ನಾಯಕಿಯೂ ನಿರ್ದೇಶಕಿಯೂ ಸಾಯಿ ಅಕ್ಷತಾ


Team Udayavani, Mar 25, 2018, 7:30 AM IST

1.jpg

ಈ ಹುಡುಗಿಯ ಹೆಸರು ಸಾಯಿ ಅಕ್ಷತಾ. ಅಪ್ಪಟ ಕನ್ನಡತಿ. ಮೂಲತಃ ಕುಂದಾಪುರದ ಬೆಡಗಿ. ಓದಿದ್ದು, ಬೆಳೆದಿದ್ದೆಲ್ಲವೂ ಮಂಗಳೂರು. ಎಲ್ಲಾ ಸರಿ, ಸಾಯಿ ಅಕ್ಷತಾ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಈ ಹುಡುಗಿಗೆ ಸಿನೆಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಈಕೆಯನ್ನು ಕರೆದುಕೊಂಡು ಹೋಗಿದ್ದು, ತೆಲುಗು ಚಿತ್ರರಂಗಕ್ಕೆ. ಹೌದು, ಸಾಯಿ ಅಕ್ಷತಾ ಮೊದಲು ಶೇಖರಂ ಗಾರಿ ಅಬ್ಟಾಯಿ ಎಂಬ ಚಿತ್ರ ನಿರ್ದೇಶಿಸಿದರು! ಅಷ್ಟೇ ಅಲ್ಲ, ಆ ಚಿತ್ರದ ನಾಯಕಿಯಾಗಿಯೂ ನಟಿಸಿದರು. ಕನ್ನಡದ ಹುಡುಗಿಯೊಬ್ಬಳು ಬೇರೆ ಚಿತ್ರರಂಗಕ್ಕೆ ಹೋಗಿ ನಾಯಕಿಯಾಗುವುದೇ ಸಾಹಸದ ವಿಷಯ. ಅದರಲ್ಲೂ ಸಾಯಿ ಅಕ್ಷತಾ, ನಿರ್ದೇಶಕಿಯಾಗಿಯೂ ಎಂಟ್ರಿಯಾಗಿದ್ದು ವಿಶೇಷ. ಅಲ್ಲಿಂದ ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಅಕ್ಷತಾ, ನನ್‌ಬರಳ್‌ ನರ್ಪಣಿ ಮಂಡ್ರಮ್‌ ಚಿತ್ರದ ನಾಯಕಿಯೂ ಹೌದು. ಇನ್ನು, ತೆಲುಗಿನಲ್ಲಿ ಈಗ ತೆರೆಗೆ ಸಿದ್ಧವಾಗಿರುವ ಜೆಡಿ ಚಕ್ರವರ್ತಿ ಅಭಿನಯದ ಉಗ್ರಂ ಚಿತ್ರದಲ್ಲೂ ನಟಿಸಿದ್ದಾರೆ. ಈಗ ಇದೇ ಅಕ್ಷತಾ, ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಪರಸಂಗ ಚಿತ್ರಕ್ಕೆ ಅವರು ನಾಯಕಿ. ಇದು ಅವರ ಮೊದಲ ಕನ್ನಡ ಚಿತ್ರ. ಹಾಗಂತ, ಅವರಿಗೆ ಈ ಹಿಂದೆ ಅವಕಾಶಗಳು ಬಂದಿಲ್ಲವಂತೇನಿಲ್ಲ. ಸಾಕಷ್ಟು ಅವಕಾಶ ಬಂದಿದ್ದರೂ, ಅವರಿಗೆ ಕಥೆ, ಪಾತ್ರಗಳು ಅಷ್ಟಾಗಿ ಹಿಡಿಸಲಿಲ್ಲವಂತೆ. ಪರಸಂಗ ಚಿತ್ರದ ಕಥೆ ಮತ್ತು ಪಾತ್ರದಲ್ಲಿ ನಟನೆಗೆ ಹೆಚ್ಚು ಆದ್ಯತೆ ಇದೆ ಅಂತೆನಿಸಿ, ಆ ಚಿತ್ರ ಒಪ್ಪಿಕೊಂಡಿದ್ದಾರೆ. ಈಗ ಪರಸಂಗ ತೆರೆಗೆ ಬರಲು ಸಜ್ಜಾಗಿದೆ ಮತ್ತು ಆ ಚಿತ್ರವನ್ನು ಎದುರು ನೋಡುತ್ತಿದ್ದಾರೆ ಅಕ್ಷತಾ.

ಎಲ್ಲಾ ಸರಿ, ನಿರ್ದೇಶನವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಈ ಪ್ರಶ್ನೆಗೆ ಉತ್ತರಿಸುವ ಅವರು, ಭವಿಷ್ಯದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂಬುದು ಅವರ ಆಸೆಯಂತೆ. ನಾಯಕಿಯಾದರೆ, “ಐದಾರು ವರ್ಷಗಳ ಕಾಲ ಮಾತ್ರ ಉಳಿಯಬಹುದು. ಅದೇ ನಿರ್ದೇಶಕಿಯಾದರೆ, ಅವಕಾಶ ಸಿಕ್ಕಾಗೆಲ್ಲಾ ನಿರ್ದೇಶನ ಮಾಡಿಕೊಂಡಿರಬಹುದು’ ಎಂಬುದು ಅವರ ಮಾತು. ಅಕ್ಷತಾ ಈ ಹಿಂದೆಯೇ, ಕನ್ನಡದಲ್ಲಿ ನಟಿಸುವ ಮನಸ್ಸು ಮಾಡಿದ್ದರು. ಆಗಷ್ಟೇ, ತೆಲುಗು, ತಮಿಳಿನಲ್ಲಿ ಅವಕಾಶಗಳು ಒಂದಾದ ಮೇಲೊಂದು ಬಂದಿದ್ದರಿಂದ ಕನ್ನಡಕ್ಕೆ ಬರುವಾಗ ಸ್ವಲ್ಪ ತಡವಾಯಿತಂತೆ.

ಪರಸಂಗ ಒಳ್ಳೆಯ ಕಥೆ ಮತ್ತು ಪಾತ್ರ ಇರುವ ಚಿತ್ರ. ಜೊತೆಗೊಂದು ಸಂದೇಶವೂ ಇದೆ. ನಾನೊಬ್ಬ ನಿರ್ದೇಶಕಿಯಾಗಿದ್ದರಿಂದ ಕಥೆ ಹೇಗೆ ತೆರೆಯ ಮೇಲೆ ಬರುತ್ತೆ ಎಂಬುದು ಗೊತ್ತಿತ್ತು. ಅಭಿನಯಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. ನಾನು ಕನ್ನಡದ ಮೊದಲ ಚಿತ್ರ ಮಾಡಲು ಪರಸಂಗ ಸೂಕ್ತ ಆಯ್ಕೆ ಅಂದುಕೊಂಡು ನಟಿಸಿದ್ದೇನೆ. ಸದ್ಯಕ್ಕೆ ಕನ್ನಡದಲ್ಲಿ ಒಂದಷ್ಟು ಕಥೆಗಳು ಬರುತ್ತಿವೆ. ಈಗ ತಮಿಳಿನಲ್ಲಿ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅತ್ತ, ತೆಲುಗಿನಲ್ಲೂ ಮಾತುಕತೆ ನಡೆಯುತ್ತಿದೆ. ನೋಡಬೇಕು ಕನ್ನಡದಲ್ಲಿ ಇನ್ನೊಂದು ಒಳ್ಳೆಯ ಅವಕಾಶ ಬಂದರೆ ಖಂಡಿತ ಮಿಸ್‌ ಮಾಡಿಕೊಳ್ಳುವುದಿಲ್ಲ. ನಟನೆ ಮತ್ತು ನಿರ್ದೇಶನ ಈ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ.’ ಎನ್ನುತ್ತಾರೆ ಅಕ್ಷತಾ.

ಎಲ್ಲಾ ಸರಿ, “ಪರಸಂಗ’ ಚಿತ್ರಕ್ಕೆ ಈ ಮೊದಲು ಸುಮಾರು 15 ನಾಯಕಿಯರನ್ನು ಸಂಪರ್ಕಿಸಲಾಗಿದ್ದು, ಅವರು ಮಾಡಲು ಒಪ್ಪದ ಪಾತ್ರವನ್ನು ಅಕ್ಷತಾ ಒಪ್ಪಿದ್ದಾರೆ. ಸದ್ಯ, ಹೈದರಾಬಾದ್‌ನಲ್ಲೇ ವಾಸವಾಗಿರುವ ಅಕ್ಷತಾ, ಕನ್ನಡದಲ್ಲೂ ಒಂದೊಳ್ಳೆಯ ನಿರ್ದೇಶನ ಮಾಡುವ ಯೋಚನೆಯ ಲ್ಲಿದ್ದಾರೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.