ಕಾರ್ಗೋ ಕಮಾಲ್‌


Team Udayavani, Apr 24, 2019, 6:10 AM IST

Avalu-Cargo

ಯುದ್ಧಭೂಮಿಯಲ್ಲಿ, ಶಸ್ತ್ರಾಸ್ತ್ರಗಳನ್ನು, ನಕ್ಷೆ, ಧಾನ್ಯಗಳನ್ನು ಮತ್ತಿತರ ಸಾಮಗ್ರಿ ಹೊತ್ತೂಯ್ಯಲು ಬಳಕೆಯಾಗುತ್ತಿದ್ದ ಪ್ಯಾಂಟ್‌ ಇದು. ಇಂದು ಫ್ಯಾಷನ್‌ ಲೋಕದಲ್ಲಿ ಜಾಗ ಪಡೆದಿದೆ. ಇದರ ಜೇಬುಗಳು ಅಗಲವಾಗಿರುವುದರಿಂದ ಇವನ್ನು ಪರ್ಸ್‌ನಂತೆಯೂ ಬಳಸಬಹುದು. ಬಿಗಿಯಾಗಿರದ ಕಾರಣ, ಇವುಗಳನ್ನು ತೊಟ್ಟು ನಡೆಯುವುದು, ಓಡುವುದು ಸುಲಭ.

90ರ ದಶಕದ ಕಾರ್ಗೋ ಪ್ಯಾಂಟ್‌ಗಳು ಮತ್ತೆ ಬರುತ್ತಿವೆ. ಪ್ಯಾಂಟ್‌ ತುಂಬಾ ದೊಡ್ಡ ದೊಡ್ಡ ಜೇಬುಗಳಿರುವ ಈ ದಿರಿಸು ಮತ್ತೆಬರಲು ಕಾರಣವೇ ಈ ಬೇಸಿಗೆಯ ಉರಿಬಿಸಿಲಿನ ಕಾವು. ಸಡಿಲವಾದ ಈ ಪ್ಯಾಂಟ್‌ ಮೈಗೆ ಅಂಟುವುದಿಲ್ಲ. ಅಲ್ಲದೆ ಇದರಲ್ಲಿ ತುಂಬಾ ಜೇಬುಗಳಿರುವ ಕಾರಣ ಇದಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಈ ಕಾರ್ಗೋ ಪ್ಯಾಂಟ್‌ ಒಂದು ಚಿಕ್ಕ ಮೇಕ್‌ಓವರ್‌ ಪಡೆದಿದೆ. ಬೂಟ್‌ ಕಟ್‌ ಇರುತ್ತಿದ್ದ ಈ ಕಾರ್ಗೋ ಪ್ಯಾಂಟ್‌ನ ಕಾಲತುದಿಗಳಿಗೆ ಈಗ ಎಲಾಸ್ಟಿಕ್‌ ಬಂದಿದೆ. ಹಾಗಾಗಿ ಇವು ಜೀನೀ ಪ್ಯಾಂಟ್‌, ಹ್ಯಾರೆಂ ಪ್ಯಾಂಟ್‌, ಧೋತಿ ಪ್ಯಾಂಟ್‌ ಮತ್ತು ಜೆಗ್ಗಿಂಗ್ಸ್‌ಅನ್ನು ಹೋಲುತ್ತವೆ.

ಹುಟ್ಟಿದ್ದು ಯುದ್ಧಭೂಮಿಯಲ್ಲಿ
ಕಾರ್ಗೋ ಪ್ಯಾಂಟ್‌ಗಳನ್ನು ಮೊದಲು ತೊಟ್ಟವರಾರು? ಯುದ್ಧಭೂಮಿಯಲ್ಲಿ, ಶಸ್ತ್ರಾಸ್ತ್ರಗಳನ್ನು, ನಕ್ಷೆ, ಧಾನ್ಯಗಳನ್ನು ಮತ್ತು ಇತರ ಸಾಮಗ್ರಿ ಹೊತ್ತೂಯ್ಯಲು ಜೇಬುಗಳಿದ್ದ ಇಂಥ ಪ್ಯಾಂಟ್‌ಗಳು ತುಂಬಾ ಉಪಕಾರಿಯಾಗಿದ್ದವು. ಬಿಗಿಯಾಗಿರದೆ ಇದ್ದ ಕಾರಣ, ಇವುಗಳನ್ನು ತೊಟ್ಟು ನಡೆಯುವುದು, ಓಡುವುದು, ಓಡಾಡುವುದು ಕೂಡಾ ಸುಲಭವಾಗಿರುತ್ತಿತ್ತು.1938ರಲ್ಲಿ, ಬ್ರಿಟಿಷ್‌

ಶಸ್ತ್ರಪಡೆಗಳು ಈ ಪ್ಯಾಂಟ್‌ಗಳನ್ನು ಮೊದಲು ತೊಟ್ಟವು. ನಂತರ 1940ರಲ್ಲಿ, ಎರಡನೇ ವಿಶ್ವಸಮರದ ವೇಳೆ, ಈ ಬ್ಯಾಟಲ್‌ ಡ್ರೆಸ್‌ಗಳು ಅಮೇರಿಕಕ್ಕೆ ಕಾಲಿಟ್ಟವು. ಅಲ್ಲಿನವರು ಇನ್ನೂ ಹೆಚ್ಚಿನ ವಸ್ತುಗಳನ್ನು ಪ್ಯಾಂಟ್‌ನಲ್ಲಿ ತುಂಬಿಕೊಳ್ಳಲು ಸಾಧ್ಯವಾಗುವಂತೆ ಜೇಬುಗಳ ಗಾತ್ರವನ್ನು ಹೆಚ್ಚಿಸಿದರು. ಅಲ್ಲಿಂದ ಆ ಬ್ಯಾಟಲ್‌ ಡ್ರೆಸ್‌ಗಳು ಕಾರ್ಗೊ ಪ್ಯಾಂಟ್‌ ಎಂದು ಕರೆಯಲ್ಪಟ್ಟವು.

ಪ್ಯಾಂಟ್‌ ಹೋಗಿ ಶಾರ್ಟ್ಸ್ ಆಯ್ತು!
ಜೇಬನ್ನು ತೆರೆಯಲು ಹಾಗೂ ಮುಚ್ಚಲು ಸುಲಭವಾಗಲೆಂದು ಬಟನ್‌ (ಗುಂಡಿ), ವೆಲ್ಕ್ರೋ, ಮ್ಯಾಗ್ನೆಟ್‌ ಗಳನ್ನು (ಅಯಸ್ಕಾಂತ) ಪ್ಯಾಂಟಿನ ಜೇಬಿನಲ್ಲಿ ಉಪಯೋಗಿಸುತ್ತಿದ್ದರು. ಇನ್ನೂ ಕೆಲವು ವಿನ್ಯಾಸಗಳಲ್ಲಿ, ಪ್ಯಾಂಟಿನ ಹೊರಬದಿ ಎಲ್ಲೂ ಜೇಬುಗಳು ಕಾಣಿಸುವುದಿಲ್ಲ. ಕೇವಲ ಪ್ಯಾಂಟ್‌ಗಳಲ್ಲಿ ತೊಡೆ ಮತ್ತು ಕಾಲುಗಳ ಒಳಬದಿಯಲ್ಲಿ ಜೇಬುಗಳು ಇರುತ್ತಿದ್ದವು.

ವಸ್ತುಗಳನ್ನು ಕದ್ದು ಸಾಗಿಸಲು ಅಥವಾ ಶತ್ರುಗಳಿಗೆ ಕಾಣಿಸದೆ ಇರಲು ಜೇಬುಗಳನ್ನು ಪ್ಯಾಂಟಿನ ಈ ಭಾಗದಲ್ಲಿ ಇರಿಸಲಾಗುತ್ತಿತ್ತು. ಇವುಗಳಲ್ಲಿ ಮೊಣಕಾಲವರೆಗೆ ಬರುವ ಕಾರ್ಗೋ ಪ್ಯಾಂಟನ್ನು ಕಾರ್ಗೋ ಶಾರ್ಟ್ಸ್ ಎನ್ನಲಾಗುತ್ತದೆ. 1980ರಲ್ಲಿ,ಇವುಗಳನ್ನು ಕ್ರೀಡಾಪಟುಗಳು ಮತ್ತು ಮೀನುಗಾರರು ತೊಡಲು ಶುರುಮಾಡಿದರು. 1990ರಲ್ಲಿ, ಇವು ಪುರುಷರ ಫ್ಯಾಷನ್‌ನಲ್ಲಿ ಬಹುಬೇಡಿಕೆ ಪಡೆದುಕೊಂಡವು.

ಪುರುಷರ ಉಡುಪಾದ ಈ ಕಾರ್ಗೋ ಪ್ಯಾಂಟ್‌, ಕ್ರಮೇಣ ಮಹಿಳೆಯರಿಗೂ ಇಷ್ಟ ಆಗಲು ಶುರುವಾಯಿತು. ಧರಿಸಲು ಆರಾಮ ಮಾತ್ರವಲ್ಲದೆ ಸ್ಟೈಲಾಗಿಯೂ ಕಾಣುವು­ದರಿಂದ ಮಹಿಳೆಯರು ಇವನ್ನು ತೊಡಲು ಆರಂಭಿಸಿದರು. ಹಾಗಾಗಿ ಫ್ಯಾಷನ್‌ ಲೋಕದಲ್ಲಿ ಇದು ಯುನಿಸೆಕ್ಸ್ (ಪುರುಷರು, ಮಹಿಳೆಯರು, ಇಬ್ಬರೂ ತೊಡಬಹುದಾದ) ಉಡುಪಾಗಿ ಹೊರ ಬಂತು!

ಟೂ ಇನ್‌ ಒನ್‌ ಪ್ಯಾಂಟ್‌
ಇನ್ನೂ ಕೆಲವು ಕಾರ್ಗೋ ಪ್ಯಾಂಟ್‌ಗಳನ್ನು ಇ.ಎಂ.ಟಿ ಪ್ಯಾಂಟ್‌ ಎನ್ನಲಾಗುತ್ತದೆ. ಈ ಪ್ಯಾಂಟ್‌ಗಳಲ್ಲಿ ಮೊಣಕಾಲಿಂದ ಸ್ವಲ್ಪ ಕೆಳಕ್ಕೆ ಜಿಪ್‌ ಇರುತ್ತದೆ. ಜಿಪ್‌ ಹಾಕಿದರೆ ಮುಕ್ಕಾಲು ಪ್ಯಾಂಟ್‌ (ತ್ರೀ ಫೋರ್ಥ್) ಆಗುತ್ತದೆ. ಜಿಪ್‌ ಬಿಡಿಸಿದರೆ ಫ‌ುಲ್‌ ಲೆಂಥ್‌ ಪ್ಯಾಂಟ್‌ ಆಗುತ್ತದೆ. ಅಷ್ಟೊಂದು ಜೇಬುಗಳಿರುವ ಕಾರಣ, ಗ್ಯಾರೇಜಿನಲ್ಲಿ ಕೆಲಸ ಮಾಡುವವರು, ಮರದ ಕೆಲಸ ಮಾಡುವವರು ಮತ್ತು ಪೇಂಟಿಂಗ್‌ (ಬಣ್ಣ ಬಳಿಯುವುದು) ಕೆಲಸ ಮಾಡುವವರು ಇಂಥ ಪ್ಯಾಂಟ್‌ಗಳನ್ನು ತೊಡಲು ಶುರು ಮಾಡಿದರು.

— ಅದಿತಿಮಾನಸ. ಟಿ. ಎಸ್‌.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.