ಹಾಸ್ಯಬರಹ: ಆಪ್ತ ಸಮಾಲೋಚನೆ‌ಪ್ರಶ್ನೆ : ಮೇಡಂ,


Team Udayavani, Oct 20, 2019, 4:00 AM IST

c-9

ಪ್ರಶ್ನೆ : ಪ್ರತಿದಿನ ಬೆಳಗ್ಗೆ ನನ್ನ ತಲೆಗೂದಲು ಬಾಚುವಾಗ ಉದುರುತ್ತದೆ. ಏನು ಮಾಡಲಿ ಡಾಕ್ಟರ್‌? -ಪ್ರೀತಿಕಾ ಪಡುಕೋಣೆ, ಅಲಮೇಲುಪುರ
ಡಾಕ್ಟರ್‌ ನಿಮ್ಮಿ : ಅದಕ್ಕೆ ವರಿ ಮಾಡಬೇಡಿ. ಉದುರಿದ ತಲೆಗೂದಲನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ವಿದೇಶಕ್ಕೆ ರಫ್ತು ಮಾಡಿ. ಚೆನ್ನಾಗಿ ದುಡ್ಡು ಮಾಡಬಹುದು.

ಪ್ರಶ್ನೆ : ಡಾಕ್ಟರೇ, ನನ್ನ ಮುಖದ ತುಂಬ ಮೊಡವೆಗಳು ಮೂಡುತ್ತಿವೆ. ಮುಖ ಒಂಥರಾ ಕಾಣುತ್ತಿದೆ. ಇದನ್ನು ಹೇಗೆ ನಿವಾರಿಸಲಿ? -ತ್ರಿಜಟಾ ಎನ್‌. ಮೂರ್ತಿ, ದೊಡ್ಡಗುಂಡಿ
ಡಾಕ್ಟರ್‌ ನಿಮ್ಮಿ : ತ್ರಿಜಟಾ ಅವರೇ, ಇದು ತುಂಬ ಮಾಮೂಲಿ ಸಮಸ್ಯೆ. ಕನ್ನಡಿಯ ಮುಂದೆ ನಿಂತುಕೊಳ್ಳಿ. ಬಲಗೈಯಲ್ಲಿ ಒಂದು ಚಿಮಟಾ ಹಿಡಿದುಕೊಳ್ಳಿ. ಎಡಗೈಯ ಎರಡು ಬೆರಳುಗಳಲ್ಲಿ ಮೊಡವೆಯನ್ನು ಒತ್ತಿ ಹಿಡಿಯಿರಿ. ಕಣ್ಣುಮುಚ್ಚಿ. ಚಿಮಟಾದಲ್ಲಿ ಅಮುಕಿ ಒಂದೆ ಏಟಿಗೆ ತೆಗೆದುಬಿಡಿ. ಹೀಗೆ, ಪ್ರತಿಯೊಂದು ಮೊಡವೆಯನ್ನು ತೆಗೆಯುತ್ತ ಬನ್ನಿ.

ಪ್ರಶ್ನೆ : ನಮ್ಮ ಪಕ್ಕದ ಮನೆಯ ಸ್ಮಿತಾ ಎಂಬವಳು ಒಂದು ಸಮಸ್ಯೆಯನ್ನು ನಿಮ್ಮಲ್ಲಿ ಹೇಳಿ ಪರಿಹಾರ ಸೂಚಿಸಲು ವಿನಂತಿಸಿದ್ದಾಳೆ. ಅವಳಿಗೆ ದಿನಾ ಬೆಳಗ್ಗೆ -ಸಂಜೆ ಮುಖ ಊದಿಕೊಳ್ಳುತ್ತದಂತೆ. ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ. -ಗುಂಡೂ ರಾವ್‌, ಮುದ್ದೇಹಳ್ಳಿ

ಡಾಕ್ಟರ್‌ ನಿಮ್ಮಿ : ನಿಮ್ಮ ಮನೆ ಸಮಸ್ಯೆಯನ್ನು ನೀವು ನೋಡಿಕೊಳ್ಳಿ. ಪಕ್ಕದ ಮನೆಯವಳ‌ ಉಸಾಬರಿಗೆ ಹೋಗಬೇಡಿ. ಆಮೇಲೆ ನಿಮ್ಮ ಕೆನ್ನೆ ಊದಿಸಿಕೊಳ್ಳಬೇಕಾಗುತ್ತದೆ.

ಪ್ರಶ್ನೆ : ರಾತ್ರಿಯಾಗುತ್ತಲೇ ನನ್ನ ಕಣ್ಣುಗಳು ನೋಯಲಾರಂಭಿಸುತ್ತವೆ. ರಾತ್ರಿ ಮಲಗಿದರೂ ಬೇಗನೆ ನಿದ್ದೆ ಸುಳಿಯುವುದಿಲ್ಲ. ಏನು ಮಾಡಲಿ ಮೇಡಂ?-ನಿಂಗರಾಜು ಮಾವಿನಕಾಯಿ, ಹುಳ್ಳಗೆ
ಡಾಕ್ಟರ್‌ ನಿಮ್ಮಿ : ಈ ಸಮಸ್ಯೆಯನ್ನು ಎಲ್ಲೆಲ್ಲೂ ಕಾಣಬಹುದು. ಸಿಂಪಲ್‌. ನೀವು ಬಲಗೈಯಲ್ಲಿ ಒಂದು ಭಾರದ ಸುತ್ತಿಗೆ ತಗೊಂಡು ನಿಮ್ಮ ಎಡಗೈಯಲ್ಲಿರುವ ಮೊಬೈಲನ್ನು ಕಲ್ಲಿನ ಮೇಲಿಟ್ಟು ದೇಹದ ಬಲವನ್ನೆಲ್ಲ ಪ್ರಯೋಗಿಸಿ ಬಡಿದುಬಿಡಿ. ನಿಮ್ಮ ಕಣ್ಣಿನ ಸಮಸ್ಯೆ ಪರಿಹಾರ.

ಪ್ರಶ್ನೆ : ಡಾಕ್ಟರೇ, ಇತ್ತೀಚೆಗೆ ಮಧ್ಯಾಹ್ನ ನನಗೆ ಹಠಾತ್ತನೆ ಹೊಟ್ಟೆನೋವು ಆರಂಭವಾಯಿತು. ಇದು ಯಾಕಾಯಿತು ಎಂದೇ ನನಗೆ ತಿಳಿಯುತ್ತಿಲ್ಲ. ನಾನು ತುಂಬ ಆರೋಗ್ಯವಂತಳಾಗಿದ್ದೆ. ಇಂಥ ಸಮಸ್ಯೆ ಯಾಕೆ ಕಾಣಿಸಿಕೊಳ್ಳುತ್ತದೆ? -ಜಗದೀಶ್ವರಿ ಕೆ., ತರಲೆಪಟ್ಟಣ
ಡಾಕ್ಟರ್‌ ನಿಮ್ಮಿ : ಈ ಬಗ್ಗೆ ಅನೇಕ ಸಂಶೋಧನೆಗಳಾಗಿವೆ. ಪಿಟ್ಯುಟರಿ ಗ್ರಂಥಿಯ ಅಧಿಕ ಸ್ರಾವದಿಂದ ಇದು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಲಂಡನ್‌ನಲ್ಲಿ ನಡೆಸಿದ ಸಂಶೋಧನೆಗಳಿಂದಲೂ ಇದು ತಿಳಿಯಲ್ಪಡಲಿಲ್ಲ. ಕೊನೆಗೆ, ಕೆಲವು ವಿಜ್ಞಾನಿಗಳು ಮಂಡ್ಯದ ಬಳಿಯ ಮನೆಯೊಂದರ ಮಹಿಳೆಗೆ ಚಿನ್ನದ ನೆಕ್ಲೇಸ್‌ ಹಾಕಿ ಹೊರಗೆ ಹೋಗಲು ಹೇಳಿದಾಗ, ಪಕ್ಕದ ಮನೆಯ ಮಹಿಳೆಯರಿಗೆ ಹೊಟ್ಟೆನೋವು ಆಗುತ್ತಿರುವುದನ್ನು ಕಂಡುಹಿಡಿದರು. ಆದಷ್ಟು ಮಧ್ಯಾಹ್ನದ ಹೊತ್ತು ಹೊರಗೆ ಹೋಗುವುದನ್ನು ಕಡಿಮೆ ಮಾಡಿ. ವಜ್ರದ ನೆಕ್ಲೇಸ್‌ ಧರಿಸಿದ ಮಹಿಳೆಯನ್ನು ದಿಟ್ಟಿಸುವುದನ್ನು ಕಡಿಮೆ ಮಾಡಿ. ಅದರ ಸೂಕ್ಷ್ಮ ಕಿರಣಗಳು ನಿಮ್ಮ ಹೊಟ್ಟೆಯಲ್ಲಿ ಒಂದು ಬಗೆಯ ಬೆಂಕಿಯಂಥ ಅನುಭವ ನೀಡಬಹುದು.

ವಸುಧಾ

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.