ವಿಯೆಟ್ನಾಮಿನ ಕತೆ: ಮೀನುಗಾರನ ಹಾಡು


Team Udayavani, Jul 28, 2019, 5:00 AM IST

q-5

ಒಂದು ನದಿಯ ದಡದಲ್ಲಿ ಒಬ್ಬ ಧನಿಕ ವಾಸವಾಗಿದ್ದ. ಅವನಿಗೆ ಮಿನುವಾಂಗ್‌ ಎಂಬ ಒಬ್ಬಳೇ ಮಗಳಿದ್ದಳು. ತುಂಬ ಸುಂದರಿಯೂ ವಿದ್ಯಾವಂತೆಯೂ ಆದ ಅವಳು ಹಲವು ಕಲೆಗಳನ್ನು ಕಲಿತಿದ್ದಳು. ಪ್ರಾಯ ಪ್ರಬುದ್ಧಳಾದ ಮಗಳಿಗೆ ಮದುವೆ ಮಾಡಲು ಧನಿಕ ಯೋಚಿಸಿದ. ಕುಲೀನ ಮನೆತನಕ್ಕೆ ಸೇರಿದ ಅನೇಕ ಯುವಕರ ಸಂಬಂಧಗಳೂ ಸಾಲುಗಟ್ಟಿ ಬಂದುವು. ಆದರೆ ಅವರಲ್ಲಿ ಒಬ್ಬನನ್ನೂ ಮಿನುವಾಂಗ್‌ ಒಪ್ಪಿಕೊಳ್ಳಲಿಲ್ಲ. “”ನನ್ನ ಕೈ ಹಿಡಿಯುವವನು ಒಳ್ಳೆಯ ನರ್ತಕನೋ ಹಾಡುಗಾರನೋ ಆಗಿರಬೇಕು. ಸಿರಿವಂತಿಕೆ ನನಗೆ ಮುಖ್ಯವಲ್ಲ, ಮನಸ್ಸಿಗೆ ಹರ್ಷ ನೀಡುವ ಕಲೆಯೇ ಮುಖ್ಯ” ಎಂದು ಸ್ಪಷ್ಟವಾಗಿ ಹೇಳಿದಳು. ಅವಳು ಒಪ್ಪುವಂತಹ ಯಾವುದೇ ಸಂಬಂಧವೂ ಕೂಡಿ ಬರಲಿಲ್ಲ.

ಒಂದು ದಿನ ಬೆಳಗಿನ ಜಾವ ನದಿಯಿಂದ ಒಂದು ಹಾಡು ತೇಲಿ ಬಂದಿತು. ಮಿನುವಾಂಗ್‌ ಅದನ್ನು ಆಲಿಸಿದಳು. “ಪ್ರೀತಿ ತಂಗಾಳಿಯಲಿ ಸಾಗಿ ಬಂದಿದೆ, ಅದನು ಕೇಳಿ ಚಂದಿರನ ಮುಖ ಅರಳಿದೆ’ ಎಂಬ ಆ ಹಾಡು ಕಿವಿಗೆ ಬಿದ್ದ ಕೂಡಲೇ ಮಿನುವಾಂಗ್‌ ಸಂತೋಷದಿಂದ ಕುಣಿದಾಡತೊಡಗಿದಳು. ಅದನ್ನು ಕಂಡು ಧನಿಕ ಆಶ್ಚರ್ಯದಿಂದ ಮಗಳ ಬಳಿಗೆ ಬಂದ, “”ಏನಾಗಿದೆ ಮಗಳೇ, ಯಾಕೆ ಇಷ್ಟೊಂದು ಸಂತೋಷಗೊಂಡಿರುವೆ?” ಎಂದು ಕೇಳಿದ. ಮಿನುವಾಂಗ್‌, “”ಸಂತೋಷವಾಗದೆ ಇರುತ್ತದೆಯೆ? ಇಷ್ಟು ದಿನಗಳಿಂದ ನನ್ನ ಮನಸ್ಸನ್ನು ಸಂತೋಷಪಡಿಸುವ ಮೋಹಕವಾದ ಸಂಗೀತದ ಧ್ವನಿಗಾಗಿ ಕಾದು ಕುಳಿತಿದ್ದೆ. ದೇವರ ದಯೆಯಿಂದ ಅದು ನನಗೀಗ ದೊರಕಿದೆ. ನನ್ನ ಕೈಹಿಡಿಯುವವನು ಇಲ್ಲಿಯೇ ಸನಿಹದಲ್ಲಿದ್ದಾನೆಂದು ತೋರುತ್ತಿದೆ” ಎಂದಳು.

“”ಅಂತಹ ಅದೃಷ್ಟಶಾಲಿ ಯುವಕ ಸನಿಹದಲ್ಲಿ ಇದ್ದಾನೆಯೆ? ಯಾರು ಅವನು?” ಎಂದು ಧನಿಕ ವಿಚಾರಿಸಿದ. ಮಿನುವಾಂಗ್‌ ನದಿಯ ಕಡೆಗೆ ಕೈ ತೋರಿಸಿದಳು. “”ಧ್ವನಿಯೇ ಇಷ್ಟೊಂದು ಮೋಹಕವಾಗಿರುವಾಗ ಅವನು ರೂಪದಲ್ಲಿಯೂ ಚೆಲುವನೇ ಆಗಿರಬೇಕು. ನನ್ನ ಕೈಹಿಡಿಯಬೇಕಾದ ಆ ಮಹಾವ್ಯಕ್ತಿಯು ನದಿಯ ದಡದಲ್ಲಿ ವಿಹಾರಕ್ಕಾಗಿ ಬಂದಿರಬೇಕು. ಕೂಡಲೇ ಅವನನ್ನು ಕರೆಸಿ ನನ್ನೊಂದಿಗೆ ಮದುವೆಗೆ ವ್ಯವಸ್ಥೆ ಮಾಡಿ” ಎಂದಳು.

ಧನಿಕ ಸೇವಕರನ್ನು ಕರೆದ. “”ಕೂಡಲೇ ನದಿ ತೀರಕ್ಕೆ ಹೋಗಿ. ಅಲ್ಲಿ ಸುಶ್ರಾವ್ಯ ಕಂಠದಿಂದ ಯಾರೋ ಒಬ್ಬ ಯುವಕ ಹಾಡುತ್ತ ಕುಳಿತಿದ್ದಾನೆ. ಅವನನ್ನು ಗೌರವದಿಂದ ಕರೆದುಕೊಂಡು ಬನ್ನಿ” ಎಂದು ಕಳುಹಿಸಿದ. ಸೇವಕರು ನದಿ ತೀರಕ್ಕೆ ಬಂದು ಹಾಡುತ್ತಿರುವ ಯುವಕನನ್ನು ಪತ್ತೆ ಮಾಡಿದರು. ಒಂದು ಒಡಕು ದೋಣಿಯಲ್ಲಿ ಕುಳಿತುಕೊಂಡು ನದಿಗೆ ಬಲೆ ಬೀಸಿ ಅವನು ಮೀನು ಹಿಡಿಯುತ್ತ ಹಾಡಿಕೊಂಡಿದ್ದ. ಅವನ ಹಾಡೇನೋ ಸುಂದರವಾಗಿತ್ತು. ಆದರೆ ಮುಖ ನೋಡಿದರೆ ಸ್ವಲ್ಪವೂ ಸುಂದರನಾಗಿರಲಿಲ್ಲ. ಮೆಳ್ಳಗಣ್ಣು, ಸೊಟ್ಟ ಮೂಗು, ಹರಕು ಕಿವಿ, ಕುರುಚಲು ಗಡ್ಡ ಇದ್ದ ಅವನನ್ನು ಕಂಡರೆ ಅಸಹ್ಯ ಹುಟ್ಟುವ ಹಾಗಿದ್ದ. ಅವನಿಗೆ ಧರಿಸಲು ಒಳ್ಳೆಯ ಬಟ್ಟೆಗಳಿರಲಿಲ್ಲ. ಹತ್ತಿರ ಹೋದರೆ ಕೊಳೆತ ಮೀನಿನ ವಾಸನೆಯಿಂದ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಯಿತ್ತು.

ಆದರೆ ಸೇವಕರಿಗೆ ಯುವಕನನ್ನು ಕರೆದೊಯ್ಯದೆ ವಿಧಿಯಿರಲಿಲ್ಲ. “”ಯುವಕನೇ, ನಮ್ಮೊಂದಿಗೆ ಧನಿಕನ ಭವ್ಯವಾಗಿರುವ ಮನೆಗೆ ಬಾ. ನಿನ್ನ ಅದೃಷ್ಟ ಖುಲಾಯಿಸಿತೆಂದು ತಿಳಿದುಕೋ. ನಾಳೆಯಿಂದ ಈ ಕೊಳಕು ಬಟ್ಟೆಗಳನ್ನು ಧರಿಸಿ, ಚಳಿ, ಮಳೆಯೆಂದಿಲ್ಲದೆ ಮೀನು ಹಿಡಿಯಲು ಶ್ರಮಪಡುವ ಅಗತ್ಯವಿಲ್ಲ. ದಿನವಿಡೀ ಸೊಗಸಾಗಿ ಹಾಡುತ್ತ ಸುಖದಿಂದ ಕಾಲ ಕಳೆಯುವ ಕ್ಷಣಗಳು ಹುಡುಕಿಕೊಂಡು ಬಂದಿವೆ” ಎಂದರು.

ಯುವಕನಿಗೆ ಆಶ್ಚರ್ಯವಾಯಿತು. “”ನನ್ನನ್ನೇಕೆ ಸುಮ್ಮನೆ ತಮಾಷೆ ಮಾಡುತ್ತೀರಾ? ದುಡಿಯದೆ ನನ್ನನ್ನು ಸಾಕಲು ಧನಿಕರಿಗೇನು ಮಕ್ಕಳಿಲ್ಲವೆ? ಸುಮ್ಮನೆ ಹೋಗಿ ಇಲ್ಲಿಂದ” ಎಂದ. ಆದರೆ ಸೇವಕರು ಬಿಡಲಿಲ್ಲ. “”ನಮ್ಮ ಜೊತೆಗೆ ನೀನು ಧನಿಕರ ಮನೆಗೆ ಬರಲೇಬೇಕು. ನಾವು ಹೇಳುವುದು ಸುಳ್ಳಲ್ಲ. ಅವರ ಮಗಳು ನಿನ್ನ ಹಾಡು ಕೇಳಿದ ಮೇಲೆ ನಿನ್ನನ್ನೇ ಮದುವೆಯಾಗಬೇಕು ಎಂದು ಹಟ ಹಿಡಿದು ಕುಳಿತಿದ್ದಾಳೆ. ಗೌರವದಿಂದ ಆ ಹಾಡುಗಾರನನ್ನು ಕರೆದುಕೊಂಡು ಬನ್ನಿ ಎಂದು ಒಡೆಯರು ನಮ್ಮನ್ನಿಲ್ಲಿಗೆ ಕಳುಹಿಸಿದ್ದಾರೆ. ನೀನೀಗ ಬರದಿದ್ದರೆ ಬಲವಂತವಾಗಿ ಹೊತ್ತುಕೊಂಡು ಹೋಗುತ್ತೇವೆ” ಎಂದರು.

ಸೇವಕರ ಜೊತೆಯಲ್ಲಿ ಯುವಕ ಧನಿಕನ ಮನೆಗೆ ಹೊರಟ. ಅವರು ಅವನ ದೇಹಕ್ಕೆ ಇಡೀ ಬಟ್ಟೆಯೊಂದನ್ನು ಮುಸುಕು ಹಾಕಿ ಕರೆದುಕೊಂಡು ಹೋಗಿ ಮಿನುವಾಂಗ್‌ ಮುಂದೆ ನಿಲ್ಲಿಸಿದರು. “”ಒಡತಿ, ನೀವು ಮೆಚ್ಚಿಕೊಂಡು ಮದುವೆಯಾಗಲು ಬಯಸಿದ ಯುವಕನನ್ನು ಕರೆದುಕೊಂಡು ಬಂದಿದ್ದೇವೆ” ಎಂದರು. ಮಿನುವಾಂಗ್‌ ಯುವಕನೊಂದಿಗೆ ತಾನು ಇಷ್ಟಪಟ್ಟ ಹಾಡನ್ನು ಹಾಡುವಂತೆ ಹೇಳಿದಳು. ಯುವಕ ಹಾಡಿದ. “”ನಿಜವಾಗಿಯೂ ಇವನು ನನ್ನ ಗಂಡನಾಗಬೇಕು. ಮನ ಸೆಳೆಯುವ ಕಂಠದಿಂದ ನನ್ನನ್ನು ಒಲಿಸಿಕೊಂಡ ಆ ಸುಂದರಾಂಗನ ದೇಹವನ್ನು ಯಾಕೆ ಬಟ್ಟೆಯಿಂದ ಮುಚ್ಚಿದ್ದೀರಿ? ಅದನ್ನು ತೆಗೆದು ಅವನ ಮುಖವನ್ನು ನನಗೆ ತೋರಿಸಿ” ಎಂದು ಕೂಗಿದಳು.

ಸೇವಕರು ಮೀನುಗಾರ ಯುವಕನನ್ನು ಮುಚ್ಚಿದ್ದ ಬಟ್ಟೆಯನ್ನು ಸರಿಸಿದರು. ಆದರೆ ಯುವಕನ ಮುಖ ನೋಡಿದ ಕೂಡಲೇ ಮಿನುವಾಂಗ್‌ ಕಿಟಾರನೆ ಕಿರುಚಿ ಕೆಳಗೆ ಬಿದ್ದು ಎಚ್ಚರ ತಪ್ಪಿದಳು. ಶೈತ್ಯೋಪಚಾರಗಳನ್ನು ಮಾಡಿದ ಬಳಿಕ ಕಣ್ತೆರೆದು, “”ದೇವರೇ, ನಾನು ಕಂಠ ಎಷ್ಟು ಚೆನ್ನಾಗಿದೆ ಎಂದುಕೊಂಡು ಇವನ ಮುಖ ನೋಡದೆ ಮದುವೆಯಾಗಲು ನಿರ್ಧರಿಸಿಬಿಟ್ಟೆ. ಕುರೂಪಿಯಾದ ಈ ಅಸಹ್ಯ ವ್ಯಕ್ತಿಯನ್ನು ಕೈಹಿಡಿದರೆ ಸುಖವಾಗಿರಲು ಸಾಧ್ಯವೇ ಇಲ್ಲ. ದುರ್ಗಂಧದಿಂದ ಮೂಗು ಮುಚ್ಚಿಕೊಳ್ಳಬೇಕಾಗಿದೆ. ನನಗೆ ಇಂತಹ ನಿರಾಸೆಯುಂಟು ಮಾಡಿದ ಅವನನ್ನು ಅರೆಕ್ಷಣ ಕೂಡ ನನ್ನ ಕಣ್ಮುಂದೆ ಇರಲು ಬಿಡಬೇಡಿ. ಕೂಡಲೇ ಇಲ್ಲಿಂದ ಕರೆದುಕೊಂಡು ಹೋಗಿ ನದಿ ತೀರದಲ್ಲಿ ಬಿಟ್ಟುಬನ್ನಿ” ಎಂದು ಸೇವಕರಿಗೆ ಹೇಳಿದಳು. ಸೇವಕರು ಅವನನ್ನು ಮರಳಿ ಕರೆತರುವಾಗ, “”ಇಂತಹ ಮುಖ ಹೊತ್ತಿರುವ ನಿನಗೆ ಈ ಜನ್ಮದಲ್ಲಿ ಯಾವ ಯುವತಿಯೊಂದಿಗೆ ಕೂಡ ಮದುವೆಯಾಗಲು ಸಾಧ್ಯವಿಲ್ಲ. ಇನ್ನೊಂದು ಜನ್ಮವೆಂಬುದು ಬಂದರೆ ಸಾಧ್ಯವಾಗಬಹುದು ಅಷ್ಟೇ” ಎಂದು ಹೇಳಿ ನದಿತೀರಕ್ಕೆ ತಲುಪಿಸಿದರು.

ಈ ಘಟನೆಯಿಂದ ಮೀನುಗಾರ ಯುವಕನಿಗೆ ತುಂಬ ದುಃಖವಾಯಿತು. ತನ್ನ ಪಾಡಿಗೆ ಖುಷಿಯಾಗಿ ಹಾಡುತ್ತ ಮೀನು ಹಿಡಿದುಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದ ಅವನು ತನಗೆ ಉಂಟಾದ ಅವಮಾನದಿಂದ ನೊಂದುಕೊಂಡ. ಆ ಕ್ಷಣದಿಂದಲೇ ಅವನಿಗೆ ಬದುಕುವುದು ಬೇಡ ಅನಿಸಿತು. ದುಡಿಯುವುದನ್ನು ನಿಲ್ಲಿಸಿದ. ಅನ್ನಾಹಾರಗಳನ್ನು ತ್ಯಜಿಸಿದ. ಕೃಶನಾಗಿ ಹಾಸಿಗೆ ಹಿಡಿದು ಒಂದು ದಿನ ಸತ್ತುಹೋದ. ಸಂಬಂಧಿಕರು ಅವನ ಎದೆಯ ಮೇಲೆ ಒಂದು ಗುಲಾಬಿಯನ್ನು ತಂದಿಟ್ಟರು. ಶವವನ್ನು ಹೂಳಲು ತೆಗೆದುಕೊಂಡು ಹೋಗುವಾಗ ಒಂದು ವಿಚಿತ್ರವು ಕಾಣಿಸಿತು. ಎದೆಯ ಮೇಲಿದ್ದ ಗುಲಾಬಿಯು ಒಂದು ಸ್ಫಟಿಕದ ಪದಕವಾಗಿ ಬದಲಾವಣೆ ಹೊಂದಿತ್ತು. ಅವರು ಪದಕವನ್ನು ಹಾಗೆಯೇ ತೆಗೆದಿಟ್ಟು ನದಿಯ ತೀರಕ್ಕೆ ತೆಗೆದುಕೊಂಡು ಹೋದರು. ದಿನವೂ ಅವನು ಮೀನು ಹಿಡಿಯುತ್ತಿದ್ದ ಸ್ಥಳದಲ್ಲಿ ಪದಕವನ್ನು ನೀರಿನೊಳಗೆ ಸೇರಿಸಿ ಮನೆಗೆ ಮರಳಿದರು.

ತನ್ನ ಮನಸ್ಸನ್ನು ಹಾಡಿನಿಂದ ಗೆದ್ದ ಯುವಕ ಸುಂದರನಾಗಿರಲಿಲ್ಲ ಎಂಬ ಹತಾಶೆಯಿಂದ ವ್ಯಥೆಗೊಂಡ ಮಿನುವಾಂಗ್‌ ತುಂಬ ದುಃಖಪಟ್ಟಳು. ಅವಳಿಗೆ ಊಟ ಸೇರಲಿಲ್ಲ, ನಿದ್ರೆ ಬರಲಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಧನಿಕನು ಹಲವಾರು ವೈದ್ಯೋಪಚಾರಗಳನ್ನು ಮಾಡಿಸಿದರೂ ಮೊದಲಿನಂತಾಗಲಿಲ್ಲ. ಆಗ ಒಬ್ಬ ಫ‌ಕೀರ ಅವನ ಮನೆಗೆ ಬಂದ. ಮಿನುವಾಂಗ್‌ ಅನುಭವಿಸುತ್ತಿರುವ ದುಃಖವನ್ನು ಕಂಡು ಧನಿಕನೊಂದಿಗೆ, “”ನಿನ್ನ ಮಗಳಿಗೆ ನೆಮ್ಮದಿ ಸಿಗಲು ಒಂದೇ ಒಂದು ಉಪಾಯವಿದೆ. ಇಲ್ಲಿರುವ ನದಿಯಲ್ಲಿ ಒಂದು ಸ್ಫಟಿಕದ ಪದಕವಿದೆ. ಅದನ್ನು ಹುಡುಕಿಸಿ ತಂದು ಅವಳ ಕೈಗೆ ಕೊಡು” ಎಂದು ಹೇಳಿದ. ಆ ಮಾತನ್ನು ಅಲ್ಲಗಳೆಯದೆ ಧನಿಕ ಮುಳುಗುಗಾರರನ್ನು ಕರೆಸಿದ. ನದಿಯಿಂದ ಪದಕವನ್ನು ಹುಡುಕಿ ತರುವಂತೆ ತಿಳಿಸಿದ.

ಮುಳುಗುಗಾರರು ತಂದುಕೊಟ್ಟ ಪದಕ ಮಿನುವಾಂಗ್‌ ಕೈ ಸೇರಿತು. ಅವಳು ಮುಟ್ಟಿದ ಕೂಡಲೇ ಪದಕವು, “”ಪ್ರೀತಿ ತಂಗಾಳಿಯಲಿ ತೇಲಿ ಬಂದಿದೆ. ಅದನು ಕೇಳಿ ಚಂದಿರನ ಮುಖ ಅರಳಿದೆ” ಎಂದು ಹಾಡತೊಡಗಿತು. ಮಿನುವಾಂಗ್‌ ಅಚ್ಚರಿಯಿಂದ, “”ಇದೇ ಹಾಡು ಕೇಳಿ ನಾನು ಜೀವನವನ್ನು ಹಾಳು ಮಾಡಿಕೊಂಡೆ. ನೀನು ಯಾರು ಮತ್ತೆ ನನಗೆ ತೊಂದರೆ ಕೊಡಲು ಬಂದಿರುವೆ?” ಎಂದು ಕೇಳಿದಳು.

ಆಗ ಪದಕವು ಕರಗಿ ಒಬ್ಬ ಸುಂದರನಾದ ರಾಜಕುಮಾರ ಪ್ರತ್ಯಕ್ಷನಾದ. “”ನಾನು ಒಬ್ಬ ಫ‌ಕೀರನಿಗೆ ತೊಂದರೆ ಕೊಟ್ಟೆ. ಅವನಿಂದ ಶಾಪಗ್ರಸ್ಥನಾಗಿ ಕುರೂಪಿಯಾದ ಮೀನುಗಾರನ ಜನ್ಮ ಪಡೆದೆ. ನನ್ನನ್ನು ಪ್ರೀತಿಸಿದವಳಿಂದ ತಿರಸ್ಕೃತನಾಗಿ ಜೀವವಿಲ್ಲದ ವಸ್ತುವಿನ ಜನ್ಮ ಪಡೆಯಬೇಕು, ಮರಳಿ ಅವಳ ಬಳಿಗೆ ಹೋದಾಗ ಮೊದಲಿನ ಜನ್ಮ ಬರುವುದೆಂಬ ಪರಿಹಾರವನ್ನೂ ಫ‌ಕೀರನಿಂದ ತಿಳಿದುಕೊಂಡಿದ್ದೆ. ಈಗ ನಾನು ಹಿಂದಿನ ಜನ್ಮ ಹೊಂದಿ ನಿನ್ನ ಮುಂದಿದ್ದೇನೆ. ನನ್ನ ಕೈಹಿಡಿದು ನನ್ನೊಂದಿಗೆ ನಮ್ಮ ರಾಜ್ಯಕ್ಕೆ ಬಾ” ಎಂದು ಅವನು ಹೇಳಿದ. ಮಿನುವಾಂಗ್‌ ಸಂತೋಷದಿಂದ ರಾಜಕುಮಾರನನ್ನು ಮದುವೆಯಾಗಿ, ಅವನ ರಾಜ್ಯಕ್ಕೆ ತೆರಳಿದಳು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.