ಒಂದು ಪುಟ್ಟ ಕಥೆ


Team Udayavani, Sep 30, 2018, 6:00 AM IST

5.jpg

ಒಬ್ಬನ ಹೆಂಡತಿ ಕಾಣೆಯಾಗಿದ್ದಳು. ಆತ ತುಂಬಾ ಗಾಬರಿಗೊಂಡಿದ್ದ. ಒಂದು  ಕ್ಷಣವೂ ತನ್ನನ್ನು ಬಿಟ್ಟಿರದೆ ಅಂಟಿಕೊಂಡೇ ಇದ್ದವಳು ಇದ್ದಕ್ಕಿದ್ದಂತೆ ಕಾಣೆಯಾಗುವುದೆಂದರೆ?

ಆತ ಅವಳಿಗಾಗಿ ಹುಡುಕಾಟ ನಡೆಸತೊಡಗಿದ. ತನಗೆ ಪರಿಚಯವಿದ್ದಲ್ಲೆಲ್ಲ ಹೋಗಿ ವಿಚಾರಿಸಿದ. ಅವಳ ಸಂಬಂಧಿಕರು, ಪರಿಚಿತರು, ಗೆಳತಿಯರು – ಎಲ್ಲರ ಮನೆಗೂ ಹೋಗಿಬಂದ. ಸಂಜೆಯ ಹೊತ್ತಿಗೆ ಯಾವುದೋ ಕಾಡಬದಿಯ ಊರನ್ನು ತಲುಪಿದ. ದಣಿದು ಹೈರಾಣಾಗಿದ್ದ ಅವನಿಗೆ, ಕಾಡಿನ ಹಾದಿ ಆರಂಭವಾಗುವಲ್ಲೇ ಸನ್ಯಾಸಿಯೊಬ್ಬ ಕುಟೀರ ಕಟ್ಟಿಕೊಂಡು ನೆಲೆಸಿದ್ದ ವಿಚಾರ ತಿಳಿಯಿತು. ಸರಿ, ಕೊನೆಯ ಪ್ರಯತ್ನವೆಂದು ಆತ ಕಾಲೆಳೆದುಕೊಂಡು ಕುಟೀರದ ಬಳಿ ಬಂದ. ಸನ್ಯಾಸಿಯನ್ನು ಕಂಡು ಉದ್ದಂಡ ನಮಸ್ಕಾರ ಮಾಡಿ ನಿಡುಸುಯುತ್ತ ನಿಂತ.

ಸನ್ಯಾಸಿ ಯಾವುದೋ ಧ್ಯಾನದಲ್ಲಿ ಮುಳುಗಿದ್ದವ ಕಣ್ತೆರೆದು ನೋಡುತ್ತಾನೆ – ವ್ಯಕ್ತಿಯೊಬ್ಬ ಅಳುತ್ತ ನಿಂತಿದ್ದಾನೆ.
“”ಯಾರಪ್ಪ ನೀನು?” – ಸಂನ್ಯಾಸಿ ಕರುಣೆಯಿಂದ ಕೇಳಿದ.
“”ನಾನೊಬ್ಬ ನತದೃಷ್ಟ ಸ್ವಾಮಿ. ನಾನೊಂದು ಅಮೂಲ್ಯವಾದ ವಸ್ತುವನ್ನು ಕಳೆದುಕೊಂಡಿದ್ದೇನೆ”.
“”ಹೌದೆ? ಏನದು?”
“”ಅದು ಅಲ್ಲ ಸ್ವಾಮಿ! ಅವಳು! ನನ್ನವಳು! ಇಂದು ಮುಂಜಾನೆಯಿಂದ ಕಾಣೆಯಾಗಿದ್ದಾಳೆ. ಅವಳನ್ನು ಇಡೀ ದಿನ ಹುಡುಕಿದೆ. ಸಿಗಲಿಲ್ಲ. ಕಡೆಗೆ ನಿಮ್ಮನ್ನೊಮ್ಮೆ ನೋಡಿ ವಿಚಾರಿಸೋಣವೆಂದು ಬಂದೆ. ಹೇಳಿ, ಯಾವುದಾದರೂ ಹೆಂಗಸು ಈ ದಾರಿಯಾಗಿ ಬಂದು ಹೋದದ್ದನ್ನು ಕಂಡಿರಾ?”
“”ಇಲ್ಲಪ್ಪ . ಏನವಳ ಹೆಸರು?”
“”ಹೆಸರು ಕಟ್ಟಿಕೊಂಡು ಏನು ಮಾಡೋಣ ಸ್ವಾಮಿ. ಅವಳ ಹೆಸರು ಆತಂಕ”.

ಸನ್ಯಾಸಿಗೆ ನಗು ಬಂತು. “”ಏನಂದೆ? ಆತಂಕ? ಹೆಣ್ಣನ್ನು ಆತಂಕ ಅಂತ ಕರೆಯುತ್ತಿರುವ ಒಬ್ಬನನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಅಂದ ಹಾಗೆ, ನಿನ್ನ ಹೆಸರೇನು?”
“”ನಾನು ತಿಳಿಗೇಡಿ, ಸ್ವಾಮಿ!”
ಸನ್ಯಾಸಿಗೆ ಈಗ ನಗು ತಡೆಯಾಗಲಿಲ್ಲ. “ಹೋ, ಹೋ’ ಎಂದು ನಗುತ್ತಲೇ ಹೇಳಿದ – “”ಅಯ್ನಾ ತಿಳಿಗೇಡಿ, ಹಾಗಿದ್ದರೆ ನೀನು ಎಲ್ಲೂ ಹುಡುಕಬೇಕಾಗಿಲ್ಲ. ಸುಮ್ಮಗೆ ಇದ್ದಲ್ಲೇ ಇದ್ದು ಬಿಟ್ಟರೆ ಸಾಕು. ಆತಂಕ ತಾನೇ ನಿನ್ನನ್ನು ಅರಸಿ ಬರುವುದನ್ನು ನೀನೇ ನೋಡುವೆಯಂತೆ. ತಿಳಿಗೇಡಿಯನ್ನು ಆತಂಕ ಎಂದಾದರೂ ಹೆಚ್ಚು ಕಾಲ ಬಿಟ್ಟಿರಲು ಸಾಧ್ಯವೇ?”

ಎಸ್‌ಎನ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.