ಚಿತ್ರೀಕರಣದ ಒಂದಷ್ಟು ಅನುಭವಗಳನ್ನು ತೆರೆದಿಟ್ಟರು.
“ಗಾಳಿಪಟ ಅಂದ ಕೂಡಲೇ ಮೊದಲು ನೆನಪಿಗೆ ಬರೋದು ಆ ಹಸಿರು, ಮಂಜು, ಪ್ರೀತಿ, ಒಂದಷ್ಟು ಹುಡುಕಾಟ, ಒಂದಷ್ಟು ತಮಾಷೆ, ಹೀಗೆ… ಇಲ್ಲೂ ಅದೆಲ್ಲವನ್ನೂ ನೋಡಬಹುದು. ಈ ಬಾರಿ “ಗಾಳಿಪಟ-2’ನ್ನು ಕುದುರೆಮುಖದ ಸುಂದರ ಹಸಿರನ್ನು ಹಿನ್ನೆಲೆಯಾಗಿಟ್ಟುಕೊಂಡು ಹಾರಿಸುತ್ತಿದ್ದೇವೆ. ಬಹುಶಃ 70-80ರ ದಶಕದಲ್ಲಿ ಡಾ. ರಾಜಕುಮಾರ್ ಅವರ ಬಹುತೇಕ ಚಿತ್ರಗಳು ಕುದುರೆಮುಖದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಅದಾದ ನಂತರ ಕನ್ನಡ ಸಿನಿಮಾಗಳಲ್ಲಿ ಕುದುರೆಮುಖದ ಸೌಂದರ್ಯ ಕಾಣೋದು ಅಪರೂಪವಾಯ್ತು. ಈಗ ಅದನ್ನ ಗೋಸ್ಟ್ ಸಿಟಿ ಅಂತಾನೇ ಕರೆಯುತ್ತಾರೆ. ಈ ಬಾರಿ ಕುದುರೆಮುಖದ ಅಂಥ ಅಪರೂಪವನ್ನ ಮತ್ತೆ ಪ್ರೇಕ್ಷಕರ ಮುಂದೆ ತರೋದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಯೋಗರಾಜ್ ಭಟ್.
“ಇನ್ನು “ಗಾಳಿಪಟ-2′ ಚಿತ್ರೀಕರಣಕ್ಕಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ನಕ್ಸಲ್ ನಿಗ್ರಹ ಪಡೆ, ಗಣಿ ಇಲಾಖೆ, ಸ್ಥಳೀಯ ಪ್ರಾಧಿಕಾರಗಳು ಹೀಗೆ ಎಂಟು-ಹತ್ತು ವಿವಿಧ ಇಲಾಖೆಗಳ ಅನುಮತಿ ಪಡೆದುಕೊಳ್ಳಬೇಕಾಗಿತ್ತು. ಅದೆಲ್ಲವನ್ನೂ ಪಡೆದುಕೊಂಡು ಶೂಟಿಂಗ್ ಮಾಡೋದೆ ದೊಡ್ಡ ಸಾಹಸ. ಕೊನೆಗೂ ಚಿತ್ರದ ಶೇಕಡಾ 50ರಷ್ಟು ಚಿತ್ರೀಕರಣವನ್ನು ಅಲ್ಲಿ ಮಾಡಿ ಮುಗಿಸಿದ್ದೇವೆ’ ಎಂದು ನಿಟ್ಟುಸಿರು ಬಿಟ್ಟರು ಭಟ್ಟರು.
ಅಂದಹಾಗೆ, ಸುಮಾರು 45 ದಿನಗಳ ಕಾಲ ನಡೆದ “ಗಾಳಿಪಟ-2′ ಚಿತ್ರದ ಮೊದಲ ಶೆಡ್ನೂಲ್ ಶೂಟಿಂಗ್ನಲ್ಲಿ ಚಿತ್ರದ ಮಾತಿನ ಭಾಗ ಸುಮಾರು 3-4 ಹಾಡುಗಳನ್ನು ಚಿತ್ರೀಕರಿಸಲಾಗಿದೆಯಂತೆ. ನಟರಾದ ಗಣೇಶ್, ಅನಂತನಾಗ್, ದಿಗಂತ್, ಪವನ್, ರಂಗಾಯಣ ರಘು, ಪದ್ಮಜಾ ರಾವ್ ಹೀಗೆ ಅನೇಕ ಕಲಾವಿದರ ದಂಡೇ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಇದೆಲ್ಲದಕ್ಕೂ ಕಾರಣವಾಗಿದ್ದು, ಇದರ ಹಿಂದೆ ಶಕ್ತಿಯಾಗಿ ನಿಂತಿದ್ದು, ನಿರ್ಮಾಪಕ ರೆಡ್ಡಿ ಎನ್ನುವುದು ಭಟ್ಟರ ಮಾತು. “ಇಂಥದ್ದೊಂದು ಕಥೆ ಇಟ್ಟುಕೊಂಡು ಅದಕ್ಕೆ ಬೇಕಾದ ಲೊಕೇಶನ್ ಹುಡುಕಿಕೊಂಡು ಸಿನಿಮಾ ಮಾಡಲು ಹೊರಟಾಗ ನಿರ್ಮಾಪಕರಾದವರು ಸಾಕಷ್ಟು ಗಟ್ಟಿ ಇರಬೇಕು. ಇಲ್ಲದಿದ್ದರೆ, ಈ ಥರದ ಸಿನಿಮಾ ಮಾಡೋದಕ್ಕೆ ಕಷ್ಟ. ಆದರೆ ನಮ್ಮ ನಿರ್ಮಾಪಕರು ಅದೆಲ್ಲವನ್ನೂ ಭರಿಸಿ ನಮಗೆ ಹೆಗಲಾಗಿ ನಿಂತಿದ್ದಾರೆ. ಹಾಗಾಗಿ ಎಲ್ಲವೂ ಸರಾಗವಾಗಿ ಸಾಗುತ್ತಿದೆ’ ಎನ್ನುತ್ತಾರೆ ಭಟ್ಟರು.
“ನಿರ್ದೇಶಕನಾಗಿ ಅಲ್ಲದೆ ಪ್ರೇಕ್ಷಕನಾಗಿ ನನಗೂ ಈ ಸಿನಿಮಾದ ಮೇಲೆ ಸಾಕಷ್ಟು ಕುತೂಹಲವಿದೆ. ಒಂದು ಒಳ್ಳೆಯ ಸಿನಿಮಾ ತನಗೆ ಏನು ಬೇಕೋ ಅದೆಲ್ಲವನ್ನು ತಂತಾನೇ ಪಡೆದುಕೊಳ್ಳುತ್ತದೆ. ಹಾಗೆ, “ಗಾಳಿಪಟ-2′ ಕೂಡ ತನಗೇನು ಬೇಕೋ ಅದೆಲ್ಲವನ್ನು ಪಡೆದುಕೊಂಡು ಸಾಗುತ್ತಿದೆ. ಆದಷ್ಟು ಬೇಗ ಈ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಇಡಲು ಎಲ್ಲರೂ ಶ್ರಮಿಸುತ್ತಿದ್ದೇವೆ’ ಎನ್ನುತ್ತಾರೆ ಭಟ್ಟರು.
ಸದ್ಯ ಮೊದಲ ಹಂತದ ಶೂಟಿಂಗ್ ಮುಗಿಸಿರುವ “ಗಾಳಿಪಟ-2′ ಚಿತ್ರದ ಎರಡನೇ ಹಂತದ ಶೂಟಿಂಗ್ ಬಹುತೇಕ ವಿದೇಶಗಳಲ್ಲಿ ನಡೆಸಲು ಯೋಗರಾಜ್ ಭಟ್ ಆ್ಯಂಡ್ ಟೀಮ್ ಪ್ಲಾನ್ ಹಾಕಿಕೊಂಡಿದೆ. “ಚಿತ್ರಕಥೆ ಮತ್ತು ಸನ್ನಿವೇಶಗಳು ಮಂಜು, ಹಿಮವನ್ನು ಬಯಸುತ್ತಿರುವುದರಿಂದ, ಅದರಲ್ಲೂ ಸಾಕಷ್ಟು ಹಿಮ ಬೀಳುವ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲು ನಿರ್ಧರಿಸಲಾಗಿದೆ’ ಎಂಬ ವಿವರಣೆ ಕೊಡುತ್ತಾರೆ ಯೋಗರಾಜ್ ಭಟ್ಟರು.
ಒಬ್ಬ ಪ್ರೇಕ್ಷಕನಾಗಿ ನಾನು ಕೂಡಾ ಈ ಸಿನಿಮಾ ಬಗ್ಗೆ ಕುತೂಹಲ ಹೊಂದಿದ್ದೇನೆ -ಯೋಗರಾಜ್ ಭಟ್
ಜಿ.ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?