ಗಾಂಧಿ ಪತ್ರ


Team Udayavani, Feb 23, 2020, 5:54 AM IST

ram-3

ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ ಒಂದಷ್ಟು ವಿಚಾರಗಳು ಇಲ್ಲಿವೆ.

ಅಸ್ಪೃಶ್ಯತೆ ವಿರುದ್ಧದ ಗಾಂಧೀಜಿ ಅವರ ಪ್ರವಾಸ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಸುಮಾರು ಎರಡು ವರ್ಷ ದೇಶಾದ್ಯಂತ ನಡೆಯಿತು. ಇದನ್ನು ಆ ಕಾಲದಲ್ಲಿ ಹರಿಜನ್‌ ಯಾತ್ರೆ ಎಂದು ಜನರು ಗುರುತಿಸುತ್ತಿದ್ದರು, ಗಾಂಧೀಜಿಯವರೂ ಹೀಗೆ ಕರೆದುಕೊಂಡಿದ್ದರು.

ಫೆ. 25ರಂದು ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಗಾಂಧೀಜಿಯವರಿಗೆ ಮಾನಪತ್ರವನ್ನು ಅರ್ಪಿಸಲಾಗಿತ್ತು. ಸಾಮಾನ್ಯವಾಗಿ ಗಾಂಧೀಜಿಯವರು ಮಾನಪತ್ರವನ್ನು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ, ಹಿರಿಯ ನಾಯಕರು ಮಾನಪತ್ರ ಓದುವ ಹೊಣೆಗಾರಿಕೆಯನ್ನು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಪಾಂಗಾಳ ನಾಯಕ್‌ ಕುಟುಂಬದ 11ರ ಹರೆಯದ ಬಾಲಕಿ ನಿರುಪಮಾ ಅವಳಿಗೆ ವಹಿಸಿಕೊಟ್ಟಿದ್ದರು. ಆ ಕಾಲದಲ್ಲಿ ಹಿಂದಿಯನ್ನು ಸುಲಲಿತವಾಗಿ ಓದುವಷ್ಟು ಭಾಷಾ ಪ್ರೌಢಿಮೆಯನ್ನು ಈಕೆ ಬೆಳೆಸಿಕೊಂಡದ್ದೂ ವಿಶೇಷ. ಮಾನಪತ್ರವನ್ನು ವಾಚಿಸಿ ಅರ್ಪಿಸಿದ್ದ ಬಾಲಕಿ ತನ್ನ ಚಿನ್ನದ ಕೈಬಳೆಗಳನ್ನು ಗಾಂಧೀಜಿಯವರಿಗೆ ಅರ್ಪಿಸಿದಳು. ಆಗ ಗಾಂಧೀಜಿ ತುಂಟ ನಗುವಿನೊಂದಿಗೆ “ಸರ, ಕಿವಿಯೋಲೆ ಇದೆಯಲ್ಲ? ಅದನ್ನೂ ಕೊಡು’ ಎಂದರು. ಅದನ್ನೂ ಆಕೆ ಕೊಟ್ಟಳು. ಸ್ವಲ್ಪ ಅಳುಕನ್ನು ಗಮನಿಸಿದ ಗಾಂಧೀಜಿಯವರು “ಅಮ್ಮನ ಬಳಿ ಕೇಳಿದ್ದೆಯಾ? ಯಾವುದನ್ನು ಕೊಡಲು ಹೇಳಿದ್ದಾರೆ?’ ಎಂದು ಪ್ರಶ್ನಿಸಿದಾಗ, “ಬಳೆಗಳನ್ನು ಕೊಡಲು ಹೇಳಿದ್ದಾಳೆ’ ಎಂದಳು. “ಭಾರತ ಬಡದೇಶ. ಎಲ್ಲರಿಗೂ ಚಿನ್ನಾಭರಣ ಧರಿಸುವ ಅವಕಾಶ ಇರುವುದಿಲ್ಲ. ಆದ್ದರಿಂದ ಚಿನ್ನದ ವ್ಯಾಮೋಹ ಇರಬಾರದು’ ಎಂದು ಸಲಹೆ ಇತ್ತ ಗಾಂಧೀಜಿಯವರು ಆಕೆಯಿಂದ ಅನಗತ್ಯ ಚಿನ್ನ ಧರಿಸುವುದಿಲ್ಲ ಎಂಬ ಮಾತು ಪಡೆದು ಚಿನ್ನದ ಬಳೆಗಳನ್ನು ಮಾತ್ರ ಇರಿಸಿಕೊಂಡು ಚಿನ್ನದ ಸರ ಮತ್ತು ಕಿವಿಯೋಲೆಗಳನ್ನು ಮರಳಿಸಿದರು.

ನಿರುಪಮಾ ಓರ್ವ ಸಾಮಾನ್ಯ ಬಾಲಕಿ. ಗಾಂಧೀಜಿ ಆಗಲೇ ದೇಶದ ಮೂಲೆಮೂಲೆಗಳಲ್ಲಿ ಜನಪ್ರಿಯರಾದ ಓರ್ವ ನಾಯಕ. ಹೀಗಿರುವಾಗ ನಿರುಪಮಾ ಗಾಂಧೀಜಿಯವರಿಗೆ ಪತ್ರ ಬರೆಯುತ್ತಿದ್ದಳು, ಬಿಡುವಿಲ್ಲದ ಪ್ರವಾಸದ ನಡುವೆಯೂ ಗಾಂಧೀಜಿ ಈಕೆಗೆ ಮರು ಉತ್ತರ ಬರೆದಿರುವುದು ಅಚ್ಚರಿ ತರುತ್ತದೆ.

ಉಡುಪಿಗೆ ಬಂದು ಮೂರು ತಿಂಗಳ ಬಳಿಕ ಅಂದರೆ ಮೇ 23, 1934 ರಂದು ಗಾಂಧೀಜಿಯವರು ಬರೆದ ಪತ್ರದ ಪ್ರತಿ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಗ್ರಹದಲ್ಲಿದೆ. ಒಟ್ಟು ಮೂರು ಪತ್ರಗಳು ಬಂದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಕೇಂದ್ರದ ಸಂಯೋಜಕ ಯು.ವಿನೀತ್‌ ರಾವ್‌.

“ಚಿ| ನಿರುಪಮಾ, ನಿನ್ನ ಪತ್ರ ತಲುಪಿದೆ. ನಿನ್ನ ಭಾಷೆ ಚೆನ್ನಾಗಿದೆ. ಒಡವೆಗಳು ಅನಗತ್ಯ. ಅವು ಹುಡುಗಿಯರಲ್ಲಿ ಅವರ ಬಾಹ್ಯ ಸೌಂದರ್ಯದ ಬಗ್ಗೆ ಅವರಲ್ಲಿಯೇ ಆಕರ್ಷಣೆ ಉಂಟಾಗಲು ಕಾರಣವಾಗುತ್ತದೆ. ಬಡತನವಿರುವ ದೇಶದಲ್ಲಿ ಒಡವೆಗಳ ಬಗ್ಗೆ ಕಡಿಮೆ ಆಕರ್ಷಣೆ ಇರಬೇಕು. ಈ ಎಲ್ಲ ಕಾರಣಗಳಿಂದ ನಾನು ಒಡವೆಗಳ ವಿರೋಧಿ’ ಎಂದು ಗಾಂಧೀಜಿ ಅಂಚೆಕಾರ್ಡ್‌ನಲ್ಲಿ ಚುಟುಕಾಗಿ ಬರೆದಿದ್ದಾರೆ. ವಾಕ್ಯ ರಚನೆ ಗಮನಿಸಿದಾಗ ಮೊದಲ ಪತ್ರ ಇದಾಗಿರಬಹುದು ಎಂದೆನಿಸುತ್ತದೆ.

ಒಡವೆಯ ದುಷ್ಪರಿಣಾಮಗಳು
ಗಾಂಧೀಜಿಯವರ ಪ್ರಕಾರ ಒಡವೆ ಇಲ್ಲದವರ ನಡುವೆ ಒಡವೆ ಧರಿಸಿದವರಿಗೆ ಒಂದು ರೀತಿಯ ಹೆಚ್ಚುಗಾರಿಕೆ (ಅಹಂಕಾರ) ಬರುತ್ತದೆ. ಒಡವೆಗಳು ಧರಿಸಿದವರಿಗೆ ಅವು ವ್ಯಾಮೋಹ ಉಂಟುಮಾಡುತ್ತದೆ. ಇದರಿಂದ ಇನ್ನೂ ಬೇಕು, ಮತ್ತೂ ಬೇಕು ಎಂಬ ಹಪಹಪಿಸುವಿಕೆ ಸೃಷ್ಟಿಯಾಗುತ್ತದೆ. ಕೊನೆಗೆ ಒಡವೆ ಸಂಗ್ರಹಿಸುವುದು ಜೀವನದ ಪರಮ ಗುರಿಯಾಗುತ್ತದೆ. ಬಡವರ ದೇಶವಾಗಿರುವುದರಿಂದ ದೊಡ್ಡ ಸಂಖ್ಯೆಯ ಬಡವರು ಆಭರಣ ಹೇರಿಕೊಂಡವರನ್ನು ಕಂಡು ಕೊರಗುತ್ತಾರೆ. ಇದು ಸಾಮಾಜಿಕ ಅಸಂತುಷ್ಟಿಗೆ ಕಾರಣವಾಗುತ್ತದೆ.

ಕೇಂದ್ರೀಕರಣ-ವಿಕೇಂದ್ರೀಕರಣ
ಚಿನ್ನವನ್ನು ಕೊಡುವವರು ಯಾರು? ಇದ್ದವರು ಮಾತ್ರ ಕೊಡುತ್ತಾರೆ. ಒಂದರ್ಥದಲ್ಲಿ ಗಾಂಧೀಜಿ ಈ ಮೂಲಕ ಇದ್ದವರಿಂದ ಪಡೆದು ಅದರ ದ್ರವ್ಯವನ್ನು ಇಲ್ಲದವರಿಗೆ ಹಂಚಿದರು. ನಿರುಪಮಾ ನಾಯಕ್‌ ಬಳಿಕ ವೈದ್ಯೆಯಾಗಿ ದೊಡ್ಡ ಹುದ್ದೆಯಲ್ಲಿದ್ದರೂ ಜೀವನದ ಕೊನೆಯವರೆಗೂ ತೀರಾ ಅಗತ್ಯದ ಆಭರಣ ಹೊರತುಪಡಿಸಿದರೆ ಮತ್ತೇನನ್ನೂ ಧರಿಸದೆ ಗಾಂಧೀಜಿಯವರ ಮಾತನ್ನು ಉಳಿಸಿಕೊಂಡಿದ್ದರು.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Empowerment: ಬಾಳು ಬೆಳಗಿದ ಬಾಳೆ!

Empowerment: ಬಾಳು ಬೆಳಗಿದ ಬಾಳೆ!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.