ಗಾಳಿಯಲ್ಲಿ ಪಟ ಚಿತ್ರವು

ಮಂಗಳೂರಿನ ಆಗಸದಲ್ಲಿ ಬಣ್ಣದ‌ ಹಕ್ಕಿಗಳು

Team Udayavani, Jan 19, 2020, 4:42 AM IST

meg-7

ಎರಡು ಊರುಗಳ ನಡುವಣ ದೂರವನ್ನು ಅಳೆಯಲು, ಸೇನಾ ಮಾಹಿತಿಯನ್ನು ಕಳುಹಿಸಲು ಅಥವಾ ಒಂದೆಡೆಯಿಂದ ಇನ್ನೊಂದೆಡೆಗೆ ಸಂದೇಶ ರವಾನಿಸಲು ಹಿಂದಿನ ಕಾಲದಲ್ಲಿ ಗಾಳಿಪಟವನ್ನು ಬಳಸುತ್ತಿದ್ದರಂತೆ. ಚೀನಾದವರಂತೂ ಈ ಗಾಳಿಪಟ ತಂತ್ರವನ್ನೇ ಬಳಸಿ ಯುದ್ಧ ತಂತ್ರ ಹೂಡಿದ ಕತೆಗಳಿವೆ. ಅದಿರಲಿ, ತುಳುನಾಡಿನ ಮುಟ್ಟಾಳೆಯನ್ನೋ, ಕೇರಳದ ಕಥಕ್ಕಳಿಯನ್ನೋ ಅಥವಾ ನಮ್ಮ ಯಕ್ಷಗಾನವನ್ನೊ ವಿದೇಶಗಳಲ್ಲಿ ಪರಿಚಯಿಸಲು ಟೀಮ್‌ ಮಂಗಳೂರು ಗಾಳಿಪಟವನ್ನೇ ಬಳಸಿಕೊಂಡಿದೆ.

ಕಲಾವಿದ ಸರ್ವೇಶ್‌ ರಾವ್‌ ರೂಪಿಸಿರುವ ಟೀಮ್‌ ಮಂಗಳೂರು ಹಲವು ಬಾರಿ ವಿದೇಶಗಳಲ್ಲಿ ನಡೆದ ಗಾಳಿಪಟ ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಿದೆ. ಅದೇ ರೀತಿ ಗಾಳಿಪಟ ಹಾರಿಸುವ ಪ್ರಕ್ರಿಯೆಯನ್ನು ಮಂಗಳೂರಿನಲ್ಲಿಯೂ ಹಬ್ಬವಾಗಿಸಿ, ಸ್ಥಳೀಯರಿಗೂ ಪಟದ ವೈವಿಧ್ಯವನ್ನು ಉಣಬಡಿಸಿದವರು. ಚಳಿಗಾಲದ ತಂಪು ಗಾಳಿಯನ್ನು ಸೀಳಿಕೊಂಡು ಹಾರುವ ಬಣ್ಣದ ಪಟಗಳ ಉತ್ಸವ ಜನವರಿ 17ರಂದೇ ಆರಂಭವಾಯಿತು.

ಈ ಬಾರಿ, ಚೀನಾ, ಇಸ್ರೇಲ್‌, ಥೈಲ್ಯಾಂಡ್‌, ಇಂಡೋನೇಷ್ಯಾ, ನೆದರ್‌ಲ್ಯಾಂಡ್‌, ಸ್ವೀಡನ್‌ನ್‌ ದೇಶಗಳ ಪಟಗಳು ಪಣಂಬೂರು ಕಡಲ ದಂಡೆಯಲ್ಲಿ ಹಾರಾಡಿದವು. ವಿದೇಶಗಳ ಏರೋಫಾಯಿಲ್‌ ಗಾಳಿಪಟಗಳ ಜೊತೆಗೆ ಮಂಗಳೂರಿನ ಕಲಾಕುಸುರಿಯ ಪಟಗಳು ಮತ್ತಷ್ಟು ಆಕರ್ಷಕವಾಗಿ ಕಂಡವು. ಹೈದರಾಬಾದ್‌, ಬೆಂಗಳೂರು, ಮುಂಬೈ, ಉದಯ್‌ಪುರ ಸೇರಿದಂತೆ ಒಟ್ಟು 21 ತಂಡಗಳು ಗಾಳಿಪಟ ಹಾರಿಸಿ ಸಂಭ್ರಮಿಸಿದವು.

ಈ ಗಾಳಿಪಟ ಉತ್ಸವದಲ್ಲಿ ಮಾತಿಗೆ ಸಿಕ್ಕ ನೆದರ್‌ಲ್ಯಾಂಡ್ಸ್‌ನ ಎಂಜಿನಿಯರ್‌ ರೇಮಂಡ್‌ ಡಿ ಗ್ರಾಫ್ ಭಾರತದ ಗಾಳಿಪಟಗಳನ್ನು ತುಂಬ ಇಷ್ಟಪಟ್ಟವರು. “ಭಾರತ ಸಾಂಸ್ಕೃತಿಕ ಹಿನ್ನೆಲೆಯೇ ಅತ್ಯಂತ ಶ್ರೀಮಂತವಾಗಿದೆ. ಆದ್ದರಿಂದ ಕಥಕಳಿ, ಯಕ್ಷಗಾನದ ಗಾಳಿಪಟಗಳಲ್ಲಿ ಬಣ್ಣಗಳ ವೈಭವ ಎದ್ದು ಕಾಣುತ್ತದೆ. ಫ್ರಾನ್ಸ್‌ನಲ್ಲಿ ಟೀಮ್‌ ಮಂಗಳೂರು ತಂಡದ ಸದಸ್ಯರು ಹಾರಿಸಿದ ಪಟಗಳನ್ನು ನೋಡಿ, ನನಗೆ ಭಾರತಕ್ಕೆ ಭೇಟಿ ನೀಡಬೇಕು ಎನಿಸಿತು. ಇಲ್ಲಿ ಈ ಹಿಂದೆಯೂ ಬಂದಿದ್ದೇನೆ. ಇಲ್ಲಿನ ಆಯುರ್ವೇದ ಔಷಧೀಯ ಬಗ್ಗೆಯೂ ನನಗೆ ಬಹಳ ಗೌರವ ಮೂಡಿದೆ. ಅದು ನನ್ನ ಅನಾರೋಗ್ಯವನ್ನು ಗುಣಪಡಿಸಿದೆ. ಮಂಗಳೂರು ನಗರದಲ್ಲಿ ನಾನು ಸ್ಥಳೀಯ ಕಲಾಪ್ರಕಾರಗಳ ಬಗ್ಗೆ ತುಂಬಾ ಹುಡುಕಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿ ಬಣ್ಣಗಳ ಮೇಳೈಸುವಿಕೆಯು ನನ್ನ ಕಲ್ಪನೆಯನ್ನು ತುಂಬ ವಿಸ್ತರಿಸಿದೆ’ ಎಂದು ಹೇಳುತ್ತ ಪಟ ಹಾರಿಸಲು ಸಜ್ಜಾದರು.

2006ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಅಂತ‌ರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮೊತ್ತಮೊದಲು ಗಾಳಿಪಟ ಹಾರಿಸಿದ ಟೀಮ್‌ ಮಂಗಳೂರು ತಂಡ ಇದೀ ಗಾಳಿಪಟ ಸಂಸ್ಕೃತಿಯನ್ನು ರೂಪಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನೇಶ್‌ ಹೊಳ್ಳ, ಗಿರಿಧರ್‌ ಕಾಮತ್‌, ಪ್ರಶಾಂತ ಉಪಾಧ್ಯಾಯ, ವಿ.ಕೆ. ಸನಿಲ್‌, ಸತೀಶ್‌ ರಾವ್‌, ಪ್ರಾಣೇಶ್‌, ಅರುಣ್‌ ಕುಮಾರ್‌, ಶಶಾಂಕ್‌, ಸುಭಾಷ್‌ ಪೈ, ಪ್ರಾಣ್‌, ಜನಾರ್ದನ್‌ ಗಾಳಿಪಟ ಪ್ರೀತಿಯ ಕಲಾವಿದರು. ಇಂದು (ಜ.19) ಸಂಜೆ ಗಾಳಿಪಟ ಉತ್ಸವದ ಸಮಾರೋಪದಲ್ಲಿ ಮಂಗಳೂರಿನ ಪಣಂಬೂರು ಕಡಲ ದಂಡೆಯ ಆಕಾಶದಲ್ಲಿ ಟೀಮ್‌ ಮಂಗಳೂರು ಬಣ್ಣ ಬಣ್ಣದ ಪಟಗಳ ಮೂಲಕ ಚಿತ್ರಬಿಡಿಸಲಿದೆ.

ಶಾಲಿನಿ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.