ಅಗರಬತ್ತಿಯಿಂದ ಬಾಳ ಬುತ್ತಿ


Team Udayavani, Oct 16, 2019, 5:11 AM IST

u-5

ಮಹಿಳೆಯರು ಇಂದು ಸ್ವಾವಲಂಬಿಗಳಾಗುತ್ತಿದ್ದಾರೆ. ಉನ್ನತ ಮಟ್ಟದ ವಿದ್ಯಾಭ್ಯಾಸ ಸಿಗದಿದ್ದರೂ, ತಮಗಿರುವ ಕೌಶಲಗಳನ್ನು ಬಳಸಿಕೊಂಡು, ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಿದ್ದಾರೆ. ಬೇರೆಯವರ ಕೈಕೆಳಗೆ ಕೆಲಸ ಮಾಡುವ ಬದಲು, ಸ್ವಂತ ಉದ್ಯೋಗ ಪ್ರಾರಂಭಿಸಿ, ಇತರರಿಗೂ ನೆರವಾದ ಮಹಿಳೆಯರ ಸಂಖ್ಯೆಯೂ ಕಡಿಮೇನಿಲ್ಲ.

ಅಂಥವರಲ್ಲಿ ಸಾಲಿಗೆ, ವಿಜಯಪುರದ ನಿಂಬರಗಿ ಕಾಲೊನಿಯ ಅನಿತಾ ಪವಾರ ಮತ್ತು ರೇಣುಕಾ ಝಳಕಿ ಅವರನ್ನೂ ಸೇರಿಸಬಹುದು. ಎರಡು ಜಡೆ, ಒಂದೆಡೆ ಸೇರುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಿರುವ ಇವರಿಬ್ಬರು, ಪಾಲುಗಾರಿಕೆಯಲ್ಲಿ ಅಗರಬತ್ತಿ ತಯಾರಿಸುವ ಸ್ವಉದ್ಯೋಗವನ್ನು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಮೂವರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.

ಮೈಸೂರಿನಲ್ಲಿ ಅಗರಬತ್ತಿ ತಯಾರಿಕೆಯ ತರಬೇತಿ ಪಡೆದ ಅನಿತಾ ಮತ್ತು ರೇಣುಕಾ, ಸ್ವಂತವಾಗಿ ಉದ್ದಿಮೆ ಶುರುಮಾಡುವ ಕನಸು ಕಂಡರು. ಅವರ ಕನಸಿಗೆ, ಎರಡೂ ಕುಟುಂಬದಿಂದ ಸಹಕಾರವೂ ದೊರೆಯಿತು. ಅದೇ ಧೈರ್ಯದಲ್ಲಿ, ಒಂದು ವರ್ಷದ ಹಿಂದೆ 6 ಲಕ್ಷ ರೂ. ಬಂಡವಾಳದೊಂದಿಗೆ ಅಗರಬತ್ತಿ ತಯಾರಿಕಾ ಘಟಕವನ್ನು ತೆರೆಯಲಾಯ್ತು. ಈಗ ಮೈಸೂರಿನ ಸೈಕಲ್‌ ಪ್ಯೂರ್‌ ಅಗರಬತ್ತಿ ಕಂಪನಿಯಿಂದ, ಕಚ್ಚಾವಸ್ತುಗಳಾದ ರೆಡಿಮಿಕ್ಸ್‌, ಅಗಬತ್ತಿ ಪೌಡರ್‌, ಬಿದಿರನ್ನು ಖರೀದಿಸುವ ಇವರು, ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೂ ದುಡಿಯುತ್ತಾರೆ. ದಿನವೊಂದಕ್ಕೆ 160 ಕೆ.ಜಿ. ಅಗರಬತ್ತಿಗಳನ್ನು ತಯಾರಿಸುವ ಈ ಮಹಿಳೆಯರ ಬಳಿ, ಅಗರಬತ್ತಿ ತಯಾರಿಕೆಗೆ ಬೇಕಾದ, ಅಗರಬತ್ತಿ ಪುಡಿಗಳನ್ನು ಬೆರೆಸುವ, ಅಗರಬತ್ತಿ ಮಾಡುವ ಮತ್ತು ತಯಾರಿಸಿದ ಅಗರಬತ್ತಿಗಳನ್ನು ಒಣಗಿಸುವ 3 ಮಷಿನ್‌ಗಳಿವೆ. 2 ಟನ್‌ ಕಚ್ಚಾ ವಸ್ತುಗಳಿಗೆ 1.10 ಲಕ್ಷ ರೂ. ಕೊಟ್ಟು ಖರೀದಿಸುತ್ತಾರೆ. ಎಲ್ಲ ಖರ್ಚುಗಳನ್ನು ಕಳೆದ ನಂತರ, 1 ಟನ್‌ಗೆ 10 ಸಾವಿರ ರೂ. ಉಳಿತಾಯವಾಗುತ್ತದೆ ಎನ್ನುತ್ತಾರೆ ಇವರು.

ತಯಾರಿಸಿದ ಅಗರಬತ್ತಿಗಳನ್ನು ಎನ್‌.ಆರ್‌.ರಂಗರಾವ್‌ ಅಂಡ್‌ ಸನ್ಸ್‌ ಕಂಪನಿಗೆ ಪ್ಯಾಕಿಂಗ್‌ಗಾಗಿ ರವಾನಿಸುತ್ತಾರೆ. ನಂತರ ಅವುಗಳನ್ನು ಮೈಸೂರಿಗೆ ತಲುಪಿಸಲಾಗುತ್ತದೆ.

ಸುಮ್ಮನೆ ಮನೆಯಲ್ಲಿ ಕುಳಿತರೆ ಏನೂ ಸಾಧಿಸಲಾಗುವುದಿಲ್ಲ. ಮನಸ್ಸಿದ್ದರಷ್ಟೇ ಮಾರ್ಗ. ಮೊದಮೊದಲು ಮನೆ, ಉದ್ಯೋಗ ಎರಡನ್ನೂ ಸರಿದೂಗಿಸಲು ಕಷ್ಟವಾಗುತ್ತಿತ್ತು. ದಿನಕಳೆದಂತೆ ಎಲ್ಲವೂ ಸುಲಭವಾಗಿದೆ.
-ಅನಿತಾ ಪವಾರ

ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕು ಅಂತ ಕನಸು ಕಂಡಿದ್ದೆ. ಅಗರಬತ್ತಿ ತಯಾರಿಕೆಯಿಂದ ಕೇವಲ ನಾನು ಮಾತ್ರ ಅಲ್ಲ, ಸುತ್ತಮುತ್ತಲಿನ ಒಂದಿಬ್ಬರು ಮಹಿಳೆಯರೂ ನಾಲ್ಕು ಕಾಸು ಸಂಪಾದಿಸುವಂತಾಗಿದೆ. ಈ ಕೆಲಸ ಖುಷಿ ಕೊಡುತ್ತಿದೆ.
-ರೇಣುಕಾ. ಝಳಕಿ

-ಬಸಮ್ಮ ಭಜಂತ್ರಿ

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.