ಮಯೂರಿ ನಾಟ್ಯಮಯೂರಿ


Team Udayavani, Sep 2, 2018, 6:00 AM IST

2.jpg

ಎಲ್ಲಾ ದೇವರ ಆಶೀರ್ವಾದ …’
ಹಾಗಂತ ಹೇಳಿ ಒಮ್ಮೆ ನಕ್ಕರು ಮಯೂರಿ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮಯೂರಿ ಕೈಯಲ್ಲಿ ಈಗ ಏಳು  ಸಿನೆಮಾಗಳಿವೆ. ಸದ್ಯದಲ್ಲೇ ಅವರು ಒಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಅಲ್ಲಿಗೆ ಎಲ್ಲಾ ಕೂಡಿದರೆ, ಎಂಟು ಚಿತ್ರಗಳ ಟೈಟಲ್‌ ಕಾರ್ಡ್‌ಗಳಲ್ಲಿ ಮಯೂರಿ ಹೆಸರನ್ನು ಕಾಣಬಹುದು. ಇದೆಲ್ಲಾ ಹೇಗೆ ಸಾಧ್ಯ ಎಂದರೆ, ಅವರಿಂದ ಬರುವ ಉತ್ತರ “ಎಲ್ಲಾ ದೇವರ ಆಶೀರ್ವಾದ …’

ಅಶ್ವಿ‌ನಿ ನಕ್ಷತ್ರದ ಮಯೂರಿ ಈಗ ಚಿತ್ರರಂಗದಲ್ಲಿ ಸಖತ್‌ ಬಿಝಿಯಾಗಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ, ನನ್ನ ಪ್ರಕಾರ, 8 ಎಂಎಂ, ಮೌನಂ, ಸಿಗ್ನೇಚರ್‌  ಮತ್ತು ರುಸ್ತುಂ ಚಿತ್ರಗಳಲ್ಲಿ ನಟಿಸಿರುವ ಅವರು, ಹರಿಕೃಷ್ಣ ನಾರಾಯಣಿ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಪುನೀತ್‌ ಶರ್ಮನ್‌ ಎನ್ನುವವರು ಹೇಳಿರುವ ಒಂದು ಕಥೆ ಇಷ್ಟವಾಗಿದೆ. ಅನಾದ್ಯಂತ ಎಂಬ ಹೆಸರಿನ ಈ ಚಿತ್ರ ಮಹಿಳಾ ಪ್ರಧಾನವಾಗಿದ್ದು, ಸದ್ಯದಲ್ಲೇ ಆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದೆಲ್ಲದರ ಜೊತೆಗೆ ಮಜಾಭಾರತ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಅವರು ಭಾಗವಹಿಸುತ್ತಿದ್ದಾರೆ.

ತಾನು ಬಹಳ ಅದೃಷ್ಟವಂತೆ ಎನ್ನುವ ಮಯೂರಿ, “”ಕಥೆ ರೆಡಿ ಮಾಡಿಕೊಂಡು ಬರುವ ನಿರ್ದೇಶಕರೆಲ್ಲ- ನಿಮ್ಮನ್ನ ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡಿದ್ದೇವೆ- ಎನ್ನುತ್ತಾರೆ. ಆ ನಿಟ್ಟಿನಲ್ಲಿ ನಾನು ಬಹಳ ಅದೃಷ್ಟವಂತೆ. ಬಹಳ ವಿಭಿನ್ನವಾದ ಚಿತ್ರಗಳು ಮತ್ತು ಪಾತ್ರಗಳು ಸಿಗುತ್ತಿವೆ. ಒಂದಕ್ಕೊಂದು ಲಿಂಕ್‌ ಇರದ ಚಿತ್ರಗಳು ಮತ್ತು ಪಾತ್ರಗಳು ಸಿಗುತ್ತಿವೆ. ಎಲ್ಲಾ ಚಿತ್ರಗಳನ್ನೂ ಮನಸಾರೆ ಒಪ್ಪಿಕೊಂಡು ನಟಿಸುತ್ತಿರುವೆ. ಪ್ರತಿಯೊಂದು ಪಾತ್ರದಲ್ಲೂ ಇನ್ವಾಲ್‌Ì ಆಗಿ, ಬಹಳ ಎಂಜಾಯ್‌ ಮಾಡಿಕೊಂಡು ನಟಿಸುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥವೂ ಇದೆ. ಚಿತ್ರೀಕರಣದ ಕೊನೆಯ ದಿನ ನಿರ್ದೇಶಕರು ಬಂದು, ಬಹಳ ಚೆನ್ನಾಗಿ ನಟಿಸಿದ್ದೀರಿ- ಎಂದರೆ ಅಷ್ಟೇ ಸಾಕು. ಹಾಗನಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮ ಹಾಕುತ್ತಿದ್ದೀನಿ” ಎನ್ನುತ್ತಾರೆ ಮಯೂರಿ.

ಅಶ್ವಿ‌ನಿ ನಕ್ಷತ್ರ ಧಾರಾವಾಹಿಯಿಂದ ಇಲ್ಲಿಯವರೆಗೂ ತನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳಿಕೊಳ್ಳುತ್ತಾರೆ ಮಯೂರಿ. “”ನಾನು ಮೂಲತಃ ನಿರೂಪಕಿಯಾದವಳು. ಧಾರಾವಾಹಿಗೆ ಒಗ್ಗಿಕೊಳ್ಳುವುದು ಕಷ್ಟವಾಗಿತ್ತು. ಅಷ್ಟೇ ಅಲ್ಲ, ಕೂತು ಮಾತನಾಡುವುದಕ್ಕೇ ಕಷ್ಟವಾಗುತ್ತಿತ್ತು. ಹಾಗಾಗಿ ನಿಂತೇ ಮಾತನಾಡುತ್ತಿದ್ದೆ. ಕ್ರಮೇಣ ಅದರಿಂದೆಲ್ಲಾ ಆಚೆ ಬರಬೇಕು ಅಂತನಿಸಿತು. ಕೊನೆಗೆ ಕನ್ನಡಿ ಮುಂದೆ ಪ್ರಾಕ್ಟೀಸ್‌ ಮಾಡಿ ಅಭಿನಯಿಸುತ್ತಿದ್ದೆ. ಕ್ರಮೇಣ ಕೆಲಸ ಮಾಡುತ್ತ ಮಾಡುತ್ತ ಸಹಜವಾಗಿ ನಟಿಸುವುದಕ್ಕೆ ಸಾಧ್ಯವಾಯಿತು” ಎನ್ನುತ್ತಾರೆ ಮಯೂರಿ.

ಅಶ್ವಿ‌ನಿ ನಕ್ಷತ್ರ ತನಗೆ ದೊಡ್ಡ ಮಟ್ಟದಲ್ಲಿ ಬ್ರೇಕ್‌ ನೀಡಿತು ಎಂದು ನೆನಪಿಸಿಕೊಳ್ಳುವ ಮಯೂರಿ, “”ಈಗಲೂ ನನಗೆ ಕಿರುತೆರೆಯಿಂದ ಅವಕಾಶಗಳು ಬರುತ್ತಲೇ ಇರುತ್ತದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು ಮತ್ತು ಹಿಂದಿಯಿಂದಲೂ ಅವಕಾಶಗಳು ಬರುತ್ತಿವೆ. ಕಿರುತೆರೆಯಲ್ಲಿ ನಟಿಸಬಾರದು ಅಂತೇನಿಲ್ಲ. ಆದರೆ, ಧಾರಾವಾಹಿಗಳಲ್ಲಿ ನಟಿಸಿದರೆ, ಬಲ್ಕ್ ಡೇಟ್ಸ್‌ ಕೊಡಬೇಕಾಗುತ್ತದೆ. ಒಟ್ಟಿಗೆ 15-20 ದಿನ ಡೇಟ್ಸ್‌ ಕೊಟ್ಟು ನಟಿಸಬೇಕಾಗುತ್ತದೆ. ಈಗ ಚಿತ್ರಗಳಲ್ಲಿ ಬಿಝಿ ಇರುವುದರಿಂದ, ಅಷ್ಟೊಂದು ದಿನ ಒಟ್ಟಿಗೇ ಡೇಟ್ಸ್‌ ಕೊಡುವುದು ಕಷ್ಟವಾಗುತ್ತದೆ. ಹಾಗಾಗಿ ಕಿರುತೆರೆ ಕಡೆ ಹೋಗಿಲ್ಲ. ಸದ್ಯಕ್ಕೆ ಮಜಾಭಾರತದಲ್ಲಿ ಜಡ್ಜ್ ಆಗಿದ್ದೇನೆ. ಅಶ್ವಿ‌ನಿ ನಕ್ಷತ್ರಕ್ಕಿಂತ ಮಿಗಿಲಾದದ್ದು ಏನಾದರೂ ಬಂದರೆ, ಮುಂದೊಂದು ದಿನ ಖಂಡಿತಾ ನಟಿಸುತ್ತೇನೆ” ಎನ್ನುತ್ತಾರೆ ಮಯೂರಿ.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.