ಜಗತ್ತಿನ ಏಕೈಕ ಶತಾಯುಷಿ ಜನಾಂಗ


Team Udayavani, Sep 29, 2019, 4:46 AM IST

t-3

ಇಂದಿನ ಜೀವನ ಶೈಲಿಯ ಪ್ರಕಾರ ಸಾಮಾನ್ಯ ಮನುಷ್ಯ ಸರಾಸರಿ ನೂರು ವರ್ಷಗಳ ಕಾಲ ಬದುಕುತ್ತಾನೆ. ಇದಕ್ಕಿಂತ ಹೆಚ್ಚಿನ ವರ್ಷ ಬದುಕಿರುವ ಜನರು ವಿಶ್ವದ ವಿವಿಧೆಡೆಗಳಲ್ಲಿರಬಹುದು. ಆದರೆ, ಅಂತಹವರ ಸಂಖ್ಯೆ ವಿರಳ. ಮನುಷ್ಯನ ವಯಸ್ಸು ಕಳೆಯುತ್ತ ಹೋದಂತೆ ದೇಹ ದುರ್ಬಲವಾಗಿ, ಮುಖ ಸುಕ್ಕುಗಟ್ಟಿ, ಮುಖದ ವರ್ಚಸ್ಸನ್ನು ನೋಡಿಯೇ ವ್ಯಕ್ತಿಯ ಅಂದಾಜು ವಯಸ್ಸನ್ನು ಹೇಳಲು ಸಾಧ್ಯವಾಗುತ್ತದೆ. ಆದರೆ, ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದ ಜನಾಂಗವೊಂದಿದ್ದು, ಇವರ ಸರಾಸರಿ ಆಯಸ್ಸು 120 ವರ್ಷವಾಗಿದ್ದು, ಕೆಲವರು 160 ವರ್ಷಗಳ ಕಾಲ ಬದುಕುತ್ತಾರೆ. ಈ ಜನಾಂಗದ ಮಹಿಳೆಯರಿಗೆ ವಯಸ್ಸಾಗುತ್ತಿದ್ದರೂ ಅವರ ಮುಖದಲ್ಲಿ ವಯಸ್ಸಿನ ವ್ಯತ್ಯಾಸ ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ಈ ಜನಾಂಗವೇ ಹುಂಝ ಅಥವಾ ಬುರುಷೋ ಜನಾಂಗ.

ಹುಂಝ ಅಥವಾ ಬುರುಷೋ ಜನಾಂಗವು ನೆರೆರಾಷ್ಟ್ರವಾದ ಪಾಕಿಸ್ತಾನದ ಉತ್ತರಕ್ಕೆ ಇರುವ ಚಿತ್ರಾಲ್‌ ಜಿಲ್ಲೆಯ ಹುಂಝ ಕಣಿವೆ ಪ್ರದೇಶದಲ್ಲಿ ವಾಸ ಮಾಡುತ್ತಾರೆ. 2000ನೇ ವರ್ಷದಲ್ಲಿ ಈ ಪಂಗಡದ ಒಟ್ಟು ಜನಸಂಖ್ಯೆ ಸುಮಾರು 87,000 ರಷ್ಟು ಇದ್ದು, ಈ ಪಂಗಡದ ಸ್ತ್ರೀ ಹಾಗೂ ಪುರುಷರು ಬೇರೆ ಜನರಿಗೆ ಹೋಲಿಸಿದರೆ ಹೆಚ್ಚು ಆರೋಗ್ಯವಂತರು. ಈ ಜನಾಂಗದ ಜನರ ಜೀವನಶೈಲಿಯೂ ಅತ್ಯಂತ ವಿಭಿನ್ನವಾಗಿದೆ. ಈ ಜನಾಂಗದ ಮಹಿಳೆಯರು ಅವರ 65 ರಿಂದ 75ನೆಯ ವಯಸ್ಸಿನವರೆಗೂ ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪುರುಷರು ಸುಮಾರು 90ರ ವಯಸ್ಸಿನವರೆಗೂ ಸಂತಾನೋತ್ಪತ್ತಿಯ ಶಕ್ತಿಯನ್ನು ಹೊಂದಿದ್ದಾರೆ.

ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಚಿತ್ರಾಲ್‌ ಜಿಲ್ಲೆಯ ಹಂಝ ಕಣಿವೆಯಲ್ಲಿ ವಾಸಿಸುವ ಹುಂಝ ಜನಾಂಗ

ಹುಂಝ ಜನಾಂಗದ ಜನರ ದೇಹದ ಚರ್ಮವೂ ಅತ್ಯಂತ ಕಾಂತಿಯುತವಾಗಿದ್ದು, ಇವರಿಗೆ ವಯಸ್ಸಾಗುತ್ತ ಹೋದರೂ ಚರ್ಮ ಅಷ್ಟು ಸುಲಭವಾಗಿ ಸುಕ್ಕುಗಟ್ಟುವುದಿಲ್ಲ. ಈ ಜನಾಂಗದ ಹೆಣ್ಣುಮಕ್ಕಳು ಬಾಲ್ಯದಿಂದ ಯೌವನ, ಯೌವನದಿಂದ ಮಧ್ಯವಯಸ್ಸಿಗೆ ಬಂದರೂ ಅವರ ವಯಸ್ಸು, ಮುಖದ ವರ್ಚಸ್ಸಿನಲ್ಲಿ ಕಾಣಿಸುವುದಿಲ್ಲ. ಹುಂಝ ಜನರಿಗೆ ಕ್ಯಾನ್ಸರ್‌ನಂಥ ಮಾರಕ ರೋಗ ಬರುವುದೇ ಇಲ್ಲ. ಹುಂಝ ಜನಾಂಗದವರ ಉತ್ಕೃಷ್ಟವಾದ ಆರೋಗ್ಯದ ಗುಟ್ಟು ಅಲ್ಲಿನ ಜನರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಲ್ಲಿ ಅಡಗಿದೆ. ಹುಂಝ ಜನಾಂಗದವರ ಬಗ್ಗೆ ಇತ್ತೀಚಿನವರೆಗೂ ಪ್ರಪಂಚಕ್ಕೆ ಅಷ್ಟಾಗಿ ತಿಳಿದಿರಲಿಲ್ಲ.

ವಿಮಾನ ನಿಲ್ದಾಣದಲ್ಲಾದ ಘಟನೆಯ ಬಳಿಕ !
ಈ ಜನಾಂಗದ ಅಬ್ದುಲ್‌ ಮೊಬುಡು ಎಂಬ ವ್ಯಕ್ತಿಯು ಲಂಡನ್‌ಗೆ ಹೋದಾಗ ಲಂಡನ್‌ ವಿಮಾನ ನಿಲ್ದಾಣದ ವಲಸೆ (ಇಮಿಗ್ರೇಶ‌ನ್‌) ವಿಭಾಗದಲ್ಲಿ ಈತನ ಪಾಸ್‌ಪೋರ್ಟ್‌ನಲ್ಲಿ ಇದ್ದ ಜನನ ದಿನಾಂಕಕ್ಕೂ ಆತನ ದೇಹಾಕೃತಿಗೂ ಹೋಲಿಕೆ ಕಷ್ಟವಾಗಿತ್ತು. ನಂತರ ಜನನ ದಿನಾಂಕದ ಸತ್ಯಾಸತ್ಯತೆಯ ಪರೀಕ್ಷೆಯನ್ನು ಮಾಡುವ ಸಲುವಾಗಿ ವಿವರಗಳನ್ನು ಪರೀಕ್ಷಿಸಿದಾಗ ತಿಳಿದು ಬಂದ ವಿಷಯ ಎಲ್ಲರಿಗೂ ಅಚ್ಚರಿಯನ್ನು ತಂದಿತ್ತು. ಇದರ ನಂತರವೇ ಹುಂಝ ಜನಾಂಗದ ಬಗ್ಗೆ ಅನೇಕರು ಅಧ್ಯಯನ ಮಾಡಿ ಅವರ ಜೀವನ ಶೈಲಿ ಮತ್ತು ಆರೋಗ್ಯಯುತ ಜೀವನದ ಕುರಿತಾಗಿ ಹೊರಜಗತ್ತಿಗೆ ತಿಳಿಯುವಂತೆ ಮಾಡಿದರು.

ಹುಂಝ ಕಣಿವೆಯಲ್ಲಿ ಇಲ್ಲಿನ ಜನರು ತಮ್ಮದೇ ಆದ ಶೈಲಿಯಲ್ಲಿ ಆಹಾರವನ್ನು ಬೆಳೆಯುತ್ತಾರೆ. ಇಲ್ಲಿನ ಶುದ್ಧ ಹಿಮನದಿಯ ನೀರನ್ನು ಕುಡಿಯಲು ಮತ್ತು ಸ್ನಾನ ಮಾಡಲು ಬಳಸುತ್ತಾರೆ. ನಗರಗಳು ಅಥವಾ ವಾಣಿಜ್ಯ ಕೇಂದ್ರಗಳಲ್ಲಿ ದೊರೆಯುವ ಯಾವುದೇ ರೀತಿಯ ಕತ್ತರಿಸಿದ ಅಥವಾ ಯಾವುದೇ ಸಂಸ್ಕರಿಸಿದ ಆಹಾರಗಳನ್ನು ಇವರು ಸೇವಿಸುವುದೇ ಇಲ್ಲ. ತಾಜಾ ತರಕಾರಿಗಳು, ಹಾಲು, ಧಾನ್ಯಗಳು ಮತ್ತು ಹಣ್ಣುಗಳನ್ನಷ್ಟೇ ಇವರು ಆಹಾರವಾಗಿ ಬಳಸುತ್ತಾರೆ. ಏಪ್ರಿಕಾಟ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಇವರು ಪ್ರಧಾನ ಆಹಾರವಾಗಿ ಬಳಸುತ್ತಾರೆ. ಇವರು ವರ್ಷಕ್ಕೆ ಕೆಲವು ತಿಂಗಳುಗಳ ಕಾಲ ಕೇವಲ ಏಪ್ರಿಕಾಟ್‌ರಸದಿಂದ ತಯಾರಿಸಿದ ಆಹಾರಗಳನ್ನೇ ಬಳಸುತ್ತಾರೆ.

ವಿಶ್ವದ ಕೆಲವು ಪ್ರದೇಶಗಳನ್ನು ಹಸಿರು ವಲಯಗಳೆಂದು (ಬ್ಲೂಝೋನ್‌) ಕರೆಯಲಾಗುತ್ತದೆ, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಶತಾಯುಷಿಗಳು ಅಥವಾ ದೀರ್ಘಾವಧಿಯ ಆಯಸ್ಸನ್ನು ಹೊಂದಿರುತ್ತಾರೆ. ಹುಂಝಾಗಳಿರುವ ಕಣಿವೆ ಪ್ರದೇಶವನ್ನು ಹಸಿರುವಲಯ ಪಟ್ಟಿಗೆ ಸೇರಿಸಿಲ್ಲವಾದರೂ ಹುಂಝಗಳು ಹಸಿರು ವಲಯದಲ್ಲಿನ ನಿವಾಸಿಗಳ ಬಹುತೇಕ ಗುಣಲಕ್ಷಣಗಳನ್ನು ಹೋಲುತ್ತಾರೆ. ಇವರು ಸಮುದ್ರ ಮಟ್ಟಕ್ಕಿಂತ ಅತಿ ಹೆಚ್ಚು ಎತ್ತರದ ಪ್ರದೇಶದಲ್ಲಿ ವಾಸಿಸುತ್ತಾರೆ. ಪರ್ವ ತ ಗಳ ಹಾದಿ ಯಲ್ಲಿ ದಿನಕ್ಕೆ 15ರಿಂದ 20 ಕಿ. ಮೀ. ನಡೆಯುತ್ತಾರೆ. ಇವರು ಧಾರ್ಮಿಕ ಸಂಪ್ರದಾಯವನ್ನು ಸಹ ಅನುಸರಿಸುತ್ತಾರೆ. ಈ ಅವಧಿಯ 4-5 ತಿಂಗಳವರೆಗೆ ಇವರು ಘನ ಆಹಾರವನ್ನು ಸೇವಿಸದೇ ಒಣಗಿದ ಏಪ್ರಿಕಾಟ್‌ ರಸವನ್ನು ಮಾತ್ರ ಕುಡಿಯುತ್ತಾರೆ. ಜಾಗತೀಕರಣದ ಬಿಸಿಯು ಈ ಸಮುದಾಯಕ್ಕೂ ನಿಧಾನವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ಇವರು ಕೈಗಾರಿಕೆಗಳಲ್ಲಿ ತಯಾರಾದ ಸಂಸ್ಕರಿಸಿದ ಆಹಾರಗಳನ್ನೂ ಬಳಸಲು ಪ್ರಾರಂಭಿಸಿದ್ದು ಕ್ಷಯ ಮತ್ತು ಜಠರದ ಸಮಸ್ಯೆಗಳು, ಹಿಂದೆಂದೂ ಕಾಣದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿದೆ.

ಸಂತೋಷ್‌ ರಾವ್‌

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.