ಸಿಂಗಾಪುರದಲ್ಲಿ ಗಣೇಶ


Team Udayavani, Sep 1, 2019, 5:15 AM IST

WhatsApp-Imag-dd

ಸಿಂಗಾಪುರದಲ್ಲಿ ಈಗ ಆಷಾಢ ಮಾಸ. ಡ್ರ್ಯಾಗನ್‌ ನೃತ್ಯ, ಶುಭಸಮಾರಂಭ, ಹಬ್ಬಹರಿದಿನಗಳಿಗೆ ಕೊಂಚ ವಿರಾಮ. ಬಹುಸಂಖ್ಯಾತ ಚೀನಿಯರ ಈ ದೇಶದಲ್ಲಿ ಈಗ ಗೋಸ್ಟ್‌ ಮಂತ್‌. ಸರಿಸಾಮಾನ್ಯ ಆಗಸ್ಟ್‌ ಹಾಗೂ ಸೆಪ್ಟಂಬರ್‌ನಲ್ಲಿ ಈ ದೆವ್ವದ ಆಚರಣೆ ನೆರವೇರುತ್ತಿರುತ್ತವೆ. ತಮ್ಮ ಪೂರ್ವಜರ ಹೆಸರಿನಲ್ಲಿ ವೈಯಕ್ತಿಕ ಅಥವಾ ಸಾಮೂಹಿಕವಾಗಿ ಸ್ಮತಿಕಾರ್ಯಗಳನ್ನು ನಡೆಸುವಲ್ಲಿ ಚೀನೀಯರು ನಿರತರಾಗಿದ್ದಾರೆ.

ಅಂಕಿಅಂಶದಲ್ಲಿ ಚೀನಿಯರ ಬಳಿಕ ಭಾರತೀಯರದ್ದೇ ಇಲ್ಲಿ ಸಿಂಹಪಾಲು. ಅವರಂತಲ್ಲ ನಾವು. ನಮಗೀಗ ಉತ್ಸವಗಳ ಸಂಭ್ರಮ. ಈಗಾಗಲೇ ಕೆಲ ಹಬ್ಬಗಳನ್ನು ಕಳೆದಿರುವ ನಮಗೆ ಇದೀಗ ಗಣೇಶಚತುರ್ಥಿಯ ಸಡಗರ. ಸಿಂಗಾಪುರದಲ್ಲಿ ಎಷ್ಟು ವಿಜೃಂಭಣೆಯಿಂದ ಆಚರಿಸುತ್ತಾರೆ ಎನ್ನುವುದಕ್ಕಿಂತಲೂ ಇಲ್ಲಿ ಆಚರಣೆಗೆ ಅನುಮತಿ ಲಭಿಸುವುದೇ ಅಭಿಮಾನದ ಸಂಗತಿ. ಪ್ರಪಂಚದ ವಿವಿಧ ಭಾಗಗಳ ಜನರು ಒಂದೆಡೆ ನೆಲೆಸಿರುವ ಅಪೂರ್ವ ನಾಡಿದು. ಇಲ್ಲಿ ವಿಭಿನ್ನ ಸಂಸ್ಕೃತಿಗಳು ಪರಸ್ಪರ ಗೌರವದಿಂದ ಇರುತ್ತವೆ.

ಸಿಂಗಾಪುರದಲ್ಲಿರುವ ವಿವಿಧ ಭಾರತೀಯ ಸಮುದಾಯಗಳು ಗಣೇಶಚತುರ್ಥಿಯನ್ನು ಆಚರಿಸುತ್ತವೆ. ಮಹಾರಾಷ್ಟ್ರ ಮಂಡಲವು ಇಲ್ಲಿನ ಮರಾಠಿಗರ ಬಹುದೊಡ್ಡ ಸಮುದಾಯ. ಇಲ್ಲಿ ದೇಣಿಗೆಯನ್ನು ಸಂಗ್ರಹಿಸಿ ಆಚರಣೆಗೆ ಬೇಕಾದ ಖರ್ಚುವೆಚ್ಚಗಳನ್ನು ನಿಭಾಯಿಸಲಾಗುತ್ತದೆ. ಕಲಾತ್ಮಕವಾದ ಬೃಹತ್‌ ಗಣೇಶ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಸ್ಥಾಪಿಸಲಾಗುತ್ತದೆ. ಕೆಲವೊಂದು ಸಮುದಾಯಗಳು ಅನುಮತಿ ದೊರೆತ ಸ್ಥಳಗಳಲ್ಲಿ ಪೆಂಡಾಲ್‌ ಹಾಕಿ ಆಚರಿಸಿದರೆ, ಇನ್ನು ಕೆಲವೊಮ್ಮೆ ಗಣೇಶೋತ್ಸವಕ್ಕಾಗಿ ಅಂತಾರಾಷ್ಟ್ರೀಯ ಶಾಲಾಸಭಾಂಗಣಗಳನ್ನು ಆಶ್ರಯಿಸಲಾಗುತ್ತದೆ. ಹಿಂದೂ ದೇವಾಲಯಗಳಂತೂ ಮುಂಜಾನೆಯಿಂದಲೇ ಪೂಜೆಹೋಮಹವನಾದಿಗಳು ನಡೆಯುತ್ತಿರುತ್ತವೆ.

ಸಿಂಗಾಪುರದಲ್ಲಿ ಗಣೇಶೋತ್ಸವವನ್ನು ನಿಜವಾಗಿ ಸಂಭ್ರಮಿಸುವುದು ಭಾರತೀಯ ಮಹಿಳೆಯರು. ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಹಬ್ಬವನ್ನು ಸ್ವಾಗತಿಸಲು ಮನೆಯ ಮುಂಭಾಗದಲ್ಲಿ ಮಾವಿನ ಎಲೆಯ ತೋರಣ ಕಟ್ಟುತ್ತಾರೆ. ಸಣ್ಣ ಗಣೇಶ ವಿಗ್ರಹವನ್ನು ಖರೀದಿಸಿ ಯಥೋಚಿತವಾಗಿ ಅಲಂಕರಿಸುತ್ತಾರೆ. ಗಣೇಶನಿಗೆ ಅರ್ಪಿಸುವ ಮೋದಕ, ಕಡುಬುಗಳು ಹುಟ್ಟೂರನ್ನು ನೆನಪಿಸುವಂತೆ ಮಾಡುತ್ತವೆ. ಗೃಹಿಣಿಯರು ತಮ್ಮ ಗೆಳತಿಯರನ್ನು ಮನೆಗೆ ಆಹ್ವಾನಿಸಿ ಅರಶಿನಕುಂಕುಮ ನೀಡುತ್ತಾರೆ.

ಸಿಂಗಾಪುರಕ್ಕೂ ಗಣೇಶನ ಮೂರ್ತಿಗಳು ಭಾರತದಿಂದಲೇ ಪೂರೈಕೆ ಆಗಬೇಕಲ್ಲವೆ? ಇಲ್ಲೊಂದು ಲಿಟ್ಲ ಇಂಡಿಯಾ  ಪ್ರದೇಶವಿದೆ. ಇಲ್ಲಿ ಎಲ್ಲವೂ ಲಭ್ಯ. ಹಬ್ಬಹರಿದಿನವೆಂದರೆ ಇಲ್ಲಿ ಜನವೋ ಜನ. ಎಲ್ಲೆಲ್ಲೂ ಭಾರತೀಯರೇ. ಲಿಟ್ಲ ಇಂಡಿ ಯಾದಲ್ಲಿ ಓಡಾಡುವುದು ನಿಜವಾಗಿ ಪುಟ್ಟ ಇಂಡಿಯಾದ ಅನುಭವವನ್ನೇ ನೀಡುತ್ತದೆ. ಇಲ್ಲಿ ಜನ ತುಂಬಿದ್ದಾರೆಂದರೆ ಹಬ್ಬ ಹರಿ ದಿನ ಬಂದಿದೆ ಎಂದರ್ಥ.

ಎಲ್ಲ ಸಂಸ್ಕೃತಿಗಳ ಹಬ್ಬಗಳಿಗೂ ಮನ್ನಣೆ ನೀಡುತ್ತದೆ ಸಿಂಗಾಪುರ ಸರ್ಕಾರ, ಜೊತೆಗೆ ಕೆಲವೊಂದು ಕಾನೂನುಗಳನ್ನು ತರುವಲ್ಲಿಯೂ ಮುಂದಿದೆ. ಸಿಕ್ಕ ಸಿಕ್ಕ ಕೆರೆ-ನದಿಗಳಲ್ಲಿ ಗಣೇಶನ ವಿಗ್ರಹಗಳನ್ನು ವಿಸರ್ಜಿಸುವಂತಿಲ್ಲ. ಕಂಡಕಂಡ ಸ್ಥಳಗಳಲ್ಲಿ ಪೆಂಡಾಲ್‌ಗ‌ಳನ್ನು ಹಾಕುವಂತಿಲ್ಲ. ಸಾರ್ವಜನಿಕರಿಗೆ ಅಡಚಣೆ ಆಗುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಎಂಥ ಆಚರಣೆ ಇದ್ದರೂ ರಾತ್ರಿ 10 ಗಂಟೆಗೆ ಮುಕ್ತಾಯವಾಗಬೇಕು. ಮನೆಯಲ್ಲಿ ಕೂರಿಸುವ ಗಣೇಶನಮೂರ್ತಿಗಳ ವಿಸರ್ಜನಕಾರ್ಯಗಳು ಅವರವರ ಮನೆಯ ಬಕೆಟ್‌ಗಳಲ್ಲಿಯೇ ನೆರವೇರಿಸಲ್ಪಡುತ್ತದೆ.

ಇವುಗಳ ಮಧ್ಯೆ ಏನಾದರೂ ಕಾನೂನು ಉಲ್ಲಂಘನೆಯಾಯಿತೋ ಕಾನೂನು ಉಲ್ಲಂ  ಸಿದವರಿಗೆ ದಂಡ ಅಥವಾ ಜೈಲುವಾಸ! ಎಲ್ಲೆಂದರಲ್ಲಿ ಇಟ್ಟಿರುವ ಕೆಮರಾ ಕಣ್ಣುಗಳು ಕಾಯುತ್ತಲೇ ಇರುತ್ತವೆ.

ಶ್ರೀವಿದ್ಯಾ ಸಿಂಗಾಪುರ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.