ಮಂಜುನಾಡಿನ ಮತ್ತೂಬ್ಬ ಹುಡುಗಿ ದಿಶಾ


Team Udayavani, Aug 5, 2018, 6:00 AM IST

disha-poovaiah.jpg

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಹಲವು ಚಿತ್ರಗಳಲ್ಲಿ ನಾಯಕಿಯರಾಗಿಯೂ, ದೊಡ್ಡ ಸುದ್ದಿ ಮಾಡದ ಅನೇಕ ನಟಿಯರಿದ್ದಾರೆ. ಅವರು ಹಲವು ಸಿನೆಮಾಗಳಲ್ಲೇನೋ ನಟಿಸಿರುತ್ತಾರೆ. ಆದರೆ, ಅವರು ದೊಡ್ಡ ಮಟ್ಟಿಗೆ ಪರಿಚಿತರಾಗಿರುವುದಿಲ್ಲ. ಅಂತಹ ಸಾಲಿನಲ್ಲಿ ದಿಶಾ ಪೂವಯ್ಯ ಸಹ ಒಬ್ಬರು.

ದಿಶಾ ಪೂವಯ್ಯ ಕಳೆದ ಆರು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಕನ್ನಡ ಸಿನಿಮಾಗಳನ್ನು ತಪ್ಪದೇ ನೋಡುವವರಿಗೆ ಒಂದಲ್ಲ ಒಂದು ಸಿನಿಮಾದಲ್ಲಿ ದಿಶಾ ಕಂಡಿರುತ್ತಾರೆ. ಸ್ಲಂ, ಮಳ್ಳಿ, ಆಶೀರ್ವಾದ, ರಿಯಲ್‌ ಪೊಲೀಸ್‌, ದಂಡು, ಶಿವು-ಪಾರು, ಶ್ರೀಸಾಯಿ ಸೇರಿದಂತೆ ಇನ್ನಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳನ್ನು ನೀವು ನೋಡಿದ್ದರೆ, ಅವರ ಪರಿಚಯ ಸಿಗಬಹುದು. ಇಷ್ಟಾದರೂ ದಿಶಾ ಯಾಕೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲಿಲ್ಲ, ಇದ್ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿಲ್ಲ. ಅದೇ ಕಾರಣಕ್ಕೆ ದಿಶಾ ಇನ್ನೂ ಎಲೆ ಮರೆಯ ಕಾಯಿಯಾಗಿಯೇ ಉಳಿದು ಕೊಂಡಿದ್ದಾರೆ ಎಂದರೆ ತಪ್ಪಿಲ್ಲ.
ಇಷ್ಟು ಸಿನೆಮಾ ಗಳಲ್ಲಿ ನಟಿಸಿದ ನಂತರ ದಿಶಾಗೆ ಯಾವ ಸಿನೆಮಾವನ್ನು, ಪಾತ್ರವನ್ನು ಆಯ್ಕೆ ಮಾಡಿದರೆ ತನಗೆ ಹೆಸರು ಬರಬಹುದೆಂಬುದನ್ನು ಅರ್ಥವಾಗಿದೆಯಂತೆ. 

“ನಾನು ಚಿತ್ರರಂಗಕ್ಕೆ ಬಂದ ಸಮಯದಲ್ಲಿ ನನಗೆ ಸಿನಿಮಾ ಆಯ್ಕೆಯ ಬಗ್ಗೆ ಗೊತ್ತಿರಲಿಲ್ಲ. ಅನುಭವ ಸಹ ಇರಲಿಲ್ಲ. ಇಷ್ಟವಾಗಿದ್ದನ್ನು ಒಪ್ಪಿಕೊಳ್ಳುತ್ತಿದ್ದೆ. ಆದರೆ, ಕೆಲವೊಮ್ಮೆ ಹೇಳ್ಳೋದು ಒಂದು, ಮಾಡೋದು ಒಂದು ಆಗುತ್ತದೆ. ಮಳ್ಳಿ ಹಾಗೂ ಆಶೀರ್ವಾದ ಸಿನೆಮಾಗಳಲ್ಲಿ ಆಗಿದ್ದು ಅದೇ. ನಿರ್ದೇಶಕರು ಹೇಳಿದಾಗ ಪಾತ್ರ ಚೆನ್ನಾಗಿತ್ತು. ಆದರೆ, ಅದನ್ನು ತೆಗೆದ ರೀತಿ ಸರಿಯಿರಲಿಲ್ಲ. ಆ ಸಿನೆಮಾಗಳನ್ನು ನಾನು ಮಾಡಬಾರದಿತ್ತೆಂದು ಈಗ ಅನಿಸುತ್ತಿದೆ. ಆದರೆ, ಈಗ ಸಾಕಷ್ಟು ವಿಷಯ ತಿಳಿದುಕೊಂಡಿದ್ದೇನೆ. ಅಷ್ಟೇ ಅಲ್ಲ, ತುಂಬಾ ಮಾಗಿದ್ದೇನೆ. ಅದೇ ಕಾರಣದಿಂದ ಚೂಸಿಯಾಗುತ್ತಿದ್ದೇನೆ. ಜೊತೆಗೆ ಇಷ್ಟು ವರ್ಷದ ಜರ್ನಿ ನನಗೊಂದು ಜವಾಬ್ದಾರಿ ಮತ್ತು ಶಿಸ್ತು ಕಲಿಸಿದೆ’ ಎನ್ನುತ್ತಾರೆ ದಿಶಾ.

ಇಷ್ಟು ವರ್ಷದ ಚಿತ್ರರಂಗದ ಅನುಭವದಲ್ಲಿ ದಿಶಾಗೆ ಒಂದು ವಿಷಯ ಅರ್ಥವಾಗಿದೆ. ಅದೇನೆಂದರೆ, ಅದು ಕೇವಲ ಸಿನಿಮಾರಂಗವನ್ನು ನಂಬಿಕೊಂಡು ಕೂತರೆ ಕಷ್ಟ, ಸಿನಿಮಾದ ಜೊತೆಗೆ ಶಿಕ್ಷಣ ಕೂಡಾ ಮುಖ್ಯ ಎಂಬುದು. ಅದೇ ಕಾರಣದಿಂದ ಚಿತ್ರರಂಗದಲ್ಲಿ ನಾಲ್ಕು ವರ್ಷ ಕಳೆದ ನಂತರ ಶಿಕ್ಷಣದ ಬಗ್ಗೆ ಗಮನಹರಿಸಿದ ದಿಶಾ ಸಿವಿಲ್‌ ಎಂಜಿನಿಯರಿಂಗ್‌ ಮುಗಿಸಿದ್ದಾರೆ.  ಈಗ ಇಂಟಿರಿಯರ್‌ ಡಿಸೈನ್‌ ಹಾಗೂ ಜ್ಯುವೆಲ್ಲರಿ ಡಿಸೈನ್‌ ಕೋರ್ಸ್‌ ಮಾಡುವ ಸಿದ್ಧತೆಯಲ್ಲಿದ್ದಾರೆ. “ಸಿನೆಮಾದ ಜೊತೆ ಬೇರೊಂದು ಉದ್ಯೋಗ ಕೂಡಾ ಮುಖ್ಯ. ಸಿನೆಮಾವನ್ನೇ ನಂಬಿಕೊಂಡು ಕೂರುವಂತಿಲ್ಲ’ ಎನ್ನುತ್ತಾರೆ.

ಈ ಮಧ್ಯೆ ದಿಶಾ ಅಭಿನಯದ ಇನ್ನಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಕನ್ನಡದಲ್ಲಿ ತ್ರಾಟಕ, ಸಾಲಿಗ್ರಾಮ, ಟರ್ನಿಂಗ್‌ ಪಾಯಿಂಟ್‌ ಹಾಗೂ ಒಂದು ದಿನ ಒಂದು ಕ್ಷಣ ಚಿತ್ರಗಳಲ್ಲಿ ಅವರು ನಟಿಸಿದ್ದರೆ, ಅದರ ಜೊತೆ ತಮಿಳಿನ ಹಾಗೂ ತೆಲುಗಿನ ಒಂದೊಂದು ಚಿತ್ರದಲ್ಲೂ ದಿಶಾ ನಟಿಸುತ್ತಿದ್ದಾರೆ. ಅಮಲಾ ಪೌಲ್‌ ಅವರ ಸಹೋದರ ನಾಯಕರಾಗಿರುವ ತಮಿಳು ಸಿನೆಮಾದಲ್ಲಿ ದಿಶಾಗೆ ಅವಕಾಶ ಸಿಕ್ಕಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ತಮಿಳಿನಲ್ಲೂ ಒಂದಷ್ಟು ಚಿತ್ರಗಳಲ್ಲಿ ನಟಿಸುವ ನಿರೀಕ್ಷೆಯಲ್ಲಿದ್ದಾರೆ ದಿಶಾ. ದಿಶಾಗೆ ಕನ್ನಡದಲ್ಲಿ ಸಿಗದ ಯಶಸ್ಸು ಮತ್ತು ಅದೃಷ್ಟ, ಪರಭಾಷೆಯ ಚಿತ್ರಗಳಲ್ಲಾದರೂ ಸಿಗುತ್ತದಾ ಎಂದು ನೋಡಬೇಕಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.