ಭಾಗವತರ ಚರಿತೆಯ ಮೂಲಕ ಯಕ್ಷಗಾನದ ಚರಿತ್ರೆ


Team Udayavani, Jun 2, 2019, 6:00 AM IST

c-5

ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ “ಶತಸ್ಮತಿ’ ಎಂಬ ಪದ ವಿಶೇಷ ಮಹತ್ವವನ್ನು ಪಡೆದಿದೆ. ಅನೇಕ ಕಲಾವಿದರ ನೂರರ ನೆನಪಿನ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಶತಸ್ಮತಿ ಸಂಪುಟಗಳೂ ಪ್ರಕಟವಾಗಿ ಯಕ್ಷಗಾನದ ಇತಿಹಾಸದ ಅಪೂರ್ವ ದಾಖಲೆ ಎನಿಸುತ್ತಿವೆ. ಇವೆಲ್ಲದರ ನಡುವೆ, ಬಡಗುತಿಟ್ಟು ಯಕ್ಷಗಾನದಲ್ಲಿ ಭಾಗವತಿಕೆಯಲ್ಲಿ ನವ‌ ಮಾರ್ಗಪ್ರವರ್ತಕರೆನಿಸಿದ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ಮಾತ್ರ ವಿಶೇಷವಾಗಿ ಗಮನಸೆಳೆಯುತ್ತದೆ. ಭಕ್ತಿ¤ಪರಂಪರೆಯ “ಭಾಗವತ’ ಎಂಬ ಪದದ ಅರ್ಥವಂತಿಕೆಗೆ ಅನುಗುಣವಾಗಿ, ಯಕ್ಷಗಾನದ “ಭಾಗವತ’ನ ಉಪಾಧಿಯ ಘನತೆಗೆ ತಕ್ಕುದಾಗಿ ಬದುಕಿದ ನಾರ್ಣಪ್ಪ ಉಪ್ಪೂರರ ನೂರು ವರ್ಷಗಳ ಬದುಕೆಂದರೆ, ಅದರೊಳಗೆ ನೂರಾರು ಕಲಾವಿದರ ಜೀವನಕಥನಗಳೂ ಅಡಕವಾಗಿವೆ. ರಂಗದ ಮೇಲೆ ಕಲಾವಿದರನ್ನು ಸಮರ್ಥವಾಗಿ ನಿರ್ದೇಶಿಸಬಲ್ಲಂಥ “ಗುರು’ತರ ವ್ಯಕ್ತಿತ್ವ ಅವರದು. ಹಾಗಾಗಿಯೇ ಅವರ ಹೆಸರಿನೊಂದಿಗೆ “ಪ್ರಾಚಾರ್ಯ’ ಉಪಾಧಿಯಿದೆ. ಅವರ ಸುಪುತ್ರ ಶ್ರೀಧರ ಉಪ್ಪೂರರೇ ಸಂಪಾದಕತ್ವ ವಹಿಸಿ ಪ್ರಕಟಿಸಿರುವ ಅವರ ಶತಮಾನದ ಸ್ಮರಣ ಸಂಪುಟ ಕೇವಲ ಭಾಗವತರೊಬ್ಬರ ಸಾಧನೆಯ ಕಥನವಾಗದೆ, ಬಡಗುತಿಟ್ಟಿನ ಒಂದು ಕಾಲದ ಐತಿಹಾಸಿಕ ದಾಖಲೆಯಂತಿದೆ. ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ, ಅವಲೋಕ ಎಂಬ ಐದು ವಿಭಾಗಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಸುಮಾರು 100ಕ್ಕಿಂತ ಅಧಿಕ ಸಹೃದಯ ಲೇಖಕರು, ಕಲಾವಿಮರ್ಶಕರು, ಕಲಾವಿದರು, ಕಲಾಭಿಜ್ಞರು ಭಾಗವತರ ನೆನಪುಗಳನ್ನು ಹಂಚಿ ಕೊಂಡಿದ್ದಾರೆ.

ನಾರ್ಣಪ್ಪ ಉಪ್ಪೂರರದು ಸರ್ವಸಮರ್ಪಣಾಭಾವದ ಬದುಕು. ಯಕ್ಷಗಾನವನ್ನಲ್ಲದೆ ಬೇರೆ ಯೋಚಿಸಿದವರೇ ಅಲ್ಲ. ಹಣಕ್ಕೆ ಬಾಗದ, ಹೆಸರಿಗೆ ಬೀಗದ ಸ್ವಾಭಿಮಾನಿ. ಹಾಗಾಗಿಯೇ ಅವರು ಸತ್ತ ಮೇಲೆಯೂ ಹೀಗೆ ನಮ್ಮ ನಡುವೆ ಬದುಕುತ್ತಿದ್ದಾರೆ.

ಶತಸ್ಮತಿ
(ಭಾಗವತ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು)
ಸಂ.: ಡಾ. ಶ್ರೀಧರ ಉಪ್ಪೂರ
ಪ್ರ.: ಮಾರ್ವಿ ನಾರ್ಣಪ್ಪ ಉಪ್ಪೂರ ಜನ್ಮಶತಮಾನೋ ತ್ಸವ ಸಮಿತಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ- 576226, ಉಡುಪಿ ಜಿಲ್ಲೆ
ಮೊದಲ ಮುದ್ರಣ: 2019 ಬೆಲೆ: ರೂ. 300

ಶ್ರೀಕೃಷ್ಣ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.