ಐ ಲವ್ ಯೂ ರಚಿತಾ ಲವ್ ಯೂ ನಾಟ್
Team Udayavani, Jun 30, 2019, 5:00 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ ರಚಿತಾ ರಾಮ್. ಮೊದಲ ಚಿತ್ರದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಮೂಲಕ ಸಿನಿಪ್ರಿಯರ ಮನಗೆದ್ದ ಈ ಚೆಲುವೆ, ಬಳಿಕ ದಿಲ್ ರಂಗೀಲಾ, ರನ್ನ, ರಥಾವರ, ಭರ್ಜರಿ, ನಟ ಸಾರ್ವಭೌಮ ಮೊದಲಾದ ಸ್ವಾರ್ ನಟರ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಂದನವನದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಾಕೆ. ರಚಿತಾ ರಾಮ್ ಇಲ್ಲಿಯವರೆಗೆ ಅಭಿನಯಿಸಿರುವ ಬಹುತೇಕ ಚಿತ್ರಗಳು ಹಿಟ್ ಚಿತ್ರಗಳ ಪಟ್ಟಿಯಲ್ಲಿರುವುದರಿಂದ, ಚಿತ್ರರಂಗದಲ್ಲೂ ಈಕೆಗೆ ಸಾಕಷ್ಟು ಬೇಡಿಕೆ ಇದೆ. ರಚಿತಾ ಸಿನಿ ಕೆರಿಯರ್ನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುವಾಗಲೇ, ಕಳೆದ ಒಂದು ವರ್ಷದಿಂದ ರಚಿತಾ ಅನಗತ್ಯ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾ ಗುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದ ರಚಿತಾ, ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿದ್ದರು. ರಚಿತಾ ಈ ನಿಲುವಿನ ಬಗ್ಗೆ ಚಿತ್ರರಂಗದಿಂದ, ಪ್ರೇಕ್ಷಕರಿಂದ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇವೆಲ್ಲವೂ ಮುಗಿಯಿತು ಎನ್ನುವಾಗಲೇ ಐ ಲವ್ ಯು ಚಿತ್ರದಲ್ಲಿ ರಚಿತಾ ಅವರ ಹಾಟ್ ಆ್ಯಂಡ್ ಬೋಲ್ಡ್ ಲುಕ್ ಬಗ್ಗೆ ಮಾತುಗಳು ಶುರುವಾದವು.
ಕೆಲವರು ಐ ಲವ್ ಯು ಚಿತ್ರದಲ್ಲಿ ರಚಿತಾ ಅವರ ಬೋಲ್ಡ್ ಲುಕ್ ನೋಡಿ ಮೆಚ್ಚಿಕೊಂಡರೆ, ಇನ್ನು ಕೆಲವರು “ರಚಿತಾಗೆ ಇವೆಲ್ಲ ಬೇಕಾ?’ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಟ್ರೋಲ್ ಆಗುತ್ತಿದ್ದಂತೆ, ಇದ್ದಕ್ಕಿದ್ದಂತೆ ಎಚ್ಚೆತ್ತ ರಚಿತಾ, ಮಾಧ್ಯಮ ಗಳ ಮುಂದೆ “ಈ ಪಾತ್ರದ ಬಗ್ಗೆ ನನಗೇನೂ ಗೊತ್ತಿಲ್ಲ. ಇಂಥ ಪಾತ್ರ ಮಾಡ ಬಾರದಿತ್ತು. ನಾನು ತಪ್ಪು ಮಾಡಿದೆ. ಉಪೇಂದ್ರ ಹೇಳಿದ್ದರಿಂದ ಈ ಪಾತ್ರ ಮಾಡಿದೆ. ಮುಂದೆ ಇಂಥ ಪಾತ್ರ ಮಾಡಲ್ಲ’ ಅಂಥೆಲ್ಲ ತಡಬಡಾಯಿಸಿದ್ದಾರೆ.
ರಚಿತಾ ನೀಡಿದ ಇಂಥ ಹೇಳಿಕೆ ಸಹಜ ವಾಗಿಯೇ ಐ ಲವ್ ಯು ಚಿತ್ರತಂಡಕ್ಕೆ ಇರುಸು ಮುರುಸು ಉಂಟಾಗುವಂತೆ ಮಾಡಿದೆ. ಅದರಲ್ಲೂ ರಚಿತಾ ರಾಮ್ ಈ ಹೇಳಿಕೆಗೆ ಉಪ್ಪಿ ಫ್ಯಾನ್ಸ್ ಅಂತೂ ಕೆಂಡಾಮಂಡಲ ಆಗಿದ್ದಾರೆ. ಅಷ್ಟೇ ಏಕೆ, ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ರಚಿತಾ ವಿರುದ್ದ ಗರಂ ಆಗಿದ್ದಾರೆ. ಇನ್ನು ಸ್ವತಃ ಉಪೇಂದ್ರ ಕೂಡ, “ಪಾತ್ರವನ್ನು ಒಪ್ಪಿಕೊಳ್ಳುವ ಮೊದಲು, ಅಭಿನಯಿಸುವ ಮೊದಲು ಇಂಥ ವಿಷಯಗಳ ಬಗ್ಗೆ ಯೋಚಿಸಬೇಕು. ಕಲಾವಿದರಾಗಿ ಅಭಿನಯಿಸಿದ ನಂತರ ಅದರ ಬಗ್ಗೆ ಯೋಚಿಸಲು ಹೋಗಬಾರದು’ ಅಂತ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ಇದೆಲ್ಲದರ ನಡುವೆ ರಚಿತಾ ಅಭಿನಯದ ಹೊಸಚಿತ್ರ 100 ಇತ್ತೀಚೆಗೆ ಸೆಟ್ಟೇರಿದೆ. ಇನ್ನೂ ಎರಡು-ಮೂರು ಹೊಸ ಚಿತ್ರಗಳಲ್ಲೂ ರಚಿತಾ ರಾಮ್ ಹೆಸರು ಕೇಳಿ ಬರುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಸುದ್ದಿಗಳು ಹೊರಬೀಳಬೇಕಿದೆ. ಅದೇನೆಯಿರಲಿ, ಇನ್ನಾದರೂ ಗುಳಿಕೆನ್ನೆ ಹುಡುಗಿ ರಚಿತಾ ರಾಮ್, ಇಂಥ ಕಾಂಟ್ರವರ್ಸಿಗಳಿಂದ ದೂರವಿರಲಿ ಅನ್ನೋದು ಅವರ ಅಭಿಮಾನಿಗಳ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ