ಭೀಮ ಬದುಕಿನ ಅವಲೋಕನ


Team Udayavani, May 19, 2019, 6:00 AM IST

5

ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ “ಲೆಜೆಂಡ್‌’ ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು ನಿರ್ಮಿತವಾಗಿರುತ್ತದೆ. ಸಮಾಜದ ವಿವಿಧ ಸ್ತರಗಳಲ್ಲಿ ಅವರು ಮೂಡಿಸಿದ ಪ್ರಭಾವದಿಂದ ಸಾಕಷ್ಟು ಗುಣಾತ್ಮಕ ಪ್ರಯೋಜನಗಳು ಲಭಿಸುವವೇನೋ ನಿಜ. ಆದರೆ ಇದೇ ವೇಳೆ, ಅಂಥ ಸಾಧನಶೀಲರ ಬಗ್ಗೆ ಸಾಕಷ್ಟು ಇತ್ಯಾತ್ಮಕ-ನೇತ್ಯಾತ್ಮಕ ಅಂತೆಕಂತೆಗಳೂ ಸೃಷ್ಟಿಯಾಗಿರುತ್ತವೆ. ಸಾಹಿತ್ಯ, ಸಂಗೀತ, ರಂಗಕಲೆಗಳಲ್ಲಿ ದುಡಿದು ಹೆಸರುಮಾಡಿದ ಸಾಧಕರು ತಮ್ಮ ಖಾಸಗಿ ಬದುಕಿನಲ್ಲಿ ಹೇಗೆ ನಡೆದುಕೊಂಡಿದ್ದಾರೆಂಬ ಕುತೂಹಲವೂ ಸಾಮಾನ್ಯ ಜನಮಾನಸದಲ್ಲಿ ಇದ್ದೇ ಇರುತ್ತದೆ. ಹಿಂದೂಸ್ಥಾನಿ ಗಾಯಕರಾಗಿ ಕರ್ನಾಟಕ-ಮಹಾರಾಷ್ಟ್ರಗಳನ್ನು ತಮ್ಮ ಕರ್ಮಕ್ಷೇತ್ರಗಳನ್ನಾಗಿಸಿಕೊಂಡು ರಾಷ್ಟ್ರಾದ್ಯಂತ ಹೆಸರು ಮಾಡಿದ, ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಕೀರ್ತಿಪತಾಕೆಯನ್ನು ಹಬ್ಬಿಸಿದ, “ಭಾರತರತ್ನ’ ಪ್ರಶಸ್ತಿಗೆ ನ್ಯಾಯವಾಗಿಯೇ ಪಾತ್ರರಾಗಿರುವ, ಲಕ್ಷಾಂತರ ಸಂಗೀತಾಭಿಮಾನಿಗಳ ಆರಾಧ್ಯ ದೈವವೆನಿಸಿರುವ ಕಿರಾನಾ ಘರಾನಾ ಶೈಲಿಯೊಂದಿಗೆ ಇತರ ಹಲವು ಘರಾನಾ ಶೈಲಿಗಳ ಉತ್ತಮಾಂಶಗಳನ್ನು ಮೇಳೈಸಿಕೊಂಡ ಮೇರು ಗಾಯಕ ಪಂಡಿತ್‌ ಭೀಮಸೇನ ಜೋಶಿಯವರ ನಡೆ-ನುಡಿ-ಚಿತ್ರಗಳನ್ನು ಸ್ವಾರಸ್ಯಕರ ಹಾಗೂ ಕುತೂಹಲಕರ ಪ್ರಸಂಗ/ದೃಷ್ಟಾಂತಗಳೊಂದಿಗೆ ಸಾದರಪಡಿಸುವ ಕೆಲಸ, ದ ವಾಯ್ಸ ಆಫ್ ದ ಪೀಪಲ್‌ ಎಂಬ ಸಾರ್ಥಕ ಶೀರ್ಷಿಕೆಯನ್ನು ಹೊಂದಿರುವ ಈ ನೆನಪಿನ ಸಂಪುಟದಲ್ಲಿ ಆಗಿದೆ.

ಕಿಶೋರಾವಸ್ಥೆಯಲ್ಲೆ ಕಿರಾನಾ ಘರಾನಾದ ಉಸ್ತಾದ್‌ ಅಬ್ದುಲ್‌ ಕರೀಂಖಾನರ ಗಾಯನದ ಧ್ವನಿತಟ್ಟೆಗಳನ್ನು ಆಲಿಸುವ ಮೂಲಕ ಸಂಗೀತದ ಹುಚ್ಚನ್ನು ಹತ್ತಿಸಿಕೊಂಡ ಭೀಮಸೇನ ಜೋಶಿ ಅವರು ಮನೆಬಿಟ್ಟು ಗಾಯನದ ಮೂಲಕ ರೈಲ್ವೆಯಾನದ ದುಡ್ಡು ಹೊಂದಿಸಿಕೊಂಡು ಉತ್ತರಭಾರತಕ್ಕೆ ತೆರಳಿ ಗ್ವಾಲಿಯರ್‌, ಇಂದೋರ್‌, ಆಗ್ರಾ, ಕೋಲ್ಕತಾ, ಜಾಲಂಧರ್‌ ಮುಂತಾದ ಹಿಂದೂಸ್ಥಾನಿ ಸಂಗೀತದ ಕೇಂದ್ರ ಸ್ಥಳಗಳಿಗೆ ಪ್ರಯಾಣಿಸಿ ಸಂಗೀತ ಗುರುವಿನ ಶೋಧ ನಡೆಸಿದ ಕುತೂಹಲಕಾರಿ ಪ್ರಸಂಗದಿಂದ ಈ “ಭೀಮಸೇನ ಗಾಥೆ’ಯನ್ನು ಲೇಖಕರು ಆರಂಭಿಸಿದ್ದಾರೆ. ನಿನ್ನ ಗುರು ನಿನ್ನ ಊರಾದ ಗದಗಿನಲ್ಲೇ ಇದ್ದಾರೆ ಎಂಬ ಅಮೂಲ್ಯ ಸಲಹೆ ಜಾಲಂಧರ್‌ನಲ್ಲಿ ಲಭಿಸಿದ್ದರಿಂದ ಗದಗಿಗೆ ಬಂದು ಸವಾಯಿ ಗಂಧರ್ವರೆಂದೇ ಖ್ಯಾತರಾದ ಅಬ್ದುಲ್‌ ಕರೀಂಖಾನರ ನೇರ ಶಿಷ್ಯರಾದ ಪಂಡಿತ್‌ ರಾಮಭಾವೂ ಕುಂದಗೋಳಕರರ ಶಿಷ್ಯರಾದದ್ದು ಈಗ ಇತಿಹಾಸ.

ಇಲ್ಲಿ ಪಂಡಿತ್‌ ಜೋಷಿಯವರ ವ್ಯಕ್ತಿತ್ವವನ್ನು ಅನಾವರಣ ಮಾಡಿದವರಲ್ಲಿ ಅವರ ತಂದೆ, ತಮ್ಮ , ಮಕ್ಕಳು ಮುಂತಾಗಿ ಅವರ ಹತ್ತಿರದ-ದೂರದ ಬಂಧುಬಳಗದವರಿದ್ದಾರೆ; ಅವರ ಶಿಷ್ಯಂದಿರು, ಪ್ರಶಿಷ್ಯಂ ದಿರಿದ್ದಾರೆ; ವಿವಿಧ ಘರಾನಾಗಳ ಪ್ರಖ್ಯಾತ ಗಾಯಕರು, ತಬ್ಲಾ-ಹಾರ್ಮೋನಿಯಂ ವಾದಕರಿದ್ದಾರೆ; ಅವರ ಗಾಯನ ಕಛೇರಿಗಳನ್ನು ಏರ್ಪಡಿಸುತ್ತ ಬಂದಿರುವ, ಇಂದೂ ಅವರ ಶಿಷ್ಯರ ಮೂಲಕ ಅಂಥ ಕಛೇರಿಗಳನ್ನು ಸಂಘಟಿಸುತ್ತಿರುವ ರಾಜ್ಯದ/ರಾಷ್ಟ್ರದ ಒಳಗಿನ ಹಾಗೂ ಹೊರಗಿನ ಸಂಗೀತಾಭಿಮಾನಿಗಳಿದ್ದಾರೆ. ಇವರೆಲ್ಲರ ಕಣ್ಣಲ್ಲಿ ಭೀಮಸೇನ ಜೋಶಿ ಹೇಗೆ “ಸರಳ, ಆದರೆ ಘನವಂತಿಕೆಯ’ ಸಂಗೀತ ತಪಸ್ವಿಯಾಗಿ ಕಾಣಿಸಿದರೆನ್ನುವುದನ್ನು ಸ್ವತಃ ಸಂಗೀತ ವಿದ್ವಾಂಸರಾದ, ಅವರ ಪ್ರಶಿಷ್ಯರಾದ ಡಾ| ನಾಗರಾಜ ರಾವ್‌ ಹವಾಲ್ದಾರ್‌ ಅಚ್ಚುಕಟ್ಟಾಗಿ ಸ್ವಾರಸ್ಯಕರ ಕಥನ/ಪ್ರಸಂಗಗಳ/ಸ್ಮತಿಚಿತ್ರ-ಚಿತ್ರಣಗಳ ಮೂಲಕ ಈ ಸಂಪುಟದಲ್ಲಿ ಸಾದರಪಡಿಸಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದ ವಿಶಿಷ್ಟ ಪಾರಿಭಾಷಿಕ ಪದಗಳ ಹಾಗೂ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದ ಪದಬಳಕೆ ಕುರಿತ ವಿವರಗಳನ್ನು ಅಲ್ಲಲ್ಲಿ ಟಿಪ್ಪಣಿ ರೂಪದಲ್ಲಿ ನೀಡಿದ್ದು, ಇದರಿಂದ ಕನ್ನಡೇತರ ಸಂಗೀತಪ್ರೇಮಿಗಳ ಓದಿಗೆ ಅನುಕೂಲವೇ ಆಗಲಿದೆ. ಪಂಡಿತರಿಗೂ ಪಾಮರರಿಗೂ ಸಲ್ಲುವವರಾಗಿ, ಜನಸಾಮಾನ್ಯರ ಹಾಗೂ ಸಮಕಾಲೀನ ಸಂಗೀತ ಸಾಧಕರ ಜೊತೆ ಅವರು ಹೇಗೆ ನಡೆದುಕೊಂಡರೆಂಬುದನ್ನು ಈ ಸಂಪುಟದ ಪುಟಪುಟವೂ ಅನನ್ಯ ರೀತಿಯಲ್ಲಿ ತೋರಿಸಿಕೊಟ್ಟಿದೆ. ಪಂ. ಜೋಶಿಯವರಿಗೆ ಸಂಬಂಧಿಸಿದ ಅತ್ಯಪೂರ್ವ ಛಾಯಾಚಿತ್ರಗಳು ಸಂಪುಟದ ಸೌಂದರ್ಯ ಹಾಗೂ ಘನತೆಯನ್ನು ಹೆಚ್ಚಿಸಿವೆ.

ಭಾರತರತ್ನ ಪಂ. ಭೀಮಸೇನ್‌ ಜೋಶಿ
(ದ ವಾಯ್ಸ ಆಫ್ ದ ಪೀಪಲ್‌)
ಲೇ.: ಡಾ| ನಾಗರಾಜ ರಾವ್‌ ಹವಾಲ್ದಾರ್‌
ಪ್ರ.: ಸುನಾದ ಆರ್ಟ್‌ ಫೌಂಡೇಶನ್‌, 140, ಸುಕೃತ್‌ ನಿವಾಸ್‌, 5ನೆಯ ಮೈನ್‌, ಐಟಿಐ ಲೇಔಟ್‌, ವಿದ್ಯಾಪೀಠ, ಬನಶಂಕರಿ 3ನೆಯ ಘಟ್ಟ , ಬೆಂಗಳೂರು-560085
ಮೊದಲ ಮುದ್ರಣ: 2018, ಬೆಲೆ: ರೂ. 750

ಜಕಾ

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.