ಚಪ್ಪಲಿ ಕಳ್ಳನಿಗೆ ಥ್ಯಾಂಕ್ಸ್‌

ವಾಟ್ಸಾಪ್‌ ಕತೆ

Team Udayavani, Sep 15, 2019, 5:00 AM IST

as-7

ಪುಟ್ಟಿ ಅಂದು ತಾನು ಕಷ್ಟಪಟ್ಟು ಉಳಿಸಿದ್ದ ಪಾಕೆಟ್‌ ಮನಿಯಲ್ಲಿ ಚೆಂದದೊಂದು ಓಲೆಯನ್ನು ಕೊಳ್ಳುವ ಯೋಚನೆ ಮಾಡಿದಳು. ತನ್ನೂರಿನಲ್ಲಿದ್ದ ಏಕೈಕ ಫ್ಯಾನ್ಸಿಸ್ಟೋರ್‌ಗೆ ಹೋಗಿದ್ದಳು. ಆ ಫ್ಯಾನ್ಸಿಸ್ಟೋರ್‌ನ ಹೊರಗೆ ಹಾಕಿದ್ದ , “ಪಾದರಕ್ಷೆಗಳನ್ನು ಹೊರಗಿಡಿ’ ಎಂಬ ಬೋರ್ಡ್‌ ನೋಡಿ ಚಪ್ಪಲಿಯನ್ನು ಹೊರಗೆ ಬಿಟ್ಟು ಒಳಗೆ ಕಾಲಿ ಟ್ಟಳು.
ತನಗೆ ಬೇಕಾದ ಓಲೆಯನ್ನು ಕೊಂಡು ಹೊರಗೆ ಬಂದು ನೋಡಿದರೆ ಅಲ್ಲಿ ಚಪ್ಪಲಿ ಇಲ್ಲ. ಅವಳ ಚಪ್ಪಲಿಯನ್ನು ಯಾರೋ ಕದ್ದೊಯ್ದಿದ್ದರು. ಪುಟ್ಟ ಚಪ್ಪಲಿಯನ್ನು ದೊಡ್ಡ ಕಳ್ಳನಿಗೆ ಧರಿಸಿಕೊಂಡು ಹೋಗಲು ಸಾಧ್ಯವಾಗುತ್ತದೆಯೆ? ಬಹುಶಃ ಅವಳ ಮಗಳಿಗೆಂದು ಅದನ್ನು ಒಯ್ದಿರಬೇಕು.

ಆ ಉರಿಬಿಸಿಲಿನಲ್ಲಿ ಬರಿಗಾಲಿನಲ್ಲಿಯೇ ಚಪ್ಪಲಿ ಕಳ್ಳನಿಗೆ ಬೈಯುತ್ತ ಮನೆಗೆ ಬಂದ ಪುಟ್ಟಿ ಅಮ್ಮನಲ್ಲಿ ತನ್ನ ದುಃಖ ವನ್ನು ತೋಡಿ ಕೊಂಡಳು.
ಅಮ್ಮ ಚಪ್ಪಲಿ ಕಳ್ಳನಿಗೆ ತಾವೊಂದಿಷ್ಟು ಬೈಯುತ್ತ ಹೊಸ ಚಪ್ಪಲಿ ತೆಗೆದುಕೊಳ್ಳಲು ಹಣ ಕೊಟ್ಟರು.
ಪುಟ್ಟಿ ಅಮ್ಮನಿಗೆ ಕೇಳಿಸದಂತೆ ಚಪ್ಪಲಿ ಕಳ್ಳನಿಗೆ ಥ್ಯಾಂಕ್ಸ್‌ ಹೇಳಿದಳು.

ಸುಶ್ಮಿತಾ ನೇರಳಕಟ್ಟೆ

ಬೆಂಗಳೂರಿಗ !
ಊರಿನಿಂದ ಬೆಂಗಳೂರಿಗೆ ಅಣ್ಣನ ಮನೆಗೆ ಬಂದಿದ್ದ ತಂಗಿ ಸಂಧ್ಯಾಳಿಗೆ ಬಟ್ಟೆ ಕೊಡಿಸಲು ಸತೀಶ ಆಕೆಯನ್ನು ಬಹುಮಹಡಿಯ ಬಟ್ಟೆ ಮಳಿಗೆಗೆ ಕರೆದುಕೊಂಡು ಹೋದ. ಬಟ್ಟೆಗಳ ಆಯ್ಕೆ ಮುಗಿದ ಮೇಲೆ ಇಬ್ಬರೂ ಬಿಲ್‌ ಪಾವತಿಗೆಂದು, ಲಿಫ್ಟ್ ರಶ್‌ ಇದ್ದುದರಿಂದ ಕೆಳಗಿನ ಫ್ಲೋರಿಗೆ ಮೆಟ್ಟಿಲುಗಳ ಮುಖಾಂತರ ಹೊರಟರು.

ಪಕ್ಕದಲ್ಲಿ ವಯಸ್ಸಾದ ಹಿರಿ ಹೆಂಗಸೊಬ್ಬರು ನಿಧಾನಕ್ಕೆ ಬದಿಯ ಸರಳು ಹಿಡಿದು ಇಳಿಯುತ್ತಿದ್ದರು. ಜನಸಂದಣಿಯ ನಡುವೆ ಸತೀಶ್‌ ಹೆಚ್ಚು ಗಮನ ನೀಡದೆ ಪಟಪಟನೆ ಮೆಟ್ಟಿಲು ಇಳಿದು ಕೆಳಬಂದ. ಇತ್ತ ಸಂಧ್ಯಾ ತನ್ನ ಕೈಚಾಚಿ, “ಸಹಾಯ ಮಾಡಲಾ?’ ಎಂದು, ಹಿರಿಯ ಜೀವವನ್ನು ಕೈಹಿಡಿದು ಮೆಟ್ಟಿಲಿಳಿಸಿಕೊಂಡು ಬಂದಳು.  ಹಿರಿಯ ಮಹಿಳೆ ತುಂಬು ಮೆಚ್ಚುಗೆಯ ನೋಟದಿಂದ ಸಂಧ್ಯಾಳನ್ನು ಬೀಳ್ಕೊಟ್ಟಳು.

ಸತೀಶನಿಗೆ ಬೆಂಗಳೂರಿಗೆ ಬಂದು ತಾನ್ಯಾವಾಗ ಅಕ್ಕಪಕ್ಕದವರನ್ನು ಗಮನಿಸದಷ್ಟು ಇನ್‌ಸೆನ್ಸಿಟಿವ್‌ ನಗರಜೀವಿಯಾಗಿ ಬದಲಾದೆ ಎಂದು ಕಸಿವಿಸಿಯಾದ. ಇನ್ನೂ ಊರಿನ ಮನಸ್ಥಿತಿಯನ್ನು ಉಳಿಸಿಕೊಂಡಿರುವ ತಂಗಿಯನ್ನು ಅಭಿಮಾನದಿಂದ ನೋಡ ತೊಡಗಿದ.

ವಿನಯಾ ನಾಯಕ್‌

ಕಾಲ ಬದಲಾಗಿದೆ !
ಬೇಕಿರಲಿಲ್ಲ. ಅವಳು ಇಲ್ಲಿ ಸಿಗುವುದು ಬೇಕಿರಲಿಲ್ಲ, ತರಗತಿಯಲ್ಲಿ ಜೊತೆಯಾದವಳು ಬಹುವರ್ಷಗಳ ನಂತರ ಇಂದು ತಟ್ಟನೆ ಬಂದು ನಿಲ್ಲುವುದೇ ಇದಿರು!

ಆದದ್ದು ಇಷ್ಟೇ. ಬಹು ದಿನದ ಆಸೆಯಂತೆ ಮಂಗಳೂರು ಫೋರಂಮಾಲ್‌ಗೆ ಹೋಗಿದ್ದೆ. ಅಲ್ಲೊಂದು ಬ್ಯಾಗ್‌ ಶಾಪ್‌ ಇದೆ, ಒಳ್ಳೆಯ ಕಲೆಕ್ಷನ್‌ ಇದೆಯೆಂದು ಯಾರೋ ಹೇಳಿದ್ದರಂತೆ. ಹಾಗಾಗಿ, ನನಗೂ ನೋಡಬೇಕು ಅಂದಳು ಅಂತ ಕರೆದುಕೊಂಡು ಹೋಗಿದ್ದೆ. ಅಲ್ಲಿ ಒಬ್ಬ ಮಹಿಳೆ ಯಾವುದೋ ವಿಷಯಕ್ಕೆ ಶಾಪ್‌ ಹುಡುಗಿಯ ಜೊತೆ ಚರ್ಚೆ ಮಾಡುತ್ತಿದ್ದಳು. ತನ್ನದೇ ಸರಿ ಅಂತ ಜಿದ್ದಿಗೆ ಬಿದ್ದವಳಂತೆ ಮಾತಾಡುತ್ತಿದ್ದಳು. ಸೇಲ್ಸ… ಗರ್ಲ್ ತಾಳ್ಮೆಯಿಂದ ಈ ಸನ್ನಿವೇಶವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಳು.

ಯಾಕೋ ಆಕೆ ತಿರುಗಿ ನೋಡಿದಾಗ ಹಿಂದೆ ನಾನೇ ಇರಬೇಕೆ!
ಆಕೆ ಕಾಲೇಜಿನಲ್ಲಿ ನನ್ನ ಸ್ಟೂಡೆಂಟ್ ಜ್ಯೂನಿಯರ್‌ಗಳಿಗೆ ತೊಂದರೆ ಕೊಟ್ಟು ಸಿಕ್ಕಿ ಬಿದ್ದಾಗ ಇಡೀ ದಿನ ಪ್ರಿನ್ಸಿಪಾಲ್‌ ರೂಮ್‌ ಹೊರಗಡೆ ನಿಲ್ಲಿಸಿದ್ದು ನೆನಪಾಯಿತು.

ಕಾಲ ಬದಲಾಗಿದೆ.
ಜಗಳಗಂಟಿ ಬದಲಾಗಿಲ್ಲ !

ಅಶ್ವಿ‌ನಿ ಮೂರ್ತಿ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.