ಲೋಕ ಕಲ್ಯಾಣ ಮಂತ್ರ, ಒಂದು ಕತೆಯಂಥ ಕತೆ !


Team Udayavani, Jan 7, 2018, 7:20 AM IST

purana.jpg

ವತ್ಸಾ, ಬಾ….” ಗುರುಗಳು ಅಕ್ಕರೆಯಿಂದ ಕರೆದರು.
ಈ ಹುಡುಗ ವಿಧೇಯನಾಗಿ ನಡೆದು ಬಂದು ಗುರುಗಳ ಎದುರು ನಿಂತು ನಮಸ್ಕರಿಸಿದ. ಅವನ ಮೈದಡವಿ ಆಶೀರ್ವದಿಸಿದ ಗುರುಗಳು ಹೀಗೆಂದರು, “”ನಿನ್ನ ಸೇವೆಯಿಂದ ಸಂತುಷ್ಟನಾಗಿದ್ದೇನೆ. ಇಂದು ಸಂಜೆ ನಿನಗೆ ಒಂದು ಮಂತ್ರ ಹೇಳಿಕೊಡಲಿದ್ದೇನೆ. ಅದನ್ನು ಪಠಿಸಿದರೆ, ವಿಶಿಷ್ಟ ಅನುಭೂತಿ ನಿನ್ನದಾಗುತ್ತದೆ” ಎಂದರು.

ಗುರುವಿನ ಈ ಮಾತು ಕೇಳಿ ಆ ಶಿಷ್ಯನಿಗೆ ಕಣ್ತುಂಬಿ ಬಂತು. “”ಗುರುವರ್ಯಾ, ನಿಮ್ಮ ಕಾಳಜಿಗೆ ಕೃತಜ್ಞತೆಗಳು. ನೀವು ಹೇಳಿಕೊಟ್ಟಿದ್ದನ್ನು ಶ್ರದ್ಧಾ ಭಕ್ತಿಯಿಂದ ಕಲಿಯುತ್ತೇನೆ. ನಿಮ್ಮ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತೇನೆ” ಎಂದ.
ಮರುದಿನ ಸಂಜೆ ಗುರುಗಳು ಹೊಸದೊಂದು ಮಂತ್ರ ಹೇಳಿಕೊಟ್ಟರು. “”ವತ್ಸಾ, ನಿನಗೆ ಈಗ ಹೇಳಿಕೊಟ್ಟಿದ್ದು ಕಲ್ಯಾಣಮಂತ್ರ. ಈ ಮಂತ್ರವನ್ನು ಶ್ರದ್ಧೆ, ಭಕ್ತಿ ಮತ್ತು ತನ್ಮಯತೆಯಿಂದ ಪಠಿಸಿದರೆ ಮೋಕ್ಷಕ್ಕೆ ದಾರಿ ಸಿಗುತ್ತದೆ. ಈ ಮಂತ್ರ ಪಠಣೆಯಿಂದ ಎಲ್ಲಾ ಬಗೆಯ ಪ್ರಾಪಂಚಿಕ ಈಷ್ಯಗಳಿಂದಲೂ ಪಾರಾಗುವುದಕ್ಕೆ ಸಾಧ್ಯವಿದೆ. ನಿನಗೀಗ ಒಂದು ಎಚ್ಚರಿಕೆಯ ಮಾತನ್ನೂ ಹೇಳಬೇಕಾಗಿದೆ. ಮೋಕ್ಷಕ್ಕೆ ದಾರಿ ತೋರಿಸುವ ಈ ಕಲ್ಯಾಣ ಮಂತ್ರವನ್ನು ಎಂಥ ಸಂದರ್ಭ ಬಂದರೂ ಬೇರೊಬ್ಬರಿಗೆ ಹೇಳಿಕೊಡಬೇಡ. ಏಕಾಂತದಲ್ಲಿರುವಾಗ ನೀನೊಬ್ಬನೇ ಇದನ್ನು ಧ್ಯಾನಿಸು. ಒಂದು ವೇಳೆ ಈ ಮಂತ್ರವನ್ನು ಉಳಿದವರಿಗೂ ಹೇಳಿಕೊಟ್ಟರೆ, ಆಗ ಸಂಕಟಗಳಿಂದ ಪಾರಾಗುವ ಸುಲಭದ ದಾರಿ ಎಲ್ಲರಿಗೂ ಗೊತ್ತಾಗಿಬಿಡುತ್ತದೆ. ಹಾಗೇನಾದರೂ ಆಗಿಬಿಟ್ಟರೆ ಕಲ್ಯಾಣ ಮಂತ್ರಕ್ಕೆ ಇರುವ ಪ್ರಾಮುಖ್ಯವೇ ಹೋಗಿ ಬಿಡುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೂ ಈ ಮಂತ್ರವನ್ನು ಮತ್ತೂ¤ಬ್ಬರಿಗೆ ಹೇಳಿಕೊಡಬೇಡ” ಎಂದರು.

“”ಹಾಗೆಯೇ ಆಗಲಿ ಗುರುಗಳೇ” ಎಂದು ಉತ್ತರಿಸಿದ ಶಿಷ್ಯ.
ಇದಾಗಿ ಎರಡು ದಿನಗಳ ನಂತರ ಆ ಊರಿನ ದೇವಾಲಯದ ಬಳಿ ಜನಜಾತ್ರೆಯೇ ಸೇರಿರುವುದೆಂದೂ, ಯಾವುದೋ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ ಎಂದೂ ಗುರುಗಳಿಗೆ ಸುದ್ದಿ ಬಂತು. ಅದುವರೆಗೂ, ಆ ಊರಿನಲ್ಲಿ ಯಾವುದೇ ವಿಶಿಷ್ಟ ಕಾರ್ಯಕ್ರಮ ನಡೆದರೂ ಆ ಬಗ್ಗೆ ಮುಂಚಿತವಾಗಿಯೇ ಗುರುಗಳಿಗೆ ಸುದ್ದಿ ಕಳಿಸಲಾಗುತ್ತಿತ್ತು. ಯಾವುದೇ ಪೂರ್ವ ಸೂಚನೆಯನ್ನೂ ಕೊಡದೆ ನಡೆಸುತ್ತಿರುವ ಈ ಕಾರ್ಯಕ್ರಮ ಯಾವುದು ಎಂದು ತಿಳಿಯುವ ಕುತೂಹಲದಿಂದ ದೇವಾಲಯದ ದಾರಿಯಲ್ಲಿ ಬಂದ ಗುರುಗಳು ಎದುರಿಗೆ ಕಂಡ ದೃಶ್ಯವನ್ನು ನೋಡಿ ಪೆಚ್ಚಾದರು. ಕಾರಣ ಎರಡು ದಿನಗಳ ಹಿಂದೆಯಷ್ಟೆ ಕಲಿತಿದ್ದ ಕಲ್ಯಾಣ ಮಂತ್ರವನ್ನು ಅವರ ಪಟ್ಟಶಿಷ್ಯ, ನೆರೆದಿದ್ದ ನೂರಾರು ಮಂದಿಗೆ ಹೇಳಿಕೊಡುತ್ತಿದ್ದ. 
“”ಈ ಮಂತ್ರ ಪಠಣದಿಂದ ಪ್ರಾಪಂಚಿಕ ಕಷ್ಟಗಳು ದೂರವಾಗುತ್ತವೆ ಎಂದು ನನ್ನ ಗುರುಗಳು ತಿಳಿಸಿದ್ದಾರೆ. ಹಾಗಾಗಿ, ಎಲ್ಲರೂ ಇದನ್ನು ತಪ್ಪದೇ ಕಲಿಯಿರಿ” ಎಂದು  ಕಿವಿಮಾತನ್ನೂ ಹೇಳುತ್ತಿದ್ದ !

ತಮ್ಮ ಶಿಷ್ಯ ಎಚ್ಚರಿಕೆಯ ಮಾತಿಗೆ ಕಿಂಚಿತ್ತೂ  ಬೆಲೆ ಕೊಡದೆ ಮೋಕ್ಷಕ್ಕೆ ದಾರಿ ತೋರುವ ಮಂತ್ರವನ್ನು ನೂರಾರು ಮಂದಿಗೆ ಹೇಳಿಕೊಟ್ಟ ಶಿಷ್ಯನ ಬಗ್ಗೆ ಗುರುಗಳಿಗೆ ಸಿಟ್ಟು  ಬಂತು. ಅವನ ಉಪದೇಶ  ಮುಗಿಯುತ್ತಿದ್ದಂತೆಯೇ “”ವತ್ಸಾ, ರಾಮಾನುಜಾ… ಏನಿದು ನಿನ್ನ ವರ್ತನೆ? ನಿನ್ನೆ ನಾನು ಹೇಳಿದ್ದ ಎಚ್ಚರಿಕೆಯ ಮಾತು ಇಷ್ಟು ಬೇಗ ಮರೆತು ಹೋಯಿತೆ? ಕಲ್ಯಾಣ ಮಂತ್ರವನ್ನು ಬೇರೆ ಯಾರಿಗೂ ಹೇಳಿಕೊಡಬೇಡ ಎಂದು ಎಚ್ಚರಿಸಿದ್ದೆ ತಾನೆ?” ಎಂದರು.

“”ಗುರುವರ್ಯಾ, ನನ್ನ ಸುತ್ತಲೂ ಇರುವ ನೂರಾರು ಮಂದಿ ಬಗೆಬಗೆಯ ಕಷ್ಟಗಳಿಂದ ನರಳುವುದನ್ನು ನಿತ್ಯವೂ ನೋಡುತ್ತಿದ್ದೇನೆ. ಅದನ್ನೆಲ್ಲ ಕಂಡ ಮೇಲೂ ಕಲ್ಯಾಣ ಮಂತ್ರದ ಲಾಭವನ್ನು ಒಬ್ಬನೇ ಪಡೆದುಕೊಳ್ಳಲು ನನಗೆ ಮನಸ್ಸು ಬರಲಿಲ್ಲ. ಹಾಗಾಗಿಯೇ ಅದನ್ನು ಎಲ್ಲರಿಗೂ ಹೇಳಿಕೊಟ್ಟೆ. ನನ್ನ ವರ್ತನೆ ಉದ್ಧಟತನದ್ದು ಅನ್ನಿಸಿದರೆ ದಯವಿಟ್ಟು ಕ್ಷಮಿಸಿ…” ಈ ಶಿಷ್ಯ ಕೈ ಮುಗಿದು ಪ್ರಾರ್ಥಿಸಿದ.

“”ನೆಮ್ಮದಿಯನ್ನು ಲೋಕಕ್ಕೆ ಹಂಚಬೇಕು ಎಂಬ ನಿನ್ನ ಸದಾಶಯವನ್ನೂ ಮೆಚ್ಚದಿರುವುದು ಹೇಗೆ?” ಎಂದುಕೊಂಡು ಗುರುಗಳೂ ಸುಮ್ಮನಾದರು.

– ಎ. ಆರ್‌. ಮಣಿಕಾಂತ್‌

ಟಾಪ್ ನ್ಯೂಸ್

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.