ಪ್ರಿಯಾಂಕಾ ಎರಡನೆಯ ಅಂಕ


Team Udayavani, Jul 30, 2017, 6:25 AM IST

priyanka-upendra.jpg

ಮದುವೆ ಆದಮೇಲೆ ಸಿನೆಮಾ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಈಗ ಸಾಧ್ಯವಾಗುತ್ತಿದೆ. ವರ್ಷಕ್ಕೊಂದು ಸಿನೆಮಾ ಮಾಡ್ತಾ ಇದೀನಿ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಗಂಡನ ಸಕ್ಸಸ್‌ ಹಿಂದೆ ನಿಲ್ಲಬೇಕು, ಇಡೀ ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದರತ್ತ ಮಾತ್ರ ನನ್ನ ಗಮನ. ಅದರ ಹೊರತು ಬೇರೇನೂ ಇಲ್ಲ …”

ಹಾಗಂತ ಮಮ್ಮಿ – ಸೇವ್‌ ಮೀ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೊಂಡಿದ್ದರು ಪ್ರಿಯಾಂಕಾ ಉಪೇಂದ್ರ. ಅದರಂತೆ ಫ್ಯಾಮಿಲಿ ನೋಡಿಕೊಳ್ಳುತ್ತ, ಗಂಡನ ಯಶಸ್ಸಿಗೆ ಸ್ಫೂರ್ತಿಯಾಗುತ್ತ ಇದ್ದಾರೆ ಪ್ರಿಯಾಂಕಾ. ಅದರ ಜೊತೆಗೆ ಈಗ ಪ್ರಿಯಾಂಕಾ ಚಿತ್ರಗಳಲ್ಲಿ ನಟಿಸುವುದನ್ನು ಹೆಚ್ಚು ಮಾಡಿದ್ದಾರೆ. ವರ್ಷಕ್ಕೊಂದು ಸಿನೆಮಾ ಮಾಡುತ್ತಿದ್ದವರು, ಈಗ ಕ್ರಮೇಣ ಸಂಖ್ಯೆ ಹೆಚ್ಚು ಮಾಡಿದ್ದಾರೆ. ಕೆಲವು ತಿಂಗಳ ಕೆಳಗೆ ಸೆಕೆಂಡ್‌ ಹಾಫ್ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯಾ ಗಿತ್ತು. ಈಗ ಅವರು ಇನ್ನೊಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿದೆ.

ಮಮ್ಮಿ – ಸೇವ್‌ ಮೀ ಬಿಡುಗಡೆಯಾದ ನಂತರ ಆ ಚಿತ್ರದ ನಿರ್ದೇಶಕ ಲೋಹಿತ್‌ ಮತ್ತು ನಟಿ ಪ್ರಿಯಾಂಕಾ ಉಪೇಂದ್ರ ಇಬ್ಬರೂ ಇನ್ನೊಂದು ಸಿನೆಮಾ ಮಾಡಬಹುದು ಎಂಬ ಸುದ್ದಿ ಇತ್ತು. ಅದು ಮಮ್ಮಿ-2 ಆಗಿರುತ್ತದಾ ಅಥವಾ ಇನ್ನಾéವುದಾದರೂ ಚಿತ್ರವಾಗಿರುತ್ತದಾ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಕೊನೆಗೂ ಉತ್ತರ ಸಿಕ್ಕಿದೆ. ಪ್ರಿಯಾಂಕಾ ಮತ್ತು ಲೋಹಿತ್‌, ಹೌರಾ ಬ್ರಿಡ್ಜ್ ಎಂಬ ಹೊಸ ಚಿತ್ರದ ಮೂಲಕ ಮತ್ತೆ ಒಟ್ಟಿಗೆ ಚಿತ್ರ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ, ಈ ಚಿತ್ರದ ಚಿತ್ರೀಕರಣ ಕೊಲ್ಕತಾದಲ್ಲಿ ನಡೆಯಲಿದೆ. ಕೊಲ್ಕತಾ ಮೊದಲೇ ಪ್ರಿಯಾಂಕಾ ಅವರ ತವರುಮನೆ. ಈಗ ಅಲ್ಲೇ ಪ್ರಿಯಾಂಕಾ ನಟಿಸುತ್ತಿರುವ ಕನ್ನಡ ಚಿತ್ರವೊಂದರ ಚಿತ್ರೀಕರಣ ನಡೆಯಲಿರುವುದು ವಿಶೇಷ.

ಹಲವು ವರ್ಷಗಳ ಹಿಂದೆ ಹಿಂದಿಯಲ್ಲಿ ಅದೇ ಹೆಸರಿನ ಚಿತ್ರವೊಂದು ಬಂದಿತ್ತು. ಅಶೋಕ್‌ ಕುಮಾರ್‌, ಮಧುಬಾಲಾ ಮುಂತಾದವರು ನಟಿಸಿದ್ದ ಈ ಚಿತ್ರ, ಆ ಕಾಲಕ್ಕೆ ಅದ್ಭುತ ಥ್ರಿಲ್ಲರ್‌ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾ ಗಿತ್ತು. ಈಗ ಲೋಹಿತ್‌ ನಿರ್ದೇಶಿಸುತ್ತಿರುವ ಹೌರಾ ಬ್ರಿಡ್ಜ್  ಚಿತ್ರವು ಯಾವ ಜಾನರ್‌ಗೆ ಸೇರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಲೋಹಿತ್‌ ಸಹ ಈ ಬಾರಿ ಒಂದು ಥ್ರಿಲ್ಲರ್‌ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಈ ಚಿತ್ರ ಬರೀ ಕನ್ನಡವಷ್ಟೇ ಅಲ್ಲ, ತಮಿಳಿನಲ್ಲೂ ಒಟ್ಟಿಗೆ ನಿರ್ಮಾಣವಾಗುವ ಸಾಧ್ಯತೆ ಇದೆ.

ಈ ಮಧ್ಯೆ ಪ್ರಿಯಾಂಕಾ ಅಭಿನಯದ ಸೆಕೆಂಡ್‌ ಹಾಫ್ ಚಿತ್ರವು ಮುಗಿಯುವ ಹಂತಕ್ಕೆ ಬಂದಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಪ್ರಿಯಾಂಕಾ ಅವರು ಪೊಲೀಸ್‌ ಕಾನ್‌ಸ್ಟೆಬಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಸಾಮಾನ್ಯವಾಗಿ ನಾಯಕಿಯರು ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಅದು ಇನ್‌ಸ್ಪೆಕ್ಟರ್‌ ಪಾತ್ರವಾಗಿರುತ್ತದೆ. ಆದರೆ, ಪ್ರಿಯಾಂಕಾ ಅವರು ಪೇದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯೋಗಿ ದೇವಗಂಗೆ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪಾಚೋ ಶ್ರೀಮತಿ ಖ್ಯಾತಿಯ ಶಾಲಿನಿ ಸಹ ನಟಿಸುತ್ತಿದ್ದಾರೆ.
 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.