ಮೆರವಣಿಗೆ


Team Udayavani, Feb 9, 2020, 5:27 AM IST

Saptha-Poem

ಹೊರಗೆ ಹರಿದಿದೆ ಬೆಳಕು
ತೆರೆಯಬೇಕು ಮುಚ್ಚಿದ ಕಿಟಕಿ ಬಾಗಿಲು
ಬೇಸರದ ನೇಸರನ ಹಣೆಗೆ ಅಂಟಿಸಬೇಕು
ನನ್ನ ಚೇತನವನ್ನು ವಿಧಿಗೆ ನಂಟಿಸಬೇಕು
ಹೊರಬಂದೆ ಕಾಣಲು ಬೆಳಕು.

ಒಮ್ಮೆಲೇ ಗಾಬರಿ,
ಏನು ಈ ಬದಲಾವಣೆ?

ನಿನ್ನೆ ಹೊರಬಂದಿದ್ದೆ
ಬೆಳಗು ಹೀಗೆಯೇ ತೋರಿತ್ತು
ಭಾನುವಿನ ಬರವ,
ಹೂಹಾಸ, ಹಸಿವಿನ ಕುಣಿತ ಪವನದ ಚಲನ
ಬೆಳಕಿನ ಜೊತೆಗೆ ಸ್ಪರ್ಧಿಸುವ ಪ್ರೇರಕ ಚಿತ್ತ
ಸೆಳೆದಿತ್ತು ನಿನ್ನೆ ಸಂಪೂರ್ಣ ತನ್ನತ್ತ
ಈಗೆಲ್ಲಿ… ಈಗೆಲ್ಲಿ…

ಇಂದು ಬೆಳಕಿನ ಮುಖಕೆ
ಕರಿಮೋಡದೋಡ
ಎಲ್ಲಿ ಹೋಯಿತು ಸ್ಪಷ್ಟ ನಿಲುವಿನ ತಿಳಿವು
ಇಲ್ಲಿ ಸುತ್ತಲೂ ಎತ್ತೆತ್ತಲೂ
ಬರಿಯೆ ಅಂಧ ಮೇಘಗಳು,
ಕಪ್ಪು ನೆರಳುಗಳು
ಕೊಂಕು ಕೊರಳು, ಮುಖವಾಡ,
ಹುಸಿತು ಕೆಲೆದಾಟ,
ವಿಷ ಬೆರೆತ ಆ ಹಾರ ಭಾರಗಳು
ಮನಸಿರದ ಭಾರ ನಗೆ ಖಾರಗಳು.

ವಯಸ್ಸಾಗಿದೆ ಕಣ್ಣು ಮಂಜಾಗತೊಡಗಿವೆ
ಬೆಳಕು ನೋಡಲಾಗದೇ ಮೊಗ ಕವಾಟುಗಳನ್ನೆ
ಮುಖವಾಡ ಎಂದು ತಿಳಿದಿರಬೇಕು ನಾ
ಅಂದರೆ
ಇದು ನನ್ನ ಸ್ವಂತದ್ದೇ ಮುಖವಾಡವೇ?

ಬರುವದೇನುಂಟೋ ಅದು
ಬರುವುದು ಖಚಿತ
ಮಂಜುಗಣ್ಣಿನ ಜೊತೆಗೆ
ಮಬ್ಬುಗತ್ತಲೆ ಬಾಚಿ ತನ್ನಲ್ಲಿ ಅಡಗಿಸಿಕೊಳ್ಳಲು ಸದ್ಯ
ಬಾರಿಸುತಿದೆ ಕತ್ತಲದ ರಣಹಲಗೆ
ಬೆಳತನಕ ಆಟಾ ಆಡುವ
ಕಿಳ್ಳಿàಕ್ಯಾತರ ಹಾಡಿನ ನಾದ
ಮೋಹಕ ರಣವಾದ್ಯದ
ಮೈಮರೆಸುವ ವೇಷ ಅಗಾಧ
ಹಳೆಯ ಮೃದಂಗದ ಆ ಆ
ಹಾ ಹಾ ಹಾಹೂಹೂ
ಕತ್ತಲ ಹಾದಿಯ ಹಡದಿಯ ತುಂಬಾ
ಮಲ್ಲಿಗೆ ಸೇವಂತಿಗೆ ಹೂ ಪಕಳೆ
ನೆನಪಾಗಿದೆ
ಅಪ್ಪನ ಸಿದಿಗೆಯ ಸಿಂಗಾರದ ಮೆರವಣಿಗೆ
ಇನ್ನೆಲ್ಲಿದೆ ಸಾವಿನ ಹೊಸ ಉರವಣಿಗೆ…

– ಸಿದ್ಧಲಿಂಗ ಪಟ್ಟಣ ಶೆಟ್ಟಿ ; [email protected]

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.