ಎಲ್ಲಿಯ ಯಲ್ಲಾಪುರ ಎಲ್ಲಿಯ ನ್ಯೂಜೆರ್ಸಿ 


Team Udayavani, Jan 7, 2018, 6:15 AM IST

train.jpg

ಎಲ್ಲಿಯ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ? ಎಲ್ಲಿಯ ಅಮೆರಿಕದ ನ್ಯೂಜೆರ್ಸಿ? ಸರಿಸುಮಾರು 13, 105 ಕಿ.ಮೀ ದೂರವಿರುವ ನ್ಯೂಜೆರ್ಸಿ ಮತ್ತು ಯಲ್ಲಾಪುರವನ್ನು ಬೆಸೆದದ್ದು ಕಾಷ್ಠ ಶಿಲ್ಪಕಲೆ !

ದಕ್ಷಿಣಭಾರತದಲ್ಲಿ ಸತ್ಪತಿಗಳೆಂದು ಕರೆಯಲಾಗುವ ಕಾಷ್ಠಶಿಲ್ಪ ಕಲಾಕಾರರ  ಗುಡಿಗಾರ ಕುಟುಂಬವೊಂದು ಯಲ್ಲಾಪುರದಲ್ಲಿ ನೆಲೆಸಿದೆ. ಈ ಕುಟುಂಬದ ಕಲೆಗೀಗ ಹೆಚ್ಚು ಬೇಡಿಕೆ ಬಂದಿದೆ. ಅಮೇರಿಕದ ನ್ಯೂಜೆರ್ಸಿಯಲ್ಲಿ ಈ ವರ್ಷ ಪ್ರತಿಷ್ಠಾಪನೆಗೊಳ್ಳಲಿರುವ ಸ್ವಾಮಿ ನಾರಾಯಣ ಮಂದಿರದ ಕಾಷ್ಠಶಿಲ್ಪ ತಯಾರಿಯ ಮೂಲಕ ಈ ಕುಟುಂಬ ಅಂತರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದಿದೆ.

ಸ್ವಾಮಿ ನಾರಾಯಣ ಸಂಪ್ರದಾಯದ ಸ್ಥಾಪಕರಾದ ಸ್ವಾಮಿ ನಾರಾಯಣರು ಉತ್ತರಪ್ರದೇಶದಲ್ಲಿ ಜನಿಸಿ, ಗುಜರಾತ್‌ನಲ್ಲಿ ನೆಲೆಸಿದ್ದಾರೆ. ಸ್ವಾಮಿ ನಾರಾಯಣ ಮಂತ್ರದ ಮೂಲಕ ಜನಜನಿತರಾದ ಇವರ ಹೆಸರಿನಲ್ಲಿ ಇಂದು ಗುಜರಾತ್‌ನ ವಡೋದರಾ, ಭುಜ್‌, ಮುಳಿ, ವಡ್ತಾಳ್‌, ಜುನಾಗಢ್‌, ದೋಲೆರಾ, ಡೋಕ್ಲಾ, ಗದು³ರ್‌ ಮತ್ತು ಜೇತಲ್ಪುರ್‌ನಲ್ಲಿ ಮಂದಿರಗಳನ್ನು ಕಾಣಬಹುದು. ಗುಜರಾತ್‌ನ ವಡೋದರಾದ ಸ್ವಾಮಿ ನಾರಾಯಣ ಮಂದಿರ ತುಂಬಾ ಪ್ರಸಿದ್ಧವಾದುದು. ಕಾಷ್ಠ ಶಿಲ್ಪದ ಕೆತ್ತನೆಯಲ್ಲಿ ಮಂದಿರ ನಿರ್ಮಾಣದ ಪಣ ತೊಟ್ಟ ಅಲ್ಲಿನ ಸ್ವಾಮಿಜಿಗಳು ಕೆತ್ತನೆಕಾರರನ್ನು ಹುಡುಕಿಕೊಂಡು ಹೂರಟಿದ್ದು ಕರ್ನಾಟಕದ ಕಡೆಗೆ. ಹಾಗೆ ಕುಮಟಾ, ಅಂಕೋಲಾದಲ್ಲಿ ಸುತ್ತಾಡುವಾಗ ಯಲ್ಲಾಪುರಕ್ಕೂ ಬಂದ ಅವರಿಗೆ ಕಣ್ಣಿಗೆ ಬಿದ್ದದ್ದು ಬಿಕ್ಕು ಗುಡಿಗಾರರ ಕಲಾ ಕೇಂದ್ರ !

ಗುಡಿಕೈಗಾರಿಕೆಗೆ ರಾಷ್ಟ್ರಪ್ರಸಿದ್ಧಿ
ಅಲ್ಲಿಯವರೆಗೆ ತೆರೆಯ ಮರೆಯಲ್ಲಿ ಕೆತ್ತನೆಯನ್ನೇ ಜೀವನದ ಉಸಿರಾಗಿಸಿಕೊಂಡು ಬದುಕುತ್ತಿದ್ದ ಗುಡಿಗಾರರ ಕುಟುಂಬಕ್ಕೆ ರಾಷ್ಟ್ರಮನ್ನಣೆ ದೊರೆಯುವ ಅವಕಾಶ ದೊರೆಯಿತು. ಗುಡಿಗಾರ ಕುಟುಂಬದ ಕಲೆಯನ್ನು ಮೆಚ್ಚಿದ ಸ್ವಾಮಿಜೀಗಳು ವಡೋದರಾದ ಸ್ವಾಮಿ ನಾರಾಯಣ ಮಂದಿರದ ಕಾಷ್ಠ ಶಿಲ್ಪ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದರು. 2000ನೇ ಇಸವಿಯಲ್ಲಿ ನಿರ್ಮಾಣಗೊಂಡ ಗುಜರಾತಿನ ಸ್ವಾಮಿ ನಾರಾಯಣ ಮಂದಿರದ ಕಾಷ್ಠ ಶಿಲ್ಪದ ಕೆತ್ತನೆಯನ್ನು ಅತಿಯಾಗಿ ಮೆಚ್ಚಿಕೊಂಡ ಸ್ವಾವಿೂಗಳು ಈ ವರ್ಷ ಅಮೆರಿಕದ ನ್ಯೂಜೆರ್ಸಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸ್ವಾಮಿ ನಾರಾಯಣ ಮಂದಿರದ ಕಾಷ್ಠ ಶಿಲ್ಪ ನಿರ್ಮಾಣದ ಉಸ್ತುವಾರಿಯನ್ನು ಗುಡಿಗಾರ ಕಲಾ ಕೇಂದ್ರಕ್ಕೆ ವಹಿಸಿದ್ದಾರೆೆ.

ಈ ಸ್ವಾಮಿ ನಾರಾಯಣ ಮಂದಿರದ ಮುಖ ಮಂಟಪ, ಛಾವಣಿ, ಬಾಗಿಲುಗಳು ಹಾಗೂ ದೇವರ ಪೀಠಗಳು ಗುಡಿಗಾರ ಕಲಾ ಕೇಂದ್ರದಲ್ಲಿ ಕಳೆದ ಏಳೆಂಟು ತಿಂಗಳಿನಿಂದ ಇಪ್ಪತ್ತಕ್ಕೂ ಹೆಚ್ಚು ಶಿಲ್ಪಿಗಳಿಂದ ರೂಪುಗೊಳ್ಳುತ್ತಿವೆ. ಇದರಲ್ಲಿ ನಾಲ್ವರು ಮಹಿಳಾ ಶಿಲ್ಪಿಗಳಿರುವುದು ವಿಶೇಷ. ಈ ಎಲ್ಲ ಕಲಾಕೃತಿಗಳನ್ನು ಭಾರತದಲ್ಲಿಯೇ ಎರಡನೆಯ ಅತಿ ದೊಡª ಕಟ್ಟಿಗೆ ಡಿಪೋವಾದ ಕಿರವತ್ತಿಯಲ್ಲಿ ಖರೀದಿಸಿದ ಸಾಗವಾನಿ ಮರದಿಂದ ತಯಾರಿಸಲಾಗುತ್ತಿದ್ದು, ಸುಮಾರು ಐದು ಸಾವಿರ ಘನ ಅಡಿ ಸಾಗವಾನಿ ಮರವನ್ನು ಈ ಕೆತ್ತನೆ ಕೆಲಸಕ್ಕೆ ಬಳಸಲಾಗುತ್ತಿದೆ ಎಂದು ಕೆತ್ತನೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕಲಾ ಕೇಂದ್ರದ ಮುಖ್ಯಸ್ಥರಾದ ಸಂತೋಷ ಗುಡಿಗಾರ ಮತ್ತು ಅರುಣ ಗುಡಿಗಾರ ಹೇಳುತ್ತಾರೆ.

ಈ ಎಲ್ಲ ಕಲಾಕೃತಿಗಳು ಒಂದೆರಡು ತಿಂಗಳಲ್ಲಿ ಅಂತಿಮಗೊಂಡು ಯಲ್ಲಾಪುರದಿಂದ ಮುಂಬಯಿಗೆ ರಸ್ತೆ ಮೂಲಕ ಚಲಿಸಿ, ಅಲ್ಲಿಂದ ನ್ಯೂಜೆರ್ಸಿಗೆ ಹಡಗಿನಲ್ಲಿ ಪ್ರಯಾಣಿಸಿ ಯಲ್ಲಾಪುರದ ಕಲಾ ಕೀರ್ತಿಯನ್ನು ಅಮೆರಿಕದಲ್ಲಿ ಬೆಳಗಿಸಲಿವೆ!

ಟಾಪ್ ನ್ಯೂಸ್

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.