ಡಾಲರ್‌ ನಾಡಿನಲ್ಲಿ ಆಹಾರ ವಿಚಾರ


Team Udayavani, Feb 23, 2020, 5:49 AM IST

ram-2

ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ ಕಷ್ಟ, ಇನ್ನು ಉದ್ಯೋಗದ ಮೇಲೆ ಹೋಗುವವರಿಗೆ ತುಂಬಾನೇ ಕಷ್ಟವಂತೆ- ಹೀಗೆಲ್ಲ ಅಂತೆಕಂತೆಗಳನ್ನು ಕಲ್ಪಿಸಿ ಅಳುಕಿನೊಂದಿಗೆ ಅಮೆರಿಕ ವಿಮಾನ ಹತ್ತುವಂತೆ ಮಾಡುವವರಿದ್ದಾರೆ. ಆದರೆ, ವಾಸ್ತವ ಬೇರೆಯೇ ಇದೆ.

ಸಾಮಾನ್ಯವಾಗಿ ಅಮೆರಿಕ ಎಂದರೆ ಭಾರತೀಯರಲ್ಲಿ ವಿಚಿತ್ರವಾದ ಕಲ್ಪನೆಗಳಿವೆ. ಅತಿಯಾದ ನಿರೀಕ್ಷೆಗಳ ಜೊತೆಗೆ ಬಹಳಷ್ಟು ವಿಷಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆಹಾರ ಪದ್ಧತಿ ಬಗ್ಗೆ ಏನೇನೋ ಕಲ್ಪನೆಗಳಿವೆ; ಭಾರತದಿಂದ ಯಾರಾದರೂ ಪ್ರವಾಸಕ್ಕೊ ಉದ್ಯೋಗಕ್ಕೊ ಅಮೆರಿಕಕ್ಕೆ ಹೋಗುವುದಾದರೆ ಮೊದಲು ಮೂಡುವ ಪ್ರಶ್ನೆ- ನಮಗೆ ಹೊಂದುವ ಊಟತಿಂಡಿ ಸಿಗುವುದೇ ಎಂಬುದು. ಅಮೆರಿಕಕ್ಕೆ ಹೋಗುವವರಿಗಿಂತಲೂ ಅವರ ಮನೆಯವರಿಗೆ ಆಗುವ ಗೊಂದಲ, ಅದಕ್ಕೂ ಹೆಚ್ಚಾಗಿ ಅವರ ತಲೆಗೆ ಹುಳ ಬಿಡುವವರಿಂದಾಗುವ ಅವಾಂತರ- ಇನ್ನೂ ಹೆಚ್ಚು. ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಅದರಲ್ಲೂ ದನದ ಮಾಂಸ ಕೂಡಾ ಇರುತ್ತದಂತೆ. ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ ಕಷ್ಟ, ಇನ್ನು ಉದ್ಯೋಗದ ಮೇಲೆ ಹೋಗುವವರಿಗೆ ತುಂಬಾನೇ ಕಷ್ಟವಂತೆ- ಹೀಗೆಲ್ಲ ಅಂತೆಕಂತೆಗಳನ್ನು ಕಲ್ಪಿಸಿ ಯಾವುದೋ ದೂರದ ಲೋಕಕ್ಕೆ ಹೋಗುತ್ತಿರುವ ಭ್ರಮೆ ಹುಟ್ಟಿಸಿ ಏನೋ ಹೇಗೋ ಎಂದೆಲ್ಲ ಅಳುಕಿನೊಂದಿಗೆ ಅಮೆರಿಕ ವಿಮಾನ ಹತ್ತುವಂತೆ ಮಾಡುತ್ತಾರೆ. ಆದರೆ, ವಾಸ್ತವ ಬೇರೆಯೇ ಇದೆ.

ಮೂವತ್ತು ಲಕ್ಷಕ್ಕೂ ಅಧಿಕ ಭಾರತೀಯರು
ಅಮೆರಿಕದಲ್ಲಿ ಇರುವ ಭಾರತೀಯರ ಸಂಖ್ಯೆ ಒಂದು ಅಂದಾಜಿನಂತೆ ಮೂವತ್ತು ಲಕ್ಷಕ್ಕೂ ಹೆಚ್ಚು. ಇದು ಇಲ್ಲಿಗೆ ಉದ್ಯೋಗಕ್ಕಾಗಿ ಬಂದು ಖಾಯಂ ನಿವಾಸಿಗಳಾಗಿರುವ ಮತ್ತು ಇಲ್ಲಿ ಜನಿಸಿದವರ ಸಂಖ್ಯೆ ಮಾತ್ರ. ಪ್ರವಾಸಿಗರು ಮತ್ತು ತಾತ್ಕಾಲಿಕ ಉದ್ಯೋಗದ ಮೇಲೆ ಬಂದು ಹೋಗುವವರು ಇನ್ನೂ ಅನೇಕರಿದ್ದಾರೆ. ಆದ್ದರಿಂದಲೇ ಇಲ್ಲಿ ಎಲ್ಲೆಡೆ ಸ್ವಾಭಾವಿಕವಾಗಿ ಭಾರತೀಯ ಊಟೋಪಚಾರ ಸಿಗುತ್ತದೆ. ಇನ್ನೂ ವಿಶೇಷವೆಂದರೆ ಕೆಲವೊಂದು ನಿಯಮಾವಳಿಗಳನ್ನು ಪೂರೈಸಿದವರಿಗೆ ಗ್ರೀನ್‌ ಕಾರ್ಡ್‌ ಸಿಕ್ಕಿದರೆ ಅವರು ಅಮೆರಿಕದಲ್ಲಿ ಎಷ್ಟು ಸಮಯವಾದರೂ ಇರಬಹುದು. ಅವರಿಗೆ ಯಾವುದೇ ಉದ್ಯೋಗ, ವ್ಯಾಪಾರ-ವ್ಯವಹಾರ ಮಾಡಲು ಅನುಮತಿಯಿದೆ. ಉದ್ಯೋಗಕ್ಕಾಗಿ ಬಂದವರಲ್ಲಿ ಈ ವರ್ಗಕ್ಕೆ ಸೇರಿದ ಕೆಲವರು ಒಟ್ಟುಗೂಡಿ ತಮ್ಮ ಬಿಡುವಿನ ವೇಳೆಯಲ್ಲಿ ಹೊಟೇಲ್‌ ಅಥವಾ ದಿನಬಳಕೆಯ ವಸ್ತುಗಳ ಮಾರಾಟ ಮಳಿಗೆ ಆರಂಭಿಸುತ್ತಾರೆ. ಸಹಜವಾಗಿ ಅವರ ಆದ್ಯತೆ ಭಾರತೀಯರ ಅಗತ್ಯದ ವಸ್ತುಗಳೇ ಆಗಿರುತ್ತವೆ.

ಭಾರತ ಕೃಷಿ ಪ್ರಧಾನ ದೇಶವಾದರೂ ನಮ್ಮ ದೇಶದ ಆವಶ್ಯಕತೆಯ ಶೇ. 70 ಮಾತ್ರ. ದೇಶದಲ್ಲಿ ಉತ್ಪಾದನೆಯಾಗಿ ಉಳಿದ ಅಗತ್ಯ ವಸ್ತುಗಳನ್ನು ಆಮದು ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ, ಅಮೆರಿಕಾದ ಕೃಷಿ ಉತ್ಪನ್ನಗಳ ಆವಶ್ಯಕತೆಯ ಶೇ. 87ರಷ್ಟು ದೇಶದೊಳಗೇ ಉತ್ಪಾದನೆಯಾಗುತ್ತದೆಂದು ಅಂಕಿಅಂಶಗಳು ಹೇಳುತ್ತವೆ. ಯುದೊœàಪಕರಣಗಳು ಮತ್ತು ವೈದ್ಯಕೀಯ ಉತ್ಪನ್ನಗಳು ದೇಶದ ಪ್ರಮುಖ ಆದಾಯ ಮೂಲಗಳಾದರೂ, ಆಹಾರ ಮತ್ತು ಇಂಧನದ ಬೇಡಿಕೆಗೆ ಬಹುತೇಕ ಸ್ವಾವಲಂಬಿಯಾಗಿರುವುದೇ ವಿಶ್ವದ ದೊಡ್ಡಣ್ಣನೆಂಬ ಕಿರೀಟಕ್ಕೆ ಪೂರಕವೆಂದರೆ ತಪ್ಪಾಗಲಾರದು.

ಹವಾಮಾನಕ್ಕೆ ಸರಿಯಾದ ಆಹಾರ
ಈ ದೇಶದ ಹವಾಮಾನವೂ ಒಂದು ರೀತಿಯಲ್ಲಿ ವಿಚಿತ್ರ. ಒಟ್ಟು ಐವತ್ತು ರಾಜ್ಯಗಳನ್ನೊಳಗೊಂಡ ಅಮೆರಿಕದಲ್ಲಿ ಆರು ವಲಯಗಳಿದ್ದು (ಟೈಮ್‌ ಝೋನ್‌) ಒಂದರಿಂದ ಇನ್ನೊಂದಕ್ಕೆ ವ್ಯತ್ಯಾಸವಿದೆ. ಮಾತ್ರವಲ್ಲ ಒಂದು ವಲಯದಿಂದ ಇನ್ನೊಂದರ ಹವಾಮಾನ ಕೂಡ ವಿಭಿನ್ನವಾಗಿರುತ್ತದೆ. ಉದಾಹರಣೆಗೆ, ನಾವಿದ್ದ ಮಿನಿಯಾಪೊಲೀಸ್‌ ನಗರದಲ್ಲಿ (ನವೆಂಬರ್‌ನಿಂದ ಎಪ್ರಿಲ್) ಆರು ತಿಂಗಳು ಕಠಿಣ ಚಳಿ. ತಾಪಮಾನ (-35) ಕ್ಕಿಂತಲೂ ಕಡಿಮೆ ಇರುತ್ತದೆ. ಅದೇ ಉಳಿದ ಆರು ತಿಂಗಳು (+35ವರೆಗೂ) ಇರುತ್ತದೆ. ಚಳಿಗಾಲದ ಆರು ತಿಂಗಳು ಎಲ್ಲೆಡೆ ಹಿಮದ ರಾಶಿ. ಮರಗಳು ಎಲೆಗಳನ್ನು ಉದುರಿಸಿಕೊಂಡು ನಿಲ್ಲುತ್ತವೆ.

ಆದರೆ, ಬೇಸಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತರಕಾರಿ, ಹಣ್ಣು, ಬೇಳೆಕಾಳು ಉತ್ಪಾದನೆ ನಡೆಯುತ್ತದೆ. ವಾಲ್‌ಮಾರ್ಟ್‌, ಕೋಸ್ಟ್‌ಕೋ, ಟಾರ್ಗೆಟ್‌ ಮುಂತಾದ ಬೃಹತ್‌ ಮಳಿಗೆಗಳು, ಇಂಡಿಯಾ ಮಾರ್ಕೆಟ್‌, ಇಂಡಿಯಾ ಬಝಾರ್‌, ಇಂಡಿಯಾ ಸ್ಪೈಸ್‌ಹೌಸ್‌ ಮುಂತಾದ ಮಧ್ಯಮ ಗಾತ್ರದ ಮಳಿಗೆಗಳಲ್ಲಿ ಹೂ, ಹಣ್ಣು, ತರಕಾರಿ, ಮುಂತಾದ ಎಲ್ಲಾ ದಿನೋಪಯೋಗಿ ವಸ್ತುಗಳೂ, ಮೀನು, ಮಾಂಸ- ಹೀಗೆ ಎಲ್ಲವೂ ಎಲ್ಲಾ ಋತುವಿನಲ್ಲೂ ದೊರೆಯುತ್ತದೆ. ಯಾವ ವಲಯದಲ್ಲಿ ಚಳಿ ಇರುವುದೋ ಅಲ್ಲಿ ಉತ್ಪಾದನೆ ಸ್ಥಗಿತವಾದರೆ ಎಲ್ಲಿ ಉತ್ಪಾದನೆಯಾಗುವುದೋ ಅಲ್ಲಿಂದ ರವಾನೆಯಾಗುತ್ತದೆ. ಹೀಗೆ, ಸಮತೋಲನ ಕಾಪಾಡಿಕೊಳ್ಳಲಾಗುತ್ತದೆ. ಹೀಗಾಗಿ, ವರ್ಷದ ಎಲ್ಲ ದಿನಗಳಲ್ಲೂ ಇವು ಎಲ್ಲೆಡೆ ಲಭ್ಯವಿರುತ್ತವೆ.

ಆದರೆ, ತರಕಾರಿಯಿರಲಿ, ಹಣ್ಣುಹಂಪಲೇ ಇರಲಿ, ಸಿದ್ಧಪಡಿಸಿದ ಆಹಾರ ಪದಾರ್ಥಗಳೇ ಇರಲಿ, ಗುಣಮಟ್ಟದಲ್ಲಿ ಮಾತ್ರ ಯಾವುದೇ ರಾಜಿಯಿಲ್ಲ. ಭಾರತೀಯರು ಉಪಯೋಗಿ ಸುವ ದೈನಂದಿನ ಆವಶ್ಯಕತೆಗಳ ಜತೆಗೆ, ಹಬ್ಬಹರಿದಿನಗಳಲ್ಲಿ ಉಪಯೋಗಿಸಲು ಬಾಳೆಎಲೆ, ವೀಳ್ಯದೆಲೆ, ಅಡಿಕೆ, ಅರಸಿನ… ಹೀಗೆ ಎಲ್ಲವೂ ಸಿಗುತ್ತದೆ. ಇನ್ನೂ ಹೇಳಬೇಕೆಂದರೆ ಕಲಶಕ್ಕೆ ಅಥವಾ ಪೂಜೆಗೆ ಮಾವಿನೆಲೆ ಬೇಕಾದರೂ ಲಭ್ಯ. ಬೆಲೆ ಮಾತ್ರ ಕೇಳಬೇಡಿ. ಏಕೆಂದರೆ, ನಮಗೆ ಎಲ್ಲವನ್ನೂ ವಿನಿಮಯ ದರಕ್ಕೆ ತುಲನೆ ಮಾಡುವ ಅಭ್ಯಾಸ. ಐದು ಮಾವಿನ ಎಲೆಗಳಿಗೆ 2 ಡಾಲರ್‌. ರೂಪಾಯಿ ಲೆಕ್ಕದಲ್ಲಿ 140! ಹೊಟೇಲುಗಳಲ್ಲಿ ಇಡ್ಲಿ, ಮಸಾಲೆ ದೋಸೆ, ತಾಜಾ ಕಬ್ಬಿನ ರಸ ಕೂಡ ಲಭ್ಯ! ಉಡುಪಿಯ ಕುಚ್ಚಲಕ್ಕಿ, ಅಷ್ಟೇ ಅಲ್ಲ, ಹಲ್ದೀರಾಮ…, ಎಂಟಿಆರ್‌ ಮೊದಲಾದ ಭಾರತದ ಉನ್ನತ ಉತ್ಪನ್ನಗಳೆಲ್ಲವೂ ಸಿಗುತ್ತದೆ.

ನೇರವಾಗಿ ತೋಟದಿಂದ ಮಾರುಕಟ್ಟೆಗೆ ಬೆಳೆಗಾರರೇ ಮಾರಾಟ ಮಾಡುವ ಫಾರ್ಮರ್ಸ್‌ ಮಾರ್ಕೆಟ್‌ ಒಂದು. ನಾವೇ ನೇರವಾಗಿ ತೋಟಕ್ಕೆ ಹೋಗಿ ನಮ್ಮ ಆಯ್ಕೆಯ ಹಣ್ಣು, ತರಕಾರಿ ಆರಿಸಿ ತರುವುದು ಇನ್ನೊಂದು.

ನಾವಿರುವ ಪ್ರದೇಶದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಒಂದು ಫ‌ಲೋದ್ಯಾನವನಕ್ಕೆ ಕಳೆದ ಬೇಸಿಗೆಯಲ್ಲಿ ಭೇಟಿ ನೀಡಿದ್ದೆವು. ಇಂತಹ ಹಲವಾರು ಪ್ರೇಕ್ಷಣೀಯ ಸ್ಥಳಗಳು ನಾವಿರುವ ಊರಿನ ಅಕ್ಕಪಕ್ಕದಲ್ಲಿ ಇವೆ. ಇವು ಖಾಸಗಿ ಒಡೆತನದವುಗಳಾಗಿದ್ದು ಹವ್ಯಾಸಕ್ಕೆಂದು ಆರಂಭಿಸಿ, ಕಾಲಕ್ರಮೇಣ ಬೃಹದಾಕಾರದ ತೋಟಗಳಾಗಿ ಬೆಳೆದಿವೆ. ಜೊತೆಗೆ ಪ್ರವಾಸಿ ತಾಣವಾಗಿಯೂ ಬೆಳೆದಿವೆ. ಸಂಪೂರ್ಣ ಸಾವಯವ ತೋಟಗಾರಿಕೆಯ ಈ ಉದ್ದಿಮೆ Minnetonka Apple Orchard ಸುಮಾರು 12 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. Lowell ಮತ್ತು Phyllis Schaper ದಂಪತಿಗಳು 1972ರಲ್ಲಿ ತಮ್ಮ ಖಾಸಗಿ ಉಪಯೋಗಕ್ಕೆ ಈ ಸ್ಥಳವನ್ನು ಖರೀದಿಸಿ ಕ್ರಮೇಣ 1976ರಲ್ಲಿ 600 ಸೇಬು ಹಣ್ಣಿನ ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಿದರಂತೆ. ಈ ತೋಟದಲ್ಲಿ ಸಿಹಿಕುಂಬಳ, ಸ್ಟ್ರಾಬೆರಿ ಮುಂತಾದ ಹಲವು ಬಗೆಯ ಹಣ್ಣುಹಂಪಲುಗಳನ್ನು ಹಾಗೂ ಜೋಳವನ್ನು ಬೆಳೆಯಲಾಗುತ್ತದೆ. ವಿಶೇಷತೆ ಎಂದರೆ ಒಂದಿಷ್ಟು ಶುಲ್ಕ ಪಾವತಿಸಿ ತೋಟದಲ್ಲಿ ತಿರುಗಾಡಿ ನಮಗೆ ಬೇಕಾದ ಹಣ್ಣುಹಂಪಲು ಕಿತ್ತು ತರಬಹುದು. ಉತ್ತಮ ಗುಣಮಟ್ಟದ ಮತ್ತು ಸ್ವಾದಿಷ್ಟ ಹಣ್ಣುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ!

ನಮ್ಮ ದೇಶದಲ್ಲಿ ಒಳನಾಡು ಮೀನುಗಾರಿಕೆ ಇರುವಂತೆ ಅಮೆರಿಕದಲ್ಲಿ ಸಮುದ್ರದ ಮೀನುಗಾರಿಕೆ ಒಂದು ಉದ್ದಿಮೆಯಾಗಿಸಿಕೊಂಡಿದ್ದು ಹೊಸ ಹೊಸ ತಳಿಯ ಮೀನು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದಲ್ಲದೆ, ಖಾಲಿ ಸ್ಥಳವನ್ನು ಬಾಡಿಗೆಗೆ ಪಡೆದು ಕೃಷಿ ಉತ್ಪನ್ನಗಳನ್ನು ಕೂಡ ಬೆಳೆದು ಮಾರಾಟ ಮಾಡಲೂ ಅವಕಾಶವಿದೆ. ಒಟ್ಟಿನಲ್ಲಿ ಉದ್ಯೋಗಕ್ಕೊ ಪ್ರವಾಸಕ್ಕೊ ಹೊರಡುವ ಮೊದಲು ಮಾಡಬೇಕಾಗಿರುವುದು ಇಷ್ಟೆ. ಅಮೆರಿಕದಲ್ಲಿ ಉಳಿದುಕೊಳ್ಳುವ ಸ್ಥಳದ ಹತ್ತಿರದಲ್ಲಿರುವ ಭಾರತೀಯ ಹೊಟೇಲ್‌ಗ‌ಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಹುಡುಕಿ. ಎಲ್ಲ ಸಲೀಸು.

ಮೋಹನದಾಸ ಕಿಣಿ

ಟಾಪ್ ನ್ಯೂಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Empowerment: ಬಾಳು ಬೆಳಗಿದ ಬಾಳೆ!

Empowerment: ಬಾಳು ಬೆಳಗಿದ ಬಾಳೆ!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.