ಸಂಕಗಿರಿಯನೇರಿ ಬನ್ನಿ


Team Udayavani, Jun 30, 2019, 5:00 AM IST

Sankagiri_Hill_Fort_wall11

ಸಂಕಗಿರಿ ಎಂಬುದು ತಮಿಳ್ನಾಡಿನ ಈರೋಡಿ ನಿಂದ 22 ಕಿ. ಮೀ. ಹಾಗೂ ಸೇಲಂನಿಂದ 38 ಕಿ. ಮೀ. ದೂರದಲ್ಲಿರುವ ಒಂದು ಬೆಟ್ಟ. ತಮಿಳುನಾಡಿನ ಎತ್ತರದ ಬೆಟ್ಟಗಳಲ್ಲಿ ಇದು ಒಂದು. ದೂರದಿಂದ ವೀಕ್ಷಿಸುವಾಗ ಶಂಖಾಕೃತಿಯಲ್ಲಿರುವಂತೆ ಕಾಣುವುದರಿಂದ ಸಂಕಗಿರಿ ಎಂಬ ಅನ್ವರ್ಥನಾಮ ಹೊಂದಿದೆ. ಈ ಗಿರಿಯ ಮೇಲಿರುವ ಕೋಟೆಯು ಐತಿಹಾಸಿಕವಾಗಿ ಪ್ರಮುಖ ತಾಣವಾಗಿದ್ದು ಭಾರತದ ಪುರಾತತ್ವ ಇಲಾಖೆಯ ವಶದಲ್ಲಿದೆ. ಬೆಟ್ಟದ ತಪ್ಪಲಲ್ಲಿ ಸಂಕರಿ ಎಂಬ ಪುಟ್ಟ ಊರಿದೆ.

ಸಂಕಗಿರಿ ಕೋಟೆಯ ನಿರ್ಮಾಣ ಮೊತ್ತ ಮೊದಲಿಗೆ 15ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಆಯಿತು. 17ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ಥಳೀಯ ರಾಜ ಅಳಗಿರಿ ಮರಾಠ ಹಾಗೂ ಬಿಜಾಪುರ ಸುಲ್ತಾನರ ಜಂಟಿ ದಾಳಿಯಲ್ಲಿ ಸೋತು ಹೋದ, ಮರಾಠ ರಾಜ ವೆಂಕೋಜಿ ಬಿಜಾಪುರ ಸುಲ್ತಾನನಿಂದ ಬೇರ್ಪಟ್ಟು ತಂಜಾವೂರಿನ ಮೇಲೆ ಅಧಿಪತ್ಯ ಹೊಂದಿದ. ಈ ಸಮಯದಲ್ಲಿ ಸ್ಥಳೀಯ ಚೆ‌ಟ್ಟಿಯಾರ್‌ ಜನಾಂಗದವರು ಆಕ್ರಮಣಕಾರರ ವಿರುದ್ಧ ದಂಗೆ ಎದ್ದರು. ಚೆಟ್ಟಿಯಾರ್‌ ಜನಾಂಗದ ಗಂಡಸರೆಲ್ಲರನ್ನೂ ವಧಿಸುವ ಆದೇಶ ಮರಾಠರಿಂದ ಬಂತು. ವಂಶ ನಾಶವಾಗದಿರಲೆಂದು ತಂಜಾವೂರಿನ ಚೆಟ್ಟಿಯಾರ್‌ ಹಿರಿಯರು 500 ಮಕ್ಕಳನ್ನು ಗುಪ್ತವಾಗಿ ಸಂಕಗಿರಿಯಲ್ಲಿ ಬಚ್ಚಿಟ್ಟರು. ಅಲ್ಲಿ ಶಿವ ಹಾಗೂ ಅಂಗಯರ್‌ ನಾಯಕಿಯ ದೇಗುಲಗಳನ್ನು ಕಟ್ಟಿಸಿದರು. ಸಂಕಗಿರಿ ಊರಿನಲ್ಲಿರುವ ದೇವಸ್ಥಾನ ಕಾಲಕ್ರಮೇಣ ಶಿಥಿಲವಾಗಿತ್ತು. ಇದನ್ನು ಸ್ಥಳೀಯರು ಪುನರುಜ್ಜೀವನಗೊಳಿಸಿದ್ದಾರೆ.

ಟಿಪ್ಪು ಸುಲ್ತಾನನ ಕಾಲದಲ್ಲಿ ಇದು ಸೇನೆಯ ಅಡಗುದಾಣವಾಗಿತ್ತು. ಈ ಬೆಟ್ಟದ ಒಂದು ಭಾಗವನ್ನು ಹತ್ತಲು ಅಸಾಧ್ಯವಾಗಿರುವುದರಿಂದ ಇದು ಸೇನೆಯ ಅಡಗುದಾಣಕ್ಕೆ ಪ್ರಶಸ್ತವಾಗಿತ್ತು. ಬ್ರಿಟಿಷರ ಕಾಲದಲ್ಲಿ ಇದು ಕೊಂಗುನಾಡಿನಿಂದ ಸಂಗ್ರಹಿಸಿದ ತೆರಿಗೆಯನ್ನು ಶೇಖರಿಸಿಡುವ ಸ್ಥಳವಾಗಿತ್ತು ಹಾಗೂ ಸೇನೆಯ ನೆಲೆಯಾಗಿತ್ತು. ತಮಿಳುನಾಡಿನ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಚಿನ್ನಮಲೈಯನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಈ ಕೋಟೆಯ ಒಳಗೆಯೇ.

ಕೋಟೆಯ ವೈಭವ
ಒಟ್ಟು ಹದಿನಾಲ್ಕು ಸುತ್ತುಗಳಿರುವ ಈ ಕೋಟೆಯ ಕೊನೆಯ ಮೂರು ಭಾಗಗಳು ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದವು. ಕೋಟೆಯ ವ್ಯಾಪ್ತಿ ಬೆಟ್ಟದ ಒಂದು ಬದಿ ಮಾತ್ರ. ಬೆಟ್ಟದ ಇನ್ನೊಂದು ಬದಿಯನ್ನು ಹತ್ತಲು ಅಸಾಧ್ಯವಾಗಿರುವುದರಿಂದ ನೈಸರ್ಗಿಕ ರಕ್ಷಣೆ ದೊರೆತಿತ್ತು.

ಮುಖ್ಯದ್ವಾರ ದಾಟಿ ಒಳ ಸರಿದಾಗ ಕಾಣುವ ಕೋಟೆಯ ಗೋಡೆಗಳು ಸದೃಢವಾಗಿವೆ. ಮೇಲ್ಮಟ್ಟದ ಗೋಡೆಗಳೂ ಕಣ್ಣಿಗೆ ಗೋಚರಿಸುವಂತೆ ಸುಸ್ಥಿತಿಯಲ್ಲಿವೆ. ನೆಲಮಟ್ಟದಲ್ಲಿ ನೀರು ಆರಿರುವ ಪುಷ್ಕರಿಣಿ, ಪುಟ್ಟಗುಡಿ ಹಾಗೂ ಮುರಿದ ನಂದಿ, ಕಲಾತ್ಮಕ ಕೆತ್ತನೆಗಳುಳ್ಳ ಕಂಬಗಳನ್ನು ಹೊಂದಿದ ಸುಂದರವಾದ ಮಂಟಪಗಳು ಕಾಣಸಿಗುತ್ತವೆ. ಎರಡನೆಯ ದ್ವಾರವನ್ನು ದಾಟಿ ಒಳಹೋದರೆ ಕೋಟೆ ಮಾರಿಯಮ್ಮ, ವರದರಾಜ ಪೆರುಮಾಳ್‌ ದೇವಸ್ಥಾನಗಳಿವೆ.

ಅಲ್ಲಿ ಸಿಕ್ಕಿದ ಸ್ಥಳೀಯರನ್ನು ವಿಚಾರಿಸಿದಾಗ, ‘ಮಟಮಟ ಮಧ್ಯಾಹ್ನ ಚಾರಣಕ್ಕೆ ಸೂಕ್ತವಾದ ಸಮಯವಲ್ಲ ಹಾಗೂ ಭದ್ರತೆಯ ದೃಷ್ಟಿಯಿಂದ ದೊಡ್ಡ ಗುಂಪುಗಳಲ್ಲಿ ಮೇಲೆ ಸಾಗಿ ವೀಕ್ಷಿಸುವುದು ಒಳಿತು’ ಎಂದರು. ಐತಿಹಾಸಿಕವಾಗಿ ಮುಖ್ಯವಾದ ಈ ಜಾಗವನ್ನು ಸರಿಯಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಪ್ರಯತ್ನಗಳು ನಡೆದೇ ಇಲ್ಲವೆನಿಸುತ್ತದೆ. ಶಿಥಿಲವಾಗುವ ಮೊದಲೇ ಅದನ್ನು ಉಳಿಸಿಕೊಂಡು ಪ್ರವಾಸೀ ತಾಣವಾಗಿ ಮಾಡಬಹುದು.

ಮಾರ್ಗಸೂಚಿ
ಬೆಂಗಳೂರಿನಿಂದ 240 ಕಿ.ಮೀ. ದೂರದಲ್ಲಿರುವ ಈ ಜಾಗಕ್ಕೆ ಸುತ್ತಮುತ್ತಲಿನ ಪ್ರದೇಶಗಳಿಂದ ಬಸ್ಸುಗಳ ಸೌಕರ್ಯವಿದ್ದರೂ ಸ್ವಂತ ವಾಹನದಲ್ಲಿ ಹೋಗುವುದು ಒಳಿತು. ಸೇಲಂ-ಕೊಯಮುತ್ತೂರಿನ ನಡುವಿನ ಹೆದ್ದಾರಿ 544ರಲ್ಲಿ ಪ್ರಯಾಣಿಸಿ ಸೇಲಂನಿಂದ ಸುಮಾರು 30 ಕಿ.ಮೀ. ದೂರದಲ್ಲಿ ಸೇಲಂ-ಸಂಕಗಿರಿ ರಸ್ತೆಯನ್ನು ಹಿಡಿಯಬೇಕು. ರಸ್ತೆಗಳು ಚೆನ್ನಾಗಿವೆ.

-ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.