ಈಗ ತುಂಬ ಹರ್ಷಿಕಾ


Team Udayavani, Nov 5, 2017, 6:10 AM IST

Harshika-Poonachcha-(13).jpg

ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ರೇ ಚಿತ್ರದ ನಂತರ ಹರ್ಷಿಕಾ ಪೂಣಚ್ಚ ಅವರನ್ನು ತೆರೆಯ ಮೇಲೆ ನೋಡಿದ್ದು ಕಡಿಮೆ ಎಂದರೆ ತಪ್ಪಿಲ್ಲ. ಈ ಸಮಯದಲ್ಲಿ ಅವರು ಚಿಟ್ಟೆ ಮತ್ತು ಉಪೇಂದ್ರ ಮತ್ತೆ ಬಾ ಚಿತ್ರಗಳಲ್ಲಿ ನಟಿಸಿದರಾದರೂ, ಅವಿನ್ನೂ ಬಿಡುಗಡೆಯಾಗಿಲ್ಲ. ಅವೆರಡೂ ಚಿತ್ರಗಳ ಬಿಡುಗಡೆಗೆ ಕಾಯುತ್ತಿರುವ ಹರ್ಷಿಕಾ, ಇದೀಗ ಸದ್ದಿಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಮಲಯಾಳ ಮತ್ತು ತಮಿಳಿನ ತಲಾ ಒಂದೊಂದು ಚಿತ್ರಗಳಲ್ಲಿ ಹರ್ಷಿಕಾ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಪೈಕಿ ಮೊದಲಿಗೆ ಮಲಯಾಳ ಚಿತ್ರ ಶುರುವಾಗುತ್ತದಂತೆ. ಈ ಚಿತ್ರಕ್ಕೆ  ಚಾರ್‌ಮಿನಾರ್‌ ಎಂಬ ಹೆಸರನ್ನು ಇಡಲಾಗಿದ್ದು, ಅಜಿತ್‌ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ವಿಲನ್‌ ಆಗಿ ನಟಿಸಿರುವ ಅಶ್ವಿ‌ನ್‌ ಕುಮಾರ್‌, ಈ ಚಿತ್ರದ ಹೀರೋ. ಮಲಯಾಳ ಚಿತ್ರದಲ್ಲಿ ತಮಿಳು ನಟನ ಜೊತೆಗೆ ಪರದೆ ಹಂಚಿಕೊಳ್ಳುತ್ತಿರುವ ಹರ್ಷಿಕಾ, ತಮಿಳಿನಲ್ಲಿ ಮಲಯಾಳ ನಟರೊಬ್ಬರ ಜೊತೆಗೆ ನಟಿಸುತ್ತಿರುವುದು ವಿಶೇಷ. ಮಲಯಾಳದ ಜನಪ್ರಿಯ ನಟ ದುಲ್ಕರ್‌ ಸಲ್ಮಾನ್‌ರ ಕಸಿನ್‌ ಆಗಿರುವ ಮಕೂºಲ್‌ ಸಲ್ಮಾನ್‌ ಅಭಿನಯದ ತಮಿಳು ಚಿತ್ರವಾದ ಉನ್‌ ಕಾದಲ್‌ ಇರಂದಾಲ್‌ ನಲ್ಲಿ ಹರ್ಷಿಕಾ ನಟಿಸುತ್ತಿದ್ದಾರಂತೆ.

ಇದಕ್ಕೂ ಮುನ್ನ ಒಂದೆರೆಡು ತೆಲುಗು ಚಿತ್ರಗಳಲ್ಲಿ ನಟಿಸಿದ ಅನುಭವವಿದ್ದ ಹರ್ಷಿಕಾಗೆ ಈಗ ಒಂದು ತಮಿಳು ಮತ್ತು ಒಂದು ಮಲಯಾಳಂ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಅವಕಾಶದಿಂದ ಸಾಕಷ್ಟು ಖುಷಿಯಾಗಿರುವ ಅವರು, ಎರಡೂ ಚಿತ್ರಗಳಲ್ಲಿ ನಟಿಸುವುದಕ್ಕೆ ಎದುರು ನೋಡುತ್ತಿದ್ದಾರೆ.

ಎಲ್ಲಾ ಸರಿ ಅವರ್ಯಾಕೆ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸುತ್ತಿಲ್ಲ ಎಂಬ ಪ್ರಶ್ನೆ ಸಹಜ. ಹರ್ಷಿಕಾ ನಟಿಸುವುದಕ್ಕೇನೋ ರೆಡಿ. ಆದರೆ, ಕೆಲವು ಆರೋಪಗಳನ್ನು ಕೇಳಿಕೇಳಿ ಸಾಕಾಗಿ ಹೋಗಿದೆಯಂತೆ. ಪ್ರಮುಖವಾಗಿ ಹರ್ಷಿಕಾ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಾರೆ, ಅವರು ತುಂಬಾ ಚೂÂಸಿಯಾಗಿದ್ದಾರೆ, ಅವರ ಡಿಮ್ಯಾಂಡ್‌ಗಳು ಸಾಕಷ್ಟಿವೆ … ಹೀಗೆ ಹಲವು ಆರೋಪಗಳನ್ನು ತಮ್ಮ ಬಗ್ಗೆಯೇ ತಾವು ಕೇಳಿದ್ದಾರೆ ಹರ್ಷಿಕಾ. ಅಷ್ಟೇ ಅಲ್ಲ, ಅವಕಾಶ ಕೊಡುವುದಕ್ಕೆ ಇಷ್ಟವಿಲ್ಲದಿರುವವರು, ತಮ್ಮ ಮೇಲೆ ಮಾಡುತ್ತಿರುವ ವ್ಯವಸ್ಥಿತ ಪ್ರಚಾರ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಸುಮ್ಮನಾಗಿಬಿಟ್ಟಿದ್ದಾರೆ. ಹುಡುಕಿ ಬಂದ ಅವಕಾಶಗಳನ್ನು ಒಪ್ಪಬೇಕೆಂದು ತೀರ್ಮಾನಿಸಿ, ಅದಕ್ಕಾಗಿ ಕಾಯುತ್ತಿದ್ದಾರೆ. ಹಾಗೆ ಬಂದ ಅವಕಾಶಗಳೇ ಚಾರ್‌ಮಿನಾರ್‌ ಮತ್ತು ಉನ್‌ ಕಾದಲ್‌ ಇರಂದಾಲ್‌.

ಇನ್ನು ತಾನು ನಟಿಸಿರುವ ಚಿಟ್ಟೆ ಚಿತ್ರದ ಬಗ್ಗೆ ಅವರು ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಎಂ. ಎಲ್‌. ಪ್ರಸನ್ನ ಅವರ ನಿರ್ದೇಶನ ಮತ್ತು ತಮ್ಮ ಪಾತ್ರ. “ನನ್ನ ರೋಲ್‌ ಇಲ್ಲಿ ಚಿಟ್ಟೆ ತರಹವೇ ಅಂದರೆ ತಪ್ಪಿಲ್ಲ. ಚಿಟ್ಟೆ ಹೇಗೆ ಒಂದು ಕಡೆ ಕೂರುವುದಿಲ್ಲವೋ, ನಾನು ಸಹ ಅದೇ ತರಹ. ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಷ್ಟಪಡುತ್ತಿರುತ್ತೀನಿ. ನನ್ನ ಪಾತ್ರ ಬಬ್ಲಿ ಎನ್ನುವುದಕ್ಕಿಂತ ಲೈವಿÉ ಎನ್ನುವುದು ಹೆಚ್ಚು ಸೂಕ್ತ. ಈ ಚಿತ್ರ ನನಗೆ ಸಿಕ್ಕಿದ್ದೇ ನನಗೆ ಬಹಳ ಅದೃಷ್ಟ ಎಂದರೆ ತಪ್ಪಿಲ್ಲ. ಚಿತ್ರದ ಮುಹೂರ್ತವಾದಾಗ ನಾನಿರಲಿಲ್ಲ. ಏಕೆಂದರೆ, ನಾನಾಗ ಚಿತ್ರದ ನಾಯಕಿಯಾಗಿರಲಿಲ್ಲ. ಚಿತ್ರದ ಚಿತ್ರೀಕರಣ ಶುರುವಾದಾಗ ನಾನು ನಾಯಕಿಯಾಗಿದ್ದೆ’ ಎನ್ನುತ್ತಾರೆ ಹರ್ಷಿಕಾ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.