ಜಪಾನಿನ ಹೆರಿಟೇಜ್‌ ಸೈಟ್‌ ನಾರಾ


Team Udayavani, Feb 2, 2020, 5:30 AM IST

kat-25

ಸೂರ್ಯನು ಉದಯಿಸುವ ನಾಡೆಂದೇ ಪ್ರಖ್ಯಾತವಾದ ದೇಶ ಜಪಾನ್‌. ಸುಮಾರು 6,000ಕ್ಕೂ ಅಧಿಕ ದ್ವೀಪಗಳುಳ್ಳ ಜಪಾನಿಗೆ ಸದಾ ಭೂಕಂಪ, ನೆರೆ, ಸುನಾಮಿ, ಜ್ವಾಲಾಮುಖೀಯ ಸ್ಫೋಟದಂತಹ ಪ್ರಕೃತಿ ವಿಕೋಪಗಳ ವಕ್ರದೃಷ್ಟಿಯೂ ಇದೆ. ಜಪಾನಿನ ಈಗಿನ ರಾಜಧಾನಿ ಟೋಕಿಯೋ ಆಗಿದ್ದರೂ 8ನೆಯ ಶತಮಾನದಲ್ಲಿ ನಾರಾ ರಾಜಧಾನಿಯಾಗಿತ್ತು. ಜಪಾನಿನ ಕೈಗಾರಿಕಾ ನಗರವಾದ ಒಸಾಕದಿಂದ ಕೆಲವೇ ಮೈಲಿ ದೂರದಲ್ಲಿದೆ ನಾರಾ. ನಗರದ ಏಳು, ಬೀಳು ರಾಜಕೀಯವಾಗಿ, ಧಾರ್ಮಿಕವಾಗಿ ಅಚ್ಚರಿ ಹುಟ್ಟಿಸುವಂತಹದ್ದು ಹಾಗೂ ರೋಚಕವಾದದ್ದು.

ನಾರಾದಲ್ಲಿ ಹತ್ತು ಹಲವು ಇತಿಹಾಸ ಪ್ರಸಿದ್ಧ ಮಂದಿರಗಳು, ಹೆಗ್ಗುರುತುಗಳು, ರಾಷ್ಟ್ರೀಯ ಸ್ಮಾರಕಗಳಿವೆ, ಕೆಲವೊಂದು ಯೂನಿಸ್ಕೊ ವರ್ಲ್ಡ್ ಹೆರಿಟೇಜ ಸೈಟ್‌ ಎಂದೂ ಗುರುತಿಸಲ್ಪಟ್ಟಿದೆ. ನಾರ ನಗರವು ಇತಿಹಾಸವನ್ನು ಉಳಿಸಿಕೊಂಡು, ಹಳತು-ಹೊಸತುಗಳ ಕೊಂಡಿಯಾಗಿ ನಿಂತು ವಿಶ್ವದ ಜನತೆಗೆ ತನ್ನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲೆಯ ಪರಂಪರೆಯ ಪರಿಚಯ ಮಾಡಿಕೊಡುತ್ತಿದೆ. ಆದರೆ, ಇತ್ತೀಚಿನ ಬೆಳವಣಿಗೆಯೆಂದರೆ ಆಧುನಿಕತೆಗೆ ಮಾರು ಹೋಗುವ ಯುವ ಪೀಳಿಗೆಯು ಹೆಚ್ಚು ಹೆಚ್ಚು ನಗರಗಳತ್ತ ವಲಸೆ ಹೋಗುತ್ತಿದ್ದು ನಾರಾದ ಜನಸಂಖ್ಯೆ ಇಳಿಮುಖವಾಗಿದೆ. ನಾರಾದಲ್ಲಿರುವ ನೋಡಲೇಬೇಕಾದ ಸ್ಥಳಗಳಲ್ಲಿ ಟೊಡೈಜಿ ಮಂದಿರವೂ ಒಂದು.

ಟೊಡೈಜಿ ಮಂದಿರ
ಟೊಡೈಜಿ ಮಂದಿರ ಐತಿಹಾಸಿಕವಾಗಿಯೂ ಮಹತ್ವಪೂರ್ಣ ದ್ದಾಗಿದ್ದು ವಿಶ್ವಪ್ರಸಿದ್ಧಿಯನ್ನು ಪಡೆದಿದೆ, ಇದು ನಾರಾದ ಹೆಗ್ಗುರುತಾಗಿಯೂ ಗುರುತಿಸಲ್ಪಟ್ಟಿದೆ. ಜಪಾನಿನ ರಾಜಧಾನಿ ನಾರಾ ಆಗಿದ್ದ ಕಾಲ. ಕ್ರಿ.ಶ. 752ರಲ್ಲಿ ಜಪಾನಿನ ಎಲ್ಲಾ ಬೌದ್ಧ ಮಂದಿರಗಳಿಗೆ ಮುಖಂಡವಾಗುವಂತೆ ಟೊಡೈಜಿ ಮಂದಿರವನ್ನು ಕಟ್ಟಿಸಿದರಂತೆ. ಮಂದಿರದ ಪ್ರಭಾವ ಎಷ್ಟು ಹೆಚ್ಚಾಯಿತೆಂದರೆ ಧರ್ಮ ಮತ್ತು ರಾಜಕೀಯವನ್ನು ಬೇರ್ಪಡಿಸಲು ಕೆಲವೇ ವರ್ಷಗಳಲ್ಲಿ ಜಪಾನಿನ ರಾಜಧಾನಿಯನ್ನು ನಾರಾದಿಂದಲೇ ವರ್ಗಾಯಿಸಲಾಯಿತು.

ಟೊಡೈಜಿ ಮಂದಿರಕ್ಕೆ ವಿಶಾಲವಾದ ಅಂಗಳವಿದ್ದು ಸುತ್ತ ಚೆರ್ರಿ ಮರಗಳಿವೆ, ಮಾರ್ಚ ತಿಂಗಳ ಕೊನೆ ಅಥವ ಎಪ್ರೀಲ್‌ ಚೆರ್ರಿ ಮರಗಳು ಹೂವು ಬಿಡುವ ಸಮಯ, ಆ ಸಮಯದಲ್ಲಿ ಇಲ್ಲಿಗೆ ಸಂದರ್ಶಿಸಿದರೆ ಮರದ ತುಂಬ ಅರಳಿದ ಹೂವುಗಳು ಮತ್ತು ಅರಳಿ ಉದುರಿದ ಹೂವಿನ ಹಾಸಿಗೆ ನಮ್ಮನ್ನು ಸ್ವಾಗತಿಸುತ್ತದೆ. ನಾವೂ ಇದೇ ಸಮಯದಲ್ಲಿ ಜಪಾನಿಗೆ ಪ್ರವಾಸ ಹೋಗಿದ್ದು.

ಮಂದಿರವನ್ನು ನಂದಾಮೊನ್‌ ಹೆಸರಿನ ಎತ್ತರದ ಎರಡಂತಸ್ತಿನ ಮರದ ಗೇಟನ್ನು ದಾಟಿ ಒಳ ಬರಬೇಕು, ಎಡ-ಬಲದಲ್ಲಿ ನಿಯೊ ರಾಜರಕ್ಷಕರ ಮೂರ್ತಿಗಳಿವೆ. ಇಲ್ಲಿನ ಮುಖ್ಯಮಂದಿರ ಡೈಬುಟ್ಸು ಡೆನ್‌, ಮಂದಿರದಲ್ಲಿ ಜಪಾನಿನಲ್ಲೇ ಅತೀ ದೊಡ್ಡದಾದ ಡೈಬುಟ್ಸು (ಬುದ್ಧ) ನ ಮೂರ್ತಿಯಿದೆ. ಕೂತಿರುವ ಕಂಚಿನ ಬುದ್ಧನ ಮೂರ್ತಿಯು 15 ಮೀ. ಎತ್ತರವಿದ್ದು ಪಕ್ಕದಲ್ಲಿ ಎರಡು ಬೋಧಿಸತ್ವರ ಮೂರ್ತಿಗಳಿವೆ. ತಲೆಯೆತ್ತಿ ಬುದ್ಧನ ಮೂರ್ತಿಯನ್ನೊಮ್ಮೆ ನೋಡಿದಾಗ ಮನದಲ್ಲಿ ಭಕ್ತಿ, ಆಶ್ಚರ್ಯ, ಸಾರ್ಥಕತೆ ಮೂಡುವುದು ಸಹಜ. ಮಂದಿರದಲ್ಲಿ ಹಲವಾರು ಮರದ ಕಂಬಗಳಿವೆ, ಇಲ್ಲಿನ ಕಂಬವೊಂದರ ಬುಡ ಭಾಗದಲ್ಲಿ ತೂತಿದ್ದು ಅದು ಬುದ್ಧನ ಮೂರ್ತಿಯ ಮೂಗಿನ ಹೊಳ್ಳೆಯಷ್ಟು ದೊಡ್ಡದಾಗಿದೆಯೆಂಬ ನಂಬಿಕೆ ಇಲ್ಲಿನವರದ್ದು. ಕಂಬದ ತೂತಿನಲ್ಲಿ ಸಾರ್ವಜನಿಕರು ಅಂಬೆಗಾಲಿಟ್ಟು ಮುಂದೆ ಸಾಗಲು ಪ್ರಯತ್ನಿಸಬಹುದು, ಹಾಗೆ ಮುಂದೆ ಸಾಗಿದರೆ ಮುಂದಿನ ಜನ್ಮದಲ್ಲಿ ಜ್ಞಾನೋದಯವಾಗುತ್ತದಂತೆ. ಹಲವು ಪ್ರವಾಸಿಗರು ಪ್ರಯತ್ನಿಸುತ್ತಿದ್ದರು, ಹೌದೋ, ಸುಳ್ಳೋ ನೋಡಿದವರಿದ್ದಾರೆಯೇ?

ಹಲವು ಜಪಾನೀಸ್‌ ಸಿನೆಮಾಗಳಲ್ಲಿ ಟೊಡೈಜಿ ಮಂದಿರವನ್ನು ನೋಡಬಹುದು, ಇಲ್ಲಿ ಅಂತರಾಷ್ಟ್ರೀಯ ಸಂಗೀತ ಉತ್ಸವವೂ ನಡೆಯುತ್ತದಂತೆ.ನಾವು ಟೊಡೈಜಿ ಮಂದಿರಕ್ಕೆ ಹೋದಾಗ ಸೂರ್ಯನ ಕೃಪೆಯಿದ್ದರೂ ಸಣ್ಣದಾಗಿ ಚಳಿಯೂ ಇದ್ದು ಗಾಳಿಯೂ ಮಂದವಾಗಿ ಬೀಸುತ್ತಿತ್ತು.

ಗೀತಾ ಕುಂದಾಪುರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.