ಒಂದು ಝೆನ್‌ ಕತೆ: ಬುದ್ಧಿಸಂ ಎಂದರೇನು?


Team Udayavani, Dec 29, 2019, 5:07 AM IST

bg-87

ತನ್ನ ಪ್ರತಿಯೊಂದು ವಸ್ತುಗಳ ಬಗ್ಗೆಯೂ ತುಂಬಾ ಕಾಳಜಿ ಮಾಡುತ್ತಿದ್ದ ಝೆನ್‌ ವಿದ್ಯಾರ್ಥಿ ಶುನ್‌ಶುಯಿ, ಗುರು ಸುಜುಕಿ ರೋಶಿಯ ಪ್ರವಚನಗಳನ್ನು ಕೇಳಲು ಪ್ರತಿದಿನ ಸಂಜೆ ಸಭಾಗೃಹಕ್ಕೆ ಹೋಗುತ್ತಿದ್ದ. ಕೆಲವೊಮ್ಮೆ ಪ್ರವಚನಗಳು ಪುನರಾವರ್ತನೆಯಾಗುತ್ತಿದ್ದವು. ಆದರೂ ಕೇಳುಗರು ಬಹಳ ಆಸಕ್ತಿಯಿಂದ ಆಲಿಸುತ್ತಿರುವುದನ್ನು ಕಂಡು ಶುನ್‌ಶುಯಿಗೆ ವಿಸ್ಮಯವಾಗುತ್ತಿತ್ತು. ಆದರೂ, ಹೊಸ ವಿಷಯಗಳು ಸಿಗಬಹುದೆಂದು ವಿದ್ಯಾರ್ಥಿ ಪ್ರವಚನಗಳಿಗೆ ಹಾಜರಾಗುವುದನ್ನು ತಪ್ಪಿಸುತ್ತಿರಲಿಲ್ಲ.

ಹೀಗೆ, ಸುಮಾರು ಒಂದು ವರ್ಷವೇ ಮುಗಿದು ಹೋಯಿತು. ಒಂದು ದಿನ ಸಂಜೆ ಪ್ರವಚನ ಮುಗಿದಿತ್ತು. ಗುರು ಸುಜುಕಿ ರೋಶಿ ಸಭಿಕರಲ್ಲಿ, “ಪ್ರಶ್ನೆಗಳಿವೆಯೆ?’ ಎಂದು ಕೇಳಿದ. ಸಭಿಕರೆಲ್ಲರೂ ತಮ್ಮ ಸಂಶಯಗಳನ್ನು ಹೇಳಿಕೊಳ್ಳುತ್ತಿದ್ದರು. ಸುಜುಕಿ ರೋಶಿ ಅವುಗಳಿಗೆಲ್ಲ ಶಾಂತಚಿತ್ತನಾಗಿ ಉತ್ತರಿಸುತ್ತಿದ್ದ.

ತಾನು ಇಷ್ಟೊಂದು ದಿನ ಪ್ರವಚನಗಳನ್ನು ಕೇಳಿದರೂ ಅದನ್ನು ಚುಟುಕಾಗಿ ಯಾರ ಬಳಿಯಲ್ಲಾದರೂ ಹೇಳಿಕೊಳ್ಳುವುದು ಸಾಧ್ಯವಿಲ್ಲವಲ್ಲ ಎಂಬ ಕೊರಗು ಶುನ್‌ಶುಯಿಗೆ ಕಾಡುತ್ತಿತ್ತು.

ಪ್ರಶ್ನೋತ್ತರದ ಅವಧಿಯಲ್ಲಿ ಈ ಬಗ್ಗೆ ಕೇಳಲೋ ಬೇಡವೋ ಎಂಬ ಆತಂಕದಿಂದಲೇ ಅವನು ಪ್ರಶ್ನಿಸಿದ. “”ಸುಜುಕಿ ರೋಶಿ, ನಾನು ಬಹಳ ಸಮಯದಿಂದ ನಿಮ್ಮ ಪ್ರವಚನಗಳನ್ನು ಕೇಳುತ್ತಲೇ ಇದ್ದೇನೆ. ಬುದ್ಧಿಸಂ ಬಗ್ಗೆ ನೀವು ಎಷ್ಟೊಂದು ಪ್ರವಚನಗಳನ್ನು ನೀಡಿದ್ದೀರಿ. ಆದರೂ ನನಗೆ ಸಾರಾಂಶ ರೂಪದಲ್ಲಿ ಬುದ್ಧಿಸಂ ಬಗ್ಗೆ ಹೇಳಬಹುದೆ?”

“”ಸಾರಾಂಶ… ಅಂದರೆ?”
“”ಸಾರಾಂಶ ಎಂದರೆ… ಚುಟುಕಾಗಿ”
“”ಚುಟುಕಾಗಿ ! ಚುಟುಕಾಗಿ ಎಂದರೆ?”
“”ಎಂದರೆ, ಬುದ್ಧಿಸಂ ಎಂದರೇನು ಅಂತ ಒಂದೆರಡು ಪದಗಳಲ್ಲಿ ಹೇಳುತ್ತೀರಾ?” ಎಂದು ಕೇಳಿದ.
ಸಭೆಯಲ್ಲಿದ್ದವರೆಲ್ಲರೂ ನಕ್ಕರು.
ಆದರೆ, ಶುನ್‌ಶುಯಿ ಮಾತ್ರ ಗುರುವಿನ ಉತ್ತರ ಬರೆದುಕೊಳ್ಳಲು ಪೆನ್ನು-ಪುಸ್ತಕ ಸಿದ್ಧವಾಗಿಟ್ಟಿದ್ದ.
ಸುಜುಕಿ ರೋಶಿ ಹೇಳಿದ, “ಪ್ರತಿಯೊಂದೂ ಬದಲಾಗುತ್ತದೆ. ಮುಂದಿನ ಪ್ರಶ್ನೆ?’
ಶುನ್‌ಶುಯಿ ಕಾಳಜಿಯಿಂದ ಬರೆದುಕೊಂಡ, “” ಪ್ರತಿಯೊಂದು ಬದಲಾಗುತ್ತದೆ”

ಕೆಆರ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.