ನೀರುಳಿಸಿರಿ!

ಪ್ರಬಂಧ

Team Udayavani, Jun 2, 2019, 6:00 AM IST

c-9

ನಾರಾಯಣ ರಾಯರ ಮಗ ಮಹಾಬಲ, ಮಹಾಬಲನ ಮಗ ಸೀತಾರಾಮ. ಸೀತಾರಾಮನ ಮಗ ಪ್ರವೀಣ. ಪ್ರವೀಣನ ಮಗ ಪ್ರಣವ. ಈ ಮಾಣಿಯ ಉಪನಯನಕ್ಕೆ ಹೋಗಲು ಮುಖ್ಯ ಕಾರಣ ಈ ಮನೆಗೆ ಸುಮಾರು ಎಪ್ಪತ್ತು ವರ್ಷಗಳ ನಂತರ ನನ್ನ ಭೇಟಿ. ಆಗಲೇ ಅಲ್ಲಿಯ ವೈಭವ ನೋಡಿ ನಾನು ಮೈಮರೆತಿದ್ದೆ. ದೊಡ್ಡ ಮನೆ. ಮನೆ ತುಂಬ ಹೆಂಗಸರು-ಮಕ್ಕಳು. ಹಟ್ಟಿ ತುಂಬ ದನಕರುಗಳು, ಎತ್ತುಕೋಣಗಳು. ಮನೆಯ ಸುತ್ತ ಹಾಡಿ, ಕಾಡು, ಗದ್ದೆಗಳು. ಎಲ್ಲರಿಗೂ ಕೈತುಂಬ ಕೆಲಸ. ಅಲ್ಲಿ ಕಾಫಿ ಲೋಟದಲ್ಲಿ ಕುಡಿಯುವುದಲ್ಲ, ಚೆಂಬಿನಲ್ಲಿ. ಒಂದು ಚೆಂಬು ಕಾಫಿ ಅಂದ್ರೆ ಈಗಿನ ಸಣ್ಣ ಲೋಟದಲ್ಲಿ ಏಳೆಂಟು ಲೋಟ. ಅವಲಕ್ಕಿ ಉಪ್ಪಿಟ್ಟಿನ ರಾಶಿ. ಆರಾಮವಾಗಿ ಅಷ್ಟನ್ನೂ ತಿಂದು, ಕುಡಿದು ಅರಗಿಸಿಕೊಳ್ಳುವ ಜಾಯಮಾನದವರು ಆ ಮನೆಯಲ್ಲಿದ್ದ ಜನಗಳು. ಅಷ್ಟೂ ದುಡಿಮೆ. ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಎರಡು-ಮೂರು ಸಣ್ಣಪುಟ್ಟ ಕೆರೆಗಳು, ಮೂರು-ನಾಲ್ಕು ಬಾವಿಗಳು, ಹರಿಯುವ ತೋಡು. ಸುತ್ತಮುತ್ತಲೂ ಹಸಿರು ವೃಕ್ಷರಾಶಿ. ಅದು ಆಗಿನ ಚಿತ್ರಣ. ಈಗಿನ ಚಿತ್ರಣವೂ ಅದೇ! ಹಟ್ಟಿಯಲ್ಲಿ ಎತ್ತುಕೋಣಗಳಿಲ್ಲ. ದನಕರುಗಳು ಮಾತ್ರ. ಹಳೆಮನೆಗೆ ಹೊಸ ಅವತಾರ. ಹಿಂದಿಗಿಂತಲೂ ಸ್ವಲ್ಪ ದೊಡ್ಡದೇ! ಕೂಡುಕುಟುಂಬ. ಎಲ್ಲರೂ ಒಟ್ಟಾದರೆ ನೂರಿಪ್ಪತ್ತು ಜನ. ಅಷ್ಟು ಜನರೂ ಉಳಿದುಕೊಳ್ಳಬಹುದಾದ ಮನೆ. ಕರೆಂಟು, ಪಂಪ್‌ಸೆಟ್‌, ರೇಡಿಯೋ, ಟಿವಿ ಎಲ್ಲ ಆಧುನಿಕ ಸೌಲಭ್ಯಗಳೂ ಅಲ್ಲಿ.

“ಉಪನಯನಕ್ಕೆ ಎಷ್ಟು ಜನ ಆಗಬಹುದು?’- ನನ್ನ ಪ್ರಶ್ನೆ.
“ಸುಮಾರು ಒಂದು ಸಾವಿರದಿಂದ ಒಂದೂಕಾಲು ಸಾವಿರ’ ಸೀತಾರಾಮನ ಉತ್ತರ.
ಬಂದವರಿಗೆಲ್ಲ ಕಬ್ಬಿನ ಹಾಲು. ಎಷ್ಟು ಕುಡಿಯಲು ಸಾಧ್ಯವೋ ಅಷ್ಟು. ಊಟ ಒಂದೇ ಪಂಕ್ತಿಯಲ್ಲಲ್ಲ. ಮೂರು ಪಂಕ್ತಿ. ಆಮೇಲೂ ಜನ ಇದ್ದೇ ಇದ್ದರು. ಇಷ್ಟು ಜನರಿಗೆ ನೀರಿನ ವ್ಯವಸ್ಥೆ ಹೇಗೆ?
ನಮಗೆ ಅದೊಂದು ಸಮಸ್ಯೆಯೇ ಅಲ್ಲ. ನಮ್ಮ ಎಲ್ಲ ಕೆರೆಗಳೂ, ಬಾವಿಗಳೂ ಬತ್ತುವುದಂತಿಲ್ಲ. ಅಜ್ಜನ ಕಾಲದಿಂದಲೂ ಒಂದು ಮರವನ್ನು ನಾವು ಕಡಿದಿಲ್ಲ. ಇನ್ನೂ ಹೆಚ್ಚು ಮರಗಳನ್ನು ಬೆಳೆಸಿದ್ದೇವೆ. ಮನೆಯ ಹಳೆಯ ತಲೆಗಳು ಸತ್ತಾಗ ಒಂದು ನಾಲ್ಕೈದು ಮಾವಿನ ಮರಗಳನ್ನು ಕಡಿದಿರಬಹುದು- ಹೆಣ ಸುಡಲು. ಆಮೇಲೆ ಎಲ್ಲ ಮರಗಿಡಗಳನ್ನು ಮಕ್ಕಳಂತೆ ಸಾಕಿದ್ದೇವೆ- ನೀರನ್ನು ಯಾವತ್ತೂ ಪೋಲು ಮಾಡಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಉಪಯೋಗಿಸುತ್ತೇವೆ. ನಮಗೆ ನೀರಿನ ಸಮಸ್ಯೆ ಎಂಬುದು ಈವರೆಗೆ ಬಂದಿಲ್ಲ. ನೀರು ಧಾರಾಳವಾಗಿದೆ.

ಈ ಬೇಸಿಗೆಯಲ್ಲಿ ಯಾವ ಪೇಪರ್‌ ನೋಡಿದರೂ ಅದರಲ್ಲಿ ನೀರಿನ ಸುದ್ದಿಯೇ ಸುದ್ದಿ. ಕೆರೆಬಾವಿ ಎಲ್ಲ ಬತ್ತಿದೆ. ಹೊಳೆಯಲ್ಲಿ ಹೂಳು ತುಂಬಿದೆ. ನೀರಿನ ಹರಿವೇ ಇಲ್ಲ. ಎಲ್ಲರ ಮನೆಯಲ್ಲೂ ನೀರಿನ ಬಗ್ಗೆಯೇ ಮಾತುಕತೆ. ಮಳೆ ಯಾವಾಗ ಬಂದೀತಪ್ಪಾ ಎಂದು ಆಕಾಶ ನೋಡುವವರೇ ಜಾಸ್ತಿ. ಬೊಂಡಾಭಿಷೇಕ, ವಿಶೇಷ ಪೂಜೆ. ಆ ದೇವರಾದರೂ ಏನು ಮಾಡಿಯಾನು. ನೀರನ್ನು ಸಿಕ್ಕಾಪಟ್ಟೆ ಉಪಯೋಗಿಸಿ, ಹಾಳು ಮಾಡಿ, ಈಗ ನೀರಿಲ್ಲ ಎಂದರೆ ಏನು ಮಾಡುವುದು? ಇದ್ದ ನೀರನ್ನೇ ಜಾಗ್ರತೆಯಾಗಿ ಉಪಯೋಗಿಸಿದರೆ ಆಗದೇ? ಇವರಿಗೆಲ್ಲ ಬುದ್ಧಿ ಬರುವುದು ಯಾವಾಗ? ಹೊಳೆ ತಿರುಗಿಸುತ್ತೇವೆ, ಕೆರೆ ತೋಡುತ್ತೇವೆ, ಬಾವಿ ತೋಡಲು ಸಾಲ ಕೊಡುತ್ತೇವೆ, ಲಾರಿಯಲ್ಲಿ ನೀರು ಸಪ್ಲೆ„ ಮಾಡುತ್ತೇವೆ. ಒಟ್ಟಾರೆ ನಿಮ್ಮನ್ನು ನೀರಿನಲ್ಲಿ ಮುಳುಗಿಸುತ್ತೇವೆ ಎಂಬ ಆಶ್ವಾಸನೆ ಬರುತ್ತಲೇ ಇರುತ್ತದೆ ನಮ್ಮ ನಾಯಕರಿಂದ. ನಮಗೇ ಇದ್ದ ನೀರನ್ನು ಸರಿಯಾಗಿ ಉಪಯೋಗಿಸಲು ಬಾರದಿದ್ದರೆ ಏನು ಮಾಡಿ ಏನು ಪ್ರಯೋಜನ?

ನನಗೊಂದು ಚಹಾ ಕುಡಿಯಬೇಕಿತ್ತು. ಹೊಟೇಲಿಗೆ ಹೋದೆ. ಒಂದು ದೊಡ್ಡ ಗ್ಲಾಸಿನಲ್ಲಿ ನೀರು ತಂದು ನನ್ನ ಮುಂದಿಟ್ಟು “”ಏನು ಬೇಕು?” ಎಂದ ಮಾಣಿ. “”ನನಗೆ ಈ ನೀರು ಬೇಡ. ಇದನ್ನು ಒಳಗೇ ಇಡು. ನೀರು ಬೇಕು ಎಂದವರಿಗೆ ಕೊಡು” ಎಂದೆ.

ನೀರು ತೆಗೆದುಕೊಂಡು ಹೋಗಿ ಒಂದು ಚಾ ತಂದುಕೊಟ್ಟ. ಬಿಲ್ಲೂ ಕೊಟ್ಟ. ಅದು ಊಟದ ಸಮಯ. ಪಕ್ಕದಲ್ಲೊಬ್ಬರು ಪ್ಲೇಟ್‌ ಊಟ ತರಿಸಿಕೊಂಡು ಊಟ ಮಾಡುತ್ತಿದ್ದರು. ನೋಡಿದೆ. ದೊಡ್ಡ ಸ್ಟೀಲ್‌ ಬಟ್ಟಲು. ಅದರಲ್ಲಿ ಸುತ್ತ ಒಂಬತ್ತು ತಟ್ಟೆಗಳಲ್ಲಿ ಸಾರು, ಹುಳಿ, ಮೊಸರು- ಇತ್ಯಾದಿ ಇತ್ಯಾದಿ. ಒಂದು ಚಮಚ. ನೀರಿನ ಒಂದು ಲೋಟ. ಒಂದು ಊಟಕ್ಕೆ ಇಷ್ಟು ತಟ್ಟೆ , ಬಟ್ಟಲುಗಳು! ಇಷ್ಟನ್ನು ತೊಳೆಯಲು ಎಷ್ಟು ನೀರು ಬೇಕು? ಬಾಳೆಎಲೆ ಹಾಕಿ ಊಟ ಬಡಿಸಿದರೆ ಈ ತಟ್ಟೆ-ಬಟ್ಟಲುಗಳನ್ನು ತೊಳೆಯುವ ಕೆಲಸ ಇರೋಲ್ಲ. ಅಷ್ಟು ನೀರನ್ನು ಉಳಿಸಬಹುದು ಅಲ್ಲವೇ? “”ನಮಗೆ ನೀರಿನ ಸಮಸ್ಯೆ ಇಲ್ಲ. ಈ ತಟ್ಟೆ ಬಟ್ಟಲುಗಳನ್ನು ತೊಳೆ ಯಲು ನಾವು ನೀರು ಉಪಯೋಗಿಸೋಲ್ಲ. ಒದ್ದೆ ಬಟ್ಟೆಯಲ್ಲಿ ಅವನ್ನು ಒರೆಸಿ ಇಡುತ್ತೇವೆ”- ಒಂದು ಮೂಲೆಯಿಂದ ಕ್ಷೀಣವಾದ ಸ್ವರವೊಂದು ಕೇಳಿಬಂತು.

ಕು. ಗೋ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.