ಜನವರಿ 30- ಗಾಂಧಿ ಪುಣ್ಯತಿಥಿ


Team Udayavani, Jan 28, 2018, 11:40 AM IST

Vaidehi11.jpg

ಮೂರು ರೇಖೆಯಲಿ ಚಿತ್ರ ಬಿಡಿಸಿದರೂ  ಗಾಂಧಿ ಮೂಡಲಿಲ್ಲ ಮೂರು ಮುನ್ನೂರು ಶಬ್ದ ಬರೆದರೂ ಆತನು ಸಿಗಲಿಲ್ಲ  ಮೂರು ಮಂಗಗಳ ಆಡಿ ತೋರಿದರು  ಆತ ಕಾಣಲಿಲ್ಲ

ಮೂರು ಬಣ್ಣಗಳ ಬಳಿದು ತಂದರು ನಕ್ಕಂತಾಯಿತೆ ಉದ್ದ?  ಟೊಪ್ಪಿ ತೊಟ್ಟರೂ ಕಳಚಿ ಇಟ್ಟರೂ  ಆತನೆಲ್ಲಿ ಇದ್ದ?

ಸರ್ತ ಕುಳಿತರು ಚರಕ ಸುತ್ತಿದರೂ ಮಂದಿ ಮಾಗಧವಂದಿ ಖಾದಿ ತೊಟ್ಟರೂ  ಭಾಷಣ ಮಳೆಯಲಿ ತೋಯಿಸಿ ನೆನೆದರೂ  ತಾತನ ಸುಳಿವಿಲ್ಲ. ಉಪವಾಸಕೆ ಹಾ! ಅಪಹಾಸವೆ ಗತಿ ಗಾಂಧಿ ದಕ್ಕಲಿಲ್ಲ  ರಾಮ ರಾಮ ಹೇ ರಾಮ ಪ್ರಾರ್ಥನಾ  ಮಂತ್ರಕುದುರಲಿಲ್ಲ ಯಂತ್ರ ತಂತ್ರಕೂ ಕಂಪ್ಯೂಟರಿಗೂ ವೈಷ್ಣವ ಜನತೋ ಪತಿತ ಪಾವನಕೂ ಭಜನೆ ಹಾರ್ಮನೀ ತಾಳ ತಂಬೂರಿಗೂ ಸಿಗುವ ಸಿದ್ಧನಲ್ಲ 

ಬೋಳುತಲೆ ಮತ್ತು ಬೊಚ್ಚುಬಾಯಿಯೂ ತುಂಡು ಉಡುಗೆ ಜೊತೆ ಮೇಲು ಹೊದಿಕೆಯೂ ದಂಡ ಕನ್ನಡಕ ಧಾಪು ನಡಿಗೆಯೂ ಆಚೆಗೀಚೆಗಿನ ಅನುಯಾಯಿನಿಯರು ನಾಡಿನುತ್ಸವದಿ ಸ್ತಬ್ದ ಚಲಿಸಿದರೂ ಗಾಂಧಿ ನಾಡಿ ಇಲ್ಲ. 

ಹುಡುಕುತ ಹುಡುಕುತ ದೇಶ ತಿರುಗಿದರೂ  ಸಂಶೋಧಿಸುತಾ ಲೋಕ ಅಲೆದರೂ ಆತನು ಸಿಗಲಿಲ್ಲ. 

ನಮ್ಮನೆಯಲ್ಲೇ  ನಮ್ಮೊಳಗಿರುವವ ಆ ಮಹಾತಮ ಜೀವ  ಕದ ತೆರೆದರೆ ಸೈ ಬಂದೇ ಬರುವವ  ಗರುವವೆ ಇಲ್ಲದವ ಕರೆಗೋ ಕೊಡುವವ ಕಂಬನಿ ತಿಳಿವವ  ಎಂದೆಲ್ಲಾ ಖ್ಯಾತನವ  ಎಲ್ಲಿ ಕರಗಿ ಹೋದ?

ಮರುಗಿದನೇ ಅವ ಕರಗಿದನೇ  ಒರಗಿದನೇ ಅವ ಶಾಶ್ವತದಲ್ಲಿ ನಮ್ಮೊಡಲಿನ ಒಳಸಂಚಿನಲಿ? ಒಳಗಿದ್ದೇ ಒಳ ಬೇಗೆಯಲಿ?   ಸರಳ ಕಾಣುವ ಸುಲಭ ಕಾಣುವ ಸರಳ ಸುಲಭವಲ್ಲ ಸರಳ ಮಾತ್ರನೇ? ಮರುಳನು ಗಾಂಧಿ  ಮರುಳು ಸರಳವಲ್ಲ  ಮರುಳೆ,  ಗಾಂಧಿ ಸರಳನಲ್ಲ 

ವೈದೇಹಿ 

ಟಾಪ್ ನ್ಯೂಸ್

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.