ಸೌಂದರ್ಯದ ನಿಧಿ


Team Udayavani, Jul 22, 2018, 6:00 AM IST

5.jpg

ಕನ್ನಡ ಚಿತ್ರರಂಗಕ್ಕೆ ಕೊಡಗಿನ ಕಾಣಿಕೆ ಸಾಕಷ್ಟಿದೆ. ಅದರಲ್ಲೂ ಕೊಡಗಿನ ಸಾಕಷ್ಟು ಹುಡುಗಿಯರು ಕನ್ನಡ ಚಿತ್ರಗಳಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಮೊದಲಿಗೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡವರೆಂದರೆ ನಟಿ ಪ್ರೇಮಾ. ಆ ನಂತರದ ವರ್ಷಗಳಲ್ಲಿ ಡೈಸಿ ಬೋಪಣ್ಣ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ದೀಪಿಕಾ ಕಾಮಯ್ಯ, ಸಿಂಧೂ ಲೋಕನಾಥ್‌, ಶುಭ್ರ ಅಯ್ಯಪ್ಪ, ರಶ್ಮಿಕಾ ಮಂದಣ್ಣ ಸೇರಿದಂತೆ ಕೊಡಗಿನ ಹಲವರು ಕನ್ನಡ ಚಿತ್ರಗಳಲ್ಲಿ ನಾಯಕಿಯರಾಗಿ ದೊಡ್ಡ ಹೆಸರು ಮಾಡಿದ್ದಾರೆ. ಆ ಸಾಲಿಗೆ ಸೇರುವ ಮತ್ತೂಬ್ಬರೆಂದರೆ ಅದು ನಿಧಿ ಕುಶಾಲಪ್ಪ.

ನಿಧಿ ಕುಶಾಲಪ್ಪ ಅಭಿನಯದ ಕುಮಾರಿ 21 ಎಫ್ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದೆ. ಈ ಚಿತ್ರದಲ್ಲಿ ಕುಮಾರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿಧಿ, ಪ್ರಣಾಮ್‌ ದೇವರಾಜ್‌ ಎದುರು ನಾಯಕಿಯಾಗಿದ್ದಾರೆ. ನಿಧಿ ಕುಶಾಲಪ್ಪ ಅವರಿಗಿಲ್ಲಿ ಹಲವು ಶೇಡ್‌ಗಳಿ ರುವ ಪಾತ್ರ ಸಿಕ್ಕಿದೆಯಂತೆ. “ನಾನಿಲ್ಲಿ ಬೋಲ್ಡ್‌ ಹುಡುಗಿಯಾಗಿದ್ದೇನೆ. ನನಗೆ ಸಿಕ್ಕ ಪಾತ್ರದಲ್ಲಿ ಖುಷಿ ಇದೆ. ಒಂದು ರೀತಿಯ ಚಾಲೆಂಜ್‌ ಪಾತ್ರವದು’ ಎನ್ನುತ್ತಾರೆ ನಿಧಿ ಕುಶಾಲಪ್ಪ. ಈ ಚಿತ್ರದಲ್ಲಿ ನಿಧಿ ಸಾಕಷ್ಟು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ, ಕುಮಾರಿ 21 ಎಫ್  ನಿಧಿ ಅವರ ಮೂರನೆಯ ಚಿತ್ರ. ಇದಕ್ಕೂ ಮುನ್ನ ಅವರು, ನನ್‌ ಲವ್‌ ಟ್ರ್ಯಾಕ್‌ ಮತ್ತು ಪ್ರೀತಿ ಪ್ರೇಮ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಮೀಡಿಯಾ ಮತ್ತು ಕಮ್ಯುನಿಕೇಷನ್ಸ್‌ ವಿಭಾಗದಲ್ಲಿ ಮಾಸ್ಟರ್ ಮಾಡಿರುವ ಅವರು ಮಾಡೆಲಿಂಗ್‌ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವವರು. ಚಿತ್ರರಂಗಕ್ಕೆ ಬರುವ ಮುನ್ನ ಹಲವು ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಹೀಗಿರುವಾಗಲೇ ಸ್ನೇಹಿತರೊಬ್ಬರ ಮೂಲಕ ನಿರ್ದೇಶಕ ಕದಿರ್‌ ಅವರ ಪರಿಚಯವಾಯಿತಂತೆ. ತಮಿಳಿನಲ್ಲಿ ಕಾದಲ್‌ ದೇಶಂ ಮುಂತಾದ ಸೂಪರ್‌ಹಿಟ್‌ ಚಿತ್ರಗಳನ್ನು ನಿರ್ದೇಶಿಸಿರುವ ಕದಿರ್‌, ತಮ್ಮ ಹೊಸ ತಮಿಳು ಚಿತ್ರವೊಂದಕ್ಕೆ ನಾಯಕಿಯ ಹುಡುಕಾಟದಲ್ಲಿದ್ದಾಗ, ನಿಧಿ ಅವರ ಪರಿಚಯವಾಯಿತಂತೆ. ಆದರೆ, ಅಷ್ಟರಲ್ಲಿ ಕದಿರ್‌ ಅವರಿಗೆ ಕನ್ನಡದ ನನ್‌ ಲವ್‌ ಟ್ರ್ಯಾಕ್‌ ಚಿತ್ರ ನಿರ್ದೇಶಿಸುವ ಅವಕಾಶ ಬಂದು, ಆ ಚಿತ್ರದ ಮೂಲಕ ನಿಧಿ ಅವರನ್ನು ಕನ್ನಡದಲ್ಲಿ ನಾಯಕಿಯನ್ನಾಗಿ ಪರಿಚಯಿಸಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾದರೂ, ದೊಡ್ಡ ಹಿಟ್‌ ಎನಿಸಿಕೊಳ್ಳಲಿಲ್ಲ.

ನನ್‌ ಲವ್‌ ಟ್ರ್ಯಾಕ್‌ ಚಿತ್ರ ದೊಡ್ಡ ಹಿಟ್‌ ಆಗದಿದ್ದರೂ, ನಿಧಿಗೆ ಒಂದಿಷ್ಟು ಅವಕಾಶಗಳು ಸಿಕ್ಕಿವೆ. ಆ ಪೈಕಿ ಪ್ರೀತಿ ಪ್ರೇಮ ಮತ್ತು ಕುಮಾರಿ 21 ಎಫ್ ಚಿತ್ರಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಈ ಪೈಕಿ ಕುಮಾರಿ 21 ಎಫ್ ಚಿತ್ರ ಸ್ವಲ್ಪ ತಡವಾಗಿ, ಇದೀಗ ಬಿಡುಗಡೆಯಾಗುವುದಕ್ಕೆ ತಯಾರಾಗಿದೆ. ಈ ಚಿತ್ರದ ಬಗ್ಗೆ ನಿಧಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟಿದ್ದಾರೆ. ಈ ಚಿತ್ರವು ನಿಧಿಗೆ ಬೇಕಾಗಿರುವ ಒಂದು ದೊಡ್ಡ ಬ್ರೇಕ್‌ ತಂದುಕೊಡುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.