ಮದ್ವೆಗೂ ಆ್ಯಕ್ಟಿಂಗ್‌ಗೂ ಏನು ಸಂಬಂಧ?

ಅನುಷ್ಕಾ Speaking...

Team Udayavani, Jul 24, 2019, 5:00 AM IST

x-8

ಹೀರೋಯಿನ್‌ಗೆ ಮದುವೆ ಆಯ್ತು ಅಂದ್ರೆ, ಅವಳ ವೃತ್ತಿ ಬದುಕೇ ಮುಗೀತು ಅನ್ನುವ ಜನರಿದ್ದಾರೆ. ಅಂಥವರನ್ನು ನಿರ್ಲಕ್ಷಿಸಿ ಮುಂದೆ ಹೋಗ್ಬೇಕು ಅಂತಾರೆ ಅನುಷ್ಕಾ ಶರ್ಮಾ…

ಮದುವೆ ಬಗೆಗಿನ ಪ್ರಶ್ನೆಗಳು ಸಾಮಾನ್ಯ ಹುಡುಗಿಯರನ್ನಷ್ಟೇ ಅಲ್ಲ, ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಇಂಟರ್‌ವ್ಯೂ ಯಾವುದೇ ಇರಲಿ, ಎಲ್ಲ ಪ್ರಶ್ನೆಗಳ ನಂತರ ನಟಿಯರನ್ನು ಕೇಳ್ಳೋ ಪ್ರಶ್ನೆ- “ಮತ್ತೆ, ಮದುವೆ ಯಾವಾಗ?’.

ನಟಿಯರೂ ಕೂಡಾ, ಮದುವೆಯಾದರೆ ತಮಗೆ ಅವಕಾಶಗಳು ಕಡಿಮೆಯಾಗಿ ಬಿಡುತ್ತವೆ ಎಂಬ ಭಯದಿಂದಲೋ, ಗ್ಲಾಮರ್‌ ಹಾಳಾಗುತ್ತದೆ ಅಂತಲೋ, ಮದುವೆಯಿಂದ ದೂರ ಉಳಿಯುತ್ತಾರೆ. ನಟಿಯರೇ ಯಾಕೆ, ಇತ್ತೀಚಿನ ಹುಡುಗಿಯರೂ ಮದುವೆಯಂದ್ರೆ ಹಿಂದೇಟು ಹಾಕುತ್ತಾರೆ. ಮದುವೆಯಾಗಿಬಿಟ್ಟರೆ ವೃತ್ತಿ, ಪ್ರವೃತ್ತಿ, ಕನಸುಗಳನ್ನೆಲ್ಲ ಮರೆತುಬಿಡಬೇಕಲ್ಲ ಅನ್ನೋ ಭಯ ಅವರದ್ದು. ಹೀಗಿರುವಾಗ, ನಟಿ ಅನುಷ್ಕಾ ಶರ್ಮಾ 29ನೇ ವಯಸ್ಸಿಗೇ ಮದುವೆಯಾಗಿ, ಸುದ್ದಿಯಾದರು.

ಹಾಗಾಗಿ ಜನ ಅವರ ಬಳಿ, ಪ್ರಿಯಾಂಕ ಛೋಪ್ರಾ, ದೀಪಿಕಾ ಪಡುಕೋಣೆ ಅವರೆಲ್ಲಾ ಮೂವತ್ತರ ನಂತರ ಮದುವೆಯಾದರು. ನೀವ್ಯಾಕೆ ಬೇಗ ಮದುವೆ ಆದ್ರಿ ಅಂತ ಅವರನ್ನು ಕೇಳುತ್ತಾರಂತೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ಆ ಬಗ್ಗೆ ಮಾತಾಡಿರುವ ಅನುಷ್ಕಾ ಶರ್ಮಾ, “ಹೌದು, 29 ವರ್ಷ ಅನ್ನೋದು ನಟಿಯರ ಪಾಲಿಗೆ ಸಣ್ಣ ವಯಸ್ಸೇ. ಆದರೆ, ನಾನು ವಿರಾಟ್‌ರನ್ನು ತುಂಬಾ ಗಾಢವಾಗಿ ಪ್ರೀತಿಸುತ್ತಿದ್ದೆ. ಅದಕ್ಕೇ ಮದುವೆಯಾದೆ’ ಅಂತ ಉತ್ತರಿಸಿದ್ದಾರೆ.

“ಮದುವೆ ಅನ್ನೋದು ಜೀವನದ ಒಂದು ಸುಂದರ ಕ್ಷಣ. ಮನಸ್ಸಿನಲ್ಲಿ ಭಯ ಇಟ್ಟುಕೊಂಡು, ಆ ಕ್ಷಣವನ್ನು ಅನುಭವಿಸೋದು ನನಗೆ ಇಷ್ಟ ಇರಲಿಲ್ಲ. ಒಬ್ಬ ಗಂಡಸು, ಮದುವೆಯಾಗೋಕೆ ಮುಂಚೆ ಎರಡೆರಡು ಬಾರಿ ಯೋಚಿಸೋದಿಲ್ಲ ಮತ್ತು ಮದುವೆಯ ನಂತರವೂ ಆತ ತನ್ನ ಕೆರಿಯರ್‌ನಲ್ಲಿ ಮುಂದೆ ಹೋಗುತ್ತಾನೆ ಅಂತಾದ್ರೆ, ಹೆಣ್ಮಕ್ಕಳು ಮಾತ್ರ ಯಾಕೆ ಮದುವೆಯ ಬಗ್ಗೆ ಹೆದರಿಕೊಳ್ಳಬೇಕು? ನನ್ನ ಪ್ರಕಾರ ಹೆಣ್ಣು- ಗಂಡು, ಇಬ್ಬರೂ ಸಮಾನರು. ಸಮಾಜ, ಇಬ್ಬರನ್ನೂ ಒಂದೇ ರೀತಿ ನೋಡಬೇಕು.

ನಮ್ಮ ಪ್ರೇಕ್ಷಕ ವರ್ಗ, ಸಿನಿಮಾ ಇಂಡಸ್ಟ್ರಿಗಿಂತಲೂ ವಿಶಾಲವಾಗಿ ಯೋಚಿಸುತ್ತಾರೆ. ನಟಿಗೆ ಮದುವೆ ಆಗಿದೆಯಾ, ಅವಳಿಗೆ ಮಕ್ಕಳಿದೆಯಾ ಅಂತೆಲ್ಲಾ, ನಟಿಯೊಬ್ಬಳ ಖಾಸಗಿ ಜೀವನದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಕೂಡಾ ಅಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಅಂದಿದ್ದಾರೆ ಅನುಷ್ಕಾ ಶರ್ಮಾ.

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.