ಒಂದು ಸೂಫಿ ಕತೆ


Team Udayavani, Aug 5, 2018, 6:00 AM IST

suf.jpg

ಮನುಷ್ಯ ಬದುಕಿರುವವರೆಗೆ ಎಲ್ಲವೂ. ಸತ್ತಮೇಲೆ ಯಾರಿಗೆ ಯಾರಿಲ್ಲ. ಜೀವಂತವಿರುವಾಗ ಅವನ ಬಗ್ಗೆ ಮಾತನಾಡಲು ಹಿಂಜರಿಯುವವರೆಲ್ಲ ಮೆಲ್ಲನೆ ದನಿ ಎತ್ತತೊಡಗುತ್ತಾರೆ. ಇದು ಅಂಥದೇ ಒಂದು ಕತೆ. ಒಬ್ಬನಿದ್ದ ಅವನು ಅನಿರೀಕ್ಷಿತವಾಗಿ ಮರಣಹೊಂದಿದ. ಒಳ್ಳೆಯ ಆಸ್ತಿ ಅವನಲ್ಲಿತ್ತು. ಅವನಿಗೊಬ್ಬ ದತ್ತುಮಗನಿದ್ದ. ಆಸ್ತಿಯನ್ನು ದತ್ತುಮಗನಿಗೆ ತಿಳಿಯದಂತೆ “ಒಳಗು’ ಮಾಡಿಕೊಳ್ಳಲು ಎಲ್ಲರೂ ಹವಣಿಸಿದರು. ಆದರೆ, ಊರ ಕೋತ್ವಾಲ ಬಂದು ನೋಡಿದಾಗ ಒಂದು ಉಯಿಲು ಸಿಕ್ಕಿತು. ಅದರಲ್ಲಿ ಸತ್ತುಹೋದ ಮನುಷ್ಯ ವಿವರವಾಗಿ ಬರೆದಿದ್ದ.

“ತನ್ನ ಆಸ್ತಿಯ ಒಂದಂಶವನ್ನು ಬಂಧುಗಳು ಬಳಸಿಕೊಳ್ಳಬಹುದು.  ಉಳಿದುದನ್ನು ನನ್ನ ದತ್ತುಪುತ್ರ ಪಡೆಯಬೇಕು’ಎಲ್ಲ ಬಂಧುಗಳು ಮುಂದೆ ಬಂದರು. ಆಸ್ತಿಯಲ್ಲಿ ತಮಗೂ ಪಾಲಿದೆ ಎಂದು ವಾದಿಸಿದರು. ಆಗ ಕೋತ್ವಾಲ ಮಧ್ಯ ಪ್ರವೇಶಿಸಿ ಮುಂದಿರುವ ಒಕ್ಕಣೆಯನ್ನು ತೋರಿಸಿದ.”ಬಂಧುಗಳು ತಾವು ಇಚ್ಛಿಸಿರುವುದನ್ನು ದತ್ತುಪುತ್ರನಿಗೆ ನೀಡಬಹುದು’ಆ ದತ್ತುಪುತ್ರ ಏನೂ ಅರಿಯದ ಬಾಲಕ. ಬಂಧುಗಳೆಲ್ಲ ಸ್ವೇಚ್ಛೆಯಿಂದ ಭೂಮಿಯ ಬಹುತೇಕ ಭಾಗವನ್ನು “ಒಳಗು’ ಮಾಡಿಕೊಂಡರು. ಒಬ್ಬ ನವಣೆಯ ಗದ್ದೆಯನ್ನು ತನ್ನ ಹೆಸರಿಗೆ ಬರೆದುಕೊಂಡ. ನನಗೆ ದ್ರಾಕ್ಷಿಯ ತೋಟವಿರಲಿ ಎಂದ ಮತ್ತೂಬ್ಬ. ಇನ್ನೊಬ್ಬ ನಂದನವನವನ್ನು ತನ್ನ ಸುಪರ್ದಿಗೆ ತಂದುಕೊಂಡ. 

ಎಲ್ಲ ಹಿರಿಯರು ತಮಗೆ ಬೇಕಾದಂತೆ ಜಾಗವನ್ನು ಪಡೆದುಕೊಳ್ಳುತ್ತಿರುವುದನ್ನು ದತ್ತುಪುತ್ರ ಸುಮ್ಮನೆ ನೋಡುತ್ತಿದ್ದ. ಅವನಿಗೆ ತನಗಿಷ್ಟವಾದುದನ್ನು ಕೇಳುವ ಆಸೆಯಾದರೂ ಹೇಳುವ ಅವಕಾಶವಿರಲಿಲ್ಲ. ಬರಡು ಜಮೀನು ಸ್ವಯಂ ಇಚ್ಛೆಯಿಂದ ಬಂಧುಗಳು ಅವನಿಗೆ ನೀಡಿದರು.

ಕೆಲವು ವರ್ಷಗಳು ಕಳೆದವು. ದತ್ತುಪುತ್ರ ಸ್ವಲ್ಪ ದೊಡ್ಡವನಾದ. ಅವನಿಗೆ ತನಗಾದ ಮೋಸದ ಅರಿವಾಯಿತು. ಅವನು ಬಂಧುಗಳ ಬಳಿಗೆ ಹೋಗಿ ತನಗೆ ಉತ್ತಮ ಜಾಗ ಬೇಕು ಎಂಬಂತೆ ಕೇಳಿದ.

ಅವರು ಯಾರೂ ಈ ಹುಡುಗನ ಮಾತು ಕೇಳಲು ಸಿದ್ಧರಿರಲಿಲ್ಲ ! ಹೊಲವನ್ನು ಪಡೆದವ ಅದನ್ನು ಫ‌ಲವತ್ತಾಗಿ ಬೆಳೆಸಿದ್ದ. ತೋಟವನ್ನು ಮತ್ತೂಬ್ಬ ಸೊಂಪಾಗಿ ಉಳಿಸಿದ್ದ. ದ್ರಾಕ್ಷೆ ತೋಟವನ್ನು ಕಾಳಜಿಯಿಂದ ನೋಡಿಕೊಂಡಿದ್ದ ಮತ್ತೂಬ್ಬ. ಎಲ್ಲರಿಗೂ ತಮ್ಮ ಜಾಗವೆಂಬ ಆಸ್ಥೆ. ಯಾವುದೇ ವಸ್ತು ತಮ್ಮದು ಎಂಬ ಭಾವನೆ ಬಂದ ಕೂಡಲೇ ಅದರ ಬಗ್ಗೆ ವ್ಯಾಮೋಹ ಮೂಡುತ್ತದೆ. ಯಾರೂ ತಾವು ಪಡೆದ ಜಮೀನನ್ನು ಹುಡುಗನಿಗೆ ಕೊಡಲು ಸಿದ್ಧರಿರಲಿಲ್ಲ. “ನಾವು ಉಯಿಲಿನ ಪ್ರಕಾರವೇ ಜಮೀನು ಪಡೆದುಕೊಂಡದ್ದು’ ಎಂದು ವಾದಿಸಿದರು.ದತ್ತುಪುತ್ರ ಕೋತ್ವಾಲನ ಮೊರೆಹೋದ. ಕೋತ್ವಾಲ ವಿಚಾರಣೆಗೆ ಬಂದ. ಉಯಿಲನ್ನು ಒಮ್ಮೆ ಸರಿಯಾಗಿ ಓದಿದ. 

“ಬಂಧುಗಳು ತಾವು ಇಚ್ಛಿಸಿರುವುದನ್ನು ದತ್ತುಪುತ್ರನಿಗೆ ನೀಡಬಹುದು’ಒಬ್ಬ ಬಂಧು ನವಣೆಯ ಗದ್ದೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದ. ನನಗೆ ದ್ರಾಕ್ಷಿಯ ತೋಟವಿರಲಿ ಎಂದು ಇಚ್ಛೆಪಟ್ಟಿದ್ದ ಮತ್ತೂಬ್ಬ. ಇನ್ನೊಬ್ಬ ನಂದನವನವನ್ನು ತನ್ನ ಸುಪರ್ದಿಗೆ ತಂದುಕೊಳ್ಳುವ ಇಚ್ಛೆಯನ್ನು ಈಡೇರಿಸಿಕೊಂಡಿದ್ದ.  ಹಾಗಾದರೆ, ಸತ್ತವನ ಉಯಿಲಿಗೆ ಪ್ರಾಶಸ್ತ್ಯ ಕೊಡಬೇಕಲ್ಲವೆ? ಕೋತ್ವಾಲ ದೃಢವಾಗಿ ಹೇಳಿದ, “ಬಂಧುಗಳು ತಾವು ಇಚ್ಛಿಸಿರುವುದನ್ನು ದತ್ತುಪುತ್ರನಿಗೆ ನೀಡಬಹುದು- ಎಂದರೆ ಈಗಾಗಲೇ ಬಂಧುಗಳು ಇಚ್ಛಿಸಿದ ಜಾಗಗಳೆಲ್ಲವೂ ದತ್ತುಪುತ್ರನಿಗೆ ಸಲ್ಲಬೇಕು ಕೋತ್ವಾಲ ಮುಂದುವರಿಸಿದ, “”ಉಯಿಲು ಬರೆದವನು  ತನ್ನ ಆಸ್ತಿಯನ್ನು ಸಂರಕ್ಷಿಸಲಾಗದೆ ಸತ್ತ. ಅದನ್ನು ಬಂಧುಗಳಾದ ನಿಮ್ಮ ಸುಪರ್ದಿಗೆ ತಾತ್ಕಾಲಿಕ ಅವಧಿಯವರೆಗೆ ನೀಡುವುದು ಅವನ ಆಶಯ. ಏಕೆಂದರೆ, ನಿಮ್ಮ ಸ್ವಂತ ಆಸ್ತಿಯೆಂದು ಬಗೆದಾಗ, ಅದನ್ನು ಸಮರ್ಪಕವಾಗಿ ಆರೈಕೆ ಮಾಡುವಿರಷ್ಟೆ. ಅವನ ಉಯಿಲಿನ ಪ್ರಕಾರ ಇವೆಲ್ಲ ನೀವು ಇಚ್ಛಿಸಿದ ಜಮೀನು ಆಗಿರುವುದರಿಂದ ದತ್ತುಪುತ್ರನಿಗೆ ನೀಡುವುದು ಅನಿವಾರ್ಯ’ಸೂಫಿ ಕವಿ ಸೈಯದ್‌ ಗೌಸ್‌ ಆಳಿ ಶಾ ಹೇಳಿದ ಕತೆ.ನಮ್ಮ ಬಳಿ ಸಂಚಯನಗೊಂಡ ಸಂಪತ್ತು ನಮ್ಮದಾಗಿರುವುದಿಲ್ಲ. ನಮ್ಮದೆಂಬ ಭ್ರಮೆ ಅಷ್ಟೇ ಇರುತ್ತದೆ. 

– ಶಿವ ಕೆ.

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.