ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ
Team Udayavani, Feb 2, 2020, 6:00 AM IST
ಹಣ್ಣುಗಳನ್ನು ಮಾರಿ ಬಂದ ಹಣದಿಂದ ಶಾಲೆಯನ್ನು ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಹಾಜಬ್ಬರ ಹೆಸರು ಮಂಗಳೂರಿನ ಹಳ್ಳಿಯಿಂದ ದಿಲ್ಲಿಗೆ ತಲುಪಿದೆ. ನಿಷ್ಕಾಮ ಸೇವಾಭಾವದ ಹಾಜಬ್ಬರದು ಪ್ರಶಸ್ತಿ ಬಂದಾಗ ಹಿಗ್ಗದ ನಿರ್ಲಿಪ್ತ ಭಾವ. ಅಕ್ಷರ ಕಲಿಯದಿದ್ದರೂ ಅವರು ನಿಜವಾದ ಅಕ್ಷರ ಸಂತ.
ಕಿತ್ತಳೆ ಹಣ್ಣಲ್ಲ
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ಅವರು ಮಾರುವುದು ಕಿತ್ತಳೆ ಹಣ್ಣು
ಕಿತ್ತಳೆ ಹೊತ್ತು ಹೊತ್ತು ಮಾರಿದರೂ
ಮನೆಯ ಮೇಲೊಂದು ಸೂರು ತನ್ನದೇ ಸಂಸಾರಕ್ಕೆ
ಸ್ವಂತ ಮಕ್ಕಳಿಗೆ ಶಾಲೆ ಸುಣ್ಣಬಣ್ಣ ಗೋಡೆನೆಲಕ್ಕೆ
ಏನಿಲ್ಲ ಏಕೆಂದರೆ ಅವರಿಗೆ ಕಿತ್ತಳೆ ಹಣ್ಣಲ್ಲ
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ಅಕ್ಷರ ಸಂತನಿಗೆ ಓದು ಬರಹ ಕಿತ್ತಳೆ ಹಣ್ಣು
ಮಕ್ಕಳ ಕಣ್ಣ ಬೆಳಕು ಬುಟ್ಟಿ ಕಿತ್ತಳೆ ಹಣ್ಣು
ಕೈಯಲ್ಲಿ ಅರ್ಜಿ ಕಣ್ಣಲ್ಲಿ ಮಾತಿನ ಈ ತಬರ
ಸೋತಿಲ್ಲ ತೇಜಸ್ವಿ ಹಾಜಬ್ಬರಿಗೆ ಕಿತ್ತಳೆ ಹಣ್ಣಲ್ಲ
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ಹಾಜಬ್ಬ ಕಟ್ಟಿದ ಶಾಲೆಗೆ ನೆಲ ಗೋಡೆ ಕಿತ್ತಳೆ ಹಣ್ಣು
ಕಿಟಿಕಿ ಬಾಗಿಲು ಮಕ್ಕಳ ಬಟ್ಟಲ ಅನ್ನ ಕಿತ್ತಳೆ ಹಣ್ಣು
ಆಟದ ಬಯಲು ತೋಟದ ಹೂವು ಕಿತ್ತಳೆ ಹಣ್ಣು
ಮನಸು ಕನಸು ಹಾಜಬ್ಬರಿಗೆ ಅದೆ ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ನಾವೂ ನೀವೂ ಕೊಂಡಿದ್ದೇವೆ ಕಿತ್ತಳೆ ಹಣ್ಣು
ನಮಗೆಲ್ಲಿ ಕಂಡೀತು ಕಿತ್ತಳೆಯ ನಿಜ ಬಣ್ಣ
ಅದು ಬರಿ ಕಿತ್ತಳೆ ಅಂದವರುಂಟೆ ಮರುಳೆ
ಹಾಜಬ್ಬರಿಗೆ ಅದು ಅರಿವಿನ ಮಂತ್ರದಂಡ!
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಹಣ್ಣಲ್ಲ
ಹಾಗಾದರೆ….
ಕೆ. ಚಿನ್ನಪ್ಪ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ