ಜೀವನ ಪ್ರೀತಿಯ ಬದುಕು ಮತ್ತು ಬರಹ


Team Udayavani, Apr 14, 2019, 6:00 AM IST

j-5

ವಾಸ್ತವದ ಕೆಲ ಘಟನೆಗಳು ಕಥೆ-ಕಾದಂಬರಿಗಳಿಗಿಂತಲೂ ಹೃದ್ರಾವಕ ಹಾಗೂ ಆಶ್ಚರ್ಯಕರವಾಗಿರುತ್ತವೆ; ಪಠ್ಯಪುಸ್ತಕಗಳಿಗಿಂತಲೂ ಹೆಚ್ಚು ಬೋಧನಾತ್ಮಕವಾಗಿರುತ್ತವೆ. ಈ ಬದುಕು ನಮಗೆ ಒದಗಿಸಿಕೊಡುವ ಕಷ್ಟಕಾರ್ಪಣ್ಯಗಳ ಹಿಂದೆ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದಾದ ಅಮೂಲ್ಯ ಸಂದೇಶವಿರುತ್ತದೆ; ಆದ್ದರಿಂದಲೇ ಎಲ್ಲರ ಪಾಲಿಗೂ ಬದುಕೆನ್ನುವುದು ಅಮೂಲ್ಯ ಕೊಡುಗೆ ಎನ್ನುವ ಮಾತನ್ನು ನಾವು ನೀವೆಲ್ಲ ಕೇಳುತ್ತಲೇ ಬಂದಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂಥ “ಬದುಕು ಬದಲಿಸುವ’ ವಿಸ್ಮಯಕಾರಿ ಸಂಗತಿಗಳು ನಿತ್ಯವೂ ಜರಗುತ್ತಲೇ ಇರುತ್ತವೆ. ಯಾರೂ ಎಂದೂ ಕಲ್ಪಿಸಿಯೇ ಇರದಂಥ ಕೆಲ ವಿಚಿತ್ರ ಕಾಯಿಲೆಗಳು ಕೆಲವರಲ್ಲಿ ಎಳೆ ವಯಸ್ಸಿನಲ್ಲೇ ತಗುಲಿಕೊಳ್ಳುವುದುಂಟು. ಕಾಯಿಲೆ ತಗುಲಿದ ಮಗು, ಅದರ ಹೆತ್ತವರು, ಬಂಧುಗಳು, ಹಿತಚಿಂತಕರು, ಔಷಧೋಪಚಾರ ನೀಡುವ ವೈದ್ಯ ವರ್ಗದವರು ಇಂಥ ಪ್ರಕರಣಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನೆಲ್ಲ ದಾಖಲಿಸಿದರೆ ಒಬ್ಬೊಬ್ಬ ರೋಗಿಯದೂ ಒಂದೊಂದು ಬೃಹತ್ಕಾದಂಬರಿಯೇ ಆದೀತು! ಮೊಣಕಾಲಿನ ಎದ್ದ ಗಂಟೊಂದರಿಂದ ನಡೆಯಲು ಕಷ್ಟಪಟ್ಟ ಹದಿಹರೆಯದ ಹುಡುಗಿಯೊಬ್ಬಳು, ಮುಂದೆ ಅದು ಮೂಳೆಯ ಕ್ಯಾನ್ಸರ್‌ನ ಪರಿಣಾಮ ಎಂದು ತಿಳಿದಾಗ ಆಕೆ ಆ ಕಹಿವಾಸ್ತವವನ್ನು ಎದುರಿಸಿದ ಬಗೆಯನ್ನು ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ ಎಂಬ ಈ ಪುಸ್ತಕ ಬಹು ಪರಿಣಾಮಕಾರಿಯಾಗಿ ದಾಖಲಿಸಿದೆ.

ವಯಸ್ಸು ಅರಳುವ ಹೊತ್ತಿನಲ್ಲಿ ತಗುಲಿದ ಮಾರಕ ಕಾಯಿಲೆ ಒಮ್ಮೆಗೆ ತನ್ನಲ್ಲಿ ಭಯ, ಆತಂಕ, ಹತಾಶೆ, ನಿರಾಶೆಗಳನ್ನು ಮೂಡಿಸಿದರೂ ಮುಂದೆ ಅವುಗಳನ್ನು ಅದುಮಿ ಹಿಡಿದು, ಬಂದದ್ದನ್ನು ಎದುರಿಸಿ ಗೆಲ್ಲುವೆನೆಂಬ ಆತ್ಮವಿಶ್ವಾಸದಿಂದ ಗುಣಮುಖಳಾದ ರೋಚಕ ಅನುಭವ ಕಥನ ಇದು. ತನ್ನನ್ನು ಉಪಚರಿಸಿದ ವೈದ್ಯಕೀಯ ಸಿಬಂದಿಯ ವಾತ್ಸಲ್ಯದ ನಡವಳಿಕೆ ಹಾಗೂ ತನ್ನಂತೆಯೇ ಕಾಯಿಲೆ ತಗುಲಿದ ಕೆಲ ಅಪರೂಪದ ರೋಗಿಗಳ ಚೇತರಿಕೆ ಯತ್ನದ ಹಿಂದಿನ ಸಕಾರಾತ್ಮಕ ನಿಲುವು ತನ್ನ ಚೇತರಿಕೆಗೆ ನೆರವಾಯಿತು ಎಂಬ ಕೃತಜ್ಞತಾಭಾವದಿಂದ ಈ ಕಥಾನಕ ತೇವಗೊಂಡಿದೆ.

“ಈಗ ತಿರುಗಿ ನೋಡಿದರೆ ಆ ಹಳೆಯ ಶ್ರುತಿ ಹಿಂದೆಯೇ ಎಲ್ಲೋ ತಪ್ಪಿಹೋಗಿ ಜೀವನದೆಡೆಗೆ ಒಂದು ಹೊಸ ದೃಷ್ಟಿಯನ್ನಿಟ್ಟುಕೊಂಡ ಒಬ್ಬ ಹೊಸ ಶ್ರುತಿ ಕಾಣುತ್ತಾಳೆ’ ಎಂಬ “ಭರತವಾಕ್ಯ’ದಲ್ಲಿ ಲೇಖಕಿ ತನಗೆ ತಗುಲಿದ ಕಾಯಿಲೆಗೇ ಕೃತಜ್ಞತೆ ಹೇಳುತ್ತಿದ್ದಾಳೆ. ಇಂಥ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಮಾತ್ರವಲ್ಲ, ಅವರ ಮನೆಮಂದಿಯನ್ನೊಳಗೊಂಡಂತೆ ಎಲ್ಲ ಹಿತಚಿಂತಕರು ಕೂಡ ಓದಲೇಬೇಕಾದ ಪುಸ್ತಕ ಇದು.

ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…
ಲೇ.: ಶ್ರುತಿ ಬಿ.ಎಸ್‌.
ಪ್ರ.: ಗೋಮಿನಿ ಪ್ರಕಾಶನ, ಶ್ರೀ ವೀರಭದ್ರಸ್ವಾಮಿ ನಿಲಯ, ಒಂದನೇ ಮುಖ್ಯರಸ್ತೆ, ಐದನೇ ಅಡ್ಡ ರಸ್ತೆ, ವಿಶ್ವಣ್ಣ ಲೇಔಟ್‌, ಶಾಂತಿನಗರ, ತುಮಕೂರು-572102
ಮೊಬೈಲ್‌: 9986692342, 9986693113
ದ್ವಿತೀಯ ಮುದ್ರಣ: 2018 ಬೆಲೆ: ರೂ. 100

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.