ಸಂಗೀತ ಚಿಂತನೆ

ಒಂದು ಪುಸ್ತಕದ ಕುರಿತು ಹೇಳುವ ನೆಪದಲ್ಲಿ...

Team Udayavani, Feb 2, 2020, 5:39 AM IST

kat-31

ಲೇಖಕ ಸಚ್ಚಿದಾನಂದ ಹೆಗಡೆಯವರು ಬರೆದ ಈ ಪುಸ್ತಕದ ಹೆಸರು ಸ್ವರ ವಿನ್ಯಾಸ. ಇಲ್ಲಿನ ಲೇಖನಗಳು ಮುಖ್ಯವಾಗಿ ಸಂಗೀತಕ್ಕೆ ಮತ್ತು ವಿನ್ಯಾಸಕ್ಕೆ (ಡಿಸೈನಿಂಗ್‌) ಸೇರಿದವಾದರೂ ನನ್ನ ಕ್ಷೇತ್ರ ಸಂಗೀತವಾದ್ದರಿಂದ ವಿನ್ಯಾಸ ಎನ್ನುವ ಶಬ್ದವನ್ನು ಸ್ವರಕ್ಕೇ ಸೇರಿಸಿ ಗ್ರಹಿಸಲು ಪ್ರಯತ್ನಿಸುವೆ.

ಸಂಗೀತದ ಬಗೆಗಿನ ಆಳವಾದ ಚಿಂತನೆ ಮತ್ತು ಪ್ರಯೋಗಶೀಲತೆ ಕಲಾವಿದನನ್ನು ಗ್ಯಾಲರಿಯ ಕಡೆಗೆ ಮುಖ ಮಾಡಲು ಕೊಡುವುದಿಲ್ಲ. ಅದನ್ನು ಕಿಶೋರಿ ತಾಯಿ ಮತ್ತು ಕುಮಾರ ಗಂಧರ್ವರಲ್ಲಿ ಪ್ರಖರವಾಗಿ ಕಂಡಿದ್ದೇನೆ. ಜಾಗದೊಡನೆ ಅಂದರೆ ಯಾವ ಊರು, ಯಾವ ಹಾಲ್‌ ಅಥವಾ ಯಾರ ಮುಂದೆ ಅವರಿಗೆ ಮುಖ್ಯವಾಗುವುದಿಲ್ಲ. ಅವರ ಸಂಬಂಧವೇನಿದ್ದರೂ ಸಂಗೀತದೊಡನೆ ಅಷ್ಟೆ.

ಈ ಪುಸ್ತಕದಲ್ಲಿ ಘರಾಣಾದ ಪ್ರಸ್ತಾಪ ಇದೆ. ಒಂದೇ ಗುರುವಿನ ಹತ್ತು ಶಿಷ್ಯರು ಹತ್ತು ರೀತಿಯಲ್ಲಿ ಹಾಡುತ್ತಾರೆ. ಈಗಿನ ಆಧುನಿಕ ಸಂಪರ್ಕ ಸಾಧನಗಳಿಂದಾಗಿ ವಿದ್ಯಾರ್ಥಿ ಎಲ್ಲರನ್ನೂ ಕೇಳುತ್ತಾನೆ, ತನಗೆ ಹೊಂದುವುದನ್ನು ಸ್ವೀಕರಿಸುತ್ತಾನೆ. ಈ ಸಂದರ್ಭದಲ್ಲಿ ಕುಮಾರ ಗಂಧರ್ವರ ಮಾತೊಂದು ನನಗೆ ನೆನಪಾಗುತ್ತದೆ. ಅದು ಹೀಗಿದೆ, “ಘರಾಣಾ ಎನ್ನುವುದು ಲಾಸ್ಟ್‌ ಕಾಪಿ ಆಫ್ ಒರಿಜಿನಲ್‌’ ಈ ವಾಕ್ಯ ಎಲ್ಲವನ್ನೂ ಹೇಳುತ್ತಿದೆ ನೋಡಿ.

ಸ್ವರಗಳ ಹುಡುಕಾಟ ಹೊಸದೊಂದರ ಹುಡುಕಾಟವಲ್ಲ, ಇದ್ದದ್ದರ ಹುಡುಕಾಟ. ಸ್ವರಗಳನ್ನು ಒಲಿಸಿಕೊಳ್ಳುವ ನಿರಂತರ ಪ್ರಯತ್ನವಷ್ಟೇ. ಹಾರ್ಮೋನಿಯಂ ಬಗೆಗಿನ ದೀರ್ಘ‌ ಲೇಖನವನ್ನು ಈ ಕೃತಿಯಲ್ಲಿ ಗಮನಿಸಿದೆ. ಹಾರ್ಮೋನಿಯಂ ಜೊತೆಗಿನ ಬಾಲ್ಯದ ಸಂಬಂಧದಿಂದ ಪ್ರಾರಂಭವಾಗಿ, ಅದರ ಮೇಲಿನ ಬ್ಯಾನ್‌ ಇತ್ಯಾದಿಗಳ ಬಗ್ಗೆ ಚರ್ಚೆಯಾಗಿ, ಸಾರಂಗಿ ಇತ್ಯಾದಿ ತಂತು ವಾದ್ಯಕ್ಕೆ ಹೋಲಿಸಿ ಹಾರ್ಮೋನಿಯಂನ ಮಿತಿಯ ಬಗ್ಗೆ ಉಲ್ಲೇಖೀಸುತ್ತಾರೆ. ಹಾರ್ಮೋನಿಯಂ ಯಾಕೆ ಅಷ್ಟು ಪೂರಕವಾಯಿತು ಎಂಬುದನ್ನೂ ಗಮನಿಸಬೇಕು. ಸಂಗೀತಗಾರನಾಗಿ ನನ್ನ ವೈಯಕ್ತಿಕ ಅನುಭವದಿಂದ ಹೇಳುವುದಾದರೆ ಹೆಚ್ಚಾಗಿ ಸಾರಂಗಿ ಸಾಥ್‌ ಮಾಡುವವರು ನಾವು ಮುಂದುವರಿದಂತೆ ಅವರು ಹಿಂಬಾಲಿಸದೇ ನಮ್ಮನ್ನು ರಿಪೀಟ್‌ ಮಾಡಲು ತೊಡಗುತ್ತಾರೆ. ಆಗ ಹಾಡುವವನಿಗೆ ಗೊಂದಲವೂ ಆಗುತ್ತದೆ. ಪೂರ್ವನಿರ್ಧಾರಿತವಲ್ಲದ, ಆ ನಿರ್ದಿಷ್ಟ ಸಮಯ, ವಾತಾವರಣ ಮತ್ತು ಗಾಯಕನ ಆ ಸಂದರ್ಭದ ಮನೋಧರ್ಮಕ್ಕೆ ಹುಟ್ಟುವ ಆಶು ಪ್ರಸ್ತುತಿಗೆ ಈ ರಿಪೀಟ್‌ ಪದ್ಧತಿ ಸ್ವಲ್ಪ ತ್ರಾಸು ಕೊಡುವುದುಂಟು. ಆದರೆ, ಹಾರ್ಮೋನಿಯಂ ಸಾಥ್‌ನಲ್ಲಿ ಹಾಗಾಗುವುದು ಕಡಿಮೆ.ಅವರು ನಮ್ಮನ್ನು ಅನುಸರಿಸುತ್ತ ನಮ್ಮೊಡನೆಯೇ ಕ್ರಮಿಸುತ್ತಾರೆ. ಇಲ್ಲಿ ಬಣ್ಣಗಳು ಪ್ರತ್ಯೇಕವಾಗದೇ ಪೂರಕವಾಗುತ್ತ ಒಂದಾಗುತ್ತವೆ. ನೀವು ಇದನ್ನು ವಾದಕರಿಗೆ ಸಂಬಂಧಿಸಿದ್ದು ಎಂದು ಹೇಳಬಹುದು. ನಾನು ಇಲ್ಲಿ ಸಾಂದರ್ಭಿಕವಾಗಿ ಹೇಳಬೇಕಾದುದೇನೆಂದರೆ ಇದರಲ್ಲಿ ಸಂಗೀತ ವಾದ್ಯದ ಮೂಲ ಸ್ವಭಾವ ಮತ್ತು ಅದರ ಮಿತಿಯ ಪಾಲು ಬಹುದೊಡ್ಡದಿದೆ.

ಈ ತರಹದ ಸಂಗೀತ ಸಂಬಂಧಿ ಚಿಂತನೆಯ ಲೇಖನಗಳು ಇನ್ನೂ ಬರಲಿ.

ಸಚ್ಚಿದಾನಂದ ಹೆಗಡೆಯವರು ಬರೆದ ಸ್ವರವಿನ್ಯಾಸ ಲೇಖನಗಳ ಸಂಕಲನವು ಇಂದು ಲೋಕಾರ್ಪಣೆಗೊಳ್ಳುತ್ತಿದೆ.

ಪಂ. ಹಾಸಣಗಿ ಗಣಪತಿ ಭಟ್‌

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.