ಒಳನಾಡಿನಲ್ಲಿ ಸಂಯುಕ್ತಾ


Team Udayavani, May 6, 2018, 6:00 AM IST

2.jpg

ಸಂಯುಕ್ತಾ ಹೊರನಾಡು ಇತ್ತೀಚಿನ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ ಎಂದರೆ ತಪ್ಪಿಲ್ಲ. ಪ್ರಮುಖವಾಗಿ ಅವರು ಕಳೆದ ಕೆಲವು ತಿಂಗಳಲ್ಲಿ ಒಂದರ ಹಿಂದೊಂದು ಚಿತ್ರಗಳಲ್ಲಿ ಸತತವಾಗಿ ನಟಿಸುತ್ತಲೇ ಇದೆ. ಅದೆಲ್ಲದರ ಪರಿಣಾಮ, ಸಂಯುಕ್ತಾ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ. ಆ ಪೈಕಿ ಕನ್ನಡದ ಅರಿಷಡ್ವರ್ಗ, ಎಂಎಂಸಿಎಚ್‌ ಮತ್ತು ತೆಲುಗಿನ ರಾಣಾ ಸಿನಿಮಾಸ್‌ನಲ್ಲಿ ತಯಾರಾಗಿರುವ ಚಿತ್ರದ ಜೊತೆಗೆ ತಮಿಳಿನ ಚಿತ್ರವೊಂದು ಇದೇ ವರ್ಷ ಬಿಡುಗಡೆಯಾ ಗಲಿದೆ.

ಇದಲ್ಲದೆ ಸಂಯುಕ್ತಾ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್‌ ಶೇಡ್‌ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕೆ ಕಳೆದ ತಿಂಗಳಷ್ಟೇ ಮುಹೂರ್ತವಾಗಿದೆ. ಇದಲ್ಲದೆ, ನಮ್ಮ ಯುಎಫ್ಓ ಎಂಬ ಹೊಸ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಯುಕ್ತಾ, ಮೊದಲ ಬಾರಿಗೆ ಪೊಲೀಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿಗೆ ಎರಡು ಚಿತ್ರಗಳಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಜವಾಬ್ದಾರಿ ಸಂಯುಕ್ತಾ ಹೆಗಲ ಮೇಲೆ ಬಿದ್ದಿದೆ ಮತ್ತು ಇದಕ್ಕಾಗಿ ಸಂಯುಕ್ತಾ ತಮ್ಮದೇ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಸಂಯುಕ್ತಾ ಇತ್ತೀಚೆಗೆ ಸುದ್ದಿಯಾಗಿದ್ದು, ತಮ್ಮ ಹೊಸ ಫೋಟೋ ಶೂಟ್‌ನಿಂದಾಗಿ. ಸಾಮಾನ್ಯವಾಗಿ ಸಿನೆಮಾ ನಟಿಯರು ತಾವು ನಟಿಸುವ ಚಿತ್ರಗಳಿಗೆ ಫೋಟೋಶೂಟ್‌ ಮಾಡಿಸುವುದು ವಾಡಿಕೆ ಅಥವಾ ತೂಕ ಹೆಚ್ಚಿಸಿಕೊಂಡಾಗ, ಇಲ್ಲ ಇಳಿಸಿಕೊಂಡಾಗ ಫೋಟೋಶೂಟ್‌ ಮಾಡಿಸಿ ತಮ್ಮ ಸೌಂದರ್ಯವನ್ನು ತೋರಿಸುವುದು ವಾಡಿಕೆ. ಆದರೆ, ನಟಿ ಸಂಯುಕ್ತಾ ಹೊರನಾಡು ಕೊಂಚ ಭಿನ್ನ ಎನ್ನಬಹುದು. ಸಂಯುಕ್ತಾ ಫೋಟೋ ಶೂಟ್‌ ಮಾಡಿಸಿರುವುದು ಯಾವುದೇ ಸಿನಿಮಾಗಲ್ಲ. ಅದು ಪರಿಸರ ಜಾಗೃತಿಗಾಗಿ ಎಂದರೆ ಆಶ್ಚರ್ಯವಾಗಬಹುದು. ಸಂಯುಕ್ತಾ ಪ್ರತಿ ವರ್ಷ ಕೂಡ “ವಿಶ್ವ ಭೂಮಿ’ ತಿಂಗಳನ್ನು ತಮ್ಮದೇ ಶೈಲಿಯಲ್ಲಿ ಆಚರಿಸುತ್ತ ಬಂದಿದ್ದಾರೆ. ಹಾಗೆಯೇ ಈ ವರ್ಷವೂ ಜಾಗೃತಿ ಮೂಡಿಸುವ ಸಲುವಾಗಿ ಫೋಟೋ ಶೂಟ್‌ ಮಾಡಿಸಿ, ವಿಶೇಷ ಬಗೆಯಲ್ಲಿ ಆಚರಿಸಿದ್ದಾರೆ. ಈ ಪರಿಕಲ್ಪನೆಯಂತೆ ಅಂದವಾದ ಫೋಟೋಗಳನ್ನು ತೆಗೆದಿದ್ದು ಛಾಯಾಗ್ರಾಹಕ ಬಿಂದ್ಯಾ ಕಣ್ಣಪ್ಪ. ಆ ಪರಿಕಲ್ಪನೆಗೆ ತಕ್ಕಂತೆ ವಸ್ತ್ರವಿನ್ಯಾಸ ಮಾಡಿದ್ದು ಸುಚೇತಾ. ಈ ಫೋಟೋ ಶೂಟ್‌ನಲ್ಲಿ ಹೆಣ್ಣನ್ನು ಭೂಮಿಗೆ ಹೋಲಿಕೆ ಮಾಡಲಾಗಿದೆ. ಈ ಫೋಟೋ ಶೂಟ್‌ಗಾಗಿ ಅವರು ವಿಭಿನ್ನ ಬಣ್ಣದ ಕಾಸ್ಟೂéಮ್‌ಗಳನ್ನು ತೊಟ್ಟಿದ್ದು, ಒಂದೊಂದು ಬಣ್ಣವೂ ಒಂದೊಂದು ವಿಷಯವನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ, ಕೆಂಪು ಬಣ್ಣದ ಬಟ್ಟೆಯು, ಹೆಣ್ಣು ಬೆಂಕಿ ಇದ್ದಂತೆ ಎಂದು ಹೇಳುತ್ತದೆ. ತಿಳಿನೀಲಿ ಬಣ್ಣದ ಬಟ್ಟೆ ಧರಿಸಿ ತೆಗೆಸಿಕೊಂಡ ಫೋಟೋ, ನೀರಿನ ಪ್ರಾಮುಖ್ಯತೆ ಬಿಂಬಿಸುತ್ತದೆ. ಹೆಣ್ಣುಮಕ್ಕಳನ್ನು ಭೂಮಿಗೆ ಹೋಲಿಕೆ ಮಾಡಿ, ಅದೇ ರೀತಿಯ ಪರಿಕಲ್ಪನೆಯಲ್ಲಿ ಸುತ್ತಲೂ ಹಸಿರು ಇರುವ ವಾತಾವರಣದಲ್ಲೊಂದು ಫೋಟೋ ತೆಗೆಸಿದ್ದಾರೆ. ಒಟ್ಟಾರೆ ಬೆಂಕಿ, ನೀರು, ಭೂಮಿ ಹಾಗೂ ಗಾಳಿಯನ್ನು ಪ್ರಮುಖವಾಗಿಟ್ಟುಕ್ಕೊಂಡು, ಅದಕ್ಕೆ ಹೊಂದುವ ಬಣ್ಣದ ಬಟ್ಟೆ ತೊಟ್ಟು ಫೋಟೋ ಶೂಟ್‌ ಮಾಡಿಸಿದ್ದಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.