ಅಕ್ಷರಗಳಲ್ಲಿ ಬದುಕಿನ ಬೆಲೆ
Team Udayavani, Sep 16, 2018, 6:00 AM IST
ಇದು ಲೇಖಕ ಚಂದ್ರಶೇಖರ ಪಾತೂರು ಅವರ ಚೊಚ್ಚಲ ಕೃತಿ. ಸುಮಾರು ಅರುವತ್ತರಷ್ಟು ಲೇಖನಗಳ ಗುತ್ಛ . ಇಲ್ಲಿನ ಬಹುಪಾಲು ಬರಹಗಳು ಇನ್ನೂರು-ಮೂನ್ನೂರು ಶಬ್ದ ಮೀರಿಲ್ಲ. ಓದುವ ವ್ಯವಧಾನ ಕಳೆದುಕೊಂಡ ಕಾಲಕ್ಕೆ ಸೂಕ್ತವಾದ ಚುಟುಕು ಬರಹಗಳಾದರೂ ಲೇಖಕರನ್ನು ಕಾಡಿದ ವಸ್ತುವಿನ ಕಾರಣಕ್ಕಾಗಿ ಓದಲೇಬೇಕಾದ ಕೃತಿ. ಕಾದಂಬರಿಯಂತೆ ದೀರ್ಘವಾಗಿ ಬರೆಯಬಹುದಾದ ಅತ್ಯಮೂಲ್ಯ ಅಂಶಗಳನ್ನು ಆಯ್ದು ಸಂಕ್ಷೇಪಿಸಿದ ಕಲೆಗಾರಿಕೆ ಇಲ್ಲಿನ ಬರಹಗಳಲ್ಲಿದೆ.
ಕಳೆದೆರಡು ದಶಕಗಳಿಂದ ನಮ್ಮ ಜೀವನಶೈಲಿ-ಸಂಬಂಧ ಗಳಲ್ಲಿ ವಿಪರೀತ ಪಲ್ಲಟಗಳು ಸಂಭವಿಸಿವೆ. ಮನೆ-ಮನಗಳಿಗೆ ಬದಲಾವಣೆಯ ಗಾಳಿ ಬೀಸಿವೆ. ಸಾಕಷ್ಟು ಪಡೆದುಕೊಂಡಿವೆ. ಅವೆಲ್ಲ ಮೂರ್ತರೂಪದಲ್ಲಿ ನಮ್ಮ ಮುಂದಿವೆ. ಆದರೆ, ಅಭಿವೃದ್ಧಿಯ ವೇಗ, ತಂತ್ರಜ್ಞಾನಗಳ ಮಹಾಪೂರ, ಮಾರುಕಟ್ಟೆಯ ಕಬಂಧಬಾಹುಗಳಿಗೆ ಸಿಲುಕಿ ಜೀವನ ಸ್ಪರ್ಧೆಯಾಗುತ್ತಿದೆ. ಗ್ರಾಮೀಣ ಬದುಕಿನಲ್ಲಿದ್ದ ಬಾಯಿತುಂಬಾ ಮಾತುಕತೆ, ಬಾಲ್ಯದ ನಿರಾಳತೆ, ರೇಡಿಯೋ ಉಂಟು ಮಾಡುತ್ತಿದ್ದ ಬೆರಗು, ಊರ ಸಂತೆ, ಜಾತ್ರೆಯ ಸುತ್ತಾಟ- ಇವೆಲ್ಲ ಉಂಟು ಮಾಡುತ್ತಿದ್ದ ಆನಂದ ಲೇಖಕರನ್ನು ಕಾಡುತ್ತದೆ. ಸವಿಸವಿ ನೆನಪುಗಳೇ ಇಲ್ಲಿನ ಬರಹಗಳ ಜೀವಾಳ.
ಉಳಿದಂತೆ ಮನುಷ್ಯಲೋಕದ ಸಂಕುಚಿತತೆ, ಕೆಟ್ಟ ಕುತೂಹಲ, ಸಾಕಷ್ಟು ಇದ್ದೂ ಅತೃಪ್ತಿಗೊಳ್ಳುವ ಮನಸ್ಸು, ನೀರು, ಪ್ಲಾಸ್ಟಿಕ್, ಆರೋಗ್ಯ ಮೊದಲಾದ ಜೀವನ್ಮುಖೀ ವಿಷಯಗಳ ಕುರಿತ ಬೆಲೆಕಟ್ಟಲಾಗದ ಬರಹಗಳು ಈ ಕೃತಿಯಲ್ಲಿದೆ. ನಮ್ಮೆಲ್ಲರ ಬದುಕಿನ ಕಥನವಾಗಿರುವುದರಿಂದ ಇಲ್ಲಿನ ಬರಹಗಳು ನಮಗೆ ಆಪ್ತವಾಗುತ್ತವೆ.
ಬದುಕಿನ ಬೆಲೆಯನೇನಾದರೂ ಬಲ್ಲಿರಾ…(ಅಂಕಣ ಬರಹಗಳ ಸಂಕಲನ)
ಲೇ.: ಚಂದ್ರಶೇಖರ ಪಾತೂರು (ಮೊ : 9964105598)
ಪ್ರ.: ಆಕೃತಿ-ಆಶಯ ಪಬ್ಲಿಕೇಶನ್ಸ್, ಲೈಟ್ಹೌಸ್ ಹಿಲ್ ರೋಡ್, ಮಂಗಳೂರು-1 (ಮೊ : 0824-2443002)
ಮೊದಲ ಮುದ್ರಣ: 2018 ಬೆಲೆ : 120 ರೂ.
– ಯೋಗೀಶ ಕೈರೋಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ