ವರ್ತಮಾನದಲ್ಲಿ ಇತಿಹಾಸದ ಕಥನ


Team Udayavani, Feb 23, 2020, 4:30 AM IST

ram-7

ಎರಡು ವಿಭಿನ್ನ ಸಂಸ್ಕೃತಿಗಳಲ್ಲಿ ಮೊಳಕೆಯೊಡೆಯುವ ಪ್ರೇಮಕಥೆಗಳು ವಿಸ್ತಾರಗೊಳ್ಳುತ್ತ ಒಂದಕ್ಕೊಂದು ಹೆಣೆದುಕೊಂಡು ಕಡೆಗೆ ಸಂಧಿಸಿದರೂ ದೂರವಾಗಿಯೇ ಅಂತ್ಯವಾಗುವ ಅದ್ಭುತ ಕಥಾನಕ ಇದು.

ಇತಿಹಾಸದ ಪುಟಗಳಲ್ಲಿ ಅಡಗಿದ ಪ್ರೇಮ, ಕಾಮ, ಲಾಲಸೆ, ಕ್ರೌರ್ಯದ ಪರಮಾವಧಿಗಳೊಂದಿಗೆ ಅಖಂಡ ಪ್ರೇಮ, ಅನುಕಂಪ, ಕರುಣೆಗಳೂ ಹೆಣೆದುಕೊಂಡು ಸಾಮಾನ್ಯರೂ ಅಸಾಮಾನ್ಯರಾಗುವ ಕಥೆ ಇಲ್ಲಿದೆ. ಯಹೂದಿಗಳ ಮಾರಣ ಹೋಮ, ಮತಾಂತರ, ಸತೀಪದ್ಧತಿ, ರಾಜನಿಗೆ ಗಂಡು ಮಗುವಾದಾಗ ಪ್ರಜೆಯೊಬ್ಬ ಲೆಂಕನಾಗುವ ಪದ್ಧತಿ, ಮಾಸ್ತಿಯಾಗುವ ಘಟನೆಗಳು ನನ್ನ ನಿದ್ದೆಗೆಡಿಸಿದವು. ಸಮುದ್ರಯಾನದ ಭೀಕರತೆ, ಗೆದ್ದವರು ಸೋತವರನ್ನು ಮಣಿಸುವ ಭೀಕರ ಪರಿ, ಗುಲಾಮರ ಜೀವಂತ ಸಾವಿನ ವಿವರಣೆ, ಗೆದ್ದ ಹೆಣ್ಣುಗಳನ್ನು ಅಮಾನುಷವಾಗಿ ನಡೆಸಿಕೊಳ್ಳುವ ರೀತಿಯ ವಿವರಣೆಗಳನ್ನು ಓದಿ ಮನಸ್ಸು ವಿಹ್ವಲಗೊಂಡಿತು. ಕಾದಂಬರಿಯೊಂದು ಕಾಡುವುದು ಎಂದರೆ ಹೀಗೆಯೇ, ಅಲ್ಲವೆ?

ಈ ಪುಸ್ತಕದಲ್ಲಿ ಎಲ್ಲವೂ ಇದೆ. ದೇಶ-ಕಾಲ, ಮನುಷ್ಯ ಸ್ವಭಾವ, ಯುದ್ಧ- ಲಾಲಸೆಗಳ ಸೂಕ್ಷ್ಮ ಒಳಹರಿವಿದೆ. ಇಷ್ಟಿದ್ದರೂ ಇದರ ನಾಯಕ ಒಬ್ಬ ಸಾಮಾನ್ಯನೇ. ಈ ಕಾದಂಬರಿಯ ಕಥಾವಸ್ತು ವಿಸ್ತರಿಸಿ ಐದು ಶತಮಾನಗಳ ಹಿಂದಿನ ರಾಜಕೀಯ, ಸಾಂಸ್ಕೃತಿಕ ರೀತಿನೀತಿಗಳ ಒಳಹರಿವನ್ನು ತೆರೆದಿಟ್ಟಿದೆ.

ಇದೊಂದು ಸಂಗ್ರಹಯೋಗ್ಯ ಪುಸ್ತಕ. ವಾಸ್ಕೋಡಗಾಮಾ ಸಾಗಿದ ದಾರಿ, ಭಾರತವನ್ನು ತಲುಪುವ ಆ ಸಂದರ್ಭದಲ್ಲಿ ರಾಜನ ಮನಃಸ್ಥಿತಿ ಹೇಗಿತ್ತು, ಜನರ ಮನಃಸ್ಥಿತಿ ಹೇಗಿತ್ತು ಎಂಬ ವಿವರಣೆಗಳು ನಮ್ಮ ಜಾಗತಿಕ ಇತಿಹಾಸದ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತವೆ. ಜೊತೆಗೆ ಸಾಗುವ ಪ್ರೇಮಕಥೆಗೆ ಹೊಂದಿಕೊಂಡು ನೂರಾರು ಸಂಪ್ರದಾಯ, ಮನುಷ್ಯ ಸ್ವಭಾವ, ವಿಪರೀತವಾದ ಭಾವಲೋಕಗಳ ಪರಿಚಯವಾಗುತ್ತದೆ. ಹಾಗಾಗಿ, ಓದಿದ ನಂತರ ಮನುಷ್ಯ ವಿಧಿಯ ಕೈಗೊಂಬೆಯೇ, ಜೀವನದ ಏರಿಳಿತಗಳಲ್ಲಿ ಅವನ ಪಾತ್ರವೇನು? ನಡೆಸುವವನು ಒಬ್ಬ ಇದ್ದಾನೆ ಎಂದಾದರೆ ಈ ರೀತಿ ನರಳಾಟ, ಸಂಕಟ ನೋವುಗಳೇಕೆ ಎಂಬ ತಾತ್ವಿಕ ಪ್ರಶ್ನೆಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ.

ಮನುಷ್ಯನ ವಿಕಾಸ ಪಥದಲ್ಲಿ ನದಿಯದ್ದು ಮಹತ್ವದ ಪಾತ್ರ. ಈ ಜಗತ್ತಿನ ಎಲ್ಲ ಜನಪದಗಳೂ ನದಿ ದಡದಲ್ಲಿಯೇ ಹುಟ್ಟಿ ಬೆಳೆದವು. ತೇಜೋ- ತುಂಗಭದ್ರಾ ಕಾದಂಬರಿಯೂ ಎರಡು ನದಿಗಳ ಹರಿವಿನ ನಡುವೆ ಸಾಗುವ ಕಥೆ. ಈ ಎರಡು ಮಹಾನದಿಗಳ ನಡುವೆ ಬೃಹತ್‌ ಸಮುದ್ರವೇ ಇದೆ. ಈ ಮಾತು ಕಥೆಗೂ ಅನ್ವಯಿಸುತ್ತದೆ.

ಇತಿಹಾಸದೊಳಗೊಂದು ಇಣುಕು ಹಾಕುವಂತೆ ಮಾಡುವ, ಅಪಾರ ಸಂಶೋಧನೆ, ಚಿಂತನೆ, ಸೃಜನಶೀಲತೆಗಳಿಂದ ಸಮೃದ್ಧವಾದ ಕಥಾಹಂದರವಿದು. ಬಹುಶಃ ಜೀವಮಾನದಲ್ಲಿ ಅಪರೂಪಕ್ಕೊಮ್ಮೆ ಲಭಿಸುವ ಅನನ್ಯ, ಮಹತ್ವದ ಕಾಲಮಾನದ ಕೃತಿ ಇದು.

ಡಾ|| ಸಂಧ್ಯಾ ಎಸ್‌. ಪೈ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.