ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ

ಮುಂಬಯಿಯಲ್ಲಿ ಕನ್ನಡದ ಕಾಳಜಿ ಹೆಚ್ಚುತ್ತಿದೆ !

Team Udayavani, Jun 16, 2019, 5:00 AM IST

z-3

ಉದಯವಾಣಿ ಪತ್ರಿಕೆಯ 2019 ಜೂ. 2ರ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನದ ಬಗ್ಗೆ ನನಗೆ ಅಚ್ಚರಿ ಎನಿಸುವಷ್ಟು ಓದುಗರು ಸ್ಪಂದಿಸಿದ್ದಾರೆ. ಫೋನ್‌, ಎಸ್‌ಎಂಎಸ್‌, ಫೇಸ್‌ಬುಕ್‌, ಇ-ಮೇಲ್‌ ಹಾಗೂ ಪರಸ್ಪರ ಭೇಟಿಯಲ್ಲಿ ಸುಮಾರು ಒಂದು ತಲೆಮಾರಿಗಿಂತಲೂ ಹಿಂದೆ ಇದ್ದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಪಡೆದ ಶಿಕ್ಷಣದ ಕುರಿತಾದ ಹೆಮ್ಮೆಯೇ ನನ್ನ ಈ ಬರೆಹಕ್ಕೆ ಸ್ಫೂರ್ತಿ. ಹೆಚ್ಚಿನೆಲ್ಲರೂ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ನನ್ನ ಇಂಗ್ಲಿಷ್‌ ವಿರೋಧಿ ಪೂರ್ವಾಗ್ರಹವೇ ಈ ಲೇಖನವನ್ನು ನಾನು ಬರೆಯುವಂತಾಯಿತು ಎಂದು ಕುಟುಕಿದವರೂ ಒಂದಿಬ್ಬರು ಇದ್ದರೆನ್ನಿ.

ನಾನು ಇಂಗ್ಲಿಷ್‌ ವಿರೋಧಿಯಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ವೈಜ್ಞಾನಿಕ ಸಂಶೋಧನೆಗಳಿಗೆ ಮನ್ನಣೆ ಪಡೆದ, ಕನ್ನಡ ಮಾಧ್ಯಮದಲ್ಲಿ ಕಲಿತ, ಇಂದೂ ಪಂಪ, ರನ್ನ, ಜನ್ನ, ಕುಮಾರವ್ಯಾಸ, ರತ್ನಾಕರವರ್ಣಿ ಮುಂತಾದವರನ್ನು ಮತ್ತೆ ಮತ್ತೆ ಓದಲು ಹಪಹಪಿಸುವ, ಎಂಬತ್ತಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ಇಂಗ್ಲಿಷ್‌ನಲ್ಲೇ ಬರೆದು ಪ್ರಕಟಿಸಿದ ಹಳ್ಳಿಗ ನಾನು.

ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಲ್ಲ ಎನ್ನುವ ನೆಪವೊಡ್ಡಿ , ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳನ್ನು ಮುಚ್ಚಲು ನಮ್ಮ ಘನ ಸರ್ಕಾರ ತೋರುವ ಆತುರ ನಮ್ಮಂಥವರನ್ನು ಬೆಚ್ಚಿ ಬೀಳಿಸುತ್ತಿದೆ. ಸರಕಾರಿ ಕನ್ನಡ ಶಾಲೆಗಳನ್ನು ಆಕರ್ಷಣೀಯವಾಗಿಸಲು ಮಾರ್ಗವಿಲ್ಲವೆ? ಇದೆ. ಆದರೆ ಆ ಬಗ್ಗೆ ಆಸಕ್ತಿ ಇಲ್ಲದಿರುವುದೇ ಸಮಸ್ಯೆ. ನಮ್ಮ ಉಭಯ ಜಿಲ್ಲೆಗಳಲ್ಲಿನ ಕೆಲವು ಕನ್ನಡ ಶಾಲೆಗಳು ಸ್ಥಳೀಯರ ಹಾಗೂ ಶಿಕ್ಷಕರುಗಳ ಪ್ರಯತ್ನದಿಂದ ಮಾದರಿ ಶಾಲೆಗಳಾಗಿರುವುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. “ಕನ್ನಡ, ಕನ್ನಡ’ ಎಂದು ಕೂಗುವ ಬದಲು ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು, ಬೆಳೆಸಲು ನಾವು ಕಟಿಬದ್ಧರಾಗಬೇಕು. ಕನ್ನಡದಲ್ಲಿ ಕಲಿತವರೂ, ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಡಿಮೆ ಏನಲ್ಲ ಎಂಬುದನ್ನು ಭ್ರಮಾಧೀನರಾದ ನಮ್ಮ ಜನಗಳಿಗೆ ಉದಾಹರಣೆಗಳ ಮೂಲಕ ಸಾಬೀತು ಪಡಿಸಬೇಕು.

ಪುಣ್ಯಾವಶಾತ್‌ ಮುಂಬಯಿಯಲ್ಲಿ ಕನ್ನಡದ ಬಗೆಗಿನ ಕಾಳಜಿ ದಿನೇದಿನೇ ವೃದ್ಧಿಸುತ್ತಿದೆ. ನೂರಾರು ಸಂಖ್ಯೆಯಲ್ಲಿದ್ದ ಕನ್ನಡ ರಾತ್ರಿ ಶಾಲೆಗಳಲ್ಲಿ ಹೆಚ್ಚಿನವು ಮುಚ್ಚಿದರೂ, ಕೆಲವು ಇನ್ನೂ ಕಾರ್ಯಪ್ರವೃತ್ತವಾಗಿವೆ. ಬೃಹನ್ಮುಂಬಯಿ ನಗರಪಾಲಿಕೆ ಸಾಕಷ್ಟು ಸಂಖ್ಯೆಯ ಕನ್ನಡ ಶಾಲೆಗಳನ್ನು ನಡೆಸುತ್ತಿದೆ. ಕನ್ನಡಿಗರೇ ನಡೆಸುವ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಪ್ರೌಢಶಿಕ್ಷಣವನ್ನು ಕನ್ನಡದಲ್ಲಿ ಪಡೆಯುವ ಅವಕಾಶ ಲಭ್ಯವಿರುವುದಲ್ಲದೆ, ಇಲ್ಲಿನ ಎಸ್‌.ಎಸ್‌.ಸಿ. ಫ‌ಲಿತಾಂಶ ಹೆಚ್ಚು ಕಡಿಮೆ ನೂರರಷ್ಟಿದೆ. ತುಳು, ಕೊಂಕಣಿ ಮಾತೃಭಾಷೆಯಾಗುಳ್ಳ ಕೆಲವು ಸಿರಿವಂತರು ಕೂಡ ತಮ್ಮ ಮಕ್ಕಳು ಪ್ರಾಥಮಿಕ ಅಭ್ಯಾಸವನ್ನು ಕನ್ನಡದಲ್ಲೇ ಮಾಡಿಸುವ ಆಸಕ್ತಿ ಹೊಂದಿರುತ್ತಾರೆ. ವಿವಿಧ ಕನ್ನಡ ಸಂಸ್ಥೆಗಳು ಕನ್ನಡ ಕಲಿಸುವ ಕಾರ್ಯಕ್ರಮ ಹೊಂದಿವೆ. “ಚಿಣ್ಣರ ಬಿಂಬ’ದಂತಹ ಸಂಸ್ಥೆ ಮಕ್ಕಳಿಗೆ ಕನ್ನಡದ ಜೊತೆ ನಮ್ಮ ಸಂಸ್ಕೃತಿ, ಜನಪದಗಳ ಬಗ್ಗೆ ಶಿಕ್ಷಣ ನೀಡುತ್ತಿದೆ. ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ನಿಂದ ಹಿಡಿದು ಪಿ.ಎಚ್‌ಡಿವರೆಗೆ ಅಧ್ಯಯನ ನಡೆಸುವ ಅವಕಾಶವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಕನ್ನಡಾಸಕ್ತರಿಗೆ ನೀಡುತ್ತಲಿದೆ.

ವ್ಯಾಸರಾವ್‌ ನಿಂಜೂರ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.