ಸಂಕೀರ್ಣ ಬದುಕಿನ ರಂಗಕೃತಿ

ಹೊತ್ತು ಹೊತ್ತಿಗೆ

Team Udayavani, May 5, 2019, 6:00 AM IST

4

ಅರ್ಧಮರ್ಧ ಮನುಷ್ಯರು ಎಂಬ ಅರ್ಥವನ್ನು ಸ್ಪುರಿಸುವ ಶೀರ್ಷಿಕೆಯನ್ನು ಹೊಂದಿರುವ ಈ ಕನ್ನಡ ರೂಪಾಂತರಿತ ನಾಟಕ, ವಸ್ತು ಹಾಗೂ ಪ್ರಯೋಗ ನಾವೀನ್ಯದಿಂದಾಗಿ ಕಳೆದ ನಾಲ್ಕು ದಶಕಗಳಿಂದ ರಂಗ ಕಲಾವಿದರಿಗೆ ಸವಾಲನ್ನು ಒಡ್ಡುತ್ತಿರುವ ಅಪರೂಪದ ರಂಗಕೃತಿಯಾಗಿದೆ. 1975ರ ದಶಕದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಯಶಸ್ವೀ ಅನುವಾದ ಪ್ರಯತ್ನದ ಮೂಲಕ ಇದು ಕನ್ನಡಕ್ಕೆ ಬಂದಾಗ, ಇದರ ಓದು ಹಾಗೂ ಪ್ರಥಮ ಪ್ರಯೋಗ ನವ್ಯ ಸಂವೇದನೆಯಲ್ಲಿ ಮಿಂದೇಳುತ್ತಿದ್ದ ಕನ್ನಡ ಸಾಹಿತ್ಯ ವಲಯದಲ್ಲಿ ದಾಖಲೆಯನ್ನೇ ನಿರ್ಮಿಸಿತೆನ್ನಬಹುದು. ಈ ನಾಟಕ ಪತಿ ಹಾಗೂ ಮಕ್ಕಳ ವ್ಯಕ್ತಿತ್ವದ ಅರೆಕೊರೆಗಳ ಬಗ್ಗೆ ಚಿಂತಿತಳಾಗಿರುವ ಸಂಸಾರಸ್ಥೆಯೊಬ್ಬಳ ತುಡಿತ-ತಳಮಳಗಳನ್ನು ಅರ್ಧಮರ್ಧವೆನ್ನಿಸಬಹುದಾದ ಸಂಭಾಷಣೆಗಳ ಮೂಲಕ, ಒಬ್ಬನೇ ವ್ಯಕ್ತಿಯ ನಾಲ್ಕು ಮುಖಗಳಂತೆ ತೋರಿಬರುವ ನಾಲ್ಕು ಪುರುಷ ಪಾತ್ರಗಳ ಮೂಲಕ ಬಿತ್ತರಿಸುವಲ್ಲಿ ಯಶಸ್ವಿಯಾಗಿರುವ ಪಠ್ಯ ಕೃತಿಯಾಗಿಯೂ ತನ್ನ ಅನನ್ಯತೆಯನ್ನು ಸಾಬೀತುಪಡಿಸಿದೆ. ಈ ನಾಲ್ಕು ಪುರುಷ ಪಾತ್ರಗಳನ್ನು ಒಬ್ಬನೇ ವ್ಯಕ್ತಿ ನಿರ್ವಹಿಸಬೇಕೆಂಬ ವಿನೂತನ ಕಲ್ಪನೆ ಮೋಹನ್‌ ರಾಕೇಶ್‌ ಅವರದಾಗಿತ್ತು; ಈ ನಾಲ್ಕೂ ಪಾತ್ರಗಳು ನಾಲ್ಕು ಬಗೆಯ ಶೈಲಿಗಳಲ್ಲಿ ಸಂಭಾಷಣೆಗಳನ್ನು ಪ್ರಸ್ತುತಪಡಿಸಬೇಕೆಂಬ ದೃಷ್ಟಿಯಿಂದ ನಾಲ್ಕು ಬಗೆಯ ಹಿಂದಿ “ಬೋಲಿ’ಗಳನ್ನು ಅವರು ಮೂಲ ಕೃತಿಯಲ್ಲಿ ಬಳಸಿಕೊಂಡಿದ್ದು ತಾನು ಈ ಕನ್ನಡ ರೂಪಾಂತರದಲ್ಲೂ ಭಿನ್ನ ಭಿನ್ನ ವಾಕ್‌ಶೈಲಿಗಳನ್ನು ಬಳಸಿಕೊಂಡಿದ್ದೇನೆಂದು ಹೇಳಿಕೊಂಡಿರುವ ಅನುವಾದಕರು, ಈ “ಚತುರ್ವಿಧ ಕನ್ನಡ ಪ್ರಯೋಗ’ದ ಪರಿಣಾಮ ವಿವಿಧ ಪ್ರಯೋಗಗಳಲ್ಲಿ ಹೇಗಿತ್ತು ಎನ್ನುವುದನ್ನೂ ಪ್ರಸ್ತಾವನಾ ರೂಪದ ಬರಹದಲ್ಲಿ ನಮ್ಮ ಗಮನಕ್ಕೆ ತರುತ್ತಾರೆ. ಈ ನಾಟಕದ ಒಟ್ಟು ಆಶಯವೇನು? ಅದು “ವ್ಯಕ್ತಿ 4′ ಎಂಬ ಪಾತ್ರದ ಮೂಲಕ ಹೀಗೆ ಹೊರಬಿದ್ದಿದೆ- ಇದು ಈ ವ್ಯಕ್ತಿ, ಈ ನಾಟಕ ನಾಯಕಿಗೆ ಹೇಳುವ ಮಾತು: “”ಮುಖ್ಯಮಾತು ಇಷ್ಟೇ… ಮಹೇಂದ್ರನ ಬದಲು ನಿನ್ನ ಜೀವನದೊಳಗೆ ಬೇರೆ ಯಾರೇ ಬಂದಿದ್ದರೂ, ವರ್ಷ ಎರಡು ವರ್ಷ ಆದ ಕೂಡಲೇ ಒಬ್ಬ ಅಯೋಗ್ಯ ಮನುಷ್ಯನ ಜೊತೆ ಮದುವೆ ಮಾಡಿಕೊಂಡೆ ಅಂತ ನಿನಗೆ ಅನಿಸಿಯೇ ಬಿಡತಿತ್ತು… ಅವನ ಜೀವನದೊಳಗೂ ಮತ್ತೂಬ್ಬ ಯಾವನಾದರೂ ಮಹೇಂದ್ರ, ಯಾವನಾದರೂ ಜುನೇಜಾ, ಯಾವನಾದರೂ ಶಿವಜೀತ, ಇಲ್ಲವೆ ಮತ್ತೂಬ್ಬ ಜಗಮೋಹನ ಬಂದಿರತಿದ್ದ… ಏನೇನೋ ಒಮ್ಮೆಲೇ ಆಗಬೇಕು, ಏನೇನೋ ಒಟ್ಟಿಗೇ ಪಡಕೋಬೇಕು, ಏನೇನೋ ಒಟ್ಟಿಗೇ ಸುತ್ತಿಕೊಂಡು ಬದುಕಬೇಕು ಅನ್ನೋದ ನಿನ್ನ ಅರ್ಥ…” ಪೂರ್ಣತೆಗೆ ಹಾತೊರೆಯುವ ಜೀವವೊಂದರ ತಳಮಳಗಳನ್ನು ಹೀಗೆ ಕಾವ್ಯಾತ್ಮಕವಾಗಿ ದಾಖಲಿಸಿರುವ ಈ ನಾಟಕ, ಕನ್ನಡಕ್ಕೆ ಅನುವಾದಗೊಂಡು ನಾಲ್ಕೂವರೆ ದಶಕಗಳ ಬಳಿಕ ನಮ್ಮ ಸಂಕೀರ್ಣ ಬದುಕಿನ ಭಗ್ನ ಚರಿತ್ರೆ ಹಾಗೂ ಉರಿ ಉರಿ ವರ್ತ”ಮಾನ’ವನ್ನು ಪರಿಣಾಮಕಾರಿಯಾಗಿ ಬಿತ್ತರಿಸುತ್ತಿದೆ. ಈ ನಡುವೆ ಹಲವು ಪ್ರಯೋಗಗಳನ್ನು ಕಂಡಿರುವ ಹೆಗ್ಗಳಿಕೆ ಈ ಕನ್ನಡ ಆವೃತ್ತಿಗಿದೆ.

ಆಧೇ ಅಧೂರೇ (ನಾಟಕ)
ಮೂಲ : ಮೋಹನ ರಾಕೇಶ್‌
ಹಿಂದಿಯಿಂದ ಕನ್ನಡಕ್ಕೆ: ಸಿದ್ಧಲಿಂಗ ಪಟ್ಟಣಶೆಟ್ಟಿ
ಪ್ರ.: ಅನನ್ಯ ಪ್ರಕಾಶನ, ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
ಮೊದಲ ಮುದ್ರಣ: 2018 ಬೆಲೆ: ರೂ. 120

ಜಕಾ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.