ರಾಗವನ್ನು ಕೇಳಬಹುದು;ನೋಡಲೂಬಹುದು !


Team Udayavani, Feb 4, 2018, 10:55 AM IST

raga.jpg

ರಾಗವೊಂದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಮತ್ತು ಯಾವ ಕಾರಣಕ್ಕಾಗಿ ರಾಗವೊಂದನ್ನು ಸಾಮಾನ್ಯನಾಗಿ ಅರ್ಥ ಮಾಡಿಕೊಳ್ಳಬೇಕು ಎಂಬ ವಿಚಾರವು ಸಂಗೀತದ ರಸಿಕರಲ್ಲಿ ಸಾಮಾನ್ಯವಾಗಿ ಚರ್ಚೆಗೆ ಬರುತ್ತದೆ. ವಿದ್ವಾಂಸರೊಬ್ಬರ ಜೊತೆಗಿನ ಆಪ್ತವಾದ ಮಾತುಕತೆಯೊಂದರಲ್ಲಿ ಅವರು ಹೀಗೆ ಹೇಳಿದ್ದರು: “ರಾಗಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವಿದ್ದರೆ ರಾಗದ ಆಸ್ವಾದನೆ ಸುಲಭವಾಗುತ್ತದೆ ಮತ್ತು ರಾಗದ ಆನಂದ ಸುಲಭವಾಗಿ ಒಲಿಯುತ್ತದೆ’

ಉತ್ತರಕನ್ನಡ ಜಿÇÉೆಯ ಚಿಪಗೇರಿಯಲ್ಲಿ ದತ್ತಣ್ಣ ಎಂದು ನನ್ನ ಸರೀಕರೆಲ್ಲ ಕರೆಯುವ ಹಿರಿಯರೊಬ್ಬರಿ¨ªಾರೆ. ಈಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚಿಪಗೇರಿಯಂಥ ಹಳ್ಳಿಯಲ್ಲಿದ್ದು ಸುಮಾರು ಐವತ್ತಕ್ಕೂ ಹೆಚ್ಚು ರಾಗಗಳನ್ನು ಆರಂಭದ ಆಲಾಪದ ಐದು ನಿಮಿಷಗಳಲ್ಲಿಯೇ ಗುರುತಿಸುವಂಥ ಸಾಮರ್ಥ್ಯ ಅವರಲ್ಲಿದ್ದುದು ನಮಗೆಲ್ಲ ಆಗ ಸುಲಭಕ್ಕೆ ಜೀರ್ಣಿಸಿಕೊಳ್ಳಲಾಗದಂಥ ವಿಷಯ! ಇದೆಲ್ಲ ಅವರಿಗೆ ಸಾಧ್ಯವಾಗಿದ್ದು ರೇಡಿಯೋದಲ್ಲಿ ನಿಯಮಿತ ಸಮಯಗಳಲ್ಲಿ ಪ್ರಸಾರವಾಗುತ್ತಿದ್ದ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳಿಂದ. ಇದಕ್ಕೆ ವಿಪರೀತದ ಮತ್ತು ತಮಾಷೆಯ ಸಂಗತಿಯೆಂದರೆ ನಮ್ಮ ಕಾಲದ ನನ್ನಂಥ ಯುವ ಸಂಗೀತದ ವಿದ್ಯಾರ್ಥಿಗಳು ರಾಗವೊಂದರ ಲಕ್ಷಣದ ಬಗ್ಗೆ ಸಂದೇಹವು ಬಂದಲ್ಲಿ ಮಾಡುವ ಮೊದಲ ಕೆಲಸವೆಂದರೆ ಆ ರಾಗದ ಹೆಸರನ್ನು ಗೂಗಲ್‌ ಸರ್ಚ್‌ ಬಾಕ್ಸಿನಲ್ಲಿ ಟೈಪ್‌ ಮಾಡುವುದು. ನಿಜವಾಗಿಯೂ ನಾವು ಮಾಡಬೇಕಾದದ್ದು ಯಾವುದೇ ಒಂದು ಘರಾಣೆಯ ಶ್ರೇಷ್ಠ ಕಲಾವಿದರು ಹಾಡಿರುವ ಆ ರಾಗವನ್ನು ಕೇಳುವುದು. ಆದರೆ ನಮ್ಮಲ್ಲಿನ ಆಸ್ಥೆ, ಸಮಯಾನುಕೂಲ ಮತ್ತು ತುರ್ತಾಗಿ ರಾಗವೊಂದನ್ನು ಅರ್ಥ ಮಾಡಿಕೊಳ್ಳಲೇಬೇಕೆಂಬ ಗೂಗಲ್‌ ಜಮಾನಾದ ವಿಚಿತ್ರ ಹಠವೊಂದು ನಮ್ಮನ್ನು ಗೂಗಲ್‌ ಸರ್ಚ್‌ ಬಾಕ್ಸಿಗೆ ಕರೆದೊಯ್ಯುತ್ತದೆ. 

ವಾಸ್ತವದಲ್ಲಿ ಗೂಗಲ್‌ ಸರ್ಚ್‌ ಬಾಕ್ಸು ಮತ್ತು ರಾಗದ ಥಿಯರಿಯು ನಮಗೆ ರಾಗದ ಲಕ್ಷಣವೊಂದನ್ನು ಬರೆದಿಡಲು ಕಲಿಸುತ್ತದೆಯೇ ಹೊರತು ರಾಗವನ್ನು ಎಂದಿಗೂ ಕಲಿಸುವುದಿಲ್ಲ. ಪ್ರಾಯಶಃ ಅದೇ ಕಾರಣಕ್ಕೆ ಇಂದಿಗೂ ಮತ್ತು ಮುಂದೆ ಎಂದಿಗೂ ಶಾಸ್ತ್ರೀಯ ಸಂಗೀತವೆಂಬುದು ನಿಜವಾಗಿ ಗುರುಶಿಷ್ಯ ಪರಂಪರೆಯಿಂದ ಹೊರಬರುವುದಿಲ್ಲ. 

ಜೋಹಾನ್ಸ್‌ಬರ್ಗ್‌ನಲ್ಲಿ ಸರೋದ್‌ ನುಡಿಸುವ ಹಿರಿಯ ಮಿತ್ರರೊಬ್ಬರನ್ನು ಭೇಟಿಯಾದ ಒಂದು ಸಂದರ್ಭದಲ್ಲಿ ಮಾತುಕತೆಗಳು ಕುಶಲೋಪರಿಯ ಹಂತವನ್ನು ದಾಟಿ ಸಂಗೀತ ಮತ್ತು ಕಲಿಯುವಿಕೆಯ ಪ್ರಯತ್ನದ ಬದಿಗೆ ಧಾಟಿಯು ವಾಲುತ್ತಿದ್ದಂತೆ ಘರಾನಾದ ವಿಷಯಗಳೆಲ್ಲ ಬರಲಾಗಿ ಅವರು ಹೀಗೆ ಹೇಳಿದ್ದರು: “ನಮ್ಮದು ಸೋನಿ ಘರಾನಾ!’

ನಮ್ಮ ಸಂಗೀತದಲ್ಲಿರುವ ಎಲ್ಲ ಘರಾನೆಗಳೂ ನನಗೆ ಗೊತ್ತಿಲ್ಲದಿದ್ದರೂ ಕನಸಿನಲ್ಲಿಯೂ ಕೇಳಿದ ನೆನಪಿಲ್ಲವಾದ ಈ ಸೋನಿ ಘರಾನೆಯ ವಂಶಸ್ಥರು ಪೂರ್ವಜರ ಕುರಿತಾಗಿ ಮನಸ್ಸು ಅರೆನಿಮಿಷ ಒ¨ªಾಡುವ ಹೊತ್ತಿಗೆ ನನ್ನ ಕಕ್ಕಾಬಿಕ್ಕಿ ಅವಸ್ಥೆಯನ್ನು ಕಂಡು ಅವರೇ ಸಮಸ್ಯೆಯನ್ನು ಬಗೆಹರಿಸಿದರು. ವಿಶ್ವವ್ಯಾಪೀ  ಆಡಿಯೋ ಕಂಪೆನಿಯಾದ ಸೋನಿ ಕಂಪೆನಿಯೇ ನಮ್ಮ ಘರಾನಾ ಮತ್ತು ಸೋನಿ ಕಂಪೆನಿಯಿಂದ ಹೊರಟ ಎಲ್ಲ ಆಡಿಯೋ ಕ್ಯಾಸೆಟ್ಟುಗಳು ನಮ್ಮ ಗುರುಗಳು! 

ಇಂಥ ಮಾತನ್ನು ಕೇಳಿದ ನಾನು ಒಮ್ಮೆ ಮರ್ಮಶೂಲೆಯಿಂದ ತಲೆತಿರುಗಿ ಬೀಳುವ ಹಂತವನ್ನು ತಲುಪಿದರೂ ಈ ಮಹಾಶಯರ ನೇರನುಡಿ ಮತ್ತು ಆ ನೇರ ಮಾತಿನ ಹಿಂದೆ ಅಡಗಿದ್ದ ಬದುಕಿನ ವ್ಯಂಗ್ಯವು ಕಲಿಯುವಿಕೆ ಮತ್ತು ಬದುಕಿನ ಸಂಬಂಧದ ಬಗ್ಗೆ ಹೊಸ ಬಗೆಯ ಅರ್ಥವೊಂದನ್ನು ನನ್ನಲ್ಲಿ ಹೊಳೆಯಿಸಿತು. ಅವರ ಆ ಮಾತು ಏಕಕಾಲಕ್ಕೆ ಶಾಸ್ತ್ರೀಯ ಸಂಗೀತದ ಕಲಿಯುವಿಕೆಯಲ್ಲಿ ವಿಪರೀತ ಆಸಕ್ತಿಯನ್ನು ಹೊಂದಿಯೂ ಬದುಕಿನ ಕಾರಣಕ್ಕೆ ಭಾರತದಿಂದ ಹೊರಗಿರಬೇಕಾಗಿ ಬಂದು ಗುರುವಿನ ಆಶ್ರಯವನ್ನು ಹೊಂದಲಾಗದ ದೌರ್ಭಾಗ್ಯ ಮತ್ತು ಆ ದೌರ್ಭಾಗ್ಯವು ಈ ಜನ್ಮದಲ್ಲಿ ಕೊನೆಯಾಗುವಂಥದ್ದಲ್ಲವಾದ್ದರಿಂದ ಇರುವ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಂಡು ಹೋಗುವಂಥ ಸಮಚಿತ್ತದ ಭಾವ ಇವರೆಡನ್ನೂ ಸಮದೂಗಿಸಿ ಬಿಂಬಿಸುತ್ತದೆ. 

ರಾಗವೆಂಬುದನ್ನು ಕಾವ್ಯಸೌಂದರ್ಯದ ಅಂಗದಿಂದ ನೋಡಿದರೆ ಅದಕ್ಕೆ “ಬಣ್ಣ ‘ ಎಂಬ ಅರ್ಥವೂ ಇದೆ. ಒಂದೊಳ್ಳೆಯ ಹಾಡಲು ಬರುವಂಥ ಕಾವ್ಯವೊಂದನ್ನು ಬರೆದ ಭಾವಜೀವಿಗೆ ತನ್ನ ಕಾವ್ಯದ ಭಾವಕ್ಕೆ ಮತ್ತಷ್ಟು ತೀವ್ರತೆಯನ್ನು ಹಚ್ಚುವ ಹಾಡು ಬಲ್ಲ ಜೀವಿಯೊಂದರ ತಲಾಶೆಯು ಯಾವಾಗಲೂ ಇರುತ್ತದೆ. ಹಾಗೆ ಹಾಡುಬಲ್ಲ ಜೀವಿಯು ಸಿಕ್ಕಿ ತನ್ನ ಕಾವ್ಯವನ್ನು ಹಾಡಿದರೆ ಕಾವ್ಯಜೀವಿಗೆ ಸಂತೋಷ. ಆ ಹಾಡಿನಲ್ಲಿ ನಿಜವಾಗಿ ಒಂದಾಗುವುದು ಕಾವ್ಯದ ಬಣ್ಣ ಮತ್ತು ಹಾಡಿನ ರಾಗದ ಬಣ್ಣ. ಕಾವ್ಯಜೀವಿಯ ಭಾವ ಮತ್ತು ಹಾಡುಗಾರನ ಅಂತರಂಗಗಳು ಒಂದಾಗುವ ಆ ಬಣ್ಣಗಳ ಮೇಳಕ್ಕೆ ಒಂದೊಳ್ಳೆಯ ಭದ್ರಗಲ್ಲನ್ನು ಹಾಕುವುದು ಹಾಡಿನ ರಾಗ.

ಇಲ್ಲಿ ಗಮನಿಸಬೇಕಾದ ಮತ್ತೂಂದು ಅಂಶವಿದೆ. ಅತೀ ಸಾಮಾನ್ಯ ಕೇಳುಗನೂ ಅಂಥ ಹಾಡನ್ನು ಕೇಳುತ್ತಾನೆ ಮತ್ತು ರಾಗಗಳನ್ನು ಬಲ್ಲ ಸಂಗೀತಜ್ಞನೂ ಆ ಹಾಡನ್ನು ಕೇಳುತ್ತಾನೆ. ಹಾಡಿನ ಸಾಹಿತ್ಯವನ್ನು ಆನಂದಿಸಲು ಯಾವ ಪೂರ್ವತಯಾರಿಯೂ ಬೇಕಿಲ್ಲದಿದ್ದರೂ ಹಾಡಿನಲ್ಲಿ ಹೊಸತಾದ ಬಣ್ಣವೊಂದು ಇದೆ ಅಥವಾ ಇಲ್ಲ ಎಂಬುದನ್ನು ಗಮನಿಸಲು ಒಂದು ಅಭ್ಯಸಿತ ಮನಸ್ಸು ಬೇಕು ಅಥವಾ ಹಾಡುಗಳನ್ನು ಕೇವಲ ಭಾವನಾಜಗತ್ತಿನಲ್ಲಿ ಕೇಳುತ್ತ ಕಳೆಯುವ ಹುಚ್ಚು ಮನಸ್ಸು ಬೇಕು. ಈ ಎರಡು ಬಗೆಯ ಮನಸ್ಸುಗಳು ಹಾಡೊಂದನ್ನು ಹೊಕ್ಕುವ ಬಗೆಯು ವಿಭಿನ್ನವಾಗಿದ್ದರೂ ಕೊನೆಗೆ ಮೊರೆಹೋಗುವುದು, ಕಳೆದು ಹೋಗುವುದು, ಆ ಹಾಡು ಹಚ್ಚುವ ಬಣ್ಣಗಳಲ್ಲಿಯೇ.

ದಕ್ಷಿಣಆಫ್ರಿಕಾದ “ಬ್ಲೂಮ್‌ ಫೌಂಟೀನ್‌’ ಎಂಬ ನಗರದÇÉೊಂದು ಆಪ್ತ ಸಿತಾರ್‌ ಕಛೇರಿ. ವಾದಕ ಆ ರಾಗವನ್ನು ತನ್ನ ಪ್ರಯತ್ನವನ್ನು ಮೀರುತ್ತ ನುಡಿಸುತ್ತಿ¨ªಾನೆ. ಸುತ್ತ ನೆರೆದ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಇಪ್ಪತ್ತೈದೇ ಕೇಳುಗರಲ್ಲಿ ಒಬ್ಬರಿಗೂ ರಾಗಗಳ ಪರಿಚಯವಿಲ್ಲ. ಇಷ್ಟಾಗಿ ಕಾರ್ಯಕ್ರಮವು ಮುಗಿಯುವ ಹೊತ್ತಿಗೆ ಕೆಲವರ ಕಣ್ಣುಗಳಲ್ಲಿ ಆಶ್ಚರ್ಯ, ಕೆಲವರ ಕಣ್ಣುಗಳಲ್ಲಿ ದಿವ್ಯ ಪ್ರಶಾಂತ ಭಾವ. ಒಬ್ಟಾಕೆ ಬಂದು ಕಲಾವಿದನಲ್ಲಿ ಹೇಳುತ್ತಾಳೆ: “ಕಛೇರಿಯ ಉದ್ದಕ್ಕೂ ಮುಚ್ಚಿದ ಕಣ್ಣುಗಳ ಒಳಗೆ ನಾನು ಬಣ್ಣಗಳನ್ನು ನೋಡುತ್ತಿ¨ªೆ!’ 

ಸ್ವರ, ನಾದ, ಶ್ರುತಿ ಮೊದಲಾದ ಅಗತ್ಯ ಅಂಗಗಳನ್ನು ಒಳಗೊಳ್ಳುವ ಶಾಸ್ತ್ರೀಯ ಸಂಗೀತ ಗೊತ್ತಿಲ್ಲದ ಕಿವಿಗೆ ಅತ್ಯಂತ ಕಠೊರ ಎನ್ನಿಸುವ “ರಾಗ’ ಎಂಬ ಶಬ್ದವನ್ನು ಶಬ್ದದ ಹೊರತಾಗಿ ಕಣ್ಣು ಮುಚ್ಚಿ ನಿಜವಾಗಿ ನಾವು ಹೀಗೂ ನೋಡಬಹುದು. ರಾಗಕ್ಕೊಂದು ಸೌಂದರ್ಯವಿರುತ್ತದೆ ಮತ್ತು ಆ ಸೌಂದರ್ಯವು ಅದೇ ರಾಗವನ್ನು ಎಷ್ಟು ಬಾರಿ ಕೇಳಿದರೂ ಹೊಸತಾಗಿ ಕಾಣಿಸುತ್ತದೆ. ವಿಷಯ ಕೇಳಿದರೆ, ಬಣ್ಣದ ಪ್ರಮಾಣವು ಸೌಂದರ್ಯವನ್ನು ನಿರ್ಧರಿಸುತ್ತದೆ!

– ಕಣಾದ ರಾಘವ 

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.