ಲಕ್ಷದಲ್ಲೊಂದು ದ್ವೀಪ!


Team Udayavani, Jul 1, 2018, 6:00 AM IST

1.jpg

ಅತ್ಯಂತ ಕಡಿಮೆ ವೆಚ್ಚದಲ್ಲಿ ಲಕ್ಷದ್ವೀಪಕ್ಕೆ ಹೋಗಿ ರಜೆ ಕಳೆದು ಬರಬಹುದು ಅನ್ನುವುದು ಬಹುಮಂದಿಗೆ ತಿಳಿದಿರಲಿಕ್ಕಿಲ್ಲ. ಹೌದು, ಲಕ್ಷದ್ವೀಪದ ಸಮೂಹ ದ್ವೀಪಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. 

ಲಕ್ಷದ್ವೀಪವು  39 ನಡುಗಡ್ಡೆ ಹಾಗೂ ದ್ವೀಪಗಳನ್ನು ಒಳಗೊಂಡಿದೆ. ಪ್ರವಾಸಿಗರ ಪಾಲಿಗಂತೂ ಇದು ಭೂಮಿಯ ಮೇಲಿನ ಸ್ವರ್ಗ. ಸೂರ್ಯನ ಪ್ರಭೆಯಲ್ಲಿ ಮರಳಿನೊಂದಿಗೆ ಕಾಲ ಕಳೆಯಲು, ವಿಹರಿಸಲು ಬಯಸುವವರಿಗಂತೂ ಇದು ನೆಚ್ಚಿನ ತಾಣ. ಸುಮಾರು 4200 ಚ. ಕಿ. ಮೀ. ವಿಸ್ತಾರದಲ್ಲಿ ಇಲ್ಲಿ ಸಮುದ್ರದ ನೀರಿನಿಂದ ನಿರ್ಮಾಣವಾಗಿರುವ ಸರೋವರ ಇದೆ. 36 ಚದರ್‌ ಕಿ. ಮೀ.ನಷ್ಟು ವಿಶಾಲವಾದ ನಡುಗಡ್ಡೆ ಪ್ರದೇಶ ಇಲ್ಲಿದೆ. ಒಟ್ಟು ಈ ದ್ವೀಪ ಪ್ರದೇಶ 132 ಕಿ. ಮೀ. ಉದ್ದನೆಯ ಕರಾವಳಿ ತೀರ ಆಕರ್ಷಣೆಯ ಕೇಂದ್ರವಾಗಿ ಲಭಿಸಿದೆ. ಇಲ್ಲಿನ ಈ ವಿಶಾಲ ಸ್ಥಳದಲ್ಲಿ  ಸಾಕಷ್ಟು ಕಡಲ ತೀರಗಳು, ಜಲಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ನಿತ್ಯ ನಿರಂತರವಾಗಿವೆ.

ನಿಸರ್ಗದತ್ತ ಸೌಂದರ್ಯ ಹಾಗೂ ಆಕರ್ಷಣೆ ಲಕ್ಷದ್ವೀಪ ಮೂಲ ಬಂಡವಾಳವಾಗಿದೆ. ಇಲ್ಲಿನ ಎರಡು ಪ್ರಮುಖ ನಡುಗಡ್ಡೆಗಳಾದ ಅಗತ್ತಿ ಹಾಗೂ ಬಂಗಾರಂ ಅತ್ಯಂತ ಪ್ರವಾಸಿ ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಗತ್ತಿಯು ಇಲ್ಲಿನ ಡೊಮೆಸ್ಟಿಕ್‌ ವಿಮಾನನಿಲ್ದಾಣವನ್ನು ಒಳಗೊಂಡಿದ್ದು ಅತ್ಯಂತ ಪ್ರಸಿದ್ಧ ನಡುಗಡ್ಡೆ ಎನಿಸಿದೆ. ಈ ದ್ವೀಪ ಸಮೂಹದಲ್ಲಿಯೇ ಮದ್ಯಪಾನಕ್ಕೆ ಅವಕಾಶ ಇರುವ ಏಕೈಕ ದ್ವೀಪ ಇದಾಗಿದೆ. ನೀವು ಅಲ್ಲಿದ್ದ ಸಂದರ್ಭದಲ್ಲಿ ಕಡಲ ತೀರದಲ್ಲಿ ನಿಮಗೆ ಉತ್ತಮ ಸ್ಥಳೀಯ ಖಾದ್ಯಗಳು ಸಿಗುತ್ತವೆ. ಲಕ್ಷದ್ವೀಪದ ನಾಗರಿಕರು ಸಮುದ್ರ ಜೀವಿಗಳ ಸ್ವಾದಿಷ್ಟ ತಿನಿಸು ಸಿದ್ಧಪಡಿಸುವ ಕಲೆ ಹೊಂದಿದ್ದಾರೆ. ಈ ದ್ವೀಪವು ವಿಶ್ವದಲ್ಲಿ ಸಾಕಷ್ಟು ಪ್ರಸಿದ್ಧ ಟೂನಾ ಮೀನು ಹಿಡಿಯುವ ತಾಣವೂ ಆಗಿದೆ. 

ಇಲ್ಲಿನ ಸಮುದ್ರ ಜೀವಿಗಳು ಅಂದರೆ ಮೀನು ಮತ್ತಿತರ ಜೀವಿಗಳ ಆಹಾರ ಹೇರಳವಾಗಿ ಸಿಗುತ್ತದೆ. ಈ ದ್ವೀಪ ಸಮೂಹದ ಪ್ರಮುಖ ರಫ್ತು ಉದ್ಯಮವೂ ಇದನ್ನೇ ಅವಲಂಬಿಸಿದೆ.  ಮೀನುಗಾರಿಕೆಯ ಸ್ವಾನುಭವವನ್ನು ಕೂಡ ಇಲ್ಲಿ ಪಡೆಯಬಹುದು.  ಸ್ಕೂಬಾ ಡೈವಿಂಗ್‌ತಾಣ ಕೂಡ ಇಲ್ಲಿನ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಆಕರ್ಷಣೆ. 

 ಇಲ್ಲಿನ  ಮೋಜಿನ ತಾಣಗಳು ಪ್ರವಾಸಿಗರಿಗೆ ನೈಜ ಹಾಗೂ ಮನೋಲ್ಲಾಸದ ಅನುಭವ ನೀಡುತ್ತವೆ. ನೀರಿನಾಳಕ್ಕೆ ಇಳಿದು ಈಜಲು, ನೀರಿಗೆ ಜಿಗಿಯಲು ಇಲ್ಲಿ ಸಾಕಷ್ಟು ತಾಣಗಳು ಸಿಗುತ್ತವೆ. ನೀರಿನೊಂದಿಗೆ ಮಜವಾಗಿ ಕಾಲ ಕಳೆಯುವ ಹೇರಳ ಅವಕಾಶ ಇಲ್ಲಿ ಬಂದರೆ ಸಿಗುತ್ತದೆ. ಆದರೆ, 30 ಮೀ. ಆಳದವರೆಗೆ ಮಾತ್ರ ತೆರಳಲು ಪರವಾನಿಗೆ ಇದೆ.   ನಿರೀಕ್ಷೆಗೂ ಮೀರಿದ ತಾಣವನ್ನು ವೀಕ್ಷಿಸುವ, ಅಪರಿಮಿತ ಅನುಭವ ಹೊಂದುವ ಅವಕಾಶ ಇಲ್ಲಿ ದೊರೆಯುತ್ತದೆ. ಸಮುದ್ರದ ನೀರಿನಿಂದ ನಿರ್ಮಾಣವಾಗಿರುವ ಸರೋವರಗಳು ನೀಲಿ ಬಣ್ಣದ್ದಾಗಿವೆ. ಲಕ್ಷದ್ವೀಪದಲ್ಲಿನ ರೇಸಾರ್ಟ್‌ಗಳು ರಜಾಕಾಲೀನ ಅವಧಿ ಕಳೆಯಲು ಅನುಕೂಲವಾಗುವ ವಿಶೇಷ ಪ್ಯಾಕೇಜ್‌ಗಳನ್ನು ಪ್ರವಾಸಿಗರಿಗೆ ನೀಡುತ್ತವೆ

ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.