ಜಾತಕ ಕತೆಗಳು: ಸುಲಸಾ ಮತ್ತು ಸುತ್ತುಕ


Team Udayavani, Jan 26, 2020, 4:09 AM IST

ras-4

ಬನಾರಸ್‌ನಲ್ಲಿ ಬ್ರಹ್ಮದತ್ತನು ರಾಜ್ಯಭಾರ ಮಾಡುತ್ತಿದ್ದಾಗ, ಸುಲಸಾ ಎಂಬ ಸುಂದರವಾದ ವೇಶ್ಯೆಯೊಬ್ಬಳು ಇದ್ದಳು. ಆಕೆಯೊಡನೆ ಒಂದು ದಿನ ಇರಬೇಕಾದರೆ ಸಾವಿರ ವರಹಗಳನ್ನು ಆಕೆಗೆ ನೀಡಬೇಕಾಗಿತ್ತು. ಆದ್ದರಿಂದ ಬಹಳ ವೈಭವದ ಜೀವನವನ್ನು ಅವಳು ನಡೆಸುತ್ತಿದ್ದಳು.

ಹೀಗಿರಲು ಒಂದು ದಿನ ಆ ರಾಜ್ಯಕ್ಕೆ ಸುತ್ತುಕ ಎಂಬ ಕಳ್ಳನೊಬ್ಬ ಬಂದನು. ಬಹಳ ಬಲಿಷ್ಟನಾದ ಅವನು ಕಳ್ಳತನದಲ್ಲಿ ಭಾರಿ ನಿಪುಣನಾಗಿದ್ದ. ಆದರೆ, ಚುರುಕುಮತಿಯ ರಾಜಭಟರು ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಸೆರೆಗೆ ಸಿಕ್ಕ ಸುತ್ತುಕನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಆತನನ್ನು ರಾಜಬೀದಿಯಲ್ಲಿ ಎಲ್ಲರಿಗೂ ಕಾಣಿಸುವ ಹಾಗೆ ಕರೆದೊಯ್ಯುತ್ತಿದ್ದರು. ಆತನನ್ನು ಸೆರೆಹಿಡಿದಿರುವ ವಿಚಾರ ಊರಿನವರಿಗೆಲ್ಲ ಗೊತ್ತಾಗಿ ಅವನನ್ನು ನೋಡಲು ಬೀದಿಯ ಎರಡೂ ಕಡೆಗಳಲ್ಲಿ ಜನರು ನೆರೆದಿದ್ದರು. ಈ ಸುದ್ದಿಯು ಸುಲಸಾಳಿಗೂ ಗೊತ್ತಾಗಿ, ಆಕೆಯು ಕಿಟಕಿಯ ಪರದೆಯನ್ನು ಸರಿಸಿ ಕುತೂಹಲದಿಂದ ಸುತ್ತುಕನನ್ನು ನೋಡಿದಳು. ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ ಮುಂದಕ್ಕೆ ಸಾಗುತ್ತಿದ್ದ ಸುತ್ತುಕನನ್ನು ನೋಡಿ ಸುಲಸಾಳಿಗೆ ಕರುಣೆ ಉಕ್ಕಿ ಬಂತು. ಮಾತ್ರವಲ್ಲ, ಆತನ ಬಗ್ಗೆ ಪ್ರೀತಿಯೂ ಹುಟ್ಟಿತು. ಅವಳು ಮನೆಯಿಂದ ಸಖೀಯರೊಡನೆ ಹೊರಬಂದು, ರಾಜಭಟರನ್ನು ಉದ್ದೇಶಿಸಿ ಮಾತನಾಡಿದಳು. “”ಹೇ ಭಟರೇ, ಈ ಕಳ್ಳನನ್ನು ಕರೆದೊಯ್ದು ಏನು ಮಾಡಬೇಕೆಂದಿರುವಿರಿ. ನನಗೋ ಈತನ ಮೇಲೆ ಪ್ರೇಮವುಂಟಾಗಿದೆ. ಈತನಿಗೆ ಜಾಮೀನು ರೂಪದಲ್ಲಿ ನೀಡಬೇಕಾದ ಮೊತ್ತವನ್ನು ನಾನೇ ನೀಡುವೆನು. ಈತನನ್ನು ನೀವು ಬಿಟ್ಟುಬಿಟ್ಟರೆ ನಾನು ಅವನನ್ನು ಮದುವೆಯಾಗಿ ಸಂಸಾರಸ್ಥೆಯಾಗಿ ಜೀವನ ಮಾಡುತ್ತೇನೆ. ಇದರಿಂದ ಇಬ್ಬರಿಗೂ ಒಳಿತಾಗುವುದು ಅಲ್ಲವೇ?” ಎಂದು ಹೇಳಿದಳು.

ರಾಜಭಟರು ಹಿರಿಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದರು. ವೇಶ್ಯೆಯೊಬ್ಬಳು ಸಂಸಾರಸ್ಥೆಯಾಗುವುದಾದರೆ, ಕಳ್ಳನೊಬ್ಬ ತನ್ನ ಕೆಟ್ಟ ಕೆಲಸವನ್ನು ಬಿಟ್ಟುಬಿಡುವುದಾದರೆ ಈತನನ್ನು ಸೆರೆಯಿಂದ ಬಿಟ್ಟುಬಿಡುವುದು ಒಳ್ಳೆಯದು ಎಂದು ಭಾವಿಸಿದರು.

ಸುಲಸಾಳು ಹಣವನ್ನು ಪಾವತಿಸಿ ಸುತ್ತುಕನನ್ನು ಬಿಡಿಸಿಕೊಂಡಳು. ಅಲ್ಲದೇ ಆತನನ್ನು ಮದುವೆಯಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಳು. ಹೀಗೆ ನಾಲ್ಕಾರು ತಿಂಗಳು ಕಳೆದ ಬಳಿಕ, ಸುತ್ತುಕನಿಗೆ ಈ ಸಂಸಾರ ಜೀವನ ಬಹಳ ಬೇಸರ ಮೂಡಿಸಿತು. ಎಲ್ಲೆಂದರಲ್ಲಿ ಸುತ್ತಾಡುತ್ತ, ಕಂಡದ್ದನ್ನು ಕಳ್ಳತನ ಮಾಡುತ್ತಾ ಜೀವನ ಮಾಡುತ್ತಿದ್ದ ಆತನಿಗೆ ಹೀಗೆ ಮನೆಯೊಳಗೆ ಇದ್ದುಕೊಂಡು ಸಂಸಾರ ನಡೆಸುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಆತನೊಂದು ಉಪಾಯ ಮಾಡುತ್ತಾನೆ. ಈ ಹೆಂಡತಿಯ ಬಳಿ ಇರುವ ಅಪಾರ ಬಂಗಾರವನ್ನು ಅಪಹರಿಸಿ ಎಲ್ಲಾದರೂ ಓಡಿಹೋಗಬೇಕು ಎಂದು ಚಿಂತಿಸುತ್ತಾನೆ. ಹೀಗೆ ಚಿಂತಿಸಿದ ಬಳಿಕ ಅವನಿಗೆ ಒಂದು ಉಪಾಯ ಹೊಳೆಯಿತು. “”ನಾನು ಕಳ್ಳನಾಗಿದ್ದಾಗ ಬೆಟ್ಟದ ಮೇಲಿನ ದೇವರಿಗೆ ಹರಕೆ ಹೊತ್ತಿದ್ದೇನೆ. ನೀನು ಸರ್ವಾಲಂಕಾರ ಮಾಡಿಕೊಂಡು ನನ್ನೊಡನೆ ಬಾ. ಅಲ್ಲಿ ಪೂಜೆ ಸಲ್ಲಿಸಿ ಬರೋಣ” ಎಂದು ಅವನು ಹೆಂಡತಿಯ ಬಳಿ ಹೇಳುತ್ತಾನೆ. ಗಂಡನ ದೈವಭಕ್ತಿಯಿಂದ ಪುಳಕಿತಳಾದ ಸುಲಸಾ, ಎಲ್ಲಾ ಚಿನ್ನದ ಆಭರಣ ಹಾಕಿಕೊಂಡು ಅವನೊಡನೆ ಬೆಟ್ಟವೇರಿದಳು. ಬೆಟ್ಟದ ಮೇಲೆ ತಲುಪಿದ ಕೂಡಲೇ ಸುತ್ತುಕ ತನ್ನ ಪಿತೂರಿಯ ಬಗ್ಗೆ ಹೇಳಿದನು. “”ನಿನ್ನನ್ನು ಕೊಂದು, ಆಭರಣ ದೋಚಿ ಓಡಿ ಹೋಗುವುದೇ ನನ್ನ ಗುರಿ. ಮೊದಲು ನಿನ್ನ ಈ ಎಲ್ಲ ಆಭರಣ ಕಳಚಿ ಒಂದು ಬಟ್ಟೆಯಲ್ಲಿ ಕಟ್ಟಿಡು” ಎಂದು ದಬಾಯಿಸಿದ. ಸುಲಸಾಳಿಗೆ ಬಹಳ ಹೆದರಿಕೆ ಆಯಿತು. ಅವಳು ಪರಿಪರಿಯಾಗಿ ಸುತ್ತುಕನನ್ನು ಬೇಡಿಕೊಂಡು ತನ್ನನ್ನು ಕೊಲ್ಲಬೇಡ ಎಂದು ಮನವಿ ಮಾಡಿದಳು. ಆದರೆ, ಸುತ್ತುಕನ ಮನಸ್ಸು ಕರಗಲಿಲ್ಲ. ಕೊನೆಯದಾಗಿ, ಸುಲಸಾ ಹೇಳಿದಳು. “”ನೀನು ಕೊಲ್ಲುವುದಾದರೆ ಸರಿ. ಅದಕ್ಕೆ ಮುನ್ನ ನಿನಗೆ ನಾಲ್ಕೂ ದಿಕ್ಕಿನಿಂದ ನಮಸ್ಕಾರ ಮಾಡಲು ಅವಕಾಶ ಮಾಡಿಕೊಡು”.

ಸುಲಸಾಳ ಭಕ್ತಿಯನ್ನು ಕಂಡು ಸುತ್ತುಕನಿಗೆ ನಗುಬಂತು. ಅವಳ ಕೋರಿಕೆಗೆ ಒಪ್ಪಿಗೆ ನೀಡಿದ. ಸುಲಸಾಳು ಮೊದಲು ಮುಂಭಾಗದಲ್ಲಿ ಮತ್ತೆ ಎಡ ಮತ್ತು ಬಲಭಾಗದಲ್ಲಿ ನಮಸ್ಕಾರ ಮಾಡಿದಳು. ಬಳಿಕ ಅವನ ಹಿಂಭಾಗಕ್ಕೆ ಬಂದು ನಮಸ್ಕಾರ ಮಾಡಲೆಂದು ಬಗ್ಗಿದಳು. ಆದರೆ, ನಮಸ್ಕಾರ ಮಾಡುವ ಬದಲು ಅವನ ಕತ್ತನ್ನು ಹಿಡಿದು ಬಲವಾಗಿ ನೂಕಿ ಬಿಟ್ಟಳು. ಸುತ್ತುಕನು ಪ್ರಪಾತಕ್ಕೆ ಬಿದ್ದುಬಿಟ್ಟ. ಹೀಗೆ ಕಳ್ಳನಿಗೆ ಒಳ್ಳೆಯ ಬಾಳುವೆ ಮಾಡುವ ಅವಕಾಶ ಕೊಟ್ಟು, ಬಳಿಕ ಅವನು ಸರಿ ದಾರಿಗೆ ಬಾರದೇ ಇದ್ದಾಗ, ಅವನನ್ನು ಕೊಂದ ಸುಲಸಾಳ ಬಗ್ಗೆ ಊರಿನ ಜನರಿಗೆ ಗೌರವ ಮೂಡಿತು.

(ಸಂಗ್ರಹ)

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.