ಹೊಸ ವರ್ಷಕ್ಕೆ ಕೃತಿ- ಸ್ಫೂರ್ತಿ


Team Udayavani, Jan 20, 2019, 12:30 AM IST

baluvatha.jpg

ಹೊಸ ವರ್ಷದ ಹೊತ್ತಿಗೆ ಪ್ರತಿಜ್ಞೆಗಳನ್ನು, ಸಂಕಲ್ಪಗಳನ್ನು ಮಾಡುತ್ತೇವೆ. ಕುಡಿತ ಬಿಡುತ್ತೇನೆ, ಧೂಮಪಾನ ಮಾಡುವುದಿಲ್ಲ, ತಡರಾತ್ರಿಯ ತನಕ ಗೆಳೆಯರ ಜೊತೆ ಮೋಜು ಮಾಡುವುದಿಲ್ಲ- ಹೀಗೆ. ಹೇಳುವುದು ಸುಲಭ, ವಚನಗಳನ್ನು ಮರೆತುಬಿಡುವುದು ಮತ್ತೂ ಸುಲಭ ! ರಾಜ್ಯದ ಖ್ಯಾತ ಮನೋವೈದ್ಯರಲ್ಲಿ ಒಬ್ಬರಾದ ಡಾ. ಪಿ. ವಿ. ಭಂಡಾರಿಯವರ ಬಾಳುವಂಥ ಹೂವೇ, ಬಾಡುವಾಸೆ ಏಕೆ ಪುಸ್ತಕ ಕಳೆದ ಜನವರಿ ಒಂದನೆಯ ತಾರೀಕಿನಂದು ಬಿಡುಗಡೆಯಾಗಿದೆ. ಕಾವ್ಯಾತ್ಮಕ ಹೆಸರಿನ ಈ ಪುಸ್ತಕ ಕೆಟ್ಟ ಚಟಗಳಿಗೆ ದಾಸರಾದವರ ಪಾಲಿಗೆ ಹಿತೋಪದೇಶಿಯಾದ ಕಾವ್ಯವಾಗಿದೆ.

ಶೀರ್ಷಿಕೆಯೇ ಸೂಚಿಸುವಂತೆ ಕುಡಿತದ ಚಟ ಅಂಟಿಸಿಕೊಂಡ ವರನ್ನು ಗುರಿಯಾಗಿಟ್ಟು ಬರೆದ ಪುಸ್ತಕ. ಇಲ್ಲಿನ ಹತ್ತಾರು ಸ್ಫೂರ್ತಿಯುತ ಕತೆಗಳು ಕೇವಲ ಕುಡಿತದ ಚಟ ಇರುವವರಿಗೆ ನಿಜ ಮಾರ್ಗದರ್ಶಕ ಮಾತ್ರವಲ್ಲ , ಬದುಕಿನಲ್ಲಿ ಸಾಕಷ್ಟು ಬಾರಿ ಮಾಡಿದ ಸಂಕಲ್ಪಗಳನ್ನು , ಪ್ರತಿಜ್ಞೆಗಳನ್ನು ನೆನಪಿಸಿಕೊಳ್ಳುವಲ್ಲಿಯೂ ಉಪಕಾರಿ.

ಡಾ. ಪಿ.ವಿ. ಭಂಡಾರಿ ಮತ್ತು ಸಹೋದ್ಯೋಗಿ ನಾಗರಾಜ್‌ಮೂರ್ತಿ ತಮ್ಮ ವೈದ್ಯಕೀಯ ವೃತ್ತಿಯ ಸಮಯದಲ್ಲಿ ಕಂಡು, ಚಿಕಿತ್ಸೆ ನೀಡಿ, ನೈಜ ಅನುಭವದಲ್ಲಿ ಬರೆದ ಬರಹಗಳಿವು. ಆಪ್ತ ಭಾಷೆಯಲ್ಲಿ, ಸಾಮಾನ್ಯರಿಗೂ ನಿಲುಕುವ ಧಾಟಿಯಲ್ಲಿ ಇಲ್ಲಿನ ಕತೆಗಳ ನಿರೂಪಣೆ ಇದೆ. ಕುಡಿತದ ಚಟ ಬಿಡಬೇಕು ಎಂದು ಪ್ರತಿಯೊಬ್ಬ ಕುಡುಕನೂ ಅಂದುಕೊಳ್ಳುತ್ತಾನೆ. ಅದಕ್ಕೆ ಕುಟುಂಬ- ಸಮಾಜದ ಸಹಕಾರವಿರುವುದಿಲ್ಲ. ಆತನ ಕುಟುಂಬ, ಗೆಳೆಯರು, ಹೆತ್ತವರು- ಒಟ್ಟಾರೆ ಇಡೀ ಸಮಾಜ ಯಾವ ರೀತಿಯಲ್ಲಿ ಅವನಿಗೆ /ಅವಳಿಗೆ ನೆರವಾಗಬಹುದು ಎಂಬ ಮಾಹಿತಿಯೂ ಇಲ್ಲಿ ಅಡಕವಾಗಿದೆ. 

ಮಾನವೀಯ, ಸಾಮಾಜಿಕ ಕಳಕಳಿಯ ಕೃತಿ ಇದು.

ಬಾಳುವಂಥ ಹೂವೇ, ಬಾಡುವಾಸೆ ಏಕೆ?
(ಮದ್ಯವ್ಯಸನ ರೋಗ-ಪರಿಣಾಮಗಳ ಕುರಿತ ಲೇಖನಗಳು)
ಲೇ.: ಡಾ|| ಪಿ.ವಿ.ಭಂಡಾರಿ, ನಾಗರಾಜ್‌ ಮೂರ್ತಿ
ಪ್ರ.: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004
ಮೊಬೈಲ್‌: 8026607011, 9036312786
ಮೊದಲ ಮುದ್ರಣ: 2019 ಬೆಲೆ: ರೂ. 160

– ರಹೀಂ ಉಜಿರೆ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.