ಒಂದು ಝೆನ್‌ ಕತೆ: ಹೆಸರೂರು ಎಂಬ ಊರಿನಲ್ಲಿ


Team Udayavani, Feb 16, 2020, 5:39 AM IST

rav-8

ಅದೊಂದು ಚಿಕ್ಕ ಊರು. ಹೆಸರು ಹೆಸರೂರು. ಅದರ ಬಗ್ಗೆ ಕೇಳಿದವರಿಲ್ಲ, ಅದನ್ನು ನೋಡಿದವರಿಲ್ಲ. ಅಂಥ ಊರೊಂದು ಇದೆ ಎಂದೇ ಯಾರಿಗೂ ತಿಳಿದಿರಲಿಲ್ಲ.

ಒಮ್ಮೆ ಹೀಗಾಯಿತು. ಹಕುಯಿಕ ಎಂಬ ಸರದಾರ ಅಲ್ಲಿಗೆ ಬಂದ. ಅವನ ಕಸುಬು ವ್ಯಾಪಾರ. ಮಣ್ಣಿನಿಂದ ಚಿನ್ನದವರೆಗಿನ ವ್ಯವಹಾರ. ಒಂದು ದಿನ ಚಿನ್ನದ ಪಾತ್ರೆಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಬೀದಿಬೀದಿ, ಕೇರಿಕೇರಿ ವ್ಯಾಪಾರ ಹೊರಟಿದ್ದ. “ಚಿನ್ನದ ಪಾತ್ರೆಗಳು ಬೇಕೆ, ಕಡಿಮೆ ಬೆಲೆಗೆ ಲಭ್ಯ. ಬನ್ನಿ ಬನ್ನಿ’ ಎಂದು ಕೂಗುತ್ತ ಮನೆಗಳ ಬಾಗಿಲಲ್ಲಿ ವಿಚಾರಿಸಿಕೊಂಡು ಸಾಗುತ್ತಿದ್ದ. ಸಾಗುತ್ತ ಸಾಗುತ್ತ ಊರ ಸುಪರ್ದಿ ದಾಟಿ ಕಾಡಿನ ದಾರಿ ಹಿಡಿದದ್ದು ಆತನಿಗೆ ತಿಳಿಯಲೇ ಇಲ್ಲ.

ಅವನಿಗರಿವಿಲ್ಲದಂತೆಯೇ ಅವನು ಹೆಸರೂರನ್ನು ಪ್ರವೇಶಿಸಿದ್ದ. ಪಾತ್ರೆಗಳನ್ನು ಎತ್ತಿ ಹಿಡಿದು, “ಚಿನ್ನದ ಪಾತ್ರೆ ಬೇಕೆ ಸ್ವಾಮೀ, ಅತೀ ಕಡಿಮೆ ಮೌಲ್ಯ’ ಎಂದು ಕೂಗುತ್ತ ಹೆಸರೂರಿನ ಬೀದಿಲ್ಲಿ ಸಾಗುತ್ತಿರಬೇಕಾದರೆ ಒಂದು ಅಚ್ಚರಿ ನಡೆಯಿತು. ಎಲ್ಲರೂ ಇವನನ್ನು ನೋಡಿ ಅವರವರಷ್ಟಕ್ಕೆ ನಗತೆೊಡಗಿದರು. “ನೀವೆಲ್ಲ ಯಾಕೆ ನಗುತ್ತಿರುವಿರಿ?’ ಎಂದು ಹಕುಯಿಕನಿಗೆ ಜನರಲ್ಲಿ ಕೇಳಬೇಕೆನಿಸಿತು.

ಬಹುಶಃ ಹುಚ್ಚರ ಊರಾಗಿರಬಹುದು ಭಾವಿಸಿ ಹಕುಯಿಕ ಅಲ್ಲಿಂದ ಬೇಗಬೇಗನೆ ಕಾಲ್ಕಿತ್ತ.
ಮರುದಿನವೂ ಎಂದಿನಂತೆ ವ್ಯಾಪಾರಕ್ಕೆ ಹೊರಟಿದ್ದ. ಗೋಣಿಚೀಲದ ತುಂಬ ಮಣ್ಣಿನ ಪಾತ್ರೆ-ಪಗಡೆಗಳು. ಯಾಕೋ ಕುತೂಹಲದಿಂದ ಈ ದಿನವೂ ಹೆಸರೂರಿಗೆ ಬಂದ. ಕೈಯಲ್ಲಿ ಮಣ್ಣಿನ ಪಾತ್ರೆ ಎತ್ತಿ ಹಿಡಿದು, “ಮಣ್ಣಿನ ಪಾತ್ರೆಗಳು ಬೇಕೆ, ಅತೀ ಕಡಿಮೆ ಕ್ರಯಕ್ಕೆ, ತೆೆಗೆದುಕೊಳ್ಳಿ’ ಎಂದು ಕೂಗುತ್ತ ಸಾಗಿದ. ಎಲ್ಲರೂ ನಗತೊಡಗಿದರು. “ನಿನ್ನೆ ಬಂದಿದ್ದ ಹುಚ್ಚ ಇಂದೂ ಬಂದ’ ಎಂದು ಅವರವರಷ್ಟಕ್ಕೇ ಹೇಳಿಕೊಂಡರು.

ಹಕುಯಿಕನಿಗೆ ಎಲ್ಲಿಲ್ಲದ ಅಚ್ಚರಿ. ಅವನಿಗದು ಚಿದಂಬರ ರಹಸ್ಯ.
ಕೊನೆಗೂ ಒಂದು ದಿನ ಗುಟ್ಟು ತಿಳಿಯಿತು.
.
.
ಹೆಸರೂರಿನಲ್ಲಿ ಒಂದು ವಿಶಿಷ್ಟ ಭಾಷಾ ಪದ್ಧತಿಯಿತ್ತು¤. ಕಿವಿಗೆ ಕಣ್ಣು ಎಂದೂ, ಕಣ್ಣಿಗೆ ಕಿವಿ ಎಂದೂ, ಕುಡಿಯುವುದಕ್ಕೆ ಉಣ್ಣುವುದು ಎಂದೂ, ಉಣ್ಣುವುದಕ್ಕೆ ಕುಡಿಯುವುದು ಎಂದೂ ಹೇಳುವ ವಾಡಿಕೆ ಅಲ್ಲಿನದು. ಹಾಗೆಯೇ ಚಿನ್ನಕ್ಕೆ ಮಣ್ಣು ಎಂದೂ, ಮಣ್ಣಿಗೆ ಚಿನ್ನ ಎಂದೂ ಕರೆಯುವ ರೂಢಿ. ಮಣ್ಣು ಮಣ್ಣೇ, ಚಿನ್ನ ಚಿನ್ನವೇ. ಆದರೆ, ಅದನ್ನು ಕರೆಯುವ ಕ್ರಮ ಮಾತ್ರ ಉಲ್ಪಾಪಲ್ಟಾ!
ಅಂದಹಾಗೆ ಹೆಸರಿನಲ್ಲೇನಿದೆ, ಹೇಳಿ!

ಟಾಪ್ ನ್ಯೂಸ್

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

15-

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.